
ಚಾಮರಾಜನಗರ: ಹಸಿರನ್ನೇ ಹೊದ್ದು ನಿಂತಿರೋ ಕಾನನ. ಸ್ವಚ್ಛಂದ ತಾಣದಲ್ಲಿ ವನ್ಯಜೀವಿಗಳ ಸುಂದರ ನೋಟ. ಕಂಡಲ್ಲೆಲ್ಲ ಓಡಾಡುತ್ತಿರುವ ಜಿಂಕೆಗಳ ಹಿಂಡು. ನೀರಿನಲ್ಲಿ ವಿಶಾಂತ್ರಿ ಪಡೆಯುತ್ತಿರುವ ಹುಲಿರಾಯ. ಪ್ರಕೃತಿ ಮಾತೆಯ ಸೊಬಗು ಸವಿಯೋಕೆ ಬರ್ತಿರೋ ಪ್ರವಾಸಿಗರ ಹಿಂಡು.
ಚಾಮರಾಜನಗರ ಜಿಲ್ಲೆಯಲ್ಲಿ ಹಿಂಗಾರು ಮಳೆ ಬೀಳುತ್ತಿವುದರಿಂದ ಅಕ್ಪೋಬರ್ ತಿಂಗಳಲ್ಲೂ ಬಂಡೀಪುರ ಕಳೆಗಟ್ಟಿದೆ. ನೀರು ಹಾಗೂ ಮೇವಿನ ಚಿಂತೆ ಇಲ್ಲದೆ ವನ್ಯಜೀವಿಗಳು ಸ್ವಚ್ಚಂದವಾಗಿ ವಿಹರಿಸುವ ದೃಶ್ಯ ಸಾಮಾನ್ಯವಾಗಿ ಕಂಡುಬರುತ್ತಿದೆ. ಕೆರೆಕಟ್ಟೆಗಳಲ್ಲಿ ನೀರು ಕುಡಿಯಲು, ಇಲ್ಲವೇ ಹಸಿರು ಹುಲ್ಲು ಮೇಯಲು ಬರುವ ಕಾಡೆಮ್ಮೆ, ಜಿಂಕೆ, ಕಡವೆಯಂತಹ ಪ್ರಾಣಿಗಳನ್ನ ನೋಡಿದರೆ ಮನಸು ಮುದಗೊಳ್ಳುತ್ತದೆ.
ಒಟ್ನಲ್ಲಿ ಕೊರೊನಾದಿಂದ ಪ್ರವಾಸಿಗರಿಲ್ಲದೇ ಬಿಕೋ ಎನ್ನುತ್ತಿದ್ದ ಬಂಡಿಪುರ ಈಗ ಕಳೆಗಟ್ಟಲಾರಂಭಿಸಿದ್ದು, ಪ್ರವಾಸಿಗರು ಸಖತ್ ಎಂಜಾಯ್ ಮಾಡುತ್ತಿದ್ದಾರೆ.
Published On - 3:40 pm, Thu, 8 October 20