AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Nail Infection: ಮಹಿಳೆಯರೇ ಎಚ್ಚರ..! ಪೆಡಿಕ್ಯೂರ್​​ ಮಾಡಿಸುವ ಮುನ್ನ ಈ ಸ್ಟೋರಿ ಓದಿ

ಪೆಡಿಕ್ಯೂರ್ ಮಾಡಿಸಿ ಬೆರಳುಗಳನ್ನೇ ಕಳೆದುಕೊಂಡ ಫಟನೆ ಜಾರ್ಜಿಯಾದ ಫ್ಲೋವರಿದಲ್ಲಿ ನಡೆದಿದೆ. ಈಕೆಯ ಹೆಸರು ಅನಿತಾ ಹೌಸ್(59). ಆದ್ದರಿಂದ ವಿಶೇಷವಾಗಿ ನೀವು ಹೋಗುವ ಬ್ಯೂಟಿ ಪಾರ್ಲರ್​​ ಅಥವಾ ಸಲೂನ್​ಗಳು ಎಷ್ಟು ಸ್ವಚ್ಚತೆಯನ್ನು ಫಾಲೋ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಅಗತ್ಯ.

Nail Infection: ಮಹಿಳೆಯರೇ ಎಚ್ಚರ..! ಪೆಡಿಕ್ಯೂರ್​​ ಮಾಡಿಸುವ ಮುನ್ನ ಈ ಸ್ಟೋರಿ ಓದಿ
ಪೆಡಿಕ್ಯೂರ್
ಅಕ್ಷತಾ ವರ್ಕಾಡಿ
|

Updated on:Feb 23, 2023 | 1:14 PM

Share

ಮಹಿಳೆಯರು ತಮ್ಮ ಸೌಂದರ್ಯವನ್ನು ಇಮ್ಮಡಿಗೊಳಿಸಲು ಸದಾ ಏನಾದರೊಂದು ಹೊಸ ಹೊಸ ಸಾಹಸಗಳನ್ನು ಮಾಡುತ್ತಿರುತ್ತಾರೆ. ಸಾಮಾನ್ಯವಾಗಿ ಪ್ಲಾಸ್ಟಿಕ್​​ ಸರ್ಜರಿಗಳಿಗೆ ಮರುಳಾಗುವುದು ಇಂತಹ ಸಾಕಷ್ಟು ಉದಾಹರಣೆಗಳನ್ನು ನೀವಿಗಾಗಲೇ ನೋಡಿರುತ್ತೀರಿ. ಆದರೆ ಇಲ್ಲೊಂದು ಅದಕ್ಕಿಂತಲೂ ವಿಭಿನ್ನವಾಗಿದೆ. ಪೆಡಿಕ್ಯೂರ್ ಮಾಡಿಸಿ ಬೆರಳುಗಳನ್ನೇ ಕಳೆದುಕೊಂಡ ಫಟನೆ ಜಾರ್ಜಿಯಾದ ಫ್ಲೋವರಿದಲ್ಲಿ ನಡೆದಿದೆ. ಈಕೆಯ ಹೆಸರು ಅನಿತಾ ಹೌಸ್(59).

ಫೆಬ್ರವರಿ 2019ರಲ್ಲಿ ಹೌಸ್ ಮತ್ತು ಆಕೆಯ ಸಹೋದರಿ ಪೆಡಿಕ್ಯೂರ್ ಮಾಡಿಸಲು ಹತ್ತಿರದ ನೇಲ್ ಸಲೂನ್‌ಗೆ ತೆರಳಿದ್ದಾರೆ. ಪೆಡಿಕ್ಯೂರ್ ಮಾಡಿಸಿದ ನಂತರ ಉಗುರಿನಲ್ಲಿ ಅಲರ್ಜಿಯಂತಹ ಲಕ್ಷಣಗಳು ಕಂಡುಬಂದಿದೆ. ದಿನಗಳೆದಂತೆ ಈ ಸಮಸ್ಯೆಯೂ ಹೆಚ್ಚಾಗುತ್ತಾ ಹೋಗಿದೆ. ವೈದ್ಯರು ಚಿಕಿತ್ಸೆಯ ಪ್ರಥಮ ಹಂತವಾಗಿ ಆಂಟಿಬಯೋಟಿಕ್ ಕ್ರೀಮ್​​ಗಳನ್ನು ನೀಡಿದ್ದಾರೆ. ಆದರೆ ಕಾಲ್ಬೆರಳಲ್ಲಿ ಅತಿಯಾದ ನೋವು, ಊತ ಹಾಗೂ ಬೆರಳಿನ ಸುತ್ತಲಿನ ಚರ್ಮ ಕೆಂಪು ಬಣ್ಣಕ್ಕೆ ತಿರುಗಿದೆ.

ಇದನ್ನೂ ಓದಿ: ಪ್ರಪಂಚದಾದ್ಯಂತ ಗರ್ಭಾವಸ್ಥೆ, ಹೆರಿಗೆಯ ಸಮಯದಲ್ಲಿ ಪ್ರತಿ 2 ನಿಮಿಷಕ್ಕೆ ಒಬ್ಬ ಮಹಿಳೆ ಸಾವು: ಯು ಎನ್​​​ ಏಜೆನ್ಸಿ

ಪ್ರಾರಂಭದಲ್ಲಿ ವೈದ್ಯರು ಆಕೆಯ ಕಾಲ್ಬೆರಳ ಉಗುರು ತೆಗೆದ್ದಿದ್ದಾರೆ, ಆದರೆ ಸೋಂಕು ಇಡೀ ಬೆರಳಿಗೆ ಹರಡಿಕೊಂಡಿದ್ದರಿಂದ ಮುಂದೆ ಪಾದಗಳಿಗೆ ಏನು ಹಾನಿಯಾಗಬಾರದು ಎಂದು ಬೆರಳುಗಳನ್ನು ಕತ್ತರಿಸಿ ತೆಗೆದ್ದಿದ್ದಾರೆ. ಆದ್ದರಿಂದ ಪ್ರತಿಯೊಂದು ಮಹಿಳೆಯು ತನ್ನ ಸೌಂದರ್ಯ ಬಗ್ಗೆ ಕಾಳಜಿವಹಿಸುವ ಜೊತೆಗೆ ನೈರ್ಮಲ್ಯದ ಕಡೆ ಗಮನಹರಿಸಬೇಕಿದೆ. ವಿಶೇಷವಾಗಿ ನೀವು ಹೋಗುವ ಬ್ಯೂಟಿ ಪಾರ್ಲರ್​​ ಅಥವಾ ಸಲೂನ್​ಗಳು ಎಷ್ಟು ಸ್ವಚ್ಚತೆಯನ್ನು ಫಾಲೋ ಮಾಡುತ್ತಾರೆ ಎಂದು ತಿಳಿದುಕೊಳ್ಳುವುದು ಅಗತ್ಯ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ

Published On - 1:14 pm, Thu, 23 February 23

ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮಾದಪ್ಪನ ಬೆಟ್ಟದ ತಪ್ಪಲಿನ ರಸ್ತೆಗೆ ಬಂದ ಭಾರಿ ಗಾತ್ರದ ಒಂಟಿ ಸಲಗ
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಮತ್ತೋರ್ವಳಿಗಾಗಿ ಕಟ್ಕೊಂಡವಳನ್ನೇ ಕೊಂದನಾ ಪಾಪಿ ಪತಿ?
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ
ಹೊರಗೆ ಗಿಲ್ಲಿ ಫ್ಯಾನ್​ ಬೇಸ್ ನೋಡಿ ಶಾಕ್ ಆದ ರಾಶಿಕಾ ಶೆಟ್ಟಿ