AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೇವ ಗುರು ಬೃಹಸ್ಪತಿಯ ಆಶೀರ್ವಾದದಿಂದ ಶಿಕ್ಷಣ ಕ್ಷೇತ್ರದಲ್ಲಿ ಈ ಎರಡು ರಾಶಿಯ ಜನ ರಾಶಿರಾಶಿ ಹೆಸರು, ಸಂಪತ್ತು ಗಳಿಸುತ್ತಾರೆ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ದೇವರು ಬೃಹಸ್ಪತಿಯಾಗಿದ್ದಾರೆ. ಹಾಗಾಗಿಯೇ ಈ ರಾಶಿಯ ಜನರ ಮೇಲೆ ಬೃಹಸ್ಪತಿಯ ಆಶೀರ್ವಾದ ಸದಾ ಇರುತ್ತದೆ. ಬೃಹಸ್ಪತಿಯನ್ನು ದೇವ ಗುರು ಎಂದು ಕರೆಯಲಾಗುತ್ತದೆ. ಹಾಗಾಗಿ ಈ ದೇವರ ಪ್ರಭಾವ ಹೊಂದಿರುವ ಧನು ರಾಶಿ ಮತ್ತು ಮೀನ ರಾಶಿಯ ಜನ ಕುಶಾಗ್ರಮತಿಗಳಾಗಿರುತ್ತಾರೆ.

ದೇವ ಗುರು ಬೃಹಸ್ಪತಿಯ ಆಶೀರ್ವಾದದಿಂದ ಶಿಕ್ಷಣ ಕ್ಷೇತ್ರದಲ್ಲಿ ಈ ಎರಡು ರಾಶಿಯ ಜನ ರಾಶಿರಾಶಿ ಹೆಸರು, ಸಂಪತ್ತು ಗಳಿಸುತ್ತಾರೆ
ರಾಶಿ ಚಕ್ರ
TV9 Web
| Updated By: Skanda|

Updated on: Aug 13, 2021 | 6:48 AM

Share

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಪ್ರತಿ ರಾಶಿಗೂ ಒಬ್ಬೊಬ್ಬ ಸ್ವಾಮಿ ಗ್ರಹ ಇರುತ್ತದೆ. ಆ ಗ್ರಹದ ಪ್ರಭಾವವು ನಿರ್ದಿಷ್ಟವಾಗಿ ಆಯಾ ರಾಶಿಯ ಜನರ ಮೇಲೆ ಇರುತ್ತದೆ. 12 ರಾಶಿಗಳ ಪೈಕಿ ಎರಡು ರಾಶಿಗಳ ಮೇಲೆ ದೇವ ಗುರು ಬೃಹಸ್ಪತಿಯ ನೇರ ಆಶೀರ್ವಾದ ಇರುತ್ತದೆ. ಜ್ಯೋತಿಷ್ಯದ ಪ್ರಕಾರ ಪ್ರತಿ ವ್ಯಕ್ತಿಯ ಸಂಬಂಧವು 12 ರಾಶಿಗಳಲ್ಲಿ ಯಾವುದಾದರೂ ಒಂದು ರಾಶಿಯ ಜೊತೆಗೆ ಮಿಳಿತವಾಗಿರುತ್ತದೆ. ಆಯಾ ರಾಶಿಗೆ ಒಬ್ಬ ಅಧಿ ದೇವರು ಇರುತ್ತಾರೆ. ಆ ಗ್ರಹದ ಪ್ರಭಾವ ಆ ರಾಶಿಯ ಜನರೊಂದಿಗೆ ಸಂಬಂಧ ಹೊಂದಿರುತ್ತದೆ. ಹೀಗಾಗಿಯೇ ಯಾವುದೇ ವ್ಯಕ್ತಿ ಜನ್ಮತಹ ಅನೇಕ ಗುಣಾವಗುಣಗಳನ್ನು ಹೊಂದಿರುತ್ತಾರೆ. ಅವು ಜೀವನಪರ್ಯಂತ ಆ ವ್ಯಕ್ತಿಯ ಮೇಲೆ ಪ್ರಭಾವ ಬೀರುತ್ತಾ ಇರುತ್ತದೆ.

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಧನು ರಾಶಿ ಮತ್ತು ಮೀನ ರಾಶಿಯ ಅಧಿಪತಿ ದೇವರು ಬೃಹಸ್ಪತಿಯಾಗಿದ್ದಾರೆ. ಹಾಗಾಗಿಯೇ ಈ ರಾಶಿಯ ಜನರ ಮೇಲೆ ಬೃಹಸ್ಪತಿಯ ಆಶೀರ್ವಾದ ಸದಾ ಇರುತ್ತದೆ. ಬೃಹಸ್ಪತಿಯನ್ನು ದೇವ ಗುರು ಎಂದು ಕರೆಯಲಾಗುತ್ತದೆ. ಹಾಗಾಗಿ ಈ ದೇವರ ಪ್ರಭಾವ ಹೊಂದಿರುವ ಧನು ರಾಶಿ ಮತ್ತು ಮೀನ ರಾಶಿಯ ಜನ ಕುಶಾಗ್ರಮತಿಗಳಾಗಿರುತ್ತಾರೆ. ಹಾಗಾಗಿಯೇ ಇಂತಹವರು ವಿದ್ಯಾ ಕ್ಷೇತ್ರದಲ್ಲಿ ಅಪಾರವಾಗಿರುವುದನ್ನೆ ಸಾಧಿಸುತ್ತಾರೆ. ಹಾಗಾದರೆ ಈ ಎರಡು ರಾಶಿಯ ಜನರ ಬಗ್ಗೆ ತಿಳಿಯೋಣ ಬನ್ನೀ…

ಧನು ರಾಶಿಯ ಜನ (Sagittarius):

ಧನಸ್ಸು ರಾಶಿಯ ಜನ ಧಾರ್ಮಿಕವಾಗಿಯೂ ಮತ್ತು ಶಾಂತ ಸ್ವಭಾವದವರೂ ಆಗಿರುತ್ತಾರೆ. ಇಂತಹ ವ್ಯಕ್ತಿಗಳು ಸದಾ ಏನಾದರೊಂದು ಕಲಿಕೆಯ ಮೇಲೆ ಮನಸ್ಸನ್ನು ಕೇಂದ್ರೀಕರಿಸಿರುತ್ತಾರೆ, ಉತ್ಸಾಹ ತೋರಿಸುತ್ತಾರೆ. ಇಂತಹವರು ಯಾವುದೇ ವಿಷಯವನ್ನು ಅಧ್ಯಯನ ಮಾಡಲು ಕುಳಿತರೆ ಇವರ ತಲೆಯಲ್ಲಿ ಅದೇ ವಿಷಯ ಲಂಗರು ಹಾಕುತ್ತಾ ಕುಳಿತು ಬಿಡುತ್ತೆ. ಅವುಗಳಿಗೆ ತಕ್ಕ ಉತ್ತರ ಕಂಡುಕೊಳ್ಳಲು ಹಾತೊರೆಯುತ್ತಾರೆ. ಇವರು ತಮ್ಮನ್ನು ಕಾಡುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ಪಡೆಯುವವರೆಗೂ ಚಡಪಡಿಸುತ್ತಿರುತ್ತಾರೆ.

ಸ್ವಭಾವತಃ ಇಂತಹವರು ಧೈರ್ಯಶಾಲಿಗಳಾಗಿರುತ್ತಾರೆ. ಗೌರವಯುತವಾಗಿಯೂ ಇರುತ್ತಾರೆ. ಜ್ಞಾನ ಸಂಪತ್ತು ಅರ್ಜನೆ ಮಾಡಿಕೊಳ್ಲುವುದರಲ್ಲಿ ಕುಶಾಗ್ರಮತಿಗಳಾಗಿರುತ್ತಾರೆ. ಮುಂದೆ ಸಾಕಷ್ಟು ಹೆಸರು ಸಹ ಗಳಿಸುತ್ತಾರೆ. ಮತ್ತು ಈ ರಾಶಿಯವರಿಗೆ ಇಂತಹುದೆ ಜನರು ಇಷ್ಟವಾಗುತ್ತಾರೆ. ಮೋಸಗಾರರನ್ನು ಕಂಡರೆ ಇವರಿಗೆ ಆಗಿಬರುವುದಿಲ್ಲ. ಇವರು ಒಮ್ಮೆ ಏನಾದರೂ ಒಂದು ಮಾತು ಕೊಟ್ಟರೆ ಅದನ್ನು ಪೂರೈಸಿಯೇ ತೀರುತ್ತಾರೆ. ಜೀವನವನ್ನು ಸಮಾನಸ್ಥಿತಿಯಲ್ಲಿ, ಸಮಚಿತ್ತದಿಂದ ನಿಭಾಯಿಸುತ್ತಾರೆ. ಜೀನವನ್ನು ಆಸ್ವಾದಿಸುತ್ತಾರೆ.

ಮೀನ ರಾಶಿಯ ಜನ (pisces):

ಇನ್ನು ಮೀನ ರಾಶಿಯ ಜನರ ಮೇಲೆಯೂ ಸಹ ದೇವ ಗುರು ಬೃಹಸ್ಪತಿಯ ಕೃಪಾಶೀರ್ವಾದ ವಿಶೇಷವಾಗಿ ಇರುತ್ತದೆ. ಈ ರಾಶಿಯ ಜನರೂ ಸಹ ಬಹಳಷ್ಟು ಗೌರವಾನ್ವಿತರಾಗಿರುತ್ತಾರೆ. ಕೆಚ್ಚೆದೆಯವರಾಗಿರುತ್ತಾರೆ. ಇವರ ಮೇಲೆ ಬಹಳಷ್ಟು ಭರವಸೆ ಹೊಂದಬಹುದು. ಈ ಮೀನ ರಾಶಿಯ ಜನ ಒಳ್ಳೆ ಮನಸ್ಸಿನವರಾಗಿರುತ್ತಾರೆ. ಯಾರನ್ನೇ ಆಗಲಿ ಇವರು ಇಷ್ಟಪಟ್ಟರೆ ಹೃದಯತುಂಬಾ ಇಷ್ಟಪಡುತ್ತಾರೆ.

ತೋರಿಕೆಗಷ್ಟೇ ಇವರ ಪ್ರೀತಿ ಸೀಮಿತವಾಗುವುದಿಲ್ಲ. ಹಾಗಾಗಿಯೇ ಇವರಿಗೂ ತೋರಿಕೆಯ ಜನ ಇಷ್ಟವಾಗುವುದಿಲ್ಲ. ಈ ರಾಶಿಯ ಜನ ಶಿಕ್ಷಣದಲ್ಲಿ ಬಹಳ ಮುಂದಿರುತ್ತಾರೆ. ಶಿಕ್ಷಣದ ಎಲ್ಲಾ ರಂಗಗಳಲ್ಲೂ ಇವರು ಜಯ ಸಾಧಿಸಬಲ್ಲರು. ಶಿಸ್ತುಬದ್ಧ ಜೀವನವನ್ನು ಇವರು ಇಷ್ಟ ಪಡುತ್ತಾರೆ. ಮೀನ ರಾಶಿಯ ಈ ಜನ ಜೀವನದಲ್ಲಿ ಬಹಳ ಹೆಸರು ಮತ್ತು ಪ್ರತಿಷ್ಠೆಯನ್ನು ಸಂಪಾದಿಸುತ್ತಾರೆ.

(these two zodiac sign people earn lot of fame in education due to devaguru brihaspati or jupiter blessings)

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ