AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ: ಈ ಬಾರಿ ಅಂಬಾರಿ ಹೊರುವವರು ಯಾರು?

ಮೈಸೂರು: ಕೊರೊನಾ ಆತಂಕದ ನಡುವೆಯೇ ಈ ವರ್ಷ ಕಳೆದುಹೋಗಿದೆ. ಈ ಮಧ್ಯೆ ದಸರಾ ಹಬ್ಬಕ್ಕೂ ಕೊರೊನಾ ಸೋಂಕು ಅಡ್ಡಿಯಾಗಿದ್ದು, ಇಷ್ಟೆಲ್ಲಾ ಅಡ್ಡಿ ಆತಂಕಗಳ ನಡುವೆ ಜಂಬೂಸವಾರಿ ನಡೆಸಲು ಸಿದ್ಧತೆ ನಡೆದಿದೆ. ಮೊದಲಿಗೆ ಅಂಬಾರಿ ಹೊರಲು ಆನೆ ಆಯ್ಕೆ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗಜರಾಯನಿಗೂ ಕೊರೊನಾ ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಾರಿ ದಸರಾದಲ್ಲಿ 5 ಆನೆಗಳನ್ನ ಮಾತ್ರ ಬಳಸಿಕೊಳ್ಳಲಾಗುತ್ತಿದೆ.. ಕೊರೊನಾ ಅದೆಷ್ಟರಮಟ್ಟಿಗೆ ಈ ಬಾರಿ ದಸರಾ ಹಬ್ಬದ ಮೇಲೆ ಹೊಡೆತ […]

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ: ಈ ಬಾರಿ ಅಂಬಾರಿ ಹೊರುವವರು ಯಾರು?
ಸಾಧು ಶ್ರೀನಾಥ್​
|

Updated on: Sep 12, 2020 | 6:36 AM

Share

ಮೈಸೂರು: ಕೊರೊನಾ ಆತಂಕದ ನಡುವೆಯೇ ಈ ವರ್ಷ ಕಳೆದುಹೋಗಿದೆ. ಈ ಮಧ್ಯೆ ದಸರಾ ಹಬ್ಬಕ್ಕೂ ಕೊರೊನಾ ಸೋಂಕು ಅಡ್ಡಿಯಾಗಿದ್ದು, ಇಷ್ಟೆಲ್ಲಾ ಅಡ್ಡಿ ಆತಂಕಗಳ ನಡುವೆ ಜಂಬೂಸವಾರಿ ನಡೆಸಲು ಸಿದ್ಧತೆ ನಡೆದಿದೆ. ಮೊದಲಿಗೆ ಅಂಬಾರಿ ಹೊರಲು ಆನೆ ಆಯ್ಕೆ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗಜರಾಯನಿಗೂ ಕೊರೊನಾ ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಬಾರಿ ದಸರಾದಲ್ಲಿ 5 ಆನೆಗಳನ್ನ ಮಾತ್ರ ಬಳಸಿಕೊಳ್ಳಲಾಗುತ್ತಿದೆ.. ಕೊರೊನಾ ಅದೆಷ್ಟರಮಟ್ಟಿಗೆ ಈ ಬಾರಿ ದಸರಾ ಹಬ್ಬದ ಮೇಲೆ ಹೊಡೆತ ಕೊಟ್ಟಿದೆ ಅಂದ್ರೆ, ಜಂಬೂಸವಾರಿಯಲ್ಲೇ ಕಾಂಪ್ರಮೈಸ್‌ ಮಾಡ್ಕೊಳ್ತಿದ್ದಾರೆ. ಕಾಡಿನಿಂದ 5 ಆನೆಗಳನ್ನ ಮಾತ್ರ ಕರೆದುಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಮಾವುತರು ಮಾತ್ರವಲ್ಲದೆ, ಅರಣ್ಯ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸೋಕೆ ತಯಾರಿ ಮಾಡ್ಕೊಂಡಿದೆ.

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ.. ಅಷ್ಟಕ್ಕೂ ಅಮೆರಿಕಾದ ಝೂನಲ್ಲಿ ಹುಲಿಗೆ ಕೊರೊನಾ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣ. ಹುಲಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ ಹುಲಿಗೂ ಕೊರೊನಾ ವಕ್ಕರಿಸಿತ್ತು.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸಲು ತಜ್ಞರ ಸಲಹೆ ಪಡೆಯಲು ಹಿರಿಯ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲಿನ ಸಲಹೆಯನ್ನು ಆಧರಿಸಿ ಕಾಡಿನಿಂದ ಹೊರಟಾಗ ಪರೀಕ್ಷೆ ಮಾಡಿಸಬೇಕಾ ಅಥವಾ ಅರಮನೆಗೆ ಬಂದ ನಂತ್ರ ಪರೀಕ್ಷೆ ಮಾಡಿಸಬೇಕಾ‌ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದಂತೆ.

ಈ ಬಾರಿ ಅರ್ಜುನ ಅಂಬಾರಿ ಹೊರುವುದು ಅನುಮಾನ.. ಈ ಬಾರಿ ಅರ್ಜುನ ಆನೆ ಚಿನ್ನದ ಅಂಬಾರಿ ಹೊರುವುದು ಅನುಮಾನ.ಹೀಗಾಗಿ ಈ ಸ್ಥಾನ ಅಭಿಮನ್ಯು ತುಂಬಲಿದ್ದಾನೆ. ಅರಣ್ಯ ಇಲಾಖೆ ಸರ್ಕಾರಕ್ಕೆ ಕಳುಹಿರುವ ಪಟ್ಟಿಯಲ್ಲೂ ಅಂಬಾರಿ ಹೊರಿಸಲು ಅಭಿಮನ್ಯು ಹೆಸರನ್ನೆ ಸೂಚಿಸಲಾಗಿದೆ. ಅಳೆದು ತೂಗಿ ಅಭಿಮನ್ಯು ಹೆಸರೇ ಫೈನಲ್ ಆಗಿದ್ದು, ಉಳಿದ 5 ಆನೆಗಳ‌ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿ‌ಲಾಗಿದೆ. ಒಟ್ಟಾರೆ ಹೇಳೋದಾದರೆ ಈ ಬಾರಿ ಕೊರೊನಾ ಜನರ ಜೀವನದ ಮೇಲೆ ಮಾತ್ರವಲ್ಲದೆ, ಜಂಬೂಸವಾರಿ ಮೇಲೂ ಪರಿಣಾಮ ಬೀರಿದೆ. ಇಷ್ಟೆಲ್ಲಾ ಒತ್ತಡಗಳ ಮಧ್ಯೆ ಜಂಬೂಸವಾರಿಗೆ ಸಿದ್ಧತೆ ನಡೆದಿರೋದು ಕುತೂಹಲ ಕೆರಳಿಸಿದೆ.

ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
ಧ್ರುವಂತ್​ನ ಸೀಕ್ರೆಟ್​ರೂಂನಲ್ಲಿ ಇಟ್ಟ ಬಗ್ಗೆ ಬಿಗ್ ಬಾಸ್​ಗೆ ಬೇಸರ?
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
‘ಸು ಫ್ರಮ್ ಸೋ’ ಯಶಸ್ಸಿನ ಮೂಲವನ್ನು‘45’ ನಿರ್ಮಾಪಕನಿಗೆ ಹಸ್ತಾಂತರಿಸಿದ ರಾಜ್
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ದೆಹಲಿ-ಆಗ್ರಾ ಎಕ್ಸ್​ಪ್ರೆಸ್​ವೇನಲ್ಲಿ ಹಲವು ಬಸ್​ಗಳಿಗೆ ಬೆಂಕಿ
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಧನುರ್ಮಾಸದಲ್ಲಿ ಶುಭಕಾರ್ಯಗಳನ್ನ ಮಾಡಬಾರದು ಯಾಕೆ ಗೊತ್ತಾ?
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಇಂದು ಈ ರಾಶಿಯವರ ಹಳೆಯ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಜೋರ್ಡಾನ್ ಕಿಂಗ್ ಅಬ್ದುಲ್ಲಾ ಜೊತೆ ಪ್ರಧಾನಿ ಮೋದಿ ಮಾತುಕತೆ
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ