AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Personality Test: ಈ ಚಿತ್ರದ ಮೂಲಕ ನಿಮ್ಮ ಆಂತರಿಕ ಶಕ್ತಿ ಏನೆಂಬುದನ್ನು ತಿಳಿದುಕೊಳ್ಳಿ

ಆಪ್ಟಿಕಲ್‌ ಇಲ್ಯೂಷನ್‌ ಮೋಜಿನ ಒಗಟಿನ ಆಟ ಮಾತ್ರವಲ್ಲದೆ ವ್ಯಕ್ತಿತ್ವ ಪರೀಕ್ಷೆಯ ಒಂದು ವಿಧವೂ ಹೌದು. ಕಣ್ಣಿಗೆ ಭ್ರಮೆಯನ್ನು ಉಂಟುಮಾಡುವ ಈ ಚಿತ್ರಗಳಲ್ಲಿ ಮೊದಲು ನಿಮ್ಮ ಕಣ್ಣಿಗೆ ಯಾವ ಅಂಶ ಕಾಣಿಸಿತು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದು. ಇಲ್ಲೊಂದು ಅದೇ ರೀತಿಯ ಚಿತ್ರ ಹರಿದಾಡುತ್ತಿದ್ದು, ಅದರ ಮುಖಾಂತರ ನಿಮ್ಮ ಆಂತರಿಕ ಶಕ್ತಿ ಏನೆಂಬುದನ್ನು ಪರೀಕ್ಷಿಸಿ.

Personality Test: ಈ ಚಿತ್ರದ ಮೂಲಕ ನಿಮ್ಮ ಆಂತರಿಕ ಶಕ್ತಿ ಏನೆಂಬುದನ್ನು ತಿಳಿದುಕೊಳ್ಳಿ
ವ್ಯಕ್ತಿತ್ವ ಪರೀಕ್ಷೆImage Credit source: Social Media
ಮಾಲಾಶ್ರೀ ಅಂಚನ್​
|

Updated on: Nov 27, 2025 | 3:12 PM

Share

ಎಲ್ಲರ ವ್ಯಕ್ತಿತ್ವ, ಗುಣ ಸ್ವಭಾವ, ನಡವಳಿಕೆ ಒಬ್ಬರಿಗಿಂತ ಒಬ್ಬರಿಗೆ ಭಿನ್ನವಾಗಿರುತ್ತವೆ. ಹೌದು ಕೆಲವರು ತುಂಬಾನೇ ಸೈಲೆಂಟ್‌ ಆಗಿದ್ರೆ, ಇನ್ನೂ ಕೆಲವರು ಎಲ್ಲರೊಂದಿಗೆ ಬೆರೆಯುತ್ತಾ ಜಾಲಿಯಾಗಿರುತ್ತಾರೆ. ಕೆಲವರು ಶಾಂತ ಸ್ವಭಾವದವರಾದರೆ, ಇನ್ನೂ ಕೆಲವರು ಕೋಪಿಷ್ಠರಾಗಿರುತ್ತಾರೆ. ಈ ಎಲ್ಲಾ ಗುಣ ಸ್ವಭಾವಗಳನ್ನು ವ್ಯಕ್ತಿತ್ವ ಪರೀಕ್ಷೆಯ (Personality Test) ಮೂಲಕ ತಿಳಿದುಕೊಳ್ಳಬಹುದು. ಇದೇ ರೀತಿಯ ಪರ್ಸನಾಲಿಟಿ ಟೆಸ್ಟ್‌ ಚಿತ್ರವೊಂದು ವೈರಲ್‌ ಆಗಿದ್ದು, ಅದರಲ್ಲಿ ಚಿಟ್ಟೆ ಅಥವಾ ಮುಖ ನಿಮಗ್ಯಾವ ಅಂಶ ಮೊದಲು ಕಾಣಿಸಿತು ಎಂಬುದರ ಮೇಲೆ ನಿಮ್ಮ ಆಂತರಿಕ ಶಕ್ತಿ ಏನೆಂಬುದನ್ನು ತಿಳಿಯಿರಿ.

ನಿಮ್ಮ ಆಂತರಿಕ ಶಕ್ತಿ ಬಗ್ಗೆ ತಿಳಿಸುತ್ತೆ ಈ ಚಿತ್ರ:

ಚಿಟ್ಟೆ: ಈ ಚಿತ್ರದಲ್ಲಿ ನೀವು ಮೊದಲು ಚಿಟ್ಟೆ ನೋಡಿದರೆ ನೀವು ಕನಸುಗಾರರು ಮತ್ತು ಆದರ್ಶವಾದಿಗಳು ಎಂದರ್ಥ. ನೀವು ಭಾವನಾತ್ಮಕ ಬುದ್ಧಿವಂತಿಕೆಗೆ ಒಲವು ತೋರುತ್ತೀರಿ. ನೀವು ಬದಲಾವಣೆಯನ್ನು ಸೊಗಸಾಗಿ ಸ್ವೀಕರಿಸುವುದು, ನಿಮ್ಮ ಆಲೋಚನೆಗಳಿಂದ ಇತರರಿಗೆ ಸ್ಫೂರ್ತಿ ನೀಡುವುದು ನಿಮ್ಮ ಆಂತರಿಕ ಸಾಮಾರ್ಥ್ಯವಾಗಿದೆ.

ಮುಖ: ನೀವು ಚಿತ್ರದಲ್ಲಿ ಮೊದಲು ಎರಡು ಮುಖಗಳನ್ನು ಗಮನಿಸಿದರೆ, ನೀವು ಆಳವಾದ ವಿಶ್ಲೇಷಣಾತ್ಮಕ ವ್ಯಕ್ತಿ ಎಂದರ್ಥ. ನೀವು ಎಲ್ಲಕ್ಕಿಂತ ಹೆಚ್ಚಾಗಿ ಮಾನವ ಸಂವಹನವನ್ನು ಗೌರವಿಸುತ್ತೀರಿ. ಉದ್ವಿಗ್ನ ಸಂದರ್ಭಗಳಲ್ಲಿಯೂ ತುಂಬಾನೇ ಶಾಂತವಾಗಿರುತ್ತೀರಿ. ನೀವು ಎಲ್ಲರೊಂದಿಗೂ ಭಾವನಾತ್ಮಕವಾಗಿ ಹೊಂದಿಕೊಳ್ಳುತ್ತೀರಿ. ಒಟ್ಟಿನಲ್ಲಿ ಸಹಾನುಭೂತಿಯೇ ನಿಮ್ಮ ಬಹುದೊಡ್ಡ ಶಕ್ತಿ.

ಇದನ್ನೂ ಓದಿ: ನೀವು ಪ್ರಾಕ್ಟಿಕಲ್‌ ವ್ಯಕ್ತಿಯೇ ಎಂಬುದನ್ನು ಬಹಿರಂಗಪಡಿಸುತ್ತದೆ ಚಿತ್ರ

ವೃತ್ತ: ನೀವು ಈ ಚಿತ್ರದಲ್ಲಿ ಒಂದು ವೃತ್ತವನ್ನು ಗಮನಿಸಿದರೆ, ನೀವು ಜೀವನದ ಬಗ್ಗೆ ಒಂದು ಗುರಿಯನ್ನು ಹೊಂದಿರುತ್ತೀರಿ ಎಂದರ್ಥ. ನೀವು ಕ್ರಮ, ಸ್ಥಿರವಾದ ಲಯ ಮತ್ತು ಮಾನಸಿಕ ಶಾಂತತೆಯನ್ನು ಮೆಚ್ಚುತ್ತೀರಿ. ಇತರರು ಗೊಂದಲದಲ್ಲಿದ್ದಾಗಲೂ ನೀವು  ಶಾಂತ ಮತ್ತು ಸ್ಥಿರವಾಗಿರುತ್ತೀರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಚಿತ್ರದುರ್ಗ ಬಸ್ ದುರಂತದ ಬಳಿಕವೂ ಎಚ್ಚೆತ್ತುಕೊಳ್ಳದ RTO ಅಧಿಕಾರಿಗಳು
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಹೊಸ ವರ್ಷದ ಕೊಡುಗೆ: ನೀವು ಬೆಳಗ್ಗೆ ಹಲ್ಲು ಉಜ್ಜೋ ಮುಂಚೆಯೇ ಬಾರ್ ಓಪನ್!
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ಚಿತ್ರರಂಗಕ್ಕೆ ಬಂದಿದ್ದು ಗಲಾಟೆ ಮಾಡೋಕಲ್ಲ, ನಟಿಸೋಕೆ; ಸುದೀಪ್
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ತಮಿಳು ನಟ ನವೀನ್ ಚಂದ್ರಗೆ ಅಷ್ಟು ಸ್ಪಷ್ಟ ಕನ್ನಡ ಹೇಗೆ ಬರುತ್ತೆ?
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ವಿಶ್ವ ಕ್ರಿಕೆಟ್​ನಲ್ಲಿ ಈ ಸಾಧನೆ ಮಾಡಿದ ಏಕೈಕ ಮಹಿಳಾ ಆಟಗಾರ್ತಿ ದೀಪ್ತಿ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ಕರ್ನಾಟಕದಲ್ಲಿ ಸಿಎಂ ಬದಲಾವಣೆ ಬಗ್ಗೆ ಕೋಡಿಶ್ರೀ ಸ್ಫೋಟಕ ಭವಿಷ್ಯ
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಅವರೇ ಮೇಳದಲ್ಲಿ ಡಿಕೆಶಿಗೆ ಮಹಿಳೆ ಕೇಳಿದ ಪ್ರಶ್ನೆಗೆ ಕಕ್ಕಾಬಿಕ್ಕಿಯಾದ ಜನ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
ಮುಸ್ಲಿಂ ಕುಟುಂಬಗಳಿಗೆ ಬೇರೆ ಜಾಗ ನೀಡುತ್ತೇವೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ
‘ಮಾರ್ಕ್’ ಮೊದಲ ದಿನದ ಕಲೆಕ್ಷನ್ 15 ಕೋಟಿ ನಾ? ಸುದೀಪ್ ಕಡೆಯಿಂದ ಸ್ಪಷ್ಟನೆ