AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆರೋಪಿಗಳ ಬಂಧನ ಖಂಡಿಸಿ ಆ ಯುವಕ ವಿಷ ಕುಡಿದಿದ್ದ! ಮುಂದೇನಾಯ್ತು?

ಬೆಳಗಾವಿ: ಸಾಯೋಕೆ ಸಾವಿರ ಕಾರಣ ಅಂತಾರೆ. ಆದ್ರೆ ಹೀಗೂ ಸಾಯಬಹುದು ಅಂತಾ ಬಹುಶಃ ಯಾರೂ ಅಂದುಕೊಂಡಿರಲಿಲ್ಲ ನೋಡಿ. ಪೊಲೀಸರು ಕುಟುಂಬ ಸದಸ್ಯರನ್ನ ಅನ್ಯಾಯವಾಗಿ ಅರೆಸ್ಟ್‌ ಮಾಡಿದ್ದಾರೆ ಅಂತಾ ವಿಷ ಕುಡಿದು ಪ್ರತಿಭಟಿಸಿದ್ದ ವ್ಯಕ್ತಿ ಈಗ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ. ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸಕುರುಗುಂದ ಗ್ರಾಮದ ಸಂಜು ನಾಯ್ಕರ್‌ ಎಂಬಾತನೇ ಮೃತ ದುರ್ದೈವಿ. ಈತನ ಅಣ್ಣನ ಹೆಂಡತಿಗೆ ಪರಪುರುಷನ ಜತೆ ಅಕ್ರಮ ಸಂಬಂಧವಿತ್ತೆನ್ನಲಾಗಿದೆ. ಆಗ ಸಂಜುನ ಅಣ್ಣ ಮತ್ತು ಕುಟುಂಬ ಸದಸ್ಯರು ಸೇರಿ ಆತನನ್ನು […]

ಆರೋಪಿಗಳ ಬಂಧನ ಖಂಡಿಸಿ ಆ ಯುವಕ ವಿಷ ಕುಡಿದಿದ್ದ! ಮುಂದೇನಾಯ್ತು?
ಆಯೇಷಾ ಬಾನು
| Edited By: |

Updated on:Jun 26, 2020 | 3:13 PM

Share

ಬೆಳಗಾವಿ: ಸಾಯೋಕೆ ಸಾವಿರ ಕಾರಣ ಅಂತಾರೆ. ಆದ್ರೆ ಹೀಗೂ ಸಾಯಬಹುದು ಅಂತಾ ಬಹುಶಃ ಯಾರೂ ಅಂದುಕೊಂಡಿರಲಿಲ್ಲ ನೋಡಿ. ಪೊಲೀಸರು ಕುಟುಂಬ ಸದಸ್ಯರನ್ನ ಅನ್ಯಾಯವಾಗಿ ಅರೆಸ್ಟ್‌ ಮಾಡಿದ್ದಾರೆ ಅಂತಾ ವಿಷ ಕುಡಿದು ಪ್ರತಿಭಟಿಸಿದ್ದ ವ್ಯಕ್ತಿ ಈಗ ಸಾವನ್ನಪ್ಪಿದ ಘಟನೆ ಬೆಳಗಾವಿಯಲ್ಲಿ ನಡೆದಿದೆ.

ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಹೊಸಕುರುಗುಂದ ಗ್ರಾಮದ ಸಂಜು ನಾಯ್ಕರ್‌ ಎಂಬಾತನೇ ಮೃತ ದುರ್ದೈವಿ. ಈತನ ಅಣ್ಣನ ಹೆಂಡತಿಗೆ ಪರಪುರುಷನ ಜತೆ ಅಕ್ರಮ ಸಂಬಂಧವಿತ್ತೆನ್ನಲಾಗಿದೆ. ಆಗ ಸಂಜುನ ಅಣ್ಣ ಮತ್ತು ಕುಟುಂಬ ಸದಸ್ಯರು ಸೇರಿ ಆತನನ್ನು ಕೊಲೆ ಮಾಡಿದ್ದಾರೆನ್ನಲಾಗಿದೆ. ಈ ಆರೋಪದ ಮೇಲೆ ಬೈಲಹೊಂಗಲ ಪೊಲೀಸರು ಸಂಜುನ ಅಣ್ಣ ಮತ್ತು ಕುಟುಂಬದ ಸದಸ್ಯರನ್ನು ಬಂಧಿಸಿದ್ದರು.

ಈ ಸಂಬಂಧ ಸಂಜು ನಾಯ್ಕರ್‌ ಗುರುವಾರ ಬೆಳಗಾವಿಯ ಚೆನ್ನಮ್ಮ ವೃತ್ತದಲ್ಲಿ ಪೊಲೀಸರು ತನ್ನ ಕುಟುಂಬಕ್ಕೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ಮಾಡಿದ್ದ. ಈ ಸಂದರ್ಭದಲ್ಲಿ ವಿಷ ಕೂಡಾ ಕುಡಿದಿದ್ದ.

ಆಗ ಪೊಲೀಸರು ತಕ್ಷಣವೇ ಈತನನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದರು. ಆದ್ರೆ ಚಿಕಿತ್ಸೆ ಫಲಿಸದೇ ಇವತ್ತು ಆಸ್ಪತ್ರೆಯಲ್ಲಿ ಸಂಜು ಕೊನೆಯುಸಿರೆಳೆದಿದ್ದಾನೆ. ಸಂಜು ಮೃತನಾದ ಸುದ್ದಿ ತಿಳಿಯುತ್ತಿದ್ದಂತೆ ಆಸ್ಪತ್ರೆಯ ಆವರಣದಲ್ಲಿ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.

Published On - 3:13 pm, Fri, 26 June 20

ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಜಾಗಕ್ಕಾಗಿ ಹಠ ಹಿಡಿದಿರುವುದು ಯಾಕೆ? ಅಸಲಿ ಕಾರಣ ತಿಳಿಸಿದ ಯಶ್ ತಾಯಿ ಪುಷ್ಪಾ
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಬೈಕ್ ಶೋರೂಂನೊಳಗೆ ನುಗ್ಗಿದ ಕಾಡುಕೋಣ; ಶಾಕಿಂಗ್ ವಿಡಿಯೋ ವೈರಲ್
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಾರ್ಮಾಡಿ ಅರಣ್ಯದಲ್ಲಿ ಬೆಂಕಿ: ಹೊತ್ತಿ ಉರಿದ ವನ್ಯಸಂಪತ್ತು
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ಚಕ್ರವರ್ತಿ ಚಂದ್ರಚೂಡ್ ವಿಡಿಯೋ ನೋಡಿ ಅಸಹ್ಯ ಆಯ್ತು: ನಟಿ ಪ್ರಿಯಾ ಹಾಸನ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ವಿಪಕ್ಷ ಶಾಸಕರ ಮಾತಿಗೆ ಸಿಎಂ ಸಿದ್ದರಾಮಯ್ಯ ಖಡಕ್ ಉತ್ತರ, ಸದನ ಫುಲ್ ಸೈಲೆಂಟ್
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಟೀ, ಸಿಗರೇಟ್​​ ನೆಪದಲ್ಲಿ ಅಂಗಡಿಗೆ ಬಂದು ಮಾಂಗಲ್ಯ ಸರ ಕದ್ದು ಎಸ್ಕೇಪ್​!
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ಕನಕೋತ್ಸವ ವೇದಿಕೆಯಲ್ಲಿ ಗಿಲ್ಲಿ, ಮಂಗ್ಲಿ ಮಸ್ತ್ ಮನರಂಜನೆ; ವಿಡಿಯೋ ನೋಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ರಾಯಲ್ ಸ್ಟ್ರಾಂಗ್ ಅಂತ ಬಿಯರ್ ಇದೆ ಕಣ್ಣಯ್ಯ:ಸದನದಲ್ಲಿ ಅಶೋಕ್‌-ಸಿಎಂ ಕಾಮಿಡಿ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ವಿದ್ಯಾರ್ಥಿಗಳಿಗೆ ಶಾಕ್​​: ಸಾಂಬಾರಿನಲ್ಲಿ ನುಸಿ ಹುಳ ಪತ್ತೆ
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!
ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ!