AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ದಿ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಕೂಡ್ಲಿಗಿ ಯಾರ ಪಾಲಾಗಲಿದೆ.. ಕಾದು ನೋಡಬೇಕಿದೆ!

ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಿಂಗಡಣೆಗೆ ಕರ್ನಾಟಕ ಸಚಿವ ಸಂಪುಟವು ಅಸ್ತು ಅನ್ನುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಹತ್ತಿಕೊಂಡಿವೆ. ರಾಜ್ಯದ 31ನೇ ಜಿಲ್ಲೆ ರಚನೆಯಾಗಲಿರುವ ಬಗ್ಗೆ, ಸ್ವಾಗತ ಮತ್ತು ವಿರೋಧ ಎರಡೂ ವಿಧದ ಅಭಿಪ್ರಾಯಗಳು ಕೇಳಿಬಂದಿವೆ. ವಿಜಯನಗರಕ್ಕೆ ಒಳಪಡಲಿರುವ ಜನರು ಸಂತಸ ವ್ಯಕ್ತಪಡಿಸಿದ್ದರೆ, ಬಳ್ಳಾರಿ ಭಾಗದ ಜನರು ಅಸಮಾಧಾನ ತೋರಿದ್ದಾರೆ. ವಿಜಯನಗರ ಮತ್ತು ಬಳ್ಳಾರಿ ಅಖಂಡವಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ನಿರ್ಧಾರವು ವಿಜಯನಗರಕ್ಕೆ ಸಿಹಿ-ಬಳ್ಳಾರಿಗೆ ಕಹಿ ಎಂಬಂತಾಗಿದೆ. ಯಾವ್ಯಾವ ತಾಲೂಕುಗಳು ಯಾರು ಯಾರ ಪಾಲು? ಹೊಸಪೇಟೆ, […]

‘ದಿ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಕೂಡ್ಲಿಗಿ ಯಾರ ಪಾಲಾಗಲಿದೆ.. ಕಾದು ನೋಡಬೇಕಿದೆ!
ಸಾಧು ಶ್ರೀನಾಥ್​
|

Updated on: Nov 19, 2020 | 3:43 PM

Share

ಬಳ್ಳಾರಿ ಮತ್ತು ವಿಜಯನಗರ ಜಿಲ್ಲಾ ವಿಂಗಡಣೆಗೆ ಕರ್ನಾಟಕ ಸಚಿವ ಸಂಪುಟವು ಅಸ್ತು ಅನ್ನುತ್ತಿದ್ದಂತೆಯೇ ಒಂದಷ್ಟು ವಿವಾದಗಳು ಹತ್ತಿಕೊಂಡಿವೆ. ರಾಜ್ಯದ 31ನೇ ಜಿಲ್ಲೆ ರಚನೆಯಾಗಲಿರುವ ಬಗ್ಗೆ, ಸ್ವಾಗತ ಮತ್ತು ವಿರೋಧ ಎರಡೂ ವಿಧದ ಅಭಿಪ್ರಾಯಗಳು ಕೇಳಿಬಂದಿವೆ. ವಿಜಯನಗರಕ್ಕೆ ಒಳಪಡಲಿರುವ ಜನರು ಸಂತಸ ವ್ಯಕ್ತಪಡಿಸಿದ್ದರೆ, ಬಳ್ಳಾರಿ ಭಾಗದ ಜನರು ಅಸಮಾಧಾನ ತೋರಿದ್ದಾರೆ. ವಿಜಯನಗರ ಮತ್ತು ಬಳ್ಳಾರಿ ಅಖಂಡವಾಗಿರಬೇಕು ಎಂಬ ಆಶಯ ವ್ಯಕ್ತಪಡಿಸಿದ್ದಾರೆ. ಒಟ್ಟಿನಲ್ಲಿ, ಈ ನಿರ್ಧಾರವು ವಿಜಯನಗರಕ್ಕೆ ಸಿಹಿ-ಬಳ್ಳಾರಿಗೆ ಕಹಿ ಎಂಬಂತಾಗಿದೆ.

ಯಾವ್ಯಾವ ತಾಲೂಕುಗಳು ಯಾರು ಯಾರ ಪಾಲು? ಹೊಸಪೇಟೆ, ಕಂಪ್ಲಿ, ಹಗರಿಬೊಮ್ಮನಳ್ಳಿ, ಕೊಟ್ಟೂರು, ಹೂವಿನಹಡಗಲಿ, ಹರಪನಹಳ್ಳಿ ಈ ಆರು ತಾಲೂಕುಗಳು ನೂತನ ವಿಜಯನಗರ ಜಿಲ್ಲೆಯ ಭಾಗವಾಗುತ್ತವೆ. ಬಳ್ಳಾರಿ, ಕುರುಗೋಡು, ಸಿರುಗುಪ್ಪ, ಸಂಡೂರು, ಕೂಡ್ಲಿಗಿ ಈ ಐದು ತಾಲೂಕುಗಳು ಬಳ್ಳಾರಿ ಜಿಲ್ಲೆಗೆ ಉಳಿದುಕೊಳ್ಳಲಿವೆ. 2011ರ ಜನಗಣತಿಯ ಪ್ರಕಾರ 24.5 ಲಕ್ಷ ಜನಸಂಖ್ಯೆ ಹೊಂದಿರುವ ಜಿಲ್ಲೆಯು ಎರಡು ವಿಭಾಗಗಳಾದರೆ, 10 ಲಕ್ಷದಷ್ಟು ಜನಸಂಖ್ಯೆ ವಿಜಯನಗರದ ಪಾಲಾಗಲಿದೆ. ಉಳಿದ ಜನರು ಬಳ್ಳಾರಿಗೆ ಸೇರಿಕೊಳ್ಳಲಿದ್ದಾರೆ.

ಕೂಡ್ಲಿಗಿ ತಾಲೂಕು ಯಾರ ಪಾಲಾಗಬೇಕು ಎಂಬ ಬಗ್ಗೆ ವಿವಾದಗಳಿದ್ದು, ಎರಡೂ ಭಾಗದಿಂದ ಕೂಡ್ಲಿಗಿಯನ್ನು ತಮ್ಮೊಂದಿಗೆ ಸೇರಿಸಿಕೊಳ್ಳುವಂತೆ ಆಗ್ರಹ ಕೇಳಿಬಂದಿದೆ. ಕೂಡ್ಲಿಗಿ-ಹೊಸಪೇಟೆ ಮತ್ತು ಕೂಡ್ಲಿಗಿ-ಬಳ್ಳಾರಿ ನಡುವಿನ ಪ್ರಯಾಣದ ದೂರವನ್ನು ಗಮನಿಸಿದರೆ, ಕೂಡ್ಲಿಗಿ ತಾಲೂಕಿಗೆ ಹೊಸಪೇಟೆಯೇ ಸಮೀಪವಾಗಿದೆ. ಈ ನಿಟ್ಟಿನಲ್ಲಿ ಕೂಡ್ಲಿಗಿಯನ್ನು ತಮ್ಮೊಂದಿಗೆ ಸೇರಿಸುವಂತೆ ವಿಜಯನಗರ ಜನರ ಊಗು ಕೇಳಿಬಂದಿದೆ. ಬಹುತೇಕ ಕೂಡ್ಲಿಗಿ ಜನರ ಅಭಿಪ್ರಾಯವೂ ಇದೇ ಆಗಿದೆ. ’ದ ಲ್ಯಾಂಡ್ ಆಫ್ ರಿಚ್ ಸ್ಪೈಸಸ್’ ಎಂದು ಕರೆಸಿಕೊಂಡಿದ್ದ ಕೂಡ್ಲಿಗಿ ಯಾರ ಪಾಲಾಗಲಿದೆ ಎಂಬುದನ್ನು ಕಾದು ನೋಡಬೇಕಿದೆ.

ಜಿಲ್ಲೆಯ ವಿಂಗಡಣೆಯು ಕೇವಲ ಭೌಗೋಳಿಕ ವಿಭಜನೆ ಮಾತ್ರ ಆಗಿರದೆ, ಆರ್ಥಿಕ, ಸಾಂಸ್ಕೃತಿಕ, ಐತಿಹಾಸಿಕ ಪ್ರದೇಶಗಳ ವಿಭಜನೆಯೂ ಆಗಿರಲಿದೆ. ಇತಿಹಾಸ ಮರೆಯಲಾರದ ಹಂಪಿ, ವಿಜಯನಗರ, ತುಂಗಭದ್ರಾ, ಬೊಮ್ಮಘಟ್ಟ, ತಿಮ್ಮಲಾಪುರ ಮುಂತಾದ ಪುರಾತನ ಸ್ಥಳಗಳು ಎರಡು ಜಿಲ್ಲೆಯ ಪಾಲಾಗಲಿವೆ. ಕಬ್ಬಿಣ, ಮ್ಯಾಂಗನೀಸ್, ಚಿನ್ನ, ತಾಮ್ರ ಮುಂತಾದ ಅದಿರು ವಹಿವಾಟುಗಳು ಹಂಚಿಹೋಗಲಿವೆ.

ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್​​ಟಿಓ ಅಧಿಕಾರಿಗಳೇ ಶಾಕ್!
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
ಜೋರ್ಡಾನ್​​​ನಲ್ಲಿ ಮೋದಿಯನ್ನು ನೋಡಿ ಸಂಭ್ರಮಿಸಿದ ಭಾರತೀಯ ವಲಸಿಗರು
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
20 ದಿನದಲ್ಲೇ ದಾಂಪತ್ಯ ಜೀವನ ಅಂತ್ಯ: ಸಂಸಾರದಲ್ಲಿ ಹುಳಿ ಹಿಂಡಿದ ಪ್ರಿಯಕರ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
ಚಲಿಸುತ್ತಿದ್ದ ರೈಲಿನ ಚೈನ್ ಎಳೆದು ರಾದ್ಧಾಂತ: ಪ್ರಶ್ನಿಸಿದ್ದಕ್ಕೆ ಹಲ್ಲೆ
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
‘45’ ಚಿತ್ರದ ಟ್ರೇಲರ್ ರಿಲೀಸ್ ಕಾರ್ಯಕ್ರಮ: ಲೈವ್ ವಿಡಿಯೋ ಇಲ್ಲಿದೆ ನೋಡಿ..
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಪ್ರಧಾನಿ ಮೋದಿಗೆ ಜೋರ್ಡಾನ್‌ನಲ್ಲಿ ಸಾಂಪ್ರದಾಯಿಕ ಸ್ವಾಗತ
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಕಾಸರಗೋಡಿನಲ್ಲಿ ತೆಯ್ಯಂ ಪ್ರದರ್ಶನದ ವೇಳೆ ಏನಾಯ್ತು ನೋಡಿ!
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಶಿವಶಂಕರಪ್ಪ ಕೈಲಾಸ ಶಿವಗಣಾರಾಧನೆಗೆ ಆಹ್ವಾನ ನೀಡಿದ ಕುಟುಂಬ: ಯಾವಾಗ, ಎಲ್ಲಿ?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಜೈಲಿನಲ್ಲಿ ದರ್ಶನ ಭೇಟಿ ಮಾಡಿದ ​ಅಲೋಕ್ ಕುಮಾರ್: ಏನು ವಿಚಾರಿಸಿದ್ರು?
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ
ಸೀಕ್ರೆಟ್ ರೂಮ್​​ನಲ್ಲೂ ನಡೆಯಿತು ಧ್ರುವಂತ್, ರಕ್ಷಿತಾ ಶೆಟ್ಟಿ ಜಗಳ