Cooking Tips : ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಟೆನ್ಶನ್ ಮಾಡಿಕೊಳ್ಬೇಡಿ, ತಕ್ಷಣವೇ ಹೀಗೆ ಮಾಡಿ

ಯಾವುದೇ ಅಡುಗೆಯೇ ಇರಲಿ ಉಪ್ಪಿಯಿಲ್ಲದೇ ರುಚಿಸುವುದೇ ಇಲ್ಲ. ಉಪ್ಪು ಕಡಿಮೆಯಾದರೆ, ಬೆರೆಸಿಯಾದರೂ ಊಟ ಮಾಡಬಹುದು. ಹೆಚ್ಚಾದರೆ ಆಹಾರವನ್ನು ಸೇವಿಸಲು ಆಗುವುದೇ ಇಲ್ಲ. ಕೆಲವೊಮ್ಮೆ ಅಪ್ಪಿತಪ್ಪಿ ಅಡುಗೆಗೆ ಉಪ್ಪು ಹೆಚ್ಚಾದರೆ, ತಕ್ಷಣವೇ ಹೀಗೆ ಮಾಡಿದರೆ ಆಹಾರದಲ್ಲಿರುವ ಉಪ್ಪಿನಾಂಶವನ್ನು ಕಡಿಮೆ ಮಾಡಬಹುದು.

Cooking Tips : ಅಡುಗೆಯಲ್ಲಿ ಉಪ್ಪು ಹೆಚ್ಚಾದರೆ ಟೆನ್ಶನ್ ಮಾಡಿಕೊಳ್ಬೇಡಿ, ತಕ್ಷಣವೇ ಹೀಗೆ ಮಾಡಿ
Follow us
|

Updated on: Jun 11, 2024 | 7:40 PM

ಒಬ್ಬರ ಕೈ ರುಚಿ ಮತ್ತೊಬ್ಬರ ಕೈ ರುಚಿಗೆ ಹೋಲಿಸಿದರೆ ಭಿನ್ನವಾಗಿರುತ್ತದೆ. ಅಡುಗೆ ಮಾಡುವಾಗ ಕೆಲವೊಮ್ಮೆ ರುಚಿಯಲ್ಲಿ ವ್ಯತ್ಯಾಸವಾಗಬಹುದು. ರುಚಿ ಬದಲಾದರೆ ಹೇಗೋ ತಿನ್ನಬಹುದು. ಆದರೆ ಉಪ್ಪು ಹೆಚ್ಚಾದರೆ ಏನು ಮಾಡೋದು. ಮನೆಗೆ ಅತಿಥಿಗಳು ಬರುತ್ತಾರೆ ಅಂತಾದರೆ ಅಡುಗೆಯಲ್ಲಿ ಉಪ್ಪು ಹೆಚ್ಚಾಗಿ ಬಿಡುತ್ತದೆ. ಹೀಗಾಗಿ ಅದೆಷ್ಟೋ ಸಲ ಅಡುಗೆ ಉಪ್ಪಿರುವ ಕಾರಣಕ್ಕೆ ತಯಾರಿಸಿದ ಪದಾರ್ಥಗಳನ್ನು ಬಿಸಾಡುತ್ತಾರೆ. ಕೆಲವರು ಬೇರೆ ಅಡುಗೆ ಮಾಡಿ ಅತಿಥಿಗಳ ಮುಂದೆ ಮರ್ಯಾದೆಯನ್ನು ಉಳಿಸಿಕೊಳ್ಳುವುದಿದೆ. ಆದರೆ ಈ ಕೆಲವು ಟ್ರಿಕ್ಸ್ ಬಳಸಿದರೆ ಅಡುಗೆಯಲ್ಲಿ ಹೆಚ್ಚಾಗಿರುವ ಉಪ್ಪನ್ನು ಕಡಿಮೆ ಮಾಡಬಹುದು.

  1. ಸಾರಿಗೆ ಉಪ್ಪು ಹೆಚ್ಚಾಗಿದ್ದರೆ ನೀರು ಬೆರೆಸಿ ಮತ್ತೊಮ್ಮೆ ಕುದಿಸಿಕೊಳ್ಳುವುದು ಒಳ್ಳೆಯದು. ಹೀಗೆ ಮಾಡಿದ್ದಲ್ಲಿ ಬೆರೆಸಿದ ಹೆಚ್ಚುವರಿ ನೀರಲ್ಲಿ ಉಪ್ಪು ಕರಗಿ ಹೋಗುತ್ತದೆ.
  2. ಅಡುಗೆಯ ಹೆಚ್ಚು ಉಪ್ಪಾಗಿದ್ದರೆ, ಅದನ್ನು ಸರಿ ಮಾಡಲು ಹುರಿದ ಕಡಲೆ ಹಿಟ್ಟನ್ನು ಬೆರೆಸುವುದು ಉತ್ತಮ. ಇದು ರುಚಿಯನ್ನು ಹೆಚ್ಚಿಸಿ, ಉಪ್ಪಿನಾಂಶವು ಕಡಿಮೆಯಾಗುತ್ತದೆ.
  3. ನಿಂಬೆ ರಸವನ್ನು ಬಳಸುವ ಮೂಲಕ, ನೀವು ಅಡುಗೆಯಲ್ಲಿನ ಹೆಚ್ಚುವರಿ ಉಪ್ಪನ್ನು ಸುಲಭವಾಗಿ ಕಡಿಮೆ ಮಾಡಬಹುದು.
  4. ಸಾಂಬಾರು ಉಪ್ಪಾಗಿದ್ದರೆ ಎರಡರಿಂದ ಮೂರು ಚಮಚ ನಿಂಬೆ ರಸವನ್ನು ಮಿಶ್ರಣವನ್ನು ಸೇರಿಸಿದರೆ ಸಮತೋಲನಕ್ಕೆ ಬರುತ್ತದೆ.
  5. ಉಪ್ಪಾಗಿರುವ ಅಡುಗೆಗೆ ತಕ್ಷಣವೇ ಮೊಸರನ್ನು ಬೆರೆಸಿ, ಎರಡರಿಂದ ಮೂರು ನಿಮಿಷಗಳ ಕಾಲ ಸಾಂಬಾರು ಅಥವಾ ಗ್ರೇವಿಯನ್ನು ಚೆನ್ನಾಗಿ ಕುದಿಸಿಬೇಕು. ಈ ಮೊಸರು ಉಪ್ಪಿನ ಅಂಶವನ್ನು ಹೀರಿಕೊಳ್ಳುತ್ತದೆ.
  6. ಅಡುಗೆಯಲ್ಲಿ ಉಪ್ಪಿನಾಂಶವು ಹೆಚ್ಚಾಗಿದರೆ ಬೇಯಿಸಿದ ಆಲೂಗಡ್ಡೆಯನ್ನು ಬಳಸಬಹುದು. ಬೇಯಿಸಿದ ಆಲೂಗಡ್ಡೆಯನ್ನು ಮ್ಯಾಶ್ ಮಾಡಿ, ಪದಾರ್ಥಕ್ಕೆ ಮಿಶ್ರಣ ಮಾಡಿದರೆ ಉಪ್ಪು ಸಮತೋಲನಕ್ಕೆ ಬರುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​ ಮಾಡಿ: 

ತಾಜಾ ಸುದ್ದಿ
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
ಬೃಹತ್ ಗಾತ್ರದ ಹೆಬ್ಬಾವು ಪ್ರತ್ಯಕ್ಷ, ಕೂದಲೆಳೆ ಅಂತರದಿಂದ ವ್ಯಕ್ತಿ ಬಚಾವ್
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
Charmadi Ghat: ಭಾರಿ ಮಳೆಯಿಂದ ಚಾರ್ಮಾಡಿ ಘಾಟ್​ನಲ್ಲಿ ಗುಡ್ಡ ಕುಸಿತ
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
‘ಮಾರ್ಟಿನ್’ ಸಿನಿಮಾ ನಿರ್ಮಾಪಕರ ಜೊತೆ ಮನಸ್ತಾಪ ಬಂದಿದ್ದೇಕೆ?
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Daily Devotional: ಪರೋಪಕಾರಾರ್ಥಂ ಇದಂ ಶರೀರಂ ಇದರ ಅರ್ಥ, ಮಹತ್ವ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
Nithya Bhavishya: ಶನಿವಾರದ ನಿಮ್ಮ ರಾಶಿ ಭವಿಷ್ಯ ತಿಳಿಯಿರಿ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಟ್ರಾಫಿಕ್ ರೂಲ್ಸ್​ ಉಲ್ಲಂಘಿಸುವವರೇ ಹುಷಾರ್​! ಬಂದಿದೆ ಉನ್ನತ ತಂತ್ರಜ್ಞಾನ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಮಂಗಳೂರು: ಸುಂಟರಗಾಳಿಗೆ ಧರೆಗೆ ಉರುಳಿದ ವಿದ್ಯುತ್ ಕಂಬ, ಮರ; ವಿಡಿಯೋ ನೋಡಿ
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
ಚಾಮುಂಡಿ ದರ್ಶನಕ್ಕೆ ಬಂದ ದಿನಕರ್, ಚಿಕ್ಕಣ್ಣ; ಜನಜಂಗುಳಿಯಲ್ಲಿ ಹೈರಾಣು
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
‘ಮಾರ್ಟಿನ್’ ಮನಸ್ತಾಪ; ಕಮಿಷನ್ ಆರೋಪಕ್ಕೆ ಎ.ಪಿ. ಅರ್ಜುನ್ ಸುದ್ದಿಗೋಷ್ಠಿ
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್
ಕುಮಾರಸ್ವಾಮಿಯವರಿಗೆ ರಾಮನಗರ ಜನರ ನಾಡಿಮಿಡಿತ ಗೊತ್ತಿಲ್ಲ:ಇಕ್ಬಾಲ್ ಹುಸ್ಸೇನ್