ಹೈಟೆಕ್ ವಿದೇಶಿ ಕಳ್ಳರ ಬಂಧನ, ಅ ಮೂವರ ಬಳಿ ದೊರೆತ ಚಿನ್ನ ಎಷ್ಟು ಗೊತ್ತಾ?

ಬೆಂಗಳೂರು: ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಕಳ್ಳತನ ನಡೆಸಿ, ವಿಲಾಸಿ ಜೀವನ ನಡೆಸುತ್ತಿದ್ದ ಮೂವರು ಕುಖ್ಯಾತ ವಿದೇಶಿ ಕಳ್ಳರನ್ನು ನಗರದ ಪೊಲೀಸರು ಬಂಧಿಸಿದ್ದಾರೆ. ವಿಲಿಯನ್ ಪಡಿಲ್ಲಾ ಮಾರ್ಟಿನ್ , ಸ್ಪೆಫನಿಯಾ ಮುನೋಜ್ ಮೋನ್ ಸಾಲ್ವೆ, ಕ್ರಿಶ್ಚಿಯನ್ ಯೀನೀಸ್ ನವರೋ ಒಲಾರ್ಥೆ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಮೆಕ್ಸಿಕೋದ ನಕಲಿ ಪಾಸ್ ಪೋರ್ಟ್ ಅನ್ನು ಹೊಂದಿದ್ದು, ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬರುತ್ತಿದ್ದರು. ನಂತರ ಕೊಲಂಬಿಯಾದ ದಿಂದ ಖರೀದಿಸಿ ತಂದಿದ್ದ ಜಾಮರ್ ಬಳಸಿ ಕಳ್ಳತನ ಮಾಡುತ್ತಿದ್ದ ಈ ಕಳ್ಳರು, ಕಳ್ಳತನ ಮಾಡುವಾಗ […]

ಹೈಟೆಕ್ ವಿದೇಶಿ ಕಳ್ಳರ ಬಂಧನ, ಅ ಮೂವರ ಬಳಿ ದೊರೆತ ಚಿನ್ನ ಎಷ್ಟು ಗೊತ್ತಾ?
ಸಾಧು ಶ್ರೀನಾಥ್​

Updated on: Jul 30, 2020 | 2:17 PM

ಬೆಂಗಳೂರು: ಪ್ರವಾಸಿ ವೀಸಾದಡಿ ಭಾರತಕ್ಕೆ ಬಂದು ಕಳ್ಳತನ ನಡೆಸಿ, ವಿಲಾಸಿ ಜೀವನ ನಡೆಸುತ್ತಿದ್ದ ಮೂವರು ಕುಖ್ಯಾತ ವಿದೇಶಿ ಕಳ್ಳರನ್ನು ನಗರದ ಪೊಲೀಸರು ಬಂಧಿಸಿದ್ದಾರೆ.

ವಿಲಿಯನ್ ಪಡಿಲ್ಲಾ ಮಾರ್ಟಿನ್ , ಸ್ಪೆಫನಿಯಾ ಮುನೋಜ್ ಮೋನ್ ಸಾಲ್ವೆ, ಕ್ರಿಶ್ಚಿಯನ್ ಯೀನೀಸ್ ನವರೋ ಒಲಾರ್ಥೆ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳು ಮೆಕ್ಸಿಕೋದ ನಕಲಿ ಪಾಸ್ ಪೋರ್ಟ್ ಅನ್ನು ಹೊಂದಿದ್ದು, ಟೂರಿಸ್ಟ್ ವೀಸಾದಡಿ ಭಾರತಕ್ಕೆ ಬರುತ್ತಿದ್ದರು.

ನಂತರ ಕೊಲಂಬಿಯಾದ ದಿಂದ ಖರೀದಿಸಿ ತಂದಿದ್ದ ಜಾಮರ್ ಬಳಸಿ ಕಳ್ಳತನ ಮಾಡುತ್ತಿದ್ದ ಈ ಕಳ್ಳರು, ಕಳ್ಳತನ ಮಾಡುವಾಗ ಸಿಕ್ಕಿಬೀಳುವ ಭೀ ತಿಯಿಂದ ಸಿಸಿಟಿವಿ ಕನೆಕ್ಷನ್ ವೈಯರ್ ಗಳನ್ನು ಕಟ್ ಮಾಡುತ್ತಿದ್ದರು. ಜೊತೆಗೆ ಈ ಗ್ಯಾಂಗ್ ಕಳ್ಳತನದಲ್ಲಿ ವಾಕಿ-ಟಾಕಿ ಯನ್ನು ಬಳಸುತ್ತಿದ್ದರು ಎಂಬುದು ಬೆಳಕಿಗೆ ಬಂದಿದೆ.

ಬಂಧಿತರಿಂದ 2 ಕೋಟಿ 58 ಲಕ್ಷ ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿರುವ ಪೊಲೀಸರು, ಈ ಪ್ರಕರಣದ ಕಿಂಗ್ ಪಿನ್ ಆಗಿರುವ, ಗಸ್ತಾವೋ @ ತಾವೋ @ ಮುಸ್ತಾಫನ್ ಬಂಧಿಸಲು ಶೋಧ ಕಾರ್ಯ ಮುಂದುವರಿಸಿದ್ದಾರೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us