
ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲೂಕಿನ ದೊರನಾಳು ಬಳಿ ನಾಲೆಯಲ್ಲಿ ಯುವಕನೊಬ್ಬ ಮುಳುಗಿರುವ ಘಟನೆ ವರದಿಯಾಗಿದೆ. ಭದ್ರಾ ಮೇಲ್ದಂಡೆ ಕಾಲುವೆಯಲ್ಲಿ ಯುವಕ ವಿಶ್ವಾಸ್(18) ನೀರುಪಾಲಾಗಿದ್ದಾನೆ.
ಯುವಕನ ರಕ್ಷಣೆಗೆ ಆತನ ನಾಲ್ವರು ಸ್ನೇಹಿತರು ಎಷ್ಟೇ ಪ್ರಯತ್ನಿಸಿದ್ರೂ ವಿಶ್ವಾಸ್ ಅವರ ಕಣ್ಣೆದುರೆ ಮುಳುಗಿ ಹೋದ. ವಿಶ್ವಾಸ್ ಬೆಳಗ್ಗೆ ಸ್ನೇಹಿತರೊಡನೆ ನಾಲೆಗೆ ಸ್ನಾನಕ್ಕೆ ಇಳಿದಾಗ ದುರ್ಘಟನೆ ಸಂಭವಿಸಿದೆ.