AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

High cholesterol: ದೇಹದಲ್ಲಿನ ಅತಿಯಾದ​ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ

ಕೊಲೆಸ್ಟ್ರಾಲ್​ ಒಂದು ಲಿಪಿಡ್ ಆಗಿದ್ದು, ಅದು ರಕ್ತದಲ್ಲಿರುವ ಕೊಬ್ಬಿನಂತಹ ಒಂದು ಪದಾರ್ಥ. ದೇಹವು ಕ್ಯಾಲೋರಿಗಳನ್ನು ಲಿಪಿಡ್​ಗಳಾಗಿ ಪರಿವರ್ತಿಸಿ ಅಗತ್ಯವಿದ್ದಾಗ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ದೇಹದಲ್ಲಿ ಜೀವಕೋಶಗಳ ಪದರ ತಯಾರಿಕೆಯಲ್ಲಿಯೂ ಕೊಲೆಸ್ಟ್ರಾಲ್​ ಸಹಾಯಕವಾಗಿದೆ.

High cholesterol: ದೇಹದಲ್ಲಿನ ಅತಿಯಾದ​ ಕೊಲೆಸ್ಟ್ರಾಲ್ ನಿಯಂತ್ರಿಸಲು ಈ ಹಣ್ಣುಗಳನ್ನು ಸೇವಿಸಿ
ಪ್ರಾತಿನಿಧಿಕ ಚಿತ್ರ
TV9 Web
| Edited By: |

Updated on: Jan 11, 2022 | 4:03 PM

Share

ದೇಹದಲ್ಲಿ ಅತಿಯಾದ ಕೊಲೆಸ್ಟ್ರಾಲ್​ ಶೇಖರಣೆಯಾದರೆ ಅನಾರೋಗ್ಯ ಕಟ್ಟಿಟ್ಟ ಬುತ್ತಿ. ಕೊಲೆಸ್ಟ್ರಾಲ್​ ಒಂದು ಲಿಪಿಡ್ ಆಗಿದ್ದು, ಅದು ರಕ್ತದಲ್ಲಿರುವ ಕೊಬ್ಬಿನಂತಹ ಒಂದು ಪದಾರ್ಥ. ದೇಹವು ಕ್ಯಾಲೋರಿಗಳನ್ನು ಲಿಪಿಡ್​ಗಳಾಗಿ ಪರಿವರ್ತಿಸಿ ಅಗತ್ಯವಿದ್ದಾಗ ಶಕ್ತಿಯಾಗಿ ಬಳಸಿಕೊಳ್ಳುತ್ತದೆ. ದೇಹದಲ್ಲಿ ಜೀವಕೋಶಗಳ ಪದರ ತಯಾರಿಕೆಯಲ್ಲಿಯೂ ಕೊಲೆಸ್ಟ್ರಾಲ್​ ಸಹಾಯಕವಾಗಿದೆ. ಇದೇ ಕೊಲೆಸ್ಟ್ರಾಲ್​ ಹೆಚ್ಚಾದರೆ ಹೃದಯ ಸಂಬಂಧೀ ಕಾಯಿಲೆಗಳಿಂದ ಹಿಡಿದು ಅಧಿಕ ರಕ್ತದೊತ್ತಡ, ಪಾರ್ಶ್ವವಾಯು, ಎದೆನೋವಿನಂತಹ ಸಮಸ್ಯೆಗಳು ಉಲ್ಬಣವಾಗುತ್ತದೆ. ಹೀಗಾಗಿ  ಕೊಲೆಸ್ಟ್ರಾಲ್​ ಅನ್ನು ಸಮತೋಲನದಲ್ಲಿಡುವ ಆಹಾರವನ್ನು ಸೇವಿಸಿ. ಅದಕ್ಕೆ ನಿಮಗೆ ಕೆಲವು ಹಣ್ಣುಗಳು ಸಹಾಯ ಮಾಡುತ್ತವೆ. ಹಣ್ಣುಗಳು ನಿಮ್ಮ ದೇಹದಲ್ಲಿರುವ ಕೊಬ್ಬನ್ನು ಕರಗಿಸಿ ಫಿಟ್ ಆಗಿರುವಂತೆ ಮಾಡುತ್ತದೆ. ಹೌದು ನಿಮ್ಮ ದೇಹದಲ್ಲಿನ ಅಧಿಕ ಕೊಬ್ಬನ್ನು ಕರಗಸಿ ಸಮತೋಲನದಲ್ಲಿಡಲು ಈ ಹಣ್ಣುಗಳು ನಿಮಗೆ ಸಹಕಾರಿಯಾಗಿದೆ. 

ಸ್ಟ್ರಾಬೆರಿ  ಸಮೃದ್ಧವಾದ ಆ್ಯಂಟಿ ಆಕ್ಸಿಡೆಂಟ್​​ ಗುಣ ಹೊಂದಿರುವ ಸ್ಟ್ರಾಬೆರಿ  ಹಣ್ಣುಗಳು ನಿಮ್ಮ ದೇಹದಲ್ಲಿನ ಕೊಬ್ಬನ್ನು ಕರಗಿಸಲು ಸಹಾಯಕಾವಗಿದೆ. ವಿಭಿನ್ನ ರುಚಿಯ ಹೊಂದಿದ್ದು, ಎಲ್ಲರೂ ಇಷ್ಟಪಡುವ  ಹಣ್ಣಾಗಿದೆ. ಚರ್ಮದ ಆರೋಗ್ಯಕ್ಕೂ ಸ್ಟ್ರಾಬೆರಿ  ಹಣ್ಣುಗಳು ಸಹಕಾರಿಯಾಗಿದೆ. ವಿಟಮಿನ್​ ಮತ್ತು ಪೈಬರ್​ ಅಂಶಗಳ ಮೂಲಕ ಈ ಹಣ್ಣು ನಿಮ್ಮ ಹೃದಯವನ್ನು ರಕ್ಷಿಸುತ್ತದೆ. ಇದರಲ್ಲಿರುವ ಪೈಬರ್​ ಅಂಶ ಅಧಿಕ ಕೊಬ್ಬನ್ನು ಕರಗಿಸಲು ನೆರವಾಗುತ್ತದೆ.

ಸೇಬು ಪ್ರತಿದಿನ ಒಂದು ಸೇಬು ಸೇವನೆ ನಿಮ್ಮ ಹೃದಯವನ್ನು ಆರೋಗ್ಯವಾಗಿರಿಸುತ್ತದೆ. ಸೇಬುವಿನಲ್ಲಿರುವ ಪೈಬರ್​  ಮತ್ತು ಪ್ಯಾಕ್ಟಿನ್​ ಅಂಶಗಳು ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್​ ಅನ್ನು ಕರಗಿಸಿ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಶೂನ್ಯ ಪ್ರಮಾಣದಲ್ಲಿ  ಕೊಲೆಸ್ಟ್ರಾಲ್​ ಅಂಶವನ್ನು ಹೊಂದಿರುವ ಸೇಬು  ಎಲ್ಲಾ ಕಾಲದಲ್ಲೂ ದೇಹವನ್ನು ಆರೋಗ್ಯವಾಗಿಸಲು ಸಹಾಯಕವಾಗಿದೆ.

ವಿಟಮಿನ್​ ಸಿ  ವಿಟಮಿನ್​ ಸಿ ಯಥೇಚ್ಛವಾಗಿರುವ ಹಣ್ಣುಗಳಾದ ಕಿತ್ತಳೆ, ಹಸಿರು ದ್ರಾಕ್ಷಿ ಹಣ್ಣುಗಳು ಕೊಲೆಸ್ಟ್ರಾಲ್​ ಪ್ರಮಾಣವನ್ನು ನಿಯಂತ್ರಿಸುತ್ತವೆ.  ಕಿಡ್ನಿ ಸ್ಟೋನ್​, ಕ್ಯಾನ್ಸರ್​​ನಂತಹ ರೋಗಗಳಿಂದಲೂ ದೂರವಿರಲು ಈ ಸಿಟ್ರಿಕ್​ ಅಂಶವಿರುವ ಹಣ್ಣುಗಳು ಸಹಾಯಕವಾಗಿದೆ. ಕೊಲೆಸ್ಟ್ರಾಲ್​ ಪ್ರಮಾಣ ಕಡಿಮೆ ಇರುವ ಕಾರಣ ಈ ಹಣ್ಣುಗಳ ಸೇವನೆ ನಿಮಗೆ ಕೊಬ್ಬನ್ನು ಸಮತೋಲನದಲ್ಲಿಡುವಂತೆ ಮಾಡುತ್ತದೆ.

ದ್ರಾಕ್ಷಿ ಹಣ್ಣುಗಳು ಚಳಿಗಾಲದಲ್ಲಿ ದ್ರಾಕ್ಷಿ ಸೇವನೆ ನಿಮ್ಮ ಕೊಲೆಸ್ಟ್ರಾಲ್​ ಮಟ್ಟವನ್ನು ನಿಯಂತ್ರಿಸುತ್ತದೆ. ಅಷ್ಟೇ ಅಲ್ಲದೆ ನಿಮ್ಮ ದೇಹದ ಅತಿಯಾದ ತೂಕವನ್ನು ಕಡಿಮೆಗೊಳಿಸಲು ಸಹಾಯಕವಾಗಿದೆ. ಸಮೃದ್ದವಾದ ವಿಟಮಿನ್  ಸಿ ಮತ್ತು ಕೆ ಯನ್ನು ಹೊಂದಿರುವ ದ್ರಾಕ್ಷಿ ಹಣ್ಣಗಳು ಕೆಲವು ಹಂತದ ಕ್ಯಾನ್ಸರ್​ಗಳನ್ನೂ ನಿಯಂತ್ರಿಸುತ್ತದೆ ಎಂದು ಹಲವು ಅಧ್ಯಯನಗಳು ತಿಳಿಸಿವೆ.

ಅವಕಾಡೋ ​ ಅವಾಕಾಡೋ ಅಥವಾ ಬೆಣ್ಣೆ ಹಣ್ಣುಗಳು ಶೂನ್ಯ  ಪ್ರಮಾಣದ ಕೊಲೆಸ್ಟ್ರಾಲ್ ಅಂಶವನ್ನು ಹೊಂದಿದೆ. ಅವಕಾಡೋ ಸೇವನೆಯಿಂದ ನಿಮ್ಮ ದೇಹದಲ್ಲಿನ  ಕೊಲೆಸ್ಟ್ರಾಲ್​ ಅಂಶವನ್ನು ನಿಯಂತ್ರಿಸಬಹುದು ವಿಟಮಿನ್​ ಬಿ, ಇ, ಬಿ6, ಪೊಟ್ಯಾಷಿಯಂ, ಪೈಬರ್​,  ಮ್ಯಾಗ್ನಿಶಿಯಂ ಅಂಶಗಳು ಸಮೃದ್ಧವಾಗಿವೆ. ಇವು ದೇಹವನ್ನು ಸುಸ್ಥಿತಿಯಲ್ಲಿಡಲು ಸಹಾಯಕವಾಗಿದೆ.

ಇದನ್ನೂ ಓದಿ:

Turmeric side effects: ಅತಿಯಾದ ಅರಿಶಿಣ ಸೇವನೆಯು ದೇಹಕ್ಕೆ ಹಾನಿಕಾರಕ

Follow Us
Web contact
Web contact

TV9 Kannada

Read More
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
‘ಮ್ಯಾಂಗೋ ಪಚ್ಚ’ ಚಿತ್ರದಲ್ಲಿ ಕಿಚ್ಚ ಸುದೀಪ್​ಗೆ ನೀಡಲಾಗಿದೆ ಟ್ರಿಬ್ಯೂಟ್
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಮಂತ್ರಿ ಸ್ಥಾನ ಫಿಕ್ಸ್: ಹೈಕಮಾಂಡ್ ಕೊಟ್ಟ ಮಾತು ಬಿಚ್ಚಿಟ್ಟ ಯತೀಂದ್ರ
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ಆರ್​ಸಿಬಿ ಮಾಲೀಕರನ್ನೂ ಬಿಡದೆ ಎಲ್ಲರ ಕಾಲೆಳೆದ ಮಿ. ನಾಗ್ಸ್
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ರಾಜ್ಯ ರಾಜಕೀಯ ರಂಗದ ಮೇಲೆ ಗುರು ಪ್ರಭಾವೇನು? ಡಿಕೆಶಿಗೆ ಸಿಗಲಿದೆಯಾ ಗುರುಬಲ?
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಕಾಂಗ್ರೆಸ್​​ನಲ್ಲಿ ಸಂಚಲನ ಮೂಡಿಸಿದ ಜಮಿರ್ ಅಹಮ್ಮದ್ ಆಡಿಯೋ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
ಜಿಮ್​​ನಲ್ಲಿ ವಾರ್ಮ್​ ಅಪ್ ಮಾಡಿ ನಿದ್ದೆಗೆ ಜಾರಿದ ಯುವಕ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
IPL 2026: ಕನ್ನಡಿಗನ ಪಾಲಾದ 'ಬೆಸ್ಟ್ ಕ್ಯಾಚ್' ಪ್ರಶಸ್ತಿ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಗವರ್ನರ್​ಗಾಗಿ ರಸ್ತೆ ಬಂದ್: ನಡು ಮಾರ್ಗದಲ್ಲಿ ಕುಳಿತು ವ್ಯಕ್ತಿಯ ಪ್ರತಿಭಟನೆ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಬಾಲಕಿಯನ್ನು ಹೊತ್ತೊಯ್ಯುವಾಗ ಬಾಗಿಲಲ್ಲೇ ತಡೆದ ಬಾಲಕ
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!
ಸ್ಪೆಷಲ್ ಫ್ಲೈಟ್​ನಲ್ಲಿ ದೆಹಲಿಗೆ ತೆರಳಿದ ಡಿಕೆ ಶಿವಕುಮಾರ್, ಸಿದ್ದರಾಮಯ್ಯ!