AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ: ಈ ಬಾರಿ ಅಂಬಾರಿ ಹೊರುವವರು ಯಾರು?

ಮೈಸೂರು: ಕೊರೊನಾ ಆತಂಕದ ನಡುವೆಯೇ ಈ ವರ್ಷ ಕಳೆದುಹೋಗಿದೆ. ಈ ಮಧ್ಯೆ ದಸರಾ ಹಬ್ಬಕ್ಕೂ ಕೊರೊನಾ ಸೋಂಕು ಅಡ್ಡಿಯಾಗಿದ್ದು, ಇಷ್ಟೆಲ್ಲಾ ಅಡ್ಡಿ ಆತಂಕಗಳ ನಡುವೆ ಜಂಬೂಸವಾರಿ ನಡೆಸಲು ಸಿದ್ಧತೆ ನಡೆದಿದೆ. ಮೊದಲಿಗೆ ಅಂಬಾರಿ ಹೊರಲು ಆನೆ ಆಯ್ಕೆ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗಜರಾಯನಿಗೂ ಕೊರೊನಾ ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಬಾರಿ ದಸರಾದಲ್ಲಿ 5 ಆನೆಗಳನ್ನ ಮಾತ್ರ ಬಳಸಿಕೊಳ್ಳಲಾಗುತ್ತಿದೆ.. ಕೊರೊನಾ ಅದೆಷ್ಟರಮಟ್ಟಿಗೆ ಈ ಬಾರಿ ದಸರಾ ಹಬ್ಬದ ಮೇಲೆ ಹೊಡೆತ […]

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ: ಈ ಬಾರಿ ಅಂಬಾರಿ ಹೊರುವವರು ಯಾರು?
ಸಾಧು ಶ್ರೀನಾಥ್​
|

Updated on: Sep 12, 2020 | 6:36 AM

Share

ಮೈಸೂರು: ಕೊರೊನಾ ಆತಂಕದ ನಡುವೆಯೇ ಈ ವರ್ಷ ಕಳೆದುಹೋಗಿದೆ. ಈ ಮಧ್ಯೆ ದಸರಾ ಹಬ್ಬಕ್ಕೂ ಕೊರೊನಾ ಸೋಂಕು ಅಡ್ಡಿಯಾಗಿದ್ದು, ಇಷ್ಟೆಲ್ಲಾ ಅಡ್ಡಿ ಆತಂಕಗಳ ನಡುವೆ ಜಂಬೂಸವಾರಿ ನಡೆಸಲು ಸಿದ್ಧತೆ ನಡೆದಿದೆ. ಮೊದಲಿಗೆ ಅಂಬಾರಿ ಹೊರಲು ಆನೆ ಆಯ್ಕೆ ಬಗ್ಗೆ ಅಧಿಕಾರಿಗಳು ತಲೆ ಕೆಡಿಸಿಕೊಂಡಿದ್ದರು, ಆದರೆ ಸದ್ಯದ ಪರಿಸ್ಥಿತಿಯಲ್ಲಿ ಗಜರಾಯನಿಗೂ ಕೊರೊನಾ ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಎದುರಾಗಿದೆ.

ಈ ಬಾರಿ ದಸರಾದಲ್ಲಿ 5 ಆನೆಗಳನ್ನ ಮಾತ್ರ ಬಳಸಿಕೊಳ್ಳಲಾಗುತ್ತಿದೆ.. ಕೊರೊನಾ ಅದೆಷ್ಟರಮಟ್ಟಿಗೆ ಈ ಬಾರಿ ದಸರಾ ಹಬ್ಬದ ಮೇಲೆ ಹೊಡೆತ ಕೊಟ್ಟಿದೆ ಅಂದ್ರೆ, ಜಂಬೂಸವಾರಿಯಲ್ಲೇ ಕಾಂಪ್ರಮೈಸ್‌ ಮಾಡ್ಕೊಳ್ತಿದ್ದಾರೆ. ಕಾಡಿನಿಂದ 5 ಆನೆಗಳನ್ನ ಮಾತ್ರ ಕರೆದುಕೊಂಡು ಬರಲಾಗುತ್ತಿದೆ. ಅಷ್ಟೇ ಅಲ್ಲ, ಮಾವುತರು ಮಾತ್ರವಲ್ಲದೆ, ಅರಣ್ಯ ಇಲಾಖೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸೋಕೆ ತಯಾರಿ ಮಾಡ್ಕೊಂಡಿದೆ.

ದಸರಾ ಆನೆಗಳಿಗೂ ಕೊರೊನಾ ಪರೀಕ್ಷೆ.. ಅಷ್ಟಕ್ಕೂ ಅಮೆರಿಕಾದ ಝೂನಲ್ಲಿ ಹುಲಿಗೆ ಕೊರೊನಾ ಕಾಣಿಸಿಕೊಂಡಿದ್ದೇ ಇದಕ್ಕೆ ಕಾರಣ. ಹುಲಿ ನೋಡಿಕೊಳ್ಳುತ್ತಿದ್ದ ವ್ಯಕ್ತಿಯಿಂದ ಹುಲಿಗೂ ಕೊರೊನಾ ವಕ್ಕರಿಸಿತ್ತು.ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಆನೆಗಳಿಗೂ ಕೊರೊನಾ ಪರೀಕ್ಷೆ ಮಾಡಿಸಲು ತಜ್ಞರ ಸಲಹೆ ಪಡೆಯಲು ಹಿರಿಯ ಅರಣ್ಯ ಅಧಿಕಾರಿಗಳಿಗೆ ಪತ್ರ ಬರೆಯಲಾಗಿದೆ. ಅಲ್ಲಿನ ಸಲಹೆಯನ್ನು ಆಧರಿಸಿ ಕಾಡಿನಿಂದ ಹೊರಟಾಗ ಪರೀಕ್ಷೆ ಮಾಡಿಸಬೇಕಾ ಅಥವಾ ಅರಮನೆಗೆ ಬಂದ ನಂತ್ರ ಪರೀಕ್ಷೆ ಮಾಡಿಸಬೇಕಾ‌ ಎಂಬ ಬಗ್ಗೆ ನಿರ್ಣಯ ಕೈಗೊಳ್ಳಲಾಗುವುದಂತೆ.

ಈ ಬಾರಿ ಅರ್ಜುನ ಅಂಬಾರಿ ಹೊರುವುದು ಅನುಮಾನ.. ಈ ಬಾರಿ ಅರ್ಜುನ ಆನೆ ಚಿನ್ನದ ಅಂಬಾರಿ ಹೊರುವುದು ಅನುಮಾನ.ಹೀಗಾಗಿ ಈ ಸ್ಥಾನ ಅಭಿಮನ್ಯು ತುಂಬಲಿದ್ದಾನೆ. ಅರಣ್ಯ ಇಲಾಖೆ ಸರ್ಕಾರಕ್ಕೆ ಕಳುಹಿರುವ ಪಟ್ಟಿಯಲ್ಲೂ ಅಂಬಾರಿ ಹೊರಿಸಲು ಅಭಿಮನ್ಯು ಹೆಸರನ್ನೆ ಸೂಚಿಸಲಾಗಿದೆ. ಅಳೆದು ತೂಗಿ ಅಭಿಮನ್ಯು ಹೆಸರೇ ಫೈನಲ್ ಆಗಿದ್ದು, ಉಳಿದ 5 ಆನೆಗಳ‌ ಪಟ್ಟಿಯನ್ನು ಸರ್ಕಾರಕ್ಕೆ ಕಳುಹಿಸಿ‌ಲಾಗಿದೆ. ಒಟ್ಟಾರೆ ಹೇಳೋದಾದರೆ ಈ ಬಾರಿ ಕೊರೊನಾ ಜನರ ಜೀವನದ ಮೇಲೆ ಮಾತ್ರವಲ್ಲದೆ, ಜಂಬೂಸವಾರಿ ಮೇಲೂ ಪರಿಣಾಮ ಬೀರಿದೆ. ಇಷ್ಟೆಲ್ಲಾ ಒತ್ತಡಗಳ ಮಧ್ಯೆ ಜಂಬೂಸವಾರಿಗೆ ಸಿದ್ಧತೆ ನಡೆದಿರೋದು ಕುತೂಹಲ ಕೆರಳಿಸಿದೆ.

Follow Us
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
ಕೇದಾರನಾಥಕ್ಕೆ ಹೊರಟಿದ್ದೀರಾ? ಮೊದಲ ದಿನವೇ ಭಕ್ತಸಾಗರದಿಂದ ಕಾಲ್ತುಳಿತ
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
20 ಎಸೆತಗಳಲ್ಲಿ ಅರ್ಧಶತಕ ಚಚ್ಚಿದ ದೇವದತ್ ಪಡಿಕ್ಕಲ್
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಬಿಸಿಲಿಗೆ ಕೆಂಗಟ್ಟ ಚಿಕ್ಕಮಗಳೂರು ಜನರಿಗೆ ತಂಪೆರೆದ ವರುಣ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಅತ್ತೆಯ ಸಪೋರ್ಟ್ ಜತೆಗೆ ಎರಡು ಮಕ್ಕಳನ್ನ ಕಟ್ಟಿಕೊಂಡು ಚಿನ್ನದ ಗೆದ್ದ ಅಯಿಷಾ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಒಳಮೀಸಲಾತಿ ಯಾರಿಗೆ ಎಷ್ಟು? ಹೇಗೆ ಜಾರಿಯಾಗುತ್ತೆ? ವಿವರಿಸಿದ ಸಚಿವ ಮಹದೇವಪ್ಪ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಸಿಮೆಂಟ್ ಟ್ಯಾಂಕರ್, ಬಸ್ ಹಾಗೂ ಆಟೋ ನಡುವೆ ಸರಣಿ ಅಪಘಾತ: 10 ಜನರಿಗೆ ಗಾಯ
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ