AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಾನೆಲ್ರೀ ಕುದುರೆ ತರಲಿಕ್ಕೆ ರಾಜಸ್ಥಾನಕ್ಕೆ ಹೋಗಿದ್ದೆ? ನಾನೆಲ್ಲಿ BJP ಸೇರ್ಪೆಡೆಗೆ ಹೋಗಿದ್ದೆ? ಕುಲಕರ್ಣಿ ಅಳಲು

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಖುದ್ದು ವಿನಯ್ ಕುಲಕರ್ಣಿ ಮಾತನಾಡಿದ್ದು ಅವರು ಬಿಜೆಪಿ ಸೇರ್ತಿದ್ದಾರಾ ಎಂಬ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ. ಕೆಲ‌ ಮಾಧ್ಯಮಗಳಲ್ಲಿ ಊಹಾಪೋಹ ಸುದ್ದಿಗಳು ಬರ್ತಾ ಇವೆ. ನಾನಾಗಲೇ ಅಮಿತ್ ಶಾ ಅವರನ್ನ ಭೇಟಿಯಾಗಿ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಾನಿನ್ನೂ ಒಬ್ಬರಿಗೂ ಭೇಟಿ ಆಗಿಲ್ಲ. ಇದೆಲ್ಲಾ ಸುಮ್ಮನೆ ಹೊರಗಿನ ಸುದ್ದಿಗಳು, ನಾನು ರಾಜಸ್ಥಾನಕ್ಕೆ ಕುದುರೆ ತರಲಿಕ್ಕೆ ಹೋಗಿದ್ದೆ. […]

ನಾನೆಲ್ರೀ ಕುದುರೆ ತರಲಿಕ್ಕೆ ರಾಜಸ್ಥಾನಕ್ಕೆ ಹೋಗಿದ್ದೆ? ನಾನೆಲ್ಲಿ BJP ಸೇರ್ಪೆಡೆಗೆ ಹೋಗಿದ್ದೆ?  ಕುಲಕರ್ಣಿ ಅಳಲು
ಸಾಧು ಶ್ರೀನಾಥ್​
|

Updated on: Oct 08, 2020 | 4:04 PM

Share

ಧಾರವಾಡ: ಮಾಜಿ ಸಚಿವ ವಿನಯ್ ಕುಲಕರ್ಣಿ ಬಿಜೆಪಿಗೆ ಸೇರ್ತಿದ್ದಾರೆ ಎಂಬ ಮಾತುಗಳು ಕೇಳಿ ಬರ್ತಿವೆ. ಈ ಬಗ್ಗೆ ಖುದ್ದು ವಿನಯ್ ಕುಲಕರ್ಣಿ ಮಾತನಾಡಿದ್ದು ಅವರು ಬಿಜೆಪಿ ಸೇರ್ತಿದ್ದಾರಾ ಎಂಬ ಮಾತಿಗೆ ಸ್ಪಷ್ಟನೆ ನೀಡಿದ್ದಾರೆ.

ಕೆಲ‌ ಮಾಧ್ಯಮಗಳಲ್ಲಿ ಊಹಾಪೋಹ ಸುದ್ದಿಗಳು ಬರ್ತಾ ಇವೆ. ನಾನಾಗಲೇ ಅಮಿತ್ ಶಾ ಅವರನ್ನ ಭೇಟಿಯಾಗಿ ಬಿಜೆಪಿ ಸೇರ್ಪಡೆ ಬಗ್ಗೆ ಮಾತನಾಡಿದ್ದೇನೆ ಎಂದು ಹೇಳುತ್ತಿದ್ದಾರೆ. ಆದರೆ ನಾನಿನ್ನೂ ಒಬ್ಬರಿಗೂ ಭೇಟಿ ಆಗಿಲ್ಲ. ಇದೆಲ್ಲಾ ಸುಮ್ಮನೆ ಹೊರಗಿನ ಸುದ್ದಿಗಳು, ನಾನು ರಾಜಸ್ಥಾನಕ್ಕೆ ಕುದುರೆ ತರಲಿಕ್ಕೆ ಹೋಗಿದ್ದೆ. ನನ್ನ ಫಾರ್ಮ್​ನಲ್ಲಿ ಕೇಳಿ ನೋಡಿ.. ಈಗಾಗಲೇ ಕುದುರೆಗಳನ್ನ ಮಾರಾಟ ಮಾಡಿದ್ದೇನೆ. ನಾನು ಕುದುರೆಗಾಗಿ ಬಹಳ ಕಡೆ ತಿರುಗಾಡಿ ಬಂದಿದ್ದೇನೆ ಎಂಬ ಸುಳ್ಳು ಸುದ್ದಿಗಳನ್ನ ಬಿತ್ತರಿಸುತ್ತಿದ್ದಾರೆ. ಯಾವುದಾದರೂ ಒಂದು ಕ್ಲಿಪಿಂಗ್ ಇದ್ರೆ ಹೇಳಿ. ಎಲ್ಲರನ್ನೂ ಡಿಸ್ಟರ್ಬ್ ಮಾಡ್ತಾ ಇದಾರೆ ಸುಖಾ ಸುಮ್ಮನೆ. ಸಾಕ್ಷಿ ಆಧಾರಿತವಾಗಿ ಸುದ್ದಿ ಮಾಡಿ ಎಂದು ಮಾಧ್ಯಮಕ್ಕೆ ವಿನಂತಿಸಿಕೊಳ್ಳುತ್ತೇನೆ. ರಾಜಕೀಯದಲ್ಲಿ ಬಹಳ ಕಷ್ಟಪಟ್ಟು ಬೆಳದಿರುತ್ತೇವೆ. ಅಂತಹವರ ಹೆಸರುಗಳನ್ನ ತೆಜೋವಧೆ ಮಾಡಬೇಡಿ ಎಂದು ಮಾಧ್ಯಮದ ವಿರುದ್ಧ ವಿನಯ್ ಕುಲಕರ್ಣಿ ಗರಂ ಆಗಿದ್ದರು.

ನಾನು ಕಾರ್ಯಕರ್ತರನ್ನ ಕೈ ಬಿಡಲ್ಲ. ಕಾರ್ಯಕರ್ತರ ನಿರ್ಧಾರ ತೆಗೆದುಕೊಂಡೇ ನಾನು ಮುಂದುವರೆಯುತ್ತೇನೆ. ನಾನು ಕಾರ್ಯಕರ್ತರ ವಿರುದ್ಧ ಏನೂ ಮಾಡಲ್ಲ. ಸಣ್ಣ ವಯಸ್ಸಿನಲ್ಲಿ ರಾಜಕೀಯಕ್ಕೆ ಬಂದಿದ್ದೇನೆ. ನಾನು ಬಿಜೆಪಿಗೆ ಸೇರುವಾಗ ಮಾಧ್ಯಮಗಳಿಗೆ ಹೇಳಿಯೇ ಸೇರ್ಪಡೆಯಾಗುತ್ತೇನೆ ಎಂದು ಧಾರವಾಡದಲ್ಲಿ ಮಾಧ್ಯಮಗಳಿಗೆ ತಿಳಿಸಿದ್ರು.

ಇನ್ನು CBIನಿಂದ ತಪ್ಪಿಸಿಕೊಳ್ಳಲು ನಾನು ಬಿಜೆಪಿ ಸೇರ್ತೇನೆ ಅಂತಾ ಸುದ್ದಿ ಮಾಡ್ತಾ ಇದ್ದಾರೆ. ನಾನು ಬಿಜೆಪಿ‌ ಸೆರಿದರೆ ಸಿಬಿಐ ಸುಮ್ಮನೆ ಬಿಡುತ್ತಾರಾ. ತನಿಖೆ ನಡೆದಿದೆ ನಡೆಯಲಿ. ಈಗಾಗಲೇ 600 ಜನರನ್ನ ತನಿಖೆಗೆ ಒಳಪಡಿಸಲಾಗಿದೆ. ಒಂದು ವರ್ಷದಿಂದ ತನಿಖೆ ನಡೆಯುತ್ತಿದೆ. CBI ಬಿಜೆಪಿ ಅಂಡರ್ ಇದೆ ಅಂತಾ ನಿಮ್ಮ ಸುದ್ದಿಯಿಂದ ಗೊತ್ತಾಗುತ್ತಿದೆ ಎಂದು ಹೇಳಿದ್ರು.

ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಸಿಎಂ ಕುರ್ಚಿ ಕಿತ್ತಾಟ: ಅಂತೂ ನಾಯಕರಿಗೆ ಮಹತ್ವದ ಸಂದೇಶ ಕೊಟ್ಟ ಖರ್ಗೆ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಮದ್ಯದ ಅಮಲಿನಲ್ಲಿ ಲಾರಿ ಚಾಲಕ 20ಕ್ಕೂ ಹೆಚ್ಚು ವಾಹನಗಳಿಗೆ ಡಿಕ್ಕಿ
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು
ಗಿಲ್ಲಿಯನ್ನೇ ಹೊರಗೆ ಕಳಿಸುವ ಭ್ರಮೆಯಲ್ಲಿ ರಕ್ಷಿತಾ: ಕಾವ್ಯಾ ಖಡಕ್ ತಿರುಗೇಟು