AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kitchen Tips in Kannada : ಟಿಫನ್ ಬಾಕ್ಸಿನ ದುರ್ವಾಸನೆ ಹೋಗಲಾಡಿಸುವುದೇಗೆ? ಇಲ್ಲಿದೆ ಸರಳ ಸಲಹೆ

ಭಾರತೀಯರು ಮಸಾಲೆ ಪ್ರಿಯರು. ಹೀಗಾಗಿ ತಮ್ಮ ಅಡುಗೆಗಳಲ್ಲಿ ಹೆಚ್ಚು ಮಸಾಲೆ ಪದಾರ್ಥಗಳನ್ನು ಬಳಸುತ್ತಾರೆ. ಈ ಅಡುಗೆಯು ನಾಲಿಗೆ ರುಚಿಯನ್ನು ನೀಡುತ್ತದೆ. ಮೂಗಿಗೆ ಅಡುಗೆಯ ಘಮ ಬಡಿಯೇತೆಂದರೆ ಹೊಟ್ಟೆಯಂತೂ ಕೇಳುವುದೇ ಇಲ್ಲ. ಈ ಅಡುಗೆಯನ್ನೇ ಆಫೀಸಿಗೆ ಹೋಗುವವರು ಬುತ್ತಿಯಲ್ಲಿ ತೆಗೆದುಕೊಂಡು ಹೋಗುತ್ತಾರೆ. ಆದರೆ ಊಟವಾದ ಬಳಿಕ ಬುತ್ತಿಯನ್ನು ಎಷ್ಟೇ ತೊಳೆದರೂ ಕೂಡ ಕೆಟ್ಟ ವಾಸನೆಯೊಂದು ಮೂಗಿಗೆ ಬಡಿಯುತ್ತದೆ. ಈ ವಾಸನೆಯನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್.

Kitchen Tips in Kannada : ಟಿಫನ್ ಬಾಕ್ಸಿನ ದುರ್ವಾಸನೆ ಹೋಗಲಾಡಿಸುವುದೇಗೆ? ಇಲ್ಲಿದೆ ಸರಳ ಸಲಹೆ
ಸಾಯಿನಂದಾ
| Edited By: |

Updated on: May 18, 2024 | 3:06 PM

Share

ಬೆಳಗ್ಗೆ ಆಫೀಸಿಗೆ ಹೋಗುವವರು ಮಧ್ಯಾಹ್ನಕ್ಕೆಂದು ಬುತ್ತಿಯನ್ನು ತೆಗೆದುಕೊಂಡು ಹೋಗುತ್ತಾರೆ. ಆದರೆ ಊಟ ಮಾಡಿದ ಬಳಿಕ ಈ ಬುತ್ತಿಯನ್ನು ತೊಳೆದರೂ ಮಸಾಲೆ ಭರಿತ ಪದಾರ್ಥಗಳ ಘಮವಂತೂ ಹೋಗುವುದೇ ಇಲ್ಲ. ಸಂಜೆ ಮನೆಗೆ ಬಂದ ಕೂಡಲೇ ಬುತ್ತಿಯ ಮುಚ್ಚಳ ತೆಗೆದಾಗ ಮೂಗಿಗೆ ಈ ಗಾಢವಾದ ವಾಸನೆಯೊಂದು ಹೊರ ಬರುತ್ತದೆ. ಘಮ್ ಎನಿಸುವ ಸಾಮೂನನ್ನು ಹಾಕಿ ತೊಳೆದರೂ ಏನು ಪ್ರಯೋಜನವಾಗುವುದಿಲ್ಲ.

* ಬೇಕಿಂಗ್‌ ಸೋಡಾ: ಒಂದು ಚಮಚ ಬೇಕಿಂಗ್‌ ಸೋಡಾವನ್ನು ನೀರಿನಲ್ಲಿ ಕಲಸಿ ಊಟದ ಡಬ್ಬಿಯೊಳಗೆ ಹಾಕಿ, ಒಂದೆರಡು ಗಂಟೆ ಹಾಗೆ ನೆನೆಯಲು ಬಿಡಿ. ಆ ನಂತರ ಬಿಸಿನೀರಿನಲ್ಲಿ ತೊಳೆದರೆ ಟಿಫನ್ ಡಬ್ಬಿಯಲ್ಲಿರುವ ಕೆಟ್ಟ ವಾಸನೆಯು ಹೋಗುತ್ತದೆ.

* ನಿಂಬೆಹಣ್ಣಿನ ಸಿಪ್ಪೆ : ನಿಂಬೆ ಹಣ್ಣಿನ ಸಿಪ್ಪೆಯನ್ನು ಕೆಟ್ಟ ವಾಸನೆ ಬರುವ ಡಬ್ಬಿಯೊಳಗೆ ಹಾಕಿ ಚೆನ್ನಾಗಿ ಉಜ್ಜಿಕೊಳ್ಳಬೇಕು. ಒಂದೆರಡು ಗಂಟೆ ಬಿಟ್ಟು ಡಬ್ಬಿ ತೊಳೆಯುವುದರಿಂದ ಡಬ್ಬಿಯಿಂದ ಹೊರ ಬರುವ ಕೆಟ್ಟ ವಾಸನೆಯು ಇಲ್ಲದಂತಾಗುತ್ತದೆ.

* ವೈಟ್‌ ವಿನೆಗರ್ :‌ ವಿನೆಗರ್‌ ಹಾಗೂ ನೀರು ಈ ಎರಡನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಡಬ್ಬಿಗೆ ಹಾಕಿ ಸ್ವಲ್ಪ ಸಮಯದವರೆಗೆ ಹಾಗೆ ಬಿಡಬೇಕು. ಆ ಬಳಿಕ ಬಿಸಿನೀರಿನಲ್ಲಿ ತೊಳೆದರೆದರೆ ಡಬ್ಬಿಯಿಂದ ಹೊರ ಬರುವ ಕೆಟ್ಟ ವಾಸನೆಯು ಇಲ್ಲವಾಗುತ್ತದೆ.

ಇದನ್ನೂ ಓದಿ: ಅಡುಗೆ ಮನೆಯಲ್ಲಿ ನೊಣಗಳ ಕಾಟಕ್ಕೆ ಇದುವೇ ಪರಿಹಾರ

* ಆಲೂಗಡ್ಡೆ: ಹಸಿ ಆಲೂಗಡ್ಡೆಯನ್ನು ಹೋಳುಗಳಾಗಿಮಾಡಕೊಂಡು, ಆ ಹೋಳಿನಿಂದ ಊಟದ ಡಬ್ಬಿಯನ್ನು ಚೆನ್ನಾಗಿ ಉಜ್ಜಿಕೊಳ್ಳಿ. ಹತ್ತು ನಿಮಿಷಗಳ ಬಳಿಕ ಡಬ್ಬಿಯನ್ನು ತೊಳೆದರೆ ಕೆಟ್ಟ ವಾಸನೆಯು ಇರುವುದಿಲ್ಲ.

ಮತ್ತಷ್ಟು ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ಸಿಗರೇಟ್ ಸೇದಬೇಡಿ ಎಂದಿದ್ದಕ್ಕೆ ತನ್ನ ಬೈಕ್​​ಗೇ ಬೆಂಕಿ ಹಚ್ಚಿದ ಯುವಕ!
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಬೆಂಗಳೂರಿಗೆ ಬಂದ ಮಹೇಶ್ ಬಾಬು ನೋಡಲು ಅಭಿಮಾನಿಗಳ ನೂಕು ನುಗ್ಗಲು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು
ಕಾರು-ಲಾರಿ ಮುಖಾಮುಖಿ ಡಿಕ್ಕಿ: ಸ್ಥಳದಲ್ಲೇ 7 ಜನ ಸಾವು