AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Mawe Tribe: ಗಂಡಸರು ಈ ವಿಶೇಷ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮದುವೆ !; ಫೇಲಾದರೆ ಮದುವೇ ಇಲ್ಲ?

ಬುಡಕಟ್ಟು ಜನಾಂಗವೊಂದು ತನ್ನ ಸಮುದಾಯದ ಹದಿಹರೆಯದ ಯುವಕರಿಗೆ ವಿಚಿತ್ರ ಸವಾಲುವೊಂದನ್ನು ನೀಡುತ್ತದೆ. ಆ ಸವಾಲಿನಲ್ಲಿ ಗೆದ್ದರೆ ಮಾತ್ರ ಆತ ಮದುವೆಯಾಗೋಕೆ ಅರ್ಹ ಎಂದು ನಿರ್ಧರಿಸಲಾಗುತ್ತದೆ. ಅಷ್ಟಕ್ಕೂ ಆ ಸವಾಲು ಏನು ಗೊತ್ತಾ? ಈ ಸ್ಟೋರಿನಾ ಪೂರ್ತಿಯಾಗಿ ಓದಿ.

Mawe Tribe: ಗಂಡಸರು ಈ ವಿಶೇಷ ಪರೀಕ್ಷೆಯಲ್ಲಿ ಪಾಸಾದರೆ ಮಾತ್ರ ಮದುವೆ !; ಫೇಲಾದರೆ ಮದುವೇ ಇಲ್ಲ?
Mawe Tribe Tradition Image Credit source: Twitter
ಅಕ್ಷತಾ ವರ್ಕಾಡಿ
|

Updated on: Jun 23, 2023 | 3:38 PM

Share

ಬ್ರೆಜಿಲ್‌ನ ಅಮೆಜಾನ್ ಅರಣ್ಯದಲ್ಲಿ ವಾಸಿಸುವ ಮಾವೆ ಬುಡಕಟ್ಟು(Mawe Tribe) ಸಮುದಾಯದ ವಿಚಿತ್ರ ಸಂಪ್ರದಾಯವೊಂದು ನಿಮ್ಮನ್ನು ಬೆಚ್ಚಿಬೀಳಿಸಿದಂತೂ ಖಂಡಿತಾ. ಈ ಜನಾಂಗದಲ್ಲಿ ಹದಿಹರೆಯದ ಯುವಕರಿಗೊಂದು ವಿಚಿತ್ರವಾದ ಸವಾಲುಗಳನ್ನು ಇಡಲಾಗುತ್ತದೆ. ಆ ಸವಾಲಿನಿಂದ ಗೆದ್ದರೆ ಮಾತ್ರ ಆತ ಮದುವೆಯಾಗೋಕೆ ಅರ್ಹ ಎಂದು ನಿರ್ಧರಿಸಲಾಗುತ್ತದೆ. ಜೊತೆಗೆ ಆತ ಶಕ್ತಿಶಾಲಿ ಪುರುಷ ಎಂಬ ಬಿರುದು ಕೂಡ ನೀಡಲಾಗುತ್ತದೆ. ಆ ವಿಚಿತ್ರ ಸವಾಲಿನ ಬಗ್ಗೆ ಮಾಹಿತಿ ಇಲ್ಲಿದೆ.

ಏನಿದು ವಿಚಿತ್ರ ಸವಾಲು?

ಒಂದು ಚಿಕ್ಕದಾದ ಕೈಗವಚವನ್ನು ಕೈಗೆ ಹಾಕಿ 10 ನಿಮಿಷ ನಿಂತರೆ ಸಾಕು. ಏನಪ್ಪಾ ಇಷ್ಟೊಂದು ಸುಲಭವಾಗಿರುವ ಸವಾಲು ಅಂತಾ ಅಂದ್ಕೋಬೇಡಿ. ಆದ್ರೆ ಇಲ್ಲೇ ಇರೋದು ಟ್ವಿಸ್ಟ್​​. ಹೌದು ಈ ಚಿಕ್ಕದಾದ ಕೈಗವಚದೊಳಗೆ ಅತ್ಯಂತ ಅಪಾಯಕಾರಿಯಾದ ಇರುವೆ (Bullet Ant) ಹಾಕಲಾಗಿರುತ್ತದೆ. ಈ ಇರುವೆ ಕಚ್ಚಿದ ನೋವು 30 ಜೇನುನೊಣ ಕಚ್ಚಿದ ನೋವಿಗೆ ಸಮನಾಗಿರುತ್ತದೆಯಂತೆ. ಈ ಕೈವಚ ಹಾಕಿಕೊಂಡು 30 ನಿಮಿಷಗಳ ಕುಣಿದರೆ ಮಾತ್ರ ಆತನಿಗೆ ಮದುವೆ ಮತ್ತು ಆ ಸಮುದಾಯದಲ್ಲಿ ಮರ್ಯಾದೆ ನೀಡಲಾಗುತ್ತದೆ. ಈ ವಿಚಿತ್ರ ಪರೀಕ್ಷೆಯಲ್ಲಿ ಉತ್ತೀರ್ಣರಾಗದ ಹೊರತು ಅಲ್ಲಿನ ಪುರುಷರಿಗೆ ಮದುವೆಯಾಗುವುದಿಲ್ಲ. ಈ ಇರುವೆ ಗುಂಡು ತಗುಲಿದಷ್ಟೇ ನೋವಾಗುತ್ತದೆ ಎನ್ನುತ್ತಾರೆ. ಜೊತೆಗೆ ಇರುವೆ ಕಚ್ಚಿದ ನಂತರ ಹಲವಾರು ದಿನಗಳವರೆಗೆ, ನೋವಿಗೆ ಕೈಯಲ್ಲಿ ಊತವೂ ಕಂಡುಬರುತ್ತದೆ.

ಇದನ್ನೂ ಓದಿ: ತುರ್ತು ಅಗತ್ಯತೆ ಹೊರತಾಗಿ ರೈಲಿನಲ್ಲಿ ಚೈನ್ ಎಳೆದರೆ ಅಪರಾಧಿಗೆ ಶಿಕ್ಷೆ ಏನು ಗೊತ್ತಾ? ಹೊಸಾ ರೂಲ್ಸ್​ ಏನ್​ ಹೇಳತ್ತೆ?

ಈ ಅಪಾಯಕಾರಿ ಪರೀಕ್ಷೆಗಾಗಿ 12 ವರ್ಷ ಮೇಲ್ಪಟ್ಟ ಹದಿಹರೆಯದ ಯವಕರು ಕಾಡಿನಿಂದ ಅಪಾಯಕಾರಿ ಇರುವೆಗಳನ್ನು ತಾವಾಗಿಯೇ ತರಬೇಕು ಮತ್ತು ಮರದ ಕೈಗವಸುಗಳನ್ನು ತಯಾರಿಸಬೇಕು. ನಂತರ ಈ ಕೈಗವಸುಗಳನ್ನು 20 ಬಾರಿ ಧರಿಸುತ್ತಾರೆ. ಇದನ್ನು ಒಮ್ಮೆಗೆ 10 ನಿಮಿಷಗಳ ಕಾಲ ಧರಿಸಲಾಗುತ್ತದೆ. ಈ ಅಪಾಯಕಾರಿ ಇರುವೆ ಕಡಿತದ ನೋವು ಜೇನುನೊಣಕ್ಕಿಂತ 30 ಪಟ್ಟು ಹೆಚ್ಚು ಎಂದು ಹೇಳಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ:

Follow Us
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಡ್ಯಾಂ ಸುರಕ್ಷತೆಯ ಹಿತದೃಷ್ಟಿಯಿಂದ ನೀರು ಬಿಟ್ಟಿದ್ದೇವೆ: ಡಿಕೆಶಿ ಸ್ಪಷ್ಟನೆ
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಕರ್ನಾಟಕ ಬಂದ್​ನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದ ವಾಟಾಳ್
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಧಾರಾಕಾರ ಮಳೆಗೆ ನಲುಗಿದ ಮಲೆನಾಡು: ರೈಲ್ವೆ ಹಳಿ ಮೇಲೆ ಕುಸಿದ ಗುಡ್ಡ
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಉದ್ಯೋಗದ ಕನಸು: ಅಮ್ಮನ ಜತೆ ಪರೀಕ್ಷೆಗೆ ಬಂದ ಕಂದನಿಗೆ ಲಾಲಿ ಹಾಡಿದ ಪೊಲೀಸ್ರು
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ಕಾವೇರಿ ವಿವಾದ: ಊರ್ವಶಿ ಚಿತ್ರಮಂದಿರದಲ್ಲಿ ‘ಜನ ನಾಯಗನ್’ ಬದಲಿಗೆ ‘ಕರಾವಳಿ’
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ನಶಾ ಮುಕ್ತ ಭಾರತ ಅಭಿಯಾನ, ಪ್ರಧಾನಿ ಮೋದಿ ಏನಂದ್ರು ನೋಡಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ಕಬಿನಿ ಜಲಾಶಯ ಸಂಪೂರ್ಣ ಭರ್ತಿ
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ನಶಾಮುಕ್ತ ಭಾರತ ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಮೋದಿ ಕಿವಿಮಾತು
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ಪೊಲೀಸ್ ಕಾನ್ಸ್‌ಟೇಬಲ್ ನೇಮಕಾತಿ ಪರೀಕ್ಷೆ; ಬೆಂಗಳೂರಿನಲ್ಲಿ ಹೈ ಅಲರ್ಟ್
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು
ರೈಲು ಸಂಚಾರ ಸ್ಥಗಿತ: ಪರದಾಡಿದ ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷಾರ್ಥಿಗಳು