AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಕೂಡ್ಲಿಗಿ ಯಾರ ಪಾಲಾಗಲಿದೆ.. ಕಾದು ನೋಡಬೇಕಿದೆ!

ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಿಂಗಡಣೆಗೆ ಕರ್ನಾಟಕ ಸಚಿವ ಸಂಪುಟವು ಅಸ್ತು ಅನ್ನುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಹತ್ತಿಕೊಂಡಿವೆ. ರಾಜ್ಯದ 31ನೇ ಜಿಲ್ಲೆ ರಚನೆಯಾಗಲಿರುವ ಬಗ್ಗೆ, ಸ್ವಾಗತ ಮತ್ತು ವಿರೋಧ ಎರಡೂ ವಿಧದ ಅಭಿಪ್ರಾಯಗಳು ಕೇಳಿಬಂದಿವೆ. ವಿಜಯನಗರಕ್ಕೆ ಒಳಪಡಲಿರುವ ಜನರು ಸಂತಸ ವ್ಯಕ್ತಪಡಿಸಿದ್ದರೆ, ಬಳ್ಳಾರಿ ಭಾಗದ ಜನರು ಅಸಮಾಧಾನ ತೋರಿದ್ದಾರೆ. ವಿಜಯನಗರ ಮತ್ತು ಬಳ್ಳಾರಿ ಅಖಂಡವಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ನಿರ್ಧಾರವು ವಿಜಯನಗರಕ್ಕೆ ಸಿಹಿ-ಬಳ್ಳಾರಿಗೆ ಕಹಿ ಎಂಬಂತಾಗಿದೆ. ಯಾವ್ಯಾವ ತಾಲೂಕುಗಳು ಯಾರು ಯಾರ ಪಾಲು? ಹೊಸಪೇಟೆ, […]

‘ದಿ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಕೂಡ್ಲಿಗಿ ಯಾರ ಪಾಲಾಗಲಿದೆ.. ಕಾದು ನೋಡಬೇಕಿದೆ!
ಸಾಧು ಶ್ರೀನಾಥ್​
|

Updated on: Nov 19, 2020 | 3:43 PM

Share

ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಿಂಗಡಣೆಗೆ ಕರ್ನಾಟಕ ಸಚಿವ ಸಂಪುಟವು ಅಸ್ತು ಅನ್ನುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಹತ್ತಿಕೊಂಡಿವೆ. ರಾಜ್ಯದ 31ನೇ ಜಿಲ್ಲೆ ರಚನೆಯಾಗಲಿರುವ ಬಗ್ಗೆ, ಸ್ವಾಗತ ಮತ್ತು ವಿರೋಧ ಎರಡೂ ವಿಧದ ಅಭಿಪ್ರಾಯಗಳು ಕೇಳಿಬಂದಿವೆ. ವಿಜಯನಗರಕ್ಕೆ ಒಳಪಡಲಿರುವ ಜನರು ಸಂತಸ ವ್ಯಕ್ತಪಡಿಸಿದ್ದರೆ, ಬಳ್ಳಾರಿ ಭಾಗದ ಜನರು ಅಸಮಾಧಾನ ತೋರಿದ್ದಾರೆ. ವಿಜಯನಗರ ಮತ್ತು ಬಳ್ಳಾರಿ ಅಖಂಡವಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ನಿರ್ಧಾರವು ವಿಜಯನಗರಕ್ಕೆ ಸಿಹಿ-ಬಳ್ಳಾರಿಗೆ ಕಹಿ ಎಂಬಂತಾಗಿದೆ.

ಯಾವ್ಯಾವ ತಾಲೂಕುಗಳು ಯಾರು ಯಾರ ಪಾಲು? ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ಈ ಆರು ತಾಲೂಕುಗಳು ನೂತನ ವಿಜಯನಗರ ಜಿಲ್ಲೆಯ ಭಾಗವಾಗುತ್ತವೆ. ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು, ಕೂಡ್ಲಿಗಿ ಈ ಐದು ತಾಲೂಕುಗಳು ಬಳ್ಳಾರಿ ಜಿಲ್ಲೆಗೆ ಉಳಿದುಕೊಳ್ಳಲಿವೆ. 2011ರ ಜನಗಣತಿಯ ಪ್ರಕಾರ 24.5 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯು ಎರಡು ವಿಭಾಗಗಳಾದರೆ, 10 ಲಕ್ಷದಷ್ಟು ಜನಸಂಖ್ಯೆ ವಿಜಯನಗರದ ಪಾಲಾಗಲಿದೆ. ಉಳಿದ ಜನರು ಬಳ್ಳಾರಿಗೆ ಸೇರಿಕೊಳ್ಳಲಿದ್ದಾರೆ.

ಕೂಡ್ಲಿಗಿ ತಾಲೂಕು ಯಾರ ಪಾಲಾಗಬೇಕು ಎಂಬ ಬಗ್ಗೆ ವಿವಾದಗಳಿದ್ದು, ಎರಡೂ ಭಾಗದಿಂದ ಕೂಡ್ಲಿಗಿಯನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಕೂಡ್ಲಿಗಿ-ಹೊಸಪೇಟೆ ಮತ್ತು ಕೂಡ್ಲಿಗಿ-ಬಳ್ಳಾರಿ ನಡುವಿನ ಪ್ರಯಾಣದ ದೂರವನ್ನು ಗಮನಿಸಿದರೆ, ಕೂಡ್ಲಿಗಿ ತಾಲೂಕಿಗೆ ಹೊಸಪೇಟೆಯೇ ಸಮೀಪವಾಗಿದೆ. ಈ ನಿಟ್ಟಿನಲ್ಲಿ ಕೂಡ್ಲಿಗಿಯನ್ನು ತಮ್ಮೊಂದಿಗೆ ಸೇರಿಸುವಂತೆ ವಿಜಯನಗರ ಜನರ ಊಗು ಕೇಳಿಬಂದಿದೆ. ಬಹುತೇಕ ಕೂಡ್ಲಿಗಿ ಜನರ ಅಭಿಪ್ರಾಯವೂ ಇದೇ ಆಗಿದೆ. ’ದ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಎಂದು ಕರೆಸಿಕೊಂಡಿದ್ದ ಕೂಡ್ಲಿಗಿ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜಿಲ್ಲೆಯ ವಿಂಗಡಣೆಯು ಕೇವಲ ಭೌಗೋಳಿಕ ವಿಭಜನೆ ಮಾತ್ರ ಆಗಿರದೆ, ಆರ್ಥಿಕ, ಸಾಂಸ್ಕೃತಿಕ, ಐತಿಹಾಸಿಕ ಪ್ರದೇಶಗಳ ವಿಭಜನೆಯೂ ಆಗಿರಲಿದೆ. ಇತಿಹಾಸ ಮರೆಯಲಾರದ ಹಂಪಿ, ವಿಜಯನಗರ, ತುಂಗಭದ್ರಾ, ಬೊಮ್ಮಘಟ್ಟ, ತಿಮ್ಮಲಾಪುರ ಮುಂತಾದ ಪುರಾತನ ಸ್ಥಳಗಳು ಎರಡು ಜಿಲ್ಲೆಯ ಪಾಲಾಗಲಿವೆ. ಕಬ್ಬಿಣ, ಮ್ಯಾಂಗನೀಸ್, ಚಿನ್ನ, ತಾಮ್ರ ಮುಂತಾದ ಅದಿರು ವಹಿವಾಟುಗಳು ಹಂಚಿಹೋಗಲಿವೆ.

ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ದೇವಸ್ಥಾನದ ಸುಪ್ರಭಾತ ಹಾಡು ಹಾಕಿದಕ್ಕೆ ಮುಸ್ಲಿಂ ಯವಕನಿಂದ ಕಿರಿಕ್
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?
ನಟ ಯಶ್​ ತಾಯಿ ಜಾಗ ವಿವಾದಕ್ಕೆ ಟ್ವಿಸ್ಟ್​​: ಒಂದೇ ಸೈಟ್​​ಗೆ ಎರಡು ದಾಖಲೆ?