AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿನಯ್​ ಕುಲಕರ್ಣಿಗೆ NO ರಿಲೀಫ್: 3 ದಿನ CBI ಕಸ್ಟಡಿಗೆ ನೀಡಿದ ಕೋರ್ಟ್​

ಧಾರವಾಡ: ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ವಿನಯ್​ ಕುಲಕರ್ಣಿಯನ್ನು ಇಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್​ ನ್ಯಾಯಾಲಯದ ಜಡ್ಜ್​ ನ್ಯಾ. ಪಂಚಾಕ್ಷರಿ ಎದುರು ಹಾಜರುಪಡಿಸಲಾಯಿತು. ವಿನಯ್​ರನ್ನು 3 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲರು ಕೋರಿದ್ದರು. ಆದರೆ, ಸಿಬಿಐ ಕೋರಿಕೆ ಮನ್ನಿಸದೇ ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಹಾಗಾಗಿ, ಇಂದು ವಿನಯ್​ ಕುಲಕರ್ಣಿಯನ್ನು ಮತ್ತೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು. ವಿಚಾರಣೆ […]

ವಿನಯ್​ ಕುಲಕರ್ಣಿಗೆ NO ರಿಲೀಫ್: 3 ದಿನ CBI ಕಸ್ಟಡಿಗೆ ನೀಡಿದ ಕೋರ್ಟ್​
KUSHAL V
|

Updated on:Nov 06, 2020 | 6:11 PM

Share

ಧಾರವಾಡ: ನ್ಯಾಯಾಂಗ ಬಂಧನದಲ್ಲಿದ್ದ ಮಾಜಿ ಸಚಿವ ವಿನಯ್​ ಕುಲಕರ್ಣಿಯನ್ನು ಇಂದು ಬೆಳಗ್ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಮೂರನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್​ ನ್ಯಾಯಾಲಯದ ಜಡ್ಜ್​ ನ್ಯಾ. ಪಂಚಾಕ್ಷರಿ ಎದುರು ಹಾಜರುಪಡಿಸಲಾಯಿತು. ವಿನಯ್​ರನ್ನು 3 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಸಿಬಿಐ ಪರ ವಕೀಲರು ಕೋರಿದ್ದರು. ಆದರೆ, ಸಿಬಿಐ ಕೋರಿಕೆ ಮನ್ನಿಸದೇ ಒಂದು ದಿನ ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಈ ಹಿಂದೆ ಆದೇಶಿಸಿತ್ತು. ಹಾಗಾಗಿ, ಇಂದು ವಿನಯ್​ ಕುಲಕರ್ಣಿಯನ್ನು ಮತ್ತೆ ನ್ಯಾಯಾಧೀಶರ ಎದುರು ಹಾಜರುಪಡಿಸಲಾಯಿತು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಸೆಷನ್ಸ್​ ನ್ಯಾಯಾಲಯದ ಜಡ್ಜ್ ನ್ಯಾ. ಪಂಚಾಕ್ಷರಿ ವಿನಯ್​ ಕುಲಕರ್ಣಿಯನ್ನು 3 ದಿನಗಳ ಕಾಲ ಸಿಬಿಐ ವಶಕ್ಕೆ ನೀಡಿ ಆದೇಶ ಹೊರಡಿಸಿದರು. ನ. 9ರಂದು ಕೋರ್ಟ್​ಗೆ ಬೆಳಗ್ಗೆ 11 ಗಂಟೆಗೆ ಹಾಜರುಪಡಿಸುವಂತೆ ಸಿಬಿಐ ಅಧಿಕಾರಿಗಳಿಗೆ ನ್ಯಾಯಾಧೀಶರು ಸೂಚನೆ ನೀಡಿದ್ದಾರೆ. ಕೆಲ ಷರತ್ತು ವಿಧಿಸಿ ಸಿಬಿಐ ಕಸ್ಡಡಿಗೆ ನೀಡಿದ ಕೋಟ್೯ ಪ್ರತಿ ದಿನ 10 ನಿಮಿಷಗಳ ಕಾಲ ಕುಟುಂಬಸ್ಥರಿಗೆ ಭೇಟಿ ಮಾಡುವ ಅವಕಾಶ ನೀಡಿದೆ. ಸಿಬಿಐ ಅಧಿಕಾರಿಗಳ ಸಮ್ಮುಖದಲ್ಲಿ ವಿನಯ್​ ಕುಲಕರ್ಣಿಗೆ ಕುಟುಂಬಸ್ಥರನ್ನು ಭೇಟಿ ಮಾಡಿಸಬೇಕು ಎಂದು ಸೂಚಿಸಿದೆ.

Published On - 6:05 pm, Fri, 6 November 20