AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Health: ಆರೋಗ್ಯಕರ ಉಗುರುಗಳಿಗಾಗಿ ಈ ಆಹಾರ ಸೇವಿಸಿ, ವೈದ್ಯರ ಸಲಹೆ ಇಲ್ಲಿದೆ

ದೇಹದ ಇತರ ಭಾಗಗಳಂತೆ ನಮ್ಮ ಉಗುರುಗಳು ಸಹ ನಮ್ಮ ಆಂತರಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ನಾವು ಉಗುರುಗಳನ್ನು ಸಧೃಢವಾಗಿ ಮತ್ತು ಆರೋಗ್ಯವಾಗಿಡುವುದು ಅತ್ಯಗತ್ಯ. ಒಮ್ಮೊಮ್ಮೆ ಹಸ್ತಾಲಂಕಾರ ಮಾಡುವುದರ ಹೊರತಾಗಿ, ಹೆಚ್ಚಿನ ಜನರು ಉಗುರಿನ ಆರೈಕೆಯನ್ನು ಮಾಡುವುದಿಲ್ಲ.

Nail Health: ಆರೋಗ್ಯಕರ ಉಗುರುಗಳಿಗಾಗಿ ಈ ಆಹಾರ ಸೇವಿಸಿ, ವೈದ್ಯರ ಸಲಹೆ ಇಲ್ಲಿದೆ
ಸಾಂದರ್ಭಿಕ ಚಿತ್ರ
ಅಕ್ಷಯ್​ ಪಲ್ಲಮಜಲು​​
|

Updated on:Jan 28, 2023 | 7:05 PM

Share

ದೇಹದ ಇತರ ಭಾಗಗಳಂತೆ ನಮ್ಮ ಉಗುರುಗಳು (Nail) ಸಹ ನಮ್ಮ ಆಂತರಿಕ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ. ನಾವು ಉಗುರುಗಳನ್ನು ಸಧೃಢವಾಗಿ ಮತ್ತು ಆರೋಗ್ಯವಾಗಿಡುವುದು ಅತ್ಯಗತ್ಯ. ಒಮ್ಮೊಮ್ಮೆ ಹಸ್ತಾಲಂಕಾರ ಮಾಡುವುದರ ಹೊರತಾಗಿ, ಹೆಚ್ಚಿನ ಜನರು ಉಗುರಿನ ಆರೈಕೆಯನ್ನು ಮಾಡುವುದಿಲ್ಲ. ಪುರುಷರು ಮತ್ತು ಮಹಿಳೆಯು ಇಬ್ಬರೂ ಅನಾರೋಗ್ಯಕರ, ಬಣ್ಣ ಬಣ್ಣದ ಅಥವಾ ಕತ್ತರಿಸಿದ ಉಗುರುಗಳಿಂದ ಬಳಲುತ್ತಿದ್ದಾರೆ. ಉಗುರುಗಳು ನಿಮ್ಮ ಆರೋಗ್ಯದ ಸ್ಥಿತಿಯನ್ನು, ನಿಮ್ಮ ಚರ್ಮ, ಕಣ್ಣು ಮತ್ತು ಕೂದಲಿನ ಸ್ಥಿತಿಯನ್ನು ಸ್ಪಷ್ಟವಾಗಿ ಸೂಚಿಸುತ್ತದೆ. ಲಂಬವಾದ ರೇಖೆಯೊಂದಿಗೆ ಮಸುಕಾದ ಉಗುರುಗಳು ರಕ್ತಹೀನತೆ ಅಥವಾ ತೀವ್ರ ಶುಷ್ಕತೆಯ ಸಂಕೇತವಾಗಿದೆ. ನೀಲಿ ಉಗುರುಗಳು ನಿಮ್ಮ ರಕ್ತದಲ್ಲಿ ಸಾಕಷ್ಟು ಆಮ್ಲಜನಕವಿಲ್ಲ ಎಂದು ಸೂಚಿಸುತ್ತದೆ. ನಿಮ್ಮ ಉಗುರುಗಳು ತೆಳುವಾಗಿದ್ದರೆ ಮತ್ತು ನಿರಂತರವಾಗಿ ಮುರಿಯುತ್ತಿದ್ದರೆ ನೀವು ಜೀವಸತ್ವಗಳು, ಖನಿಜಗಳು ಮತ್ತು ಪ್ರೋಟೀನ್​ಗಳನ್ನು ಸೇವಿಸುತ್ತಿದ್ದೀರಿ ಎಂದರ್ಥ.

ಪೌಷ್ಟಿಕ ತಜ್ಞೆ ಅಂಜಲಿ ಮುಖರ್ಜಿ ತಮ್ಮ ಇನ್ಟಾಗ್ರಾಮ್ ಪೋಸ್ಟ್​ನಲ್ಲಿ ಉಗುರುಗಳ ಆರೋಗ್ಯವನ್ನು ಹೆಚ್ಚಿಸಲು ಆಹಾರದಲ್ಲಿ ಹಲವಾರು ಆಹಾರಗಳು ಮತ್ತು ಇತರ ಪೂರಕಗಳನ್ನು ಸೇರಿಸಲು ಸಲಹೆ ನೀಡಿದ್ದಾರೆ.

ಆರೋಗ್ಯಕರ ಉಗುರುಗಳಿಗಾಗಿ ಆಹಾರಗಳು:

ಮೊಟ್ಟೆ: ಮೊಟ್ಟೆಯು ವಿಟಮಿನ್ ಡಿ ಮತ್ತು ಪ್ರೋಟೀನ್‌ನ ಉತ್ತಮ ಮೂಲವಾಗಿದೆ. ಅದರ ವಿಟಮಿನ್ ಬಿ12, ಕಬ್ಬಿಣ ಮತ್ತು ಬಯೋಟಿನ್ ಅಂಶವು ಉಗುರುಗಳ ದಪ್ಪವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ನಿಮ್ಮ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಿ ಮತ್ತು ಆರೋಗ್ಯ ಪ್ರಯೋಜನವನ್ನು ಆನಂದಿಸಿ.

ಹಸಿರು ಎಲೆ ತರಕಾರಿಗಳು: ಹಸಿರು ಎಲೆ ತರಕಾರಿಗಳು ಕ್ಯಾಲ್ಸಿಯಂ, ಕಬ್ಬಿಣ ಮತ್ತು ಉತ್ಕರ್ಷಣ ನಿರೋಧಕ ಅಂಶಗಳಿಂದ ಸಮೃದ್ಧವಾಗಿರುವ ಕಾರಣ ಇದು ಪೋಷಕಾಂಶಗಳ ಶಕ್ತಿ ಕೇಂದ್ರವಾಗಿದೆ. ಪಾಲಕ್, ಎಲೆಕೋಸು, ಬ್ರೋಕೊಲಿಯಂತಹ ಹಸಿರು ತರಕಾರಿಗಳು ಉಗುರಿನ ಆರೋಗ್ಯಕ್ಕೆ ಒಳ್ಳೆಯದು.

ಇದನ್ನೂ ಓದಿ:Nail Trends 2023: ನೀವು ನೈಸರ್ಗಿಕ ಪ್ರೀಯರೇ, ಇಲ್ಲಿದೆ ಉಗುರುಗಳ ಮೆರುಗು ಹೆಚ್ಚಿಸುವ ಟ್ರೆಂಡಿ ನೈಲ್ ಆರ್ಟ್

ಮೀನು: ಮೀನುಗಳು ಪ್ರೋಟೀನ್, ಸಲ್ಫರ್ ಮತ್ತು ಒಮೆಗಾ3 ಕೊಬ್ಬಿನಾಮ್ಲಗಳ ಅತ್ಯುತ್ತಮ ಮೂಲವಾಗಿದೆ. ಇದು ಉಗುರುಗಳ ಹಾಸಿಗೆಯನ್ನು ಅರ್ಧಕಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಉಗುರುಗಳ ಮೃದುತ್ವವನ್ನು ಹೆಚ್ಚಿಸುತ್ತದೆ.

ಬ್ರೂವರ್ಸ್ ಯೀಸ್ಟ್ ಮತ್ತು ಗೋಧಿ ಜರ್ಮ್: ಅಂಜಲಿ ಮುಖರ್ಜಿಯವರು ಬ್ರೂವರ್ಸ್ ಯೀಸ್ಟ್ ಮತ್ತು ಗೋಧಿ ಸೂಕ್ಷ್ಮಣುಗಳನ್ನು ಸೇವಿಸುವಂತೆ ಸೂಚಿಸುತ್ತಾರೆ. ಇದು ವಿಟಮಿನ್ ಬಿ ಮತ್ತು ಸತುಗಳ ಅತ್ಯುತ್ತಮ ಮೂಲವಾಗಿದೆ. ಇದು ಸರಿಯಾದ ಉಗುರುಗಳ ಬೆಳವಣಿಗೆಗೆ ಸಹಾಯ ಮಾಡುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

Published On - 7:05 pm, Sat, 28 January 23

Follow Us
Akshay Pallamajalu
Akshay Pallamajalu

ಅಕ್ಷಯ್ ಕುಮಾರ್ ಪಲ್ಲಮಜಲು ಅವರು ದಕ್ಷಿಣ ಕನ್ನಡ ಜಿಲ್ಲೆ, ಬಂಟ್ವಾಳ ತಾಲ್ಲೂಕಿನವರು. ಡಿಜಿಟಲ್ ಸುದ್ದಿ ಮಾಧ್ಯಮದಲ್ಲಿ​ 3 ವರ್ಷಗಳ ಅನುಭವ ಇದೆ. ಇದರ ಜತೆಗೆ ಸೋಶಿಯಲ್ ಮೀಡಿಯಾದ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿದ್ದಾರೆ, ಪ್ರಸ್ತುತ ಟಿವಿ9 ಕನ್ನಡದಲ್ಲಿ ಸೋಶಿಯಲ್​​​ ಮೀಡಿಯಾವನ್ನು ನೋಡಿಕೊಳ್ಳುತ್ತಿದ್ದಾರೆ. ಡಿಜಿಟಲ್ ಕ್ಷೇತ್ರದಲ್ಲಿ ಆಸಕ್ತಿಯನ್ನು ಹೊಂದಿದ್ದು, ಸೋಶಿಯಲ್​​​ ಮೀಡಿಯಾದಲ್ಲಿ ಇನ್ನೂ ಹೆಚ್ಚಿನ ವಿಚಾರಗಳನ್ನು ತಿಳಿದುಕೊಳ್ಳವ ಆಸಕ್ತಿ ಇದೆ. ಇದರ ಜತೆಗೆ ರಾಷ್ಟ್ರೀಯ ಸುದ್ದಿ ಮತ್ತು ಬ್ರೇಕಿಂಗ್​ ಸುದ್ದಿಗಳನ್ನು ಬರೆಯುತ್ತಾರೆ.

Read More
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ಕರ್ಕಾಟಕ ರಾಶಿಗೆ ಗುರು ಪ್ರವೇಶ; 12ರಾಶಿಗಳ ಮೇಲೆ ಇದರ ಪ್ರಭಾವ ಹೇಗಿರಲಿದೆ?
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ವಿಶ್ವ ದಾಖಲೆ... ಒಂದೇ ಓವರ್‌ನಲ್ಲಿ ೬ ಸಿಕ್ಸ್ ಸಿಡಿಸಿದ ಕುಶಾಲ್!
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಕೈಯಿಂದ ಪದೇ ಪದೇ ಎಣ್ಣೆ, ಹಾಲು ಜಾರಿಬಿದ್ರೆ ಏನರ್ಥ?
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಇಂದು ಈ ರಾಶಿಯವರು ಆರ್ಥಿಕ ವಿಷಯಗಳಲ್ಲಿ ಎಚ್ಚರಿಕೆ ವಹಿಸಬೇಕು
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
ಡಿಕೆ ಶಿವಕುಮಾರ್ ಜತೆ ಸಂಪುಟ ಸೇರೋ ಸಂಭಾವ್ಯ ಸಚಿವರ ಪಟ್ಟಿ ಇಲ್ಲಿದೆ
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ