AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Relationship: ಕೆಲಸವನ್ನು ಬದಿಗಿಟ್ಟು ನಿಮ್ಮ ಸಂಗಾತಿ ಜತೆ ಹೀಗೆ ಸಮಯ ಕಳೆಯಿರಿ

ನೀವು ನಿಮ್ಮ ಸಂಗಾತಿಯೊಂದಿಗೆ ಆಗಾಗ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಆಗ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ.

Relationship: ಕೆಲಸವನ್ನು ಬದಿಗಿಟ್ಟು ನಿಮ್ಮ ಸಂಗಾತಿ ಜತೆ ಹೀಗೆ ಸಮಯ ಕಳೆಯಿರಿ
Relationship
TV9 Web
| Edited By: |

Updated on: Aug 14, 2022 | 11:12 AM

Share

ನೀವು ನಿಮ್ಮ ಸಂಗಾತಿಯೊಂದಿಗೆ ಆಗಾಗ ಸಮಯ ಕಳೆಯುವುದನ್ನು ಅಭ್ಯಾಸ ಮಾಡಿಕೊಳ್ಳಿ, ಆಗ ನಿಮ್ಮ ಸಂಬಂಧ ಮತ್ತಷ್ಟು ಗಟ್ಟಿಗೊಳ್ಳುತ್ತದೆ. ಏಕೆಂದರೆ ಸದಾ ಕಚೇರಿಯ ಕೆಲಸವನ್ನೇ ತಲೆಯಲ್ಲಿಟ್ಟುಕೊಂಡರೆ ನಿಮ್ಮವರನ್ನು ಕ್ರಮೇಣವಾಗಿ ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ನಿಮ್ಮವರಿಗಾಗಿ ನೀವು ಕೆಲ ಸಮಯವನ್ನು ಮೀಸಲಿಡಲೇಬೇಕು.

ಹಾಗಾದರೆ ನಿಮ್ಮ ಸಂಗಾತಿ ಜತೆಗೆ ನೀವು ಹೇಗೆ ಸಮಯ ಕಳೆಬಹುದು, ಕೆಲವು ಸಲಹೆಗಳನ್ನು ಇಲ್ಲಿ ನೀಡಲಾಗಿದೆ. ದಿನಸಿ ಸಾಮಾನುಗಳನ್ನು ಖರೀದಿಸಲು ಒಟ್ಟಿಗೆ ತೆರಳಿ, ಕನಿಷ್ಠ ಒಂದು ಹೊತ್ತಾದರೂ ಒಟ್ಟಿಗೆ ಕುಳಿತು ಊಟ ಮಾಡಿ, ನಿತ್ಯ ಒಂದರ್ಧ ಗಂಟೆಯಾದರೂ ಜತೆಗೆ ಕುಳಿತು ಮಾತನಾಡಿ. ಅಡುಗೆ ಮನೆಯಲ್ಲಿ ನಿಮ್ಮ ಸಂಗಾತಿಗೆ ಸ್ವಲ್ಪ ಸಹಾಯ ಮಾಡಿ, ಅವರನ್ನು ಲಾಂಗ್ ಡ್ರೈವ್​ಗೆ ಕರೆದುಕೊಂಡು ಹೋಗಿ.

ಮೊಬೈಲ್ ದೂರವಿಟ್ಟು ಸಂಗಾತಿಯೊಂದಿಗೆ ಮಾತನಾಡಿ ಸದಾ ಮೊಬೈಲ್​ನಲ್ಲಿಯೇ ಮುಳುಗಿಕೊಂಡಿರಬೇಡಿ, ಮೊಬೈಲ್ ಅನ್ನು ಬದಿಗಿಟ್ಟು ಸಂಗಾತಿ ಜತೆಗೆ ಕೆಲ ಸಮಯ ಮಾತನಾಡುವುದರಿಂದ ಪ್ರೀತಿ ಮತ್ತಷ್ಟು ಹೆಚ್ಚುತ್ತದೆ.

ಯಾವುದಾದರೂ ಗೇಮ್​ಗಳನ್ನು ಆಡಿ ಕೇರಮ್, ವೀಡಿಯೋ ಗೇಮ್​ಗಳು, ಶೆಟಲ್, ಪಗಡೆ ಹೀಗೆ ನಿಮಗೆ ಯಾವುದಿಷ್ಟವೋ ಆ ಆಟಕ್ಕಾಗಿ ನಿತ್ಯ ಕೆಲ ಸಮಯವನ್ನು ಮೀಸಲಿಡಿ.

ಒಟ್ಟಿಗೆ ಯೋಗ ಮಾಡಿ ಒಟ್ಟಿಗೆ ಯೋಗ ಮಾಡುವುದು, ಬೈಕಿಂಗ್ ಮಾಡುವುದು, ನೃತ್ಯ ಅಥವಾ ಪೇಂಟಿಂಗ್ ಪಾಠಗಳಿಗೆ ದಾಖಲಾಗುವುದು ಇತ್ಯಾದಿ ಯಾವುದಾದರೂ ಆಗಿರಬಹುದು. ಒಟ್ಟಿಗೆ ಸಮಯ ಕಳೆಯುವುದು ನಿಮ್ಮ ಉದ್ದೇಶವಾಗಿರಲಿ.

ನಿಮ್ಮ ಭವಿಷ್ಯದ ಬಗ್ಗೆ ಕುಳಿತು ಮಾತನಾಡಿ ಹಣಕಾಸಿನ ಯೋಜನೆಯಾಗಿರಬಹುದು ಅಥವಾ ಕುಟುಂಬದ ಕುರಿತ ಆಲೋಚನೆಯಾಗಿರಬಹುದು, ಒಟ್ಟಿಗೆ ನಿರ್ಧಾರವನ್ನು ತೆಗೆದುಕೊಳ್ಳಿ.

ಆಕರ್ಷಕ ಉಡುಗೊರೆಗಳು ಸಣ್ಣ ಸಣ್ಣ ಉಡುಗೊರೆಗಳು ಕೂಡ ಸಂತೋಷವನ್ನು ಇಮ್ಮಡಿಗೊಳಿಸುತ್ತವೆ. ಹೀಗಾಗಿ ಆಗಾಗ ನಿಮ್ಮ ಸಂಗಾತಿಗೆ ಉಡುಗೊರೆಯನ್ನು ನೀಡುತ್ತಿರಿ.

ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಹಗಲು ರಾತ್ರಿ ಹಣದ ಚಿಂತೆ ಮಾಡುತ್ತಿದ್ದೀರಾ? ಇದರಿಂದ ಯಾವ ದೋಷ ಬರುತ್ತೆ?
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಇಂದು ಈ ರಾಶಿಯವರು ಅತಿಯಾದ ಕೋಪವನ್ನು ಕೈಬಿಡಿ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಬೆಳಗಾವಿಯಲ್ಲಿ ಭಾರಿ ಗಾಳಿ ಮಳೆಗೆ ಧರೆಗುರುಳಿದ ಮರಗಳು: ಸಂಚಾರ ಅಸ್ತವ್ಯಸ್ತ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಪ್ರಧಾನಿ ಮೋದಿ ಹಾಸನದ ಮೆಗಾ ಡೇರಿ ಉದ್ಘಾಟನೆ ಮಾಡುತ್ತಾರೆ; ಹೆಚ್​ಡಿ ದೇವೇಗೌಡ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಸರ್ಕಾರಿ ನ್ಯಾಯಬೆಲೆ ಅಂಗಡಿ ಸಿನಿಮಾ: ಸಿಎಂ ಸಹಕಾರ ನೆನೆದ ಕುಮಾರ್ ಬಂಗಾರಪ್ಪ
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ಮಳೆ ಕೊರತೆ ಮಧ್ಯೆ ತೀವ್ರ ಬಿಸಿಲು: ಬರಿದಾಗುತ್ತಿದೆ ಜೀವನಾಡಿ ಕೆಆರ್‌ಎಸ್
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ತಾಂಡಾ, ಹಾಡಿ ನಿವಾಸಿಗಳ ದಶಕಗಳ ಕನಸು ನನಸು
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಮತ್ತೆ ಸನಾತನ ನಿರ್ಮೂಲನೆಯ ಹೇಳಿಕೆ ನೀಡಿ ವಿವಾದಕ್ಕೀಡಾದ ಉದಯನಿಧಿ ಸ್ಟಾಲಿನ್
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬೆಂಗಳೂರಿನಲ್ಲಿ ಎಲೆಕ್ಟ್ರಿಕ್ ಬೈಕ್ ಬ್ಯಾಟರಿ ಸ್ಫೋಟಗೊಂಡು ವೃದ್ಧ ಸಾವು!
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್
ಬಹುಮತ ಸಾಬೀತಿಗೂ ಮುನ್ನ ಎಐಎಡಿಎಂಕೆ ರೆಬೆಲ್ ನಾಯಕರನ್ನು ಭೇಟಿಯಾದ ವಿಜಯ್