Guava Leaves For Toothache: ಪೇರಳೆ ಹಣ್ಣಿನ ಎಲೆಯಿಂದ ಹಲ್ಲುನೋವು ಮಾಯ

ಪೇರಳೆ ಎಲೆಗಳ ವಿಟಮಿನ್ ಸಿ, ಬಿ ಮತ್ತು ಮ್ನೇಸಿಯಮ್, ಮ್ಯಾಂಗನೀಸ್, ಪೊಟ್ಯಾಸಿಯಮ್, ಕಬ್ಬಿಣ, ಲೈಕೋಪೀನ್ ಇತ್ಯಾದಿ ಪೋಷಕಾಂಶಗಳು ಹಲ್ಲುನೋವನ್ನು ತಡೆಯಲು ಸಹಕಾರಿಯಾಗಿದೆ.

Guava Leaves For Toothache: ಪೇರಳೆ ಹಣ್ಣಿನ ಎಲೆಯಿಂದ ಹಲ್ಲುನೋವು ಮಾಯ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: May 09, 2023 | 4:10 PM

ಹ ಲ್ಲುನೋವುನಮ್ಮಲ್ಲಿ ಹೆಚ್ಚಿನವರು ಅನುಭವಿಸುವ ಸಾಮಾನ್ಯ ನೋವಿನ ಸ್ಥಿತಿಯಾಗಿದೆ. ಅತಿಯಾಗಿ ತಣ್ಣಗಿರುವ, ಬಿಸಿಯಾದ ಅಥವಾ ಹುಳಿಯಾದ ಯಾವುದನ್ನಾದರೂ ತಿಂದಾಗ ಅಥವಾ ಕುಡಿದಾಗ ಹಲ್ಲು ನೋವು ಇನ್ನಷ್ಟು ಉಲ್ಬಣಗೊಳ್ಳುತ್ತದೆ. ಹಲ್ಲುನೋವು ನಿವಾರಿಸಲು ಪ್ರತ್ಯಕ್ಷವಾದ ಔಷಧಿಗಳು ಲಭ್ಯವಿದ್ದರೂ, ನೈಸರ್ಗಿಕ ಪರಿಹಾರಗಳು ಹೆಚ್ಚು ಪರಿಣಾಮಕಾರಿಯಾಗಿರುತ್ತವೆ. ಮತ್ತು ಇವುಗಳು ಸುಲಭವಾಗಿ ಲಭ್ಯವಿರುವ ಮನೆಮದ್ದುಗಳಾಗಿವೆ. ಹಲ್ಲುನೋವಿಗೆ ಅಂತಹ ಜನಪ್ರಿಯ ಮದ್ದುಗಳಲ್ಲಿ ಪೇರಳೆ ಎಲೆಗಳು ಕೂಡಾ ಒಂದು. ಈ ಎಲೆಗಳು ಹಲ್ಲಿನ ಕೊಳೆತವನ್ನು ಕಡಿಮೆ ಮಾಡುವ, ಉರಿಯೂತವನ್ನು ತೆಗೆದುಹಾಕುವ ಮತ್ತು ಹಲ್ಲುಗಳನ್ನು ಆರೋಗ್ಯಕರವಾಗಿಡುವ ಗುಣವನ್ನು ಹೊಂದಿದೆ. ಈ ಎಲೆಗಳು ಆಂಟಿ ಬ್ಯಾಕ್ಟೀರಿಯಲ್ ಮತ್ತು ಉರಿಯೂತ ವಿರೋಧಿ ಗುಣಲಕ್ಷಣಗಳನ್ನು ಹೊಂದಿದೆ. ಇದು ಹಲ್ಲಿನಲ್ಲಿರುವ ಬ್ಯಾಕ್ಟೀರಿಯಾವನ್ನು ಕೊಲ್ಲಲು ಮತ್ತು ಉರಿಯೂತವನ್ನು ತೆಗೆದುಹಾಕಲು ಸಹಾಯ ಮಾಡುತ್ತವೆ.

ಹಲ್ಲು ನೋವಿಗೆ ಪೇರಳೆ ಎಲೆಗಳನ್ನು ಹೇಗೆ ಬಳಸುವುದು?

ಪೇರಳೆ ಎಲೆಗಳು, ಸ್ವಲ್ಪ ಹಿಪ್ಪಲಿ ಮತ್ತು ಲವಂಗವನ್ನು ತೆಗೆದುಕೊಳ್ಳಿ, ಇದಕ್ಕೆ ಸ್ವಲ್ಪ ಉಪ್ಪನ್ನು ಕೂಡಾ ಸೇರಿಸಿ ಇವೆಲ್ಲವನ್ನು ಚೆನ್ನಾಗಿ ರುಬ್ಬಿಕೊಂಡು ಪೇಸ್ಟ್ ರೂಪದಲ್ಲಿ ತಯಾರಿಸಿಕೊಂಡು ನಿಮ್ಮ ಹಲ್ಲುಗಳಿಗೆ ಅನ್ವಯಿಸಿ. ಇದಲ್ಲದೆ ತಾಜಾ ಪೇರಳೆ ಎಲೆಗಳ ಚಿಗುರುಗಳನ್ನು ಬಾಯಿಯಲ್ಲಿ ಅಗಿಯಿರಿ. ಇದರಿಂದ ಅದರ ರಸವು ಹಲ್ಲಿನ ಪೀಡಿತ ಪ್ರದೇಶವನ್ನು ತಲುಪುತ್ತದೆ.

ಹಲ್ಲುನೋವಿಗೆ ಪೇರಳೆ ಎಲೆಗಳ ಪ್ರಯೋಜನಗಳು:

ಆಂಟಿಬ್ಯಾಕ್ಟೀರಿಯಲ್: ನೀವು ಹಲ್ಲುನೋವನ್ನು ತೊಡೆದುಹಾಕಲು ಈ ಆಂಟಿಬ್ಯಾಕ್ಟೀರಿಯಲ್ ಪೇಸ್ಟ್ ನ್ನು ಬಳಸಬಹುದು. ಇದು ಹಲ್ಲಿನ ಒಳಗಿರುವ ಬ್ಯಾಕ್ಟೀರಿಯಾವನ್ನು ಕೊಲ್ಲುವುದರ ಜೊತೆಗೆ ಹಲ್ಲಿನಲ್ಲಿರುವ ಹುಳಗಳನ್ನು ತಟಸ್ಥಗೊಳಿಸುತ್ತದೆ. ಈ ರೀತಿಯಾಗಿ ಇದು ಹಲ್ಲುನೋವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

ಉರಿಯೂತ ನಿವಾರಕ ಗುಣಗಳಿಂದ ಸಮೃದ್ಧವಾಗಿದೆ: ಪೇರಳೆ ಎಲೆಗಳಲ್ಲಿ ಉರಿಯೂತ ನಿವಾರಕ ಗುಣಗಳು ಸಮೃದ್ಧವಾಗಿದೆ. ಇವು ಹಲ್ಲಿನ ಉರಿಯೂತವನ್ನು ಕಡಿಮೆ ಮಾಡುವ ಮೂಲಕ ನೋವನ್ನು ಕಡಿಮೆ ಮಾಡುತ್ತದೆ. ಇದಲ್ಲದೆ, ಇದು ಹಲ್ಲಿನ ಸುತ್ತಮುತ್ತಲಿನ ಸೋಂಕನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Toothache: ಹಲ್ಲು ನೋವಿನ ತ್ವರಿತ ಪರಿಹಾರಕ್ಕೆ ಮನೆ ಮದ್ದುಗಳು

ಖನಿಜಗಳ ಪೂರೈಕೆ: ಪೇರಳೆ ಎಲೆಗಳು ಹಲ್ಲುಗಳಿಗೆ ಅಗತ್ಯವಾದ ಖನಿಜಗಳನ್ನು ಪೂರೈಸುತ್ತದೆ. ಈ ಖನಿಜಗಳ ಕೊರತೆಯು ಹಲ್ಲುನೋವಿಗೆ ಕಾರಣವಾಗಬಹುದು. ಮೆಗ್ನೇಸಿಯಮ್, ಕಬ್ಬಿಣ, ಕ್ಯಾಲ್ಸಿಯಂ ಮುಂತಾದ ಖನಿಜಗಳ ಅನುಪಸ್ಥಿತಿಯು ದಂತಕವಚವನ್ನು ದುರ್ಬಲಗೊಳಿಸುತ್ತದೆ. ಮತ್ತು ನಮ್ಮ ಹಲ್ಲುಗಳಿಗೆ ನೋವುಂಟುಮಾಡುವ ಸೋಂಕುಗಳ ಬೆಳವಣಿಗೆಗೆ ಅವಕಾಶ ಮಾಡಿಕೊಡುತ್ತದೆ. ಪೇರಳೆ ಎಲೆಗಳು ಈ ಹಲ್ಲುಗಳಿಗೆ ಬೇಕಾದ ಅಗತ್ಯ ಖನಿಜಗಳನ್ನು ಒದಗಿಸುತ್ತದೆ ಮತ್ತು ಹಲ್ಲುಗಳನ್ನು ಬಲವಾಗಿ ಮತ್ತು ಆರೋಗ್ಯಕರವಾಗಿರಿಸುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
‘ಕೆಟ್ಟ ಕಾರಣಕ್ಕೆ ಕನ್ನಡ ಚಿತ್ರರಂಗ ಸುದ್ದಿ ಆಗುತ್ತಿದೆ, ಆದರೆ..’: ಕಿಚ್ಚ
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಕನ್ನಡದಲ್ಲಿ ಔಷಧಿ ಚೀಟಿ ಬರೆದು ಗಮನಸೆಳೆದ ಮತ್ತೋರ್ವ ಡಾಕ್ಟರ್
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಅಂತಿಂಥ ಕಳ್ಳಿ ನಾನಲ್ಲ; ಇವರು ಸೀರೆ ಕದಿಯೋದೇ ಗೊತ್ತಾಗಲ್ಲ!
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ಶಾಸಕ ಯತ್ನಾಳ್ ವಿರುದ್ಧ ಎಫ್​ಐಆರ್ ದಾಖಲು: ಬಾಗಲಕೋಟೆ ಎಸ್​ಪಿ ಹೇಳಿದ್ದಿಷ್ಟು
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ವಿಷ್ಣುವರ್ಧನ್ ಸಮಾಧಿ ಮುಂದೆ ಹೆಣ ಬೀಳುತ್ತೆ: ಅಭಿಮಾನಿ ಎಚ್ಚರಿಕೆ
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಹೆಗಲಿಗೆ ಬ್ಯಾಗ್, ಕೈಯಲ್ಲಿ ಚಪ್ಪಲಿ ಹಿಡಿದು ಕೆಸರಲ್ಲೇ ನಡೆಯಬೇಕು ಮಕ್ಕಳು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
ಜಮ್ಮು ಕಾಶ್ಮೀರದಲ್ಲಿ ಬಸ್ ಅಪಘಾತ; 3 ಬಿಎಸ್‌ಎಫ್ ಯೋಧರು ಸಾವು
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
20 ರೂ. ನೀರಿನ ಬಾಟಲಿ ಕೊಳ್ಳಲು ಬಂದವನು ಮಾಡಿದ್ದೇನು ನೋಡಿ!
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಉರುಳಿಸಿದ ಆಕಾಶ್ ದೀಪ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್
ದರ್ಶನ್ ಹೊರಗೆ ಬಂದ್ರೆ ಖುಷಿ; ತಪ್ಪು ಮಾಡಿದ್ದರೆ ಕ್ರಮ ಆಗಲಿ: ಗುರು ಕಿರಣ್