ಏರ್​ಶೋನಲ್ಲಿ ಕಣ್ಮರೆಯಾದ ಕನ್ನಡ.. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದ ವಾಟಾಳ್

Vatal Nagaraj on Aero India 2021.. ಏರೋ ಇಂಡಿಯಾ 2021 ಏರ್​ಶೋನಲ್ಲಿ ಕನ್ನಡ ಕಣ್ಮರೆ ಹಿನ್ನೆಲೆಯಲ್ಲಿ ವಾಟಾಳ್​ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ವಾಟಾಳ್​​​ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ವೈಮಾನಿಕ ಪ್ರದರ್ಶನ ಬೇಡವೇ ಬೇಡ ಎಂದು ಸಿಡಿದೆದ್ದಿದ್ದಾರೆ.

ಏರ್​ಶೋನಲ್ಲಿ ಕಣ್ಮರೆಯಾದ ಕನ್ನಡ.. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ ಎಂದು ಆಕ್ರೋಶ ಹೊರ ಹಾಕಿದ ವಾಟಾಳ್
ವಾಟಾಳ್​ ನಾಗರಾಜ್
Follow us
|

Updated on: Feb 04, 2021 | 3:07 PM

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ 2021 ಏರ್​ಶೋನಲ್ಲಿ ಕನ್ನಡ ಕಣ್ಮರೆ ಹಿನ್ನೆಲೆಯಲ್ಲಿ ವಾಟಾಳ್​ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ ವಿರುದ್ಧ ವಾಟಾಳ್​​​ ತೀವ್ರ ಅಸಮಾಧಾನ ಹೊರ ಹಾಕಿದ್ದಾರೆ. ವೈಮಾನಿಕ ಪ್ರದರ್ಶನ ಬೇಡವೇ ಬೇಡ ಎಂದು ಸಿಡಿದೆದ್ದಿದ್ದಾರೆ.

ಏರ್ ಶೋನಲ್ಲಿ ಒಂದು ಅಕ್ಷರ ಕನ್ನಡ ಕಾಣಿಸುತ್ತಿಲ್ಲ. ಕೇವಲ ಹಿಂದಿ, ಇಂಗ್ಲಿಷ್ ರಾರಾಜಿಸುತ್ತಿದೆ. ಇದು ಈ ನಾಡಿಗೆ ಮಾಡಿದ ದ್ರೋಹ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂಗ್ಲಿಷ್​​ನಲ್ಲಿ ಭಾಷಣ ಮಾಡಿದ್ದಾರೆ. ನಿಮಗೆ ಮಾನ ಮರ್ಯಾದೆ ಯಾವುದೂ ಇಲ್ಲ. ಇಂಗ್ಲಿಷ್​ನಲ್ಲಿ ಭಾಷಣ ಮಾಡಿ ಕನ್ನಡಕ್ಕೆ ಅಗೌರವ ತೊರಿದ್ದೀರಿ. ಕನ್ನಡವೇ ಇಲ್ಲದ ವೈಮಾನಿಕ ಪ್ರದರ್ಶನ ಯಾರಿಗೆ ಬೇಕು ಎಂದು ಬೆಂಗಳೂರಿನಲ್ಲಿ ಸರ್ಕಾರದ ವಿರುದ್ಧ ವಾಟಾಳ್​ ನಾಗರಾಜ್ ಆಕ್ರೋಶ ಹೊರ ಹಾಕಿದ್ದಾರೆ.

Aero India 2021 Live: ಭಾರತದ ಪ್ರಾದೇಶಿಕ ಸಮಗ್ರತೆ, ಜನರ ರಕ್ಷಣೆಗೆ ನಮ್ಮ ಸೇನೆ ಸದಾ ಬದ್ಧ -ರಕ್ಷಣಾ ಸಚಿವ ರಾಜನಾಥ್​ ಸಿಂಗ್​