AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿರಾಟ್ ಕೊಹ್ಲಿಯ ಮೊದಲ Audi ಕಾರು ಪೊಲೀಸ್ ಸ್ಟೇಷನ್​ನಲ್ಲಿರೋದು ಯಾಕೆ ಗೊತ್ತಾ?

ಆಡಿ ಸಂಸ್ಥೆಯ ಭಾರತದ ರಾಯಭಾರಿಯಾಗಿರುವ ವಿರಾಟ್ ಕೊಹ್ಲಿಯ ಮೊದಲ ಆಡಿ ಕಾರೊಂದು ಮಹಾರಾಷ್ಟ್ರದ ಪೊಲೀಸ್ ಠಾಣೆಯಲ್ಲಿ ಧೂಳು ತಿನ್ನುತ್ತಿದೆ ಎಂದರೆ ನೀವು ನಂಬಲೇಬೇಕು!

ವಿರಾಟ್ ಕೊಹ್ಲಿಯ ಮೊದಲ Audi ಕಾರು ಪೊಲೀಸ್ ಸ್ಟೇಷನ್​ನಲ್ಲಿರೋದು ಯಾಕೆ ಗೊತ್ತಾ?
ಆಡಿ R8 ಕಾರು ಮೊದಲು ಕೊಹ್ಲಿ ಬಳಿ ಇದ್ದಾಗ (ಬಲ) ಈಗ ಪೊಲೀ್ಸ್ ಠಾಣೆಯಲ್ಲಿ ತುಕ್ಕು ಹಿಡಿಯುತ್ತಿರುವುದು (ಎಡ)
guruganesh bhat
| Edited By: |

Updated on:Dec 13, 2020 | 7:26 PM

Share

ಸದ್ಯ ಅತಿ ಹೆಚ್ಚು ಆದಾಯ, ಜನಪ್ರಿಯತೆ ಹೊಂದಿರುವ ಕ್ರಿಕೇಟರ್ ಯಾರೆಂದು ಯಾರಿಗೆ ತಾನೇ ಗೊತ್ತಿಲ್ಲ? ಈಗಷ್ಟೇ ಬ್ಯಾಟು ಬಾಲು ಹಿಡಿದಿರೋ ಪುಟ್ಟ ಮಗುವೂ ವಿರಾಟ್ ಕೊಹ್ಲಿ ಹೆಸರನ್ನೇ ಹೇಳುತ್ತೆ. ಇಂಥ ಶ್ರೀಮಂತ ಕ್ರಿಕೇಟರ್​ಗೆ ಕಾರ್​ಗಳ ಮೋಹವೂ ಇದ್ದೇ ಇದೆ. ಹಲವು ವರ್ಷಗಳಿಂದ ಭಾರತದಲ್ಲಿ ಆಡಿ ಕಾರುಗಳ ರಾಯಭಾರಿಯಾಗಿರುವ ಕೊಹ್ಲಿಯ ಕಾರ್​ ಶೆಡ್​ಗೆ, ಪ್ರತಿ ವರ್ಷವೂ ಹೊಸ ಆಡಿ ಕಾರುಗಳು ಸೇರ್ಪಡೆಯಾಗುತ್ತಲೇ ಇರುತ್ತವೆ.

ಹೀಗಿರುವಾಗ, ವಿರಾಟ್ ಕೊಹ್ಲಿಯ ಮೊದಲ ಆಡಿ ಕಾರು ಯಾವ್ದು? ಈಗಲೂ ಅದು ಕೊಹ್ಲಿ ಬಳಿಯೇ ಇದೆಯಾ? ಹೊಸ ಕಾರು ಬಂದಂತೆ ಹಳೆ ಕಾರುಗಳ ಕಥೆಯೇನು ಎಂಬೆಲ್ಲ ಪ್ರಶ್ನೆಗಳು ಉದ್ಭವಿಸದಿರದು. ಹಾಗಾದ್ರೆ ಹೇಳ್ತೀವಿ ಕೇಳಿ, ವಿರಾಟ್ ಕೊಹ್ಲಿಯ ಹಳೆಯ ಆಡಿ ಕಾರೊಂದು ಮಹಾರಾಷ್ಟ್ರದ ಪೊಲೀಸ್ ಠಾಣೆಯಲ್ಲಿ ಧೂಳು ತಿನ್ನುತ್ತಿದೆ ಎಂದರೆ ನೀವು ನಂಬಲೇಬೇಕು!

ಕೊಹ್ಲಿ ಕೈವಾಡವೇನಿಲ್ಲ..ಚಿಂತೆ ಮಾಡ್ಬೇಡಿ! 2012ರಲ್ಲಿ ಬಿಡುಗಡೆಯಾದ ಆಡಿ R8 ಕಾರನ್ನು ಕೊಹ್ಲಿ ಖರೀದಿಸಿದ್ದರು. ಅಂದಹಾಗೆ ಇದು ಕೊಹ್ಲಿಯ ಮೊದಲ ಆಡಿ ಕಾರು ಸಹ ಹೌದು. 2016ರಲ್ಲಿ ಆಡಿ ಇನ್ನೊಂದು ಮಾಡೆಲ್ ಕಾರನ್ನು ಬಿಡುಗಡೆಗೊಳಿಸಿತ್ತು. ಆಗ ಸಾಗರ್ ಥಕ್ಕರ್ ಎಂಬುವವರಿಗೆ 2.5 ಕೋಟಿಗೆ R8 ಅನ್ನು ಮಾರಿದ್ದರು ಕೊಹ್ಲಿ.

ತಮ್ಮ ಪ್ರೇಯಸಿಗಾಗಿ ಕಾರು ಖರೀದಿಸಿದ್ದ ಸಾಗರ್ ಥಕ್ಕರ್, ನಂತರ ಹಗರಣವೊಂದರಲ್ಲಿ ಪೊಲೀಸರ ಅತಿಥಿಯಾಗಿದ್ದಾರೆ. ಕೇವಲ ಎರಡೇ ತಿಂಗಳಲ್ಲಿ ಅವರ ಕಾರನ್ನೂ ಸಹ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಂದಿನಿಂದ ವಿರಾಟ್ ಕಾರು ಮುಂಬೈ ಪೊಲೀಸ್ ಠಾಣೆಯಲ್ಲೇ ಧೂಳು ತಿನ್ನುತ್ತಿದೆ. ಹೀಗೆ, ಮುಂಚೆ ಕೊಹ್ಲಿ ಬಳಸುತ್ತಿದ್ದ ಆಡಿ ಕಾರಿಗೆ ದಿಕ್ಕು ದೆಸೆ ಇಲ್ಲದಂತಾಗಿದೆ ಎಂದು ಅಭಿಮಾನಿಗಳು ಅಳಲು ತೋಡಿಕೊಂಡಿದ್ದಾರೆ.

Published On - 7:26 pm, Sun, 13 December 20

Follow Us
guruganesh bhat
guruganesh bhat
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ರಜನಿ-ಕಮಲ್ ಸಿನಿಮಾದಲ್ಲಿ ನಟಿಸಲು ತ್ರಿಶಾಗೆ 12 ಕೋಟಿ ರೂಪಾಯಿ ಆಫರ್?
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ