AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ಟಿಫನ್ ಬಾಕ್ಸಿನ ದುರ್ವಾಸನೆ ಹೋಗಲಾಡಿಸುವುದೇಗೆ? ಇಲ್ಲಿದೆ ಸರಳ ಸಲಹೆ

ಭಾರತೀಯರು ಮಸಾಲೆ ಪ್ರಿಯರು. ಹೀಗಾಗಿ ತಮ್ಮ ಅಡುಗೆಗಳಲ್ಲಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಈ ಅಡುಗೆಯು ನಾಲಿಗೆ ರುಚಿಯನ್ನು ನೀಡುತ್ತದೆ. ಮೂಗಿಗೆ ಅಡುಗೆಯ ಘಮ ಬಡಿಯೇತೆಂದರೆ ಹೊಟ್ಟೆಯಂತೂ ಕೇಳುವುದೇ ಇಲ್ಲ. ಈ ಅಡುಗೆಯನ್ನೇ ಆಫೀಸಿಗೆ ಹೋಗುವವರು ಬುತ್ತಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಊಟವಾದ ಬಳಿಕ ಬುತ್ತಿಯನ್ನು ಎಷ್ಟೇ ತೊಳೆದರೂ ಕೂಡ ಕೆಟ್ಟ ವಾಸನೆಯೊಂದು ಮೂಗಿಗೆ ಬಡಿಯುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್.

Kitchen Tips in Kannada : ಟಿಫನ್ ಬಾಕ್ಸಿನ ದುರ್ವಾಸನೆ ಹೋಗಲಾಡಿಸುವುದೇಗೆ? ಇಲ್ಲಿದೆ ಸರಳ ಸಲಹೆ
ಸಾಯಿನಂದಾ
| Edited By: |

Updated on: May 18, 2024 | 3:06 PM

Share

ಬೆಳಗ್ಗೆ ಆಫೀಸಿಗೆ ಹೋಗುವವರು ಮಧ್ಯಾಹ್ನಕ್ಕೆಂದು ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಊಟ ಮಾಡಿದ ಬಳಿಕ ಈ ಬುತ್ತಿಯನ್ನು ತೊಳೆದರೂ ಮಸಾಲೆ ಭರಿತ ಪದಾರ್ಥಗಳ ಘಮವಂತೂ ಹೋಗುವುದೇ ಇಲ್ಲ. ಸಂಜೆ ಮನೆಗೆ ಬಂದ ಕೂಡಲೇ ಬುತ್ತಿಯ ಮುಚ್ಚಳ ತೆಗೆದಾಗ ಮೂಗಿಗೆ ಈ ಗಾಢವಾದ ವಾಸನೆಯೊಂದು ಹೊರ ಬರುತ್ತದೆ. ಘಮ್ ಎನಿಸುವ ಸಾಮೂನನ್ನು ಹಾಕಿ ತೊಳೆದರೂ ಏನು ಪ್ರಯೋಜನವಾಗುವುದಿಲ್ಲ.

* ಬೇಕಿಂಗ್‌ ಸೋಡಾ: ಒಂದು ಚಮಚ ಬೇಕಿಂಗ್‌ ಸೋಡಾವನ್ನು ನೀರಿನಲ್ಲಿ ಕಲಸಿ ಊಟದ ಡಬ್ಬಿಯೊಳಗೆ ಹಾಕಿ, ಒಂದೆರಡು ಗಂಟೆ ಹಾಗೆ ನೆನೆಯಲು ಬಿಡಿ. ಆ ನಂತರ ಬಿಸಿನೀರಿನಲ್ಲಿ ತೊಳೆದರೆ ಟಿಫನ್ ಡಬ್ಬಿಯಲ್ಲಿರುವ ಕೆಟ್ಟ ವಾಸನೆಯು ಹೋಗುತ್ತದೆ.

* ನಿಂಬೆಹಣ್ಣಿನ ಸಿಪ್ಪೆ : ನಿಂಬೆ ಹಣ್ಣಿನ ಸಿಪ್ಪೆಯನ್ನು ಕೆಟ್ಟ ವಾಸನೆ ಬರುವ ಡಬ್ಬಿಯೊಳಗೆ ಹಾಕಿ ಚೆನ್ನಾಗಿ ಉಜ್ಜಿಕೊಳ್ಳಬೇಕು. ಒಂದೆರಡು ಗಂಟೆ ಬಿಟ್ಟು ಡಬ್ಬಿ ತೊಳೆಯುವುದರಿಂದ ಡಬ್ಬಿಯಿಂದ ಹೊರ ಬರುವ ಕೆಟ್ಟ ವಾಸನೆಯು ಇಲ್ಲದಂತಾಗುತ್ತದೆ.

* ವೈಟ್‌ ವಿನೆಗರ್ :‌ ವಿನೆಗರ್‌ ಹಾಗೂ ನೀರು ಈ ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಡಬ್ಬಿಗೆ ಹಾಕಿ ಸ್ವಲ್ಪ ಸಮಯದವರೆಗೆ ಹಾಗೆ ಬಿಡಬೇಕು. ಆ ಬಳಿಕ ಬಿಸಿನೀರಿನಲ್ಲಿ ತೊಳೆದರೆದರೆ ಡಬ್ಬಿಯಿಂದ ಹೊರ ಬರುವ ಕೆಟ್ಟ ವಾಸನೆಯು ಇಲ್ಲವಾಗುತ್ತದೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೊಣಗಳ ಕಾಟಕ್ಕೆ ಇದುವೇ ಪರಿಹಾರ

* ಆಲೂಗಡ್ಡೆ: ಹಸಿ ಆಲೂಗಡ್ಡೆಯನ್ನು ಹೋಳುಗಳಾಗಿಮಾಡಕೊಂಡು, ಆ ಹೋಳಿನಿಂದ ಊಟದ ಡಬ್ಬಿಯನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಹತ್ತು ನಿಮಿಷಗಳ ಬಳಿಕ ಡಬ್ಬಿಯನ್ನು ತೊಳೆದರೆ ಕೆಟ್ಟ ವಾಸನೆಯು ಇರುವುದಿಲ್ಲ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
SSLC Results 2026: ಹಿಂದಿ ವಿಷಯಕ್ಕೆ ಗ್ರೇಡೋ, ಅಂಕನೋ? ಗೊಂದಲಗಳಿಗೆ ತೆರೆ
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಅದ್ಭುತ... ಅತ್ಯದ್ಭುತ: ರಿಷಭ್​ ಸ್ಪೈಡಿ ಕ್ಯಾಚ್​ಗೆ ದಂಗಾದ ಪ್ರೇಕ್ಷಕರು
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಮದುವೆ ಸಂಭ್ರಮದಲ್ಲಿ ಕಾರು ಡಿಕ್ಕಿಯಾಗಿ 25 ಅಡಿ ಮೇಲೆ ಹಾರಿದ ಕ್ಯಾಮೆರಾಮನ್
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಅಮರಾವತಿ ಲೈಂಗಿಕ ಹಗರಣದ ಆರೋಪಿಗೆ ನಗರದ ರಸ್ತೆಗಳಲ್ಲಿ ಮೆರವಣಿಗೆ
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಖಾಲಿ ಕೊಡ ಹಿಡಿದು ಸಚಿವ ತಂಗಡಗಿ ಕಾರಿಗೆ ಮುತ್ತಿಗೆ ಹಾಕಿದ ಮಹಿಳೆಯರು
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ಬಿಸಿಲಿಗೆ ತತ್ತರ: ಹೆಲ್ಮೆಟ್ ಬದಲು ಸೊಪ್ಪು ಕಟ್ಟಿಕೊಂಡು ಬೈಕ್ ಚಾಲನೆ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ವಾರದಲ್ಲಿ ಎರಡನೇ ಭಾರಿ ದರ್ಶನ್ ಭೇಟಿಗೆ ಜೈಲಿಗೆ ಬಂದ ವಿಜಯಲಕ್ಷ್ಮಿ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಹುಬ್ಬಳ್ಳಿ ಭೀಕರ ಅಪಘಾತ: ಕಾರಿನ ಇಂಜಿನ್ ಒಳಗೆ ಸಿಲುಕಿದ ವ್ಯಕ್ತಿಯ ರುಂಡ
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಪ್ರಿಯಕರನನ್ನೇ ಕೊಂದ ಪ್ರಿಯತಮೆ : ಕೊಲೆಯಾದ ಕಿರಣ್ ತಂದೆಯ ಕಣ್ಣೀರ ಮಾತು
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?
ಕುಟುಂಬದ ಆರೋಪಕ್ಕೆ ವೈದ್ಯಕೀಯ ಅಧೀಕ್ಷರು ಹೇಳಿದ್ದೇನು?