AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಂಕೆ ಮೇಲೆ ನಾಯಿಗಳ ದಾಳಿ: ಪ್ರಾಣ ಉಳಿಸಿದವರಾರು?

ವಿಜಯಪುರ: ವ್ಯಕ್ತಿಯೊಬ್ಬ ಮನಸು ಮಾಡಿದರೆ ಮತ್ತೊಂದು ಜೀವವನ್ನು ಉಳಿಸಬಲ್ಲ ಅನ್ನೋದಕ್ಕೆ ವಿಜಯಪುರದಲ್ಲಿ ನಡೆದ ಘಟನೆ ಸಾಕ್ಷಿಯಂತಿದೆ. ಏಕಾಂಗಿಯಾಗಿದ್ರೂ ಹಲವು ನಾಯಿಗಳ ಜೊತೆ ಹೋರಾಡಿ ಜಿಂಕೆಯೊಂದರ ಪ್ರಾಣ ರಕ್ಷಣೆ ಮಾಡಿ ಮಾದರಿಯಾಗಿದ್ದಾನೆ ವಿಜಯಪುರ ಜಿಲ್ಲೆಯ ಗ್ರಾಮವೊಂದರ ಯುವಕ. ಹೌದು, ವಿಜಯಪುರ ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50 ಬಳಿಯ ಜಮೀನಿಗೆ ಕಾಡಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದ ಜಿಂಕೆಯೊಂದು ದಾರಿ ತಪ್ಪಿ ಬಂದಿದೆ. ತಡರಾತ್ರಿ ದಾರಿ ತಪ್ಪಿ ಬಂದ ಜಿಂಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಜಿಂಕೆ ವಾಸನೆ ಕಂಡು […]

ಜಿಂಕೆ ಮೇಲೆ ನಾಯಿಗಳ ದಾಳಿ: ಪ್ರಾಣ ಉಳಿಸಿದವರಾರು?
Guru
| Edited By: |

Updated on:Jun 25, 2020 | 6:25 PM

Share

ವಿಜಯಪುರ: ವ್ಯಕ್ತಿಯೊಬ್ಬ ಮನಸು ಮಾಡಿದರೆ ಮತ್ತೊಂದು ಜೀವವನ್ನು ಉಳಿಸಬಲ್ಲ ಅನ್ನೋದಕ್ಕೆ ವಿಜಯಪುರದಲ್ಲಿ ನಡೆದ ಘಟನೆ ಸಾಕ್ಷಿಯಂತಿದೆ. ಏಕಾಂಗಿಯಾಗಿದ್ರೂ ಹಲವು ನಾಯಿಗಳ ಜೊತೆ ಹೋರಾಡಿ ಜಿಂಕೆಯೊಂದರ ಪ್ರಾಣ ರಕ್ಷಣೆ ಮಾಡಿ ಮಾದರಿಯಾಗಿದ್ದಾನೆ ವಿಜಯಪುರ ಜಿಲ್ಲೆಯ ಗ್ರಾಮವೊಂದರ ಯುವಕ.

ಹೌದು, ವಿಜಯಪುರ ನಗರ ಹೊರ ವಲಯದ ರಾಷ್ಟ್ರೀಯ ಹೆದ್ದಾರಿ 50 ಬಳಿಯ ಜಮೀನಿಗೆ ಕಾಡಿನಲ್ಲಿ ಹಾಯಾಗಿ ಓಡಾಡಿಕೊಂಡಿದ್ದ ಜಿಂಕೆಯೊಂದು ದಾರಿ ತಪ್ಪಿ ಬಂದಿದೆ. ತಡರಾತ್ರಿ ದಾರಿ ತಪ್ಪಿ ಬಂದ ಜಿಂಕೆ ಯಾರ ಕಣ್ಣಿಗೂ ಬಿದ್ದಿರಲಿಲ್ಲ. ಆದರೆ ಜಿಂಕೆ ವಾಸನೆ ಕಂಡು ಹಿಡಿದ ನಾಯಿಗಳು ಬೊಗಳುತ್ತಾ ಜಿಂಕೆ ಮೇಲೆ ಅಟ್ಯಾಕ್ ಮಾಡಿಬಿಟ್ಟಿವೆ.  ಎಂದಿನಂತೆ ಮುಂಜಾನೆ ವಿಜಯಪುರ ತಾಲೂಕಿನ ಅಲಿಯಾಬಾದ್ ಗ್ರಾಮದ ಅಬುಶಾ ಬಾಳು ತನ್ನ ಜಮೀನಿಗೆ ತೆರಳಿದಾಗ, ಜಿಂಕೆ ಮೇಲೆ ನಾಯಿಗಳ ಹಿಂಡು ದಾಳಿ ಮಾಡುವುದು ಕಂಡಿದೆ. ನಾಯಿಗಳು ಹಿಂಡಿನಿಂದ ಜಿಂಕೆ ರಕ್ಷಿಸಿದ ಅರೇ ನಮ್ಮ ಜಮೀನಿನಲ್ಲಿ ನಾಯಿಗಳ ಹಿಂಡೇಕೆ ಬೊಗಳುತ್ತಿವೆ ಎಂದು ತುಸು ಭಯದಿಂದಲೇ ಅಬುಶಾ ಬಾಳು ಹತ್ತಿರ ಹೋಗಿದ್ದಾನೆ. ಆಗ ಅಲ್ಲಿ ಜಿಂಕೆ ನಾಯಿಗಳ ಹಿಂಡಿನ ದಾಳಿಯಿಂದ ನಲುಗಿದ್ದು ಕಂಡು ಬಂದಿದೆ. ಕೂಡಲೇ ಜಿಂಕೆಯ ರಕ್ಷಿಸಲು ನಾಯಿಗಳನ್ನು ಓಡಿಸುವುದಕ್ಕೆ ಪ್ರಯತ್ನ ಮಾಡಿದ್ದಾನೆ. ಎಷ್ಟೇ ಜೋರಾಗಿ ಕೂಗಿದರೂ ನಾಯಿಗಳು ಹೋಗದಿದ್ದಾಗ, ಮರದ ದೊಣ್ಣೆಯಿಂದ ಕೆಲ ನಾಯಿಗಳಿಗೆ ಏಟು ಹಾಕಿದ್ದಾನೆ. ಇದರಿಂದ ಬೆದರಿದ ನಾಯಿಗಳು ಅಲ್ಲಿಂದ ಕಾಲ್ಕಿತ್ತಿವೆ. ನಂತರ ಗಾಯಗೊಂಡಿದ್ದ ಜಿಂಕೆಯನ್ನು ಉಪಚರಿಸಿ ಅರಣ್ಯ ಇಲಾಖೆಯ ಆಧಿಕಾರಿಗಳಿಗೆ ಮಾಹಿತಿ ನೀಡಿದ್ದಾನೆ.

ಅಬುಶಾನ ಧೈರ್ಯಕ್ಕೆ ಅಧಿಕಾರಿಗಳ ಮೆಚ್ಚುಗೆ ಕೂಡಲೇ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಆಧಿಕಾರಿಗಳು, ಗಾಯಗೊಂಡ ಜಿಂಕೆಯನ್ನ ವಶಕ್ಕೆ ಪಡೆದು ಚಿಕಿತ್ಸೆ ನೀಡಿದ್ದಾರೆ. ಜಿಂಕೆ ರಕ್ಷಣೆ ಮಾಡಿದ ಅಬುಶಾನ ಧೈರ್ಯಕ್ಕೆ ಮೆಚ್ಚುಗೆ ಸೂಚಿಸಿರುವ ಅಧಿಕಾರಿಗಳು, ಗುಣಮುಖಗೊಂಡ  ಬಳಿಕ ಜಿಂಕೆಯನ್ನು ಕಾಡಿಗೆ ಬಿಡುವುದಾಗಿ ತಿಳಿಸಿದ್ದಾರೆ. ಆದ್ರೆ ಅಪಾಯದಲ್ಲಿದ್ದ ವನ್ಯ ಜೀವಿಯನ್ನ ಧೈರ್ಯಮಾಡಿ ರಕ್ಷಿಸಿದ ಅಬುಶಾನ ಮಾನವೀಯತೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. -ಅಶೋಕ ಯಡಳ್ಳಿ

Published On - 6:24 pm, Thu, 25 June 20

Follow Us
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ಬಿಜೆಪಿಗೆ ಸೇರ್ಪಡೆಯಾದ ರಾಘವ್ ಚಡ್ಡಾ, ಸಂದೀಪ್ ಪಾಠಕ್, ಅಶೋಕ್ ಮಿತ್ತಲ್
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ರಾಜ್​ಕುಮಾರ್ ಹುಟ್ಟುಹಬ್ಬ: ಅಣ್ಣಾವ್ರ ಸಮಾಧಿಗೆ ಪೂಜೆ ಸಲ್ಲಿಸಿದ ಅಶ್ವಿನಿ
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಗುಡ್​ ನ್ಯೂಸ್: 56,400 ಹುದ್ದೆಗಳ ನೇಮಕಾತಿಗೆ ಗ್ರೀನ್ ಸಿಗ್ನಲ್
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಒಳ ಮೀಸಲಾತಿ ಗೊಂದಲಕ್ಕೆ ತೆರೆ ಎಳೆದ ರಾಜ್ಯ ಸರ್ಕಾರ
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
ಬಾಗಲಕೋಟೆ ವಿವಿ ಘಟಿಕೋತ್ಸವ: ರೈತನ ಮಗಳಿಗೆ ಗೋಲ್ಡ್​​ ಮೆಡಲ್
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
BSNL ಸಿಬ್ಬಂದಿ ಸೋಗಿನಲ್ಲಿ ಕಳ್ಳತನ ಮಾಡುತ್ತಿದ್ದ ಅಂತಾರಾಜ್ಯ ಗ್ಯಾಂಗ್ ಬಂಧನ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಕರ್ನಾಟಕದಲ್ಲಿ ರಾಷ್ಟ್ರಪತಿ ಆಳ್ವಿಕೆ ಬರುತ್ತೆ ಎಂದ ಬಿಜೆಪಿ ಶಾಸಕ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ಬಂಗಾಳದಲ್ಲಿ ಜಂಗಲ್ ರಾಜ್​ನ ಅಂತ್ಯದ ಆರಂಭ; ಪ್ರಧಾನಿ ಮೋದಿ ವಾಗ್ದಾಳಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ತಂಡದ ಹೀನಾಯ ಪ್ರದರ್ಶನ; ಮಧ್ಯದಲ್ಲೇ ಕ್ರೀಡಾಂಗಣ ತೊರೆದ ಆಕಾಶ್ ಅಂಬಾನಿ
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!
ರಣಬಿಸಿಲಿಗೆ ಕೋಲಾರದಲ್ಲಿ ಮಣ್ಣಿನ ಮಡಿಕೆ ಖರೀದಿಗೆ ಮುಗಿಬೀಳ್ತಿರೋ ಜನ!