AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮನೆಯಲ್ಲಿ ಇರುವೆಗಳ ಸಮಸ್ಯೆ ಕಾಡುತ್ತಿದೆಯೇ? ರಾಸಾಯನಿಕಗಳ ಬಳಕೆ ಮಾಡದೆ ಸುಲಭವಾಗಿ ಅವುಗಳನ್ನು ಓಡಿಸಿ

ಬಿಳಿ ವಿನೆಗರ್ ಅನ್ನು ಇರುವೆಗಳಿರುವಲ್ಲಿ ಸಿಂಪಡಿಸಬಹುದು ಮತ್ತು ಉತ್ತಮ ಫಲಿತಾಂಶವನ್ನು ಕಾಣಬಹುದು.

ಮನೆಯಲ್ಲಿ ಇರುವೆಗಳ ಸಮಸ್ಯೆ ಕಾಡುತ್ತಿದೆಯೇ? ರಾಸಾಯನಿಕಗಳ ಬಳಕೆ ಮಾಡದೆ ಸುಲಭವಾಗಿ ಅವುಗಳನ್ನು ಓಡಿಸಿ
ಮನೆಯಲ್ಲಿ ಇರುವೆಗಳ ಸಮಸ್ಯೆ ಕಾಡುತ್ತಿದೆಯೇ?
ಸಾಧು ಶ್ರೀನಾಥ್​
|

Updated on:May 15, 2023 | 10:49 AM

Share

ಇರುವೆಗಳಿಗೆ ಪರಿಹಾರಗಳು: ಅನೇಕ ಮನೆಗಳಲ್ಲಿ, ಅಡುಗೆಮನೆ ಅಥವಾ ಆಹಾರವನ್ನು ಸಂಗ್ರಹಿಸುವ ಪ್ರದೇಶವು ಸೋಂಕಿತ ಪ್ರದೇಶವಾಗಿರುತ್ತದೆ. ಈ ಇರುವೆಗಳ ಹಿಡಿತದಿಂದ ಪಾರಾಗಲು (Ants Problem) ಹಲವು ರೀತಿಯ ಸ್ಪ್ರೇಗಳನ್ನು ಬಳಸಲಾಗುತ್ತದೆ. ಆದರೆ ಯಾವುದೇ ಫಲಿತಾಂಶವಿಲ್ಲದೆ ಗೃಹಿಣಿಯರು ಹತಾಶರಾಗುತ್ತಾರೆ. ಅಂತಹವರಿಗಾಗಿ ಇರುವೆಗಳ ಹಿಡಿತದಿಂದ ಪಾರಾಗಲು ಬೆಸ್ಟ್ ಟಿಪ್ಸ್ ತಂದಿದ್ದೇವೆ. ಈ ಟಿಪ್ಸ್ ಪ್ರಕಾರ ಯಾವುದೇ ಕೆಮಿಕಲ್ (chemicals) ಬಳಸಬೇಕಿಲ್ಲ.. ಅಡುಗೆ ಮನೆಯ ಸಾಮಾಗ್ರಿಗಳನ್ನು ಸಮಂಜಸವಾಗಿ ಬಳಸಿದರೆ ಸಾಕು (kicthen hacks).

ಕರಿಮೆಣಸು ಇರುವೆಗಳನ್ನು ಹಿಮ್ಮೆಟ್ಟಿಸಲು ಉತ್ತಮವಾಗಿ ಸಹಾಯ ಮಾಡುತ್ತದೆ. ಹೌದು, ಕಾಳುಮೆಣಸಿನ ಕಾಟಕ್ಕೆ ಇರುವೆಗಳು ಓಡಿಹೋಗುವುದು ಖಚಿತ. ಅದಕ್ಕಾಗಿ ಅಡುಗೆ ಮನೆಯಲ್ಲಿ ಇರುವೆ ಸ್ಪ್ರೇ ಬದಲು ಅಲ್ಲೊಂದು ಇಲ್ಲೊಂದು ಕಾಳುಮೆಣಸನ್ನು ಹಾಕಿದರೆ ಪರವಾಗಿಲ್ಲ.

ಇರುವೆಗಳನ್ನು ತೊಡೆದುಹಾಕಲು, ಒಂದು ಬಾಟಲಿಯಲ್ಲಿ ಎರಡು ಕಪ್ ನೀರಿನಲ್ಲಿ ಸ್ವಲ್ಪ ಪುದೀನಾ ಎಣ್ಣೆಯನ್ನು ಸೇರಿಸಿ ಮತ್ತು ಇರುವೆ ಇರುವಲ್ಲಿ ಸಿಂಪಡಿಸಿ. ಸಿಂಪಡಿಸುವಾಗ ಸಾಕುಪ್ರಾಣಿಗಳನ್ನು ಅವುಗಳಿಂದ ದೂರವಿರಿಸಲು ಮರೆಯಬೇಡಿ.

ಹಾಗೆಯೇ ಎರಡು ಲೋಟ ನೀರಿನಲ್ಲಿ ಟ್ರೀ ಆಯಿಲ್ ಸೇರಿಸಿ ಚಿಮುಕಿಸಿ, ಈ ನೀರಿನಲ್ಲಿ ಹತ್ತಿ ಉಂಡೆಗಳನ್ನು ಅದ್ದಿ ಅಡುಗೆ ಮನೆಯಲ್ಲಿಟ್ಟರೆ ಒಳ್ಳೆಯ ಫಲಿತಾಂಶ ಸಿಗುತ್ತದೆ.

ದಾಲ್ಚಿನ್ನಿ ಇರುವೆಗಳನ್ನು ತೊಡೆದುಹಾಕಲು ಸಹ ಸಹಾಯ ಮಾಡುತ್ತದೆ. ಹತ್ತಿಯ ಉಂಡೆಗಳನ್ನು ದಾಲ್ಚಿನ್ನಿ ಎಣ್ಣೆಯಲ್ಲಿ ಅದ್ದಿ ಇರುವೆಗಳು ಓಡಾಡುವ ಸ್ಥಳಗಳಲ್ಲಿ ಇಟ್ಟರೆ ಅವು ಬರದಂತೆ ತಡೆಯುತ್ತವೆ.

ಬಿಳಿ ವಿನೆಗರ್ ಅನ್ನು ಇರುವೆಗಳಿರುವಲ್ಲಿ ಸಿಂಪಡಿಸಬಹುದು ಮತ್ತು ಉತ್ತಮ ಫಲಿತಾಂಶವನ್ನು ಕಾಣಬಹುದು.

ಹಾಗೆಯೇ ಎರಡು ಲೋಟ ನೀರಿಗೆ ಬೇವಿನ ಎಣ್ಣೆ ಹಾಕಿ ಬಾಟಲಿಯಲ್ಲಿ ಸ್ಪ್ರೇ ಮಾಡಿದರೆ ಇರುವೆಗಳು ನಿಮ್ಮ ಬರುವುದಿಲ್ಲ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

Published On - 10:48 am, Mon, 15 May 23

ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ಕಳೆದು ಹೋಗಿದ್ದ ಬಾಲಕಿಯನ್ನು ಮರಳಿ ತಾಯಿ ಮಡಿಲಿಗೆ ಸೇರಿಸಿದ ಪೊಲೀಸರು
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ನನ್ನ ಮಗಳು ಸರಿಯಾಗಿಯೇ ಹೇಳಿದ್ದಾಳೆ: ಸುದೀಪ್
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಸ್ಟ್ರೋಕ್ ಗೆ ಒಳಗಾದವರನ್ನು ಎಷ್ಟು ಸಮಯದೊಳಗೆ ಆಸ್ಪತ್ರೆಗೆ ದಾಖಲಿಸಬೇಕು?
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಇಂದೋರ್‌ನಲ್ಲಿ ಕಲುಷಿತ ನೀರು ಕುಡಿದು 7 ಜನ ಸಾವು; ಆಸ್ಪತ್ರೆಗೆ ಸಿಎಂ ಭೇಟಿ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಬಸ್ಸಿನಲ್ಲಿ ನಿದ್ದೆಗೆ ಜಾರಿದ್ದ ವೇಳೆ ಯುವತಿಯ ಎದೆ ಮೇಲೆ ಕೈ ಇಟ್ಟ ಯುವಕ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಪುರಿ ಜಗನ್ನಾಥ ದೇವಸ್ಥಾನದಲ್ಲಿ ಈ ವರ್ಷದ ಕೊನೆಯ ಸೂರ್ಯಾಸ್ತ ಕಂಡಿದ್ದು ಹೀಗೆ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ಬೆಂಗಳೂರಲ್ಲಿ ಪಬ್​​ಗಳತ್ತ ಮುಖ ಮಾಡಿದ ಜನ: ಸಿಲಿಕಾನ್​​ ಸಿಟಿ ಫುಲ್​​ ಝಗಮಗ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ವರ್ಷದ ಕೊನೆಯ ಸೂರ್ಯಾಸ್ತ: ನಯನ ಮನೋಹರ ದೃಶ್ಯ ಸೆರೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಒಡಿಶಾದಲ್ಲಿ 2 ಪ್ರಲೇ ಕ್ಷಿಪಣಿಗಳ ಯಶಸ್ವಿ ಉಡಾವಣೆ; ವಿಡಿಯೋ ಇಲ್ಲಿದೆ
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​
ಗ್ರಾಹಕರಿಗೆ ಶಾಕ್​​ ಕೊಟ್ಟ ಡೆಲವರಿ ಬಾಯ್ಸ್​​​