AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಧಾನಪರಿಷತ್ ಉಪಚುನಾವಣೆ: ತುಳಸಿ ಮುನಿರಾಜುಗೌಡಗೆ BJP ಟಿಕೆಟ್ ಘೋಷಣೆ

ವಿಧಾನಪರಿಷತ್ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ತುಳಸಿ ಮುನಿರಾಜುಗೌಡಗೆ ಟಿಕೆಟ್ ಘೋಷಣೆಯಾಗಿದೆ. ತುಳಸಿ ಮುನಿರಾಜುಗೌಡಗೆ ಬಿಜೆಪಿ ಪಕ್ಷ ಟಿಕೆಟ್ ಘೋಷಿಸಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ಆಗಿರುವ ತುಳಸಿ ಮುನಿರಾಜುಗೌಡ ವಿಧಾನಪರಿಷತ್‌ ಉಪಚುನಾವಣೆ ಸ್ಪರ್ಧಿಸಲಿದ್ದಾರೆ.

ವಿಧಾನಪರಿಷತ್ ಉಪಚುನಾವಣೆ: ತುಳಸಿ ಮುನಿರಾಜುಗೌಡಗೆ BJP ಟಿಕೆಟ್ ಘೋಷಣೆ
ತುಳಸಿ ಮುನಿರಾಜುಗೌಡ
KUSHAL V
|

Updated on:Mar 02, 2021 | 11:59 PM

Share

ಬೆಂಗಳೂರು: ವಿಧಾನಪರಿಷತ್ ಉಪಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ತುಳಸಿ ಮುನಿರಾಜುಗೌಡಗೆ ಟಿಕೆಟ್ ಘೋಷಣೆಯಾಗಿದೆ. ತುಳಸಿ ಮುನಿರಾಜುಗೌಡಗೆ ಬಿಜೆಪಿ ಪಕ್ಷ ಟಿಕೆಟ್ ಘೋಷಿಸಿದೆ. ಬಿಜೆಪಿ ರಾಜ್ಯ ಕಾರ್ಯದರ್ಶಿ ಆಗಿರುವ ತುಳಸಿ ಮುನಿರಾಜುಗೌಡ ವಿಧಾನಪರಿಷತ್‌ ಉಪಚುನಾವಣೆ ಸ್ಪರ್ಧಿಸಲಿದ್ದಾರೆ.

ತೆರವಾಗಿರುವ ಪರಿಷತ್‌ನ ಒಂದು ಸ್ಥಾನಕ್ಕೆ ಬೈಎಲೆಕ್ಷನ್‌ ನಡೆಯಲಿದೆ. S.L.ಧರ್ಮೇಗೌಡ ನಿಧನದಿಂದ ತೆರವಾಗಿದ್ದ ಒಂದು ಸ್ಥಾನಕ್ಕೆ ಉಪಚುನಾವಣೆ ನಡೆಯಲಿದೆ. ಉಪಸಭಾಪತಿ ಹಾಗೂ JDS ಸದಸ್ಯರಾಗಿದ್ದ ಧರ್ಮೇಗೌಡ ಕಳೆದ ಕೆಲವು ತಿಂಗಳ ಹಿಂದೆ ಆತ್ಮಹತ್ಯೆಗೆ ಶರಣಾಗಿದ್ರು.

ಅಂದ ಹಾಗೆ, ತುಳಸಿ ಮುನಿರಾಜುಗೌಡ ಈ ಹಿಂದೆ ರಾಜರಾಜೇಶ್ವರಿನಗರ ಕ್ಷೇತ್ರದ ವಿಧಾನಸಭಾ ಉಪಚುನಾವಣೆಯಲ್ಲಿ ಬಿಜೆಪಿ ಪಕ್ಷದ ಪ್ರಬಲ ಟಿಕೆಟ್​ ಆಕಾಂಕ್ಷಿಯಾಗಿದ್ದರು. ಆದರೆ, ಹೈಕಮಾಂಡ್​ ಆಗ ಕಾಂಗ್ರೆಸ್​ನಿಂದ ಪಕ್ಷಕ್ಕೆ ಆಗಮಿಸಿದ್ದ ಮುನಿರತ್ನಗೆ ಟಿಕೆಟ್​ ನೀಡಿತ್ತು. ಇದಲ್ಲದೆ, ಮುನಿರಾಜುಗೌಡ 2018ರ ವಿಧಾನಸಭೆ ಚುನಾವಣೆಯಲ್ಲಿ ರಾಜರಾಜೇಶ್ವರಿನಗರ ಕ್ಷೇತ್ರದ ಫಲಿತಾಂಶವನ್ನು ಪ್ರಶ್ನಿಸಿ ಅಂದಿನ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಮುನಿರತ್ನ ವಿರುದ್ಧ ಕೋರ್ಟ್​ಗೆ ಚುನಾವಣಾ ತಕರಾರು ಅರ್ಜಿ ಸಹ ಸಲ್ಲಿಸಿದ್ದರು.

ಇದನ್ನೂ ಓದಿ: ಕೆಲವೊಂದು ಫೋಟೋಗಳನ್ನು ಎಡಿಟ್​ ಮಾಡಲಾಗಿದೆ: ರಮೇಶ್​ ಜಾರಕಿಹೊಳಿ ಬೆಂಬಲಿಗರ ಆರೋಪ

Published On - 11:53 pm, Tue, 2 March 21