World Youth Skills Day 2023: ವಿಶ್ವ ಯುವ ಕೌಶಲ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಇತಿಹಾಸ ಮಹತ್ವ ಇಲ್ಲಿದೆ

ಪ್ರತಿವರ್ಷ ಜುಲೈ 15ರಂದು ವಿಶ್ವದಾದ್ಯಂತ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ. ಈ ಆಚರಣೆಯ ಯಾವಾಗ ಪ್ರಾರಂಭವಾಯಿತು, ಅದರ ಇತಿಹಾಸ ಏನೆಂಬುದನ್ನು ಇಂದು ತಿಳಿಯೋಣ.

World Youth Skills Day 2023: ವಿಶ್ವ ಯುವ ಕೌಶಲ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ? ಇದರ ಇತಿಹಾಸ ಮಹತ್ವ ಇಲ್ಲಿದೆ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Jul 15, 2023 | 6:10 AM

ಯುವಜನತೆಯು ಯಾವುದೇ ಒಂದು ದೇಶದ ಭವಿಷ್ಯ. ದೇಶದ ಭವಿಷ್ಯ ಹಾಗೂ ಅಭಿವೃದ್ಧಿಯು ಯುವಕರ ಹೆಗಲ ಮೇಲಿದೆ. ಹಾಗಾಗಿ ಯುವಜನತೆ ನುರಿತ ಕೆಲಸ ಅಥವಾ ಉದ್ಯಮಶೀಲ ಕೆಲಸದಲ್ಲಿ ಕಾರ್ಯ ನಿರ್ವಹಿಸಲು ಅಗತ್ಯವಾದ ಕೌಶಲ್ಯವನ್ನು ಹೊಂದಿರುವುದು ಮುಖ್ಯವಾಗಿದೆ. ಇಂದಿಗೂ ಸಹ ಹೆಚ್ಚಿನ ಸಂಖ್ಯೆಯ ಯುವಕರು ನಿರುದ್ಯೋಗಿಗಳಾಗಿದ್ದಾರೆ. ಇಂತಹ ಸ್ಥಿತಿಯು ಒಂದು ದೇಶದ ಪೂರಕ ಅಭಿವೃದ್ಧಿಗೆ ಮಾಕರವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಅವರಿಗೆ ಉದ್ಯೋಗ ಕೌಶಲ್ಯ ಮತ್ತು ಅವರ ಸಾಮರ್ಥ್ಯವನ್ನು ಅಭಿವೃದ್ಧಿಪಡಿಸಲು ಜಾಗೃತಿ ಮೂಡಿಸುವುದು ಅವಶ್ಯಕ. ಆ ನಿಟ್ಟಿನಲ್ಲಿ ಪ್ರತಿವರ್ಷ ಜುಲೈ 15 ರಂದು ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ. ಉದ್ಯೋಗ, ಯೋಗ್ಯ ಕೆಲಸ ಮತ್ತು ಉದ್ಯಮಶೀಲತೆಗಾಗಿ ಕೌಶಲ್ಯದೊಂದಿಗೆ ಯುವಕರನ್ನು ಸಜ್ಜುಗೊಳಿಸುವ ಕಾರ್ಯತಂತ್ರದ ಪ್ರಾಮುಖ್ಯತೆಯನ್ನು ಈ ದಿನವು ಎತ್ತಿ ತೋರಿಸುತ್ತದೆ.

ವಿಶ್ವ ಯುವ ಕೌಶಲ್ಯ ದಿನ:

ಪ್ರಪಂಚದ ಯುವಜನತೆ ತಮ್ಮ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಅಗತ್ಯವನ್ನು ಗುರುತಿಸಿ, ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು 2014 ರಲ್ಲಿ ವಿಶ್ವ ಯುವ ಕೌಶಲ್ಯ ದಿನವನ್ನು ಸ್ಥಾಪಿಸಿತು. ಅಂದಿನಿಂದ ಜುಲೈ 15 ರಂದು ಪ್ರತಿವರ್ಷ ವಿಶ್ವ ಯುವ ಕೌಶಲ್ಯ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.

ವಿಶ್ವ ಯುವ ಕೌಶಲ್ಯ ದಿನದ ಉದ್ದೇಶ:

ವಿಶ್ವದ ಯುವಕರಿಗೆ ಉದ್ಯೋಗ, ಕೆಲಸ ಮತ್ತು ಉದ್ಯಮಶೀಲತೆಗಾಗಿ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ವಿಶ್ವ ಕೌಶಲ್ಯ ದಿನದ ಉದ್ದೇಶವಾಗಿದೆ. ಈ ದಿನದ ಉದ್ದೇಶವು ಯುವಕರಲ್ಲಿ ಗರಿಷ್ಠ ಕೌಶಲ್ಯಾಭಿವೃದ್ಧಿಯ ಬಗ್ಗೆ ಅರಿವು ಮೂಡಿಸುವುದು. ಇದರಿಂದ ಅವರು ಉತ್ತಮ ಅವಕಾಶಗಳನ್ನು ಹುಡುಕುವ ಮೂಲಕ ಒಂದೊಳ್ಳೆ ಉದ್ಯೋಗವನ್ನು ಪಡೆಯಬಹುದು.

ವಿಶ್ವ ಯುವ ಕೌಶಲ್ಯ ದಿನದ ಇತಿಹಾಸ:

ನಿರುದ್ಯೋಗದ ಸವಾಲುಗಳನ್ನು ಕಡಿಮೆ ಮಾಡಲು ಮತ್ತು ಉದ್ಯೋಗ ಕೌಶಲ್ಯವನ್ನು ಉತ್ತೇಜಿಸಲು ವಿಶ್ವದಾದ್ಯಂತ ಯುವಜನರಲ್ಲಿ ಜಾಗೃತಿ ಮೂಡಿಸುವ ದೃಷ್ಟಿಯಿಂದ ವಿಶ್ವ ಯುವ ಕೌಶಲ್ಯ ದಿನ ಅಸ್ತಿತ್ವಕ್ಕೆ ಬಂತು. ಶ್ರೀಲಂಕಾದ ಉಪಕ್ರಮದ ಮೇರೆಗೆ, ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 2014 ರಂದು ವಿಶ್ವ ಯುವ ಕೌಶಲ್ಯ ದಿನದ ಆಚರಣೆಗೆ ಅಂಗೀಕಾರ ನೀಡಿತು. ಈ ಮೂಲಕ ಮೊದಲ ಬಾರಿಗೆ 2015 ರ ಜುಲೈ 15 ರಂದು ವಿಶ್ವ ಕೌಶಲ್ಯ ದಿನವನ್ನು ಆಚರಿಸಲಾಯಿತು. ಅಂದಿನಿಂದ ಪ್ರತಿವರ್ಷ ಜುಲೈ 15 ರಂದು ವಿಶ್ವದಾದ್ಯಂತ ಈ ದಿನವನ್ನು ಆಚರಿಸಲಾಗುತ್ತಿದೆ.

ಇದನ್ನೂ ಓದಿ:ಅಂತಾರಾಷ್ಟ್ರೀಯ ನ್ಯಾಯಕ್ಕಾಗಿ ವಿಶ್ವ ದಿನದ ಇತಿಹಾಸ, ಮಹತ್ವ ಇಲ್ಲಿದೆ

ವಿಶ್ವ ಕೌಶಲ್ಯ ದಿನ 2023 ರ ಥೀಮ್:

ವಿಶ್ವಸಂಸ್ಥೆಯ ಅಧೀಕೃತ ವೆಬ್ ಸೈಟ್ ನ ಮಾಹಿತಿ ಪ್ರಕಾರ 2023 ರ ವಿಶ್ವ ಯುವ ಕೌಶಲ್ಯ ದಿನಾಚರಣೆಯ ಥೀಮ್ “ಪರಿವರ್ತನೀಯ ಭವಿಷ್ಯಕ್ಕಾಗಿ ಕೌಶಲ್ಯ ಶಿಕ್ಷಕರು, ತರಬೇತುದಾರರು ಮತ್ತು ಯುವಕರು” ಯುವಕರು ಉತ್ತಮ ಕೆಲಸದಲ್ಲಿ ಪರಿವರ್ತನೆಗೊಳ್ಳಲು ಮತ್ತು ಅವರ ಸಮುದಾಯಗಳು ಮತ್ತು ಸಮಾಜದಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಲು ಅವರಿಗೆ ಕೌಶಲ್ಯಗಳನ್ನು ಒದಗಿಸುವಲ್ಲಿ ಶಿಕ್ಷಕರು, ತರಬೇತುದಾರರು ವಹಿಸುವ ಪ್ರಮುಖ ಪಾತ್ರವನ್ನು ಇದು ಎತ್ತಿ ತೋರಿಸುತ್ತದೆ.

ವಿಶ್ವ ಯುವ ಕೌಶಲ್ಯ ದಿನವನ್ನು ಏಕೆ ಆಚರಿಸಲಾಗುತ್ತದೆ ಹಾಗೂ ಅದರ ಮಹತ್ವವೇನು:

• ಪ್ರಪಂಚದಾದ್ಯಂತ ಯುವಕರನ್ನು ಅವರು ಉದ್ಯೋಗ ಮಾಡಲು, ಉದ್ಯಮಿಗಳಾಗಲು ಅಗತ್ಯವಿರುವ ಕೌಶಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸುವ ಮಹತ್ವಕ್ಕಾಗಿ ಈ ದಿನವನ್ನು ಮೀಸಲಿಡಲಾಗಿದೆ. ವಿಶ್ವ ಯುವ ಕೌಶಲ್ಯ ದಿನವು ಲಿಂಗ ಅಸಮಾನತೆಯ ನಿರ್ಮೂಲನೆಯನ್ನು ಸಹ ಉತ್ತೇಜಿಸುತ್ತದೆ ಮತ್ತು ದುರ್ಬಲ ಜನರಿಗೆ ಸಂಪನ್ಮೂಲಗಳ ಒದಗಿಸುವಿಕೆಯನ್ನು ಖಚಿತಪಡಿಸುತ್ತದೆ. ಮತ್ತು ಸ್ವಯಂ ಉದ್ಯೋಗಕ್ಕೆ ಅಗತ್ಯವಾದ ಕೌಶಲ್ಯಗಳನ್ನು ಒದಗಿಸುವುದು ವಿಶ್ವ ಯುವ ಕೌಶಲ್ಯ ದಿನದ ಪ್ರಮುಖ ಗುರಿಯಾಗಿದೆ.

• ಸರ್ಕಾರಗಳು, ಉದ್ಯೋಗದಾತರು, ಕಾರ್ಮಿಕರ ಸಂಘಟನೆಗಳು ಮತ್ತು ಸಂಬಂಧಿತ ಮಧ್ಯಸ್ಥಗಾರರ ನಡುವೆ ಹೆಚ್ಚಿನ ಸಹಕಾರದ ಮೂಲಕ, ಉದ್ಯೋಗಸ್ಥ ಯುವಕರು ತಮ್ಮ ಕೌಶಲ್ಯವನ್ನು ಹೆಚ್ಚಿಸಬಹುದು. ಪ್ರಪಂಚದಾದ್ಯಂತ ಯುವಕರನ್ನು ಅವರು ಉದ್ಯೋಗ, ಕೆಲಸ ಪಡೆಯಲು ಮತ್ತು ಉದ್ಯಮಿಗಳಾಗಲು ಅಗತ್ಯವಿರುವ ಕೌಶಲ್ಯಗಳೊಂದಿಗೆ ಅವರನ್ನು ಸಜ್ಜುಗೊಳಿಸುವ ಮಹತ್ವಕ್ಕಾಗಿ ಈ ದಿನವನ್ನು ಆಚರಿಸಲಾಗುತ್ತದೆ.

• ಸುಸ್ಥಿರ ಅಭಿವೃದ್ಧಿಯನ್ನು ಸಾಧಿಸಲು, ಬಡತನವನ್ನು ಕಡಿಮೆ ಮಾಡಲು, ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ಉತ್ತೇಜಿಸಲು ಯುವ ಕೌಶಲ್ಯ ದಿನವನ್ನು ಆಚರಿಸಲಾಗುತ್ತದೆ.

• ವಿಶ್ವ ಯುವ ಕೌಶಲ್ಯದ ದಿನವು ಪ್ರಪಂಚದ ಭವಿಷ್ಯವಾದ ಯುವಜನರಿಗೆ ಅವರ ಜೀವನ ಮತ್ತು ಸಮುದಾಯಗಳನ್ನು ಉತ್ತಮ ರೀತಿಯಲ್ಲಿ ಅಭಿವೃದ್ಧಿಪಡಿಸಲು ಅಗತ್ಯವಿರುವ ಕೌಶಲ್ಯಗಳನ್ನು ನೀಡುವ ಮೇಲೆ ಕೇಂದ್ರೀಕೃತವಾಗಿದೆ.

ಭಾರತದಲ್ಲಿ ಯುವ ಕೌಶಲ್ಯ ಯೋಜನೆಗಳು:

ಪ್ರಧಾನಮಂತ್ರಿ ಕೌಶಲ್ ವಿಕಾಸ್” ಯೋಜನೆಯನ್ನು ಭಾರತದಲ್ಲಿ ಜುಲೈ 15, 2015 ರಲ್ಲಿ ವಿಶ್ವ ಯುವ ಕೌಶಲ್ಯ ದಿನದ ಸಂದರ್ಭದಲ್ಲಿ ಪ್ರಾರಂಭಿಸಲಾಯಿತು. ಈ ಯೋಜನೆಯಡಿಯಲ್ಲಿ, ದೇಶದ ಯುವಕರಿಗೆ ವಿವಿಧ ಕ್ಷೇತ್ರಗಳಲ್ಲಿ ಉಚಿತ ಕೈಗಾರಿಕ ತರಬೇತಿಯನ್ನು ನೀಡಲು ಸರ್ಕಾರದಿಂದ ಅವಕಾಶವನ್ನು ಕಲ್ಪಿಸಿಕೊಡಲಾಗಿದೆ. ಇದರ ಸಹಾಯದಿಂದ ಯುವಕರು ತರಬೇತಿ ಪಡೆದು ಉದ್ಯೋಗವನ್ನು ಪಡೆಯಬಹುದು. 14 ರಿಂದ 35 ವರ್ಷದೊಳಗಿನ ಯುವಕರು ಈ ಯೋಜನೆಯಡಿಯಲ್ಲಿ ತರಬೇತಿ ಪಡೆಯಬಹುದು. ತರಬೇತಿಗಾಗಿ ನೋಂದಣಿಯನ್ನು ಮೂರು ತಿಂಗಳು, ಆರು ತಿಂಗಳು ಮತ್ತು ಒಂದು ವರ್ಷದದವರೆಗೆ ಮಾಡಬಹುದು. ತರಬೇತಿಯನ್ನು ಪೂರ್ಣಗೊಳಿಸಿದ ನಂತರ, ಸರ್ಕಾರದ ವತಿಯಿಂದ ಪ್ರಮಾಣಪತ್ರವನ್ನು ಸಹ ನೀಡಲಾಗುತ್ತದೆ.

ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್​​ ಮಾಡಿ: 

ತಾಜಾ ಸುದ್ದಿ
ದೆಹಲಿ ಮೆಟ್ರೋದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪ್ರಯಾಣ
ದೆಹಲಿ ಮೆಟ್ರೋದಲ್ಲಿ ಮಾಜಿ ಪ್ರಧಾನಿ ಹೆಚ್​ಡಿ ದೇವೇಗೌಡ ಪ್ರಯಾಣ
ದೊಡ್ಡ ಪರದೆ ಮೇಲೆ ‘ಮಾರ್ಟಿನ್​’ ಟ್ರೇಲರ್​ ಬಿಡುಗಡೆ ಮಾಡಿದ್ದು ಯಾಕೆ?
ದೊಡ್ಡ ಪರದೆ ಮೇಲೆ ‘ಮಾರ್ಟಿನ್​’ ಟ್ರೇಲರ್​ ಬಿಡುಗಡೆ ಮಾಡಿದ್ದು ಯಾಕೆ?
ತುಮಕೂರು: ಆಟವಾಡ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನ; ಜಸ್ಟ್​ ಮಿಸ್​
ತುಮಕೂರು: ಆಟವಾಡ್ತಿದ್ದ ಮಕ್ಕಳನ್ನು ಅಪಹರಿಸಲು ಯತ್ನ; ಜಸ್ಟ್​ ಮಿಸ್​
ಪಿಎಸ್​ಐ ಅನುಮಾನಾಸ್ಪದ ಸಾವು: ಆಡಿಯೋ ಬಗ್ಗೆ ಸ್ನೇಹಿತನ ಸ್ಫೋಟಕ ಹೇಳಿಕೆ
ಪಿಎಸ್​ಐ ಅನುಮಾನಾಸ್ಪದ ಸಾವು: ಆಡಿಯೋ ಬಗ್ಗೆ ಸ್ನೇಹಿತನ ಸ್ಫೋಟಕ ಹೇಳಿಕೆ
ಡ್ರೋಣ್​ನಲ್ಲಿ ಜೋಗ್​ ಫಾಲ್ಸ್​ ರಮಣೀಯ ದೃಶ್ಯ..ಸೊಬಗನ್ನು ಕಣ್ತುಂಬಿಕೊಳ್ಳಿ
ಡ್ರೋಣ್​ನಲ್ಲಿ ಜೋಗ್​ ಫಾಲ್ಸ್​ ರಮಣೀಯ ದೃಶ್ಯ..ಸೊಬಗನ್ನು ಕಣ್ತುಂಬಿಕೊಳ್ಳಿ
‘ಡಿಎಸ್​ ಬಾಸ್​’ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್
‘ಡಿಎಸ್​ ಬಾಸ್​’ ಪೋಸ್ಟರ್​ಗೆ ಹಾಲಿನ ಅಭಿಷೇಕ ಮಾಡಿದ ಧ್ರುವ ಸರ್ಜಾ ಫ್ಯಾನ್ಸ್
ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಉಸ್ತುವಾರಿ ಬೆಂಗಳೂರಿಗೆ ದೌಡು!
ಕಾಂಗ್ರೆಸ್​ನಲ್ಲಿ ಮಹತ್ವದ ಬೆಳವಣಿಗೆ: ಉಸ್ತುವಾರಿ ಬೆಂಗಳೂರಿಗೆ ದೌಡು!
ಮೃತ PSI ಪರಶುರಾಮ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ: ಪರಮೇಶ್ವರ್‌ ಘೋಷಣೆ
ಮೃತ PSI ಪರಶುರಾಮ ಪತ್ನಿಗೆ ಸರ್ಕಾರಿ ಕೆಲಸ, ಪರಿಹಾರ: ಪರಮೇಶ್ವರ್‌ ಘೋಷಣೆ
ವಯನಾಡು ಮಹಾದುರಂತ: ಓಡಿ ಬಂದು ಒಡತಿ ಬಿಗಿದಪ್ಪಿ ಸಾಕು ನಾಯಿ ಮೂಕ ರೋಧನೆ
ವಯನಾಡು ಮಹಾದುರಂತ: ಓಡಿ ಬಂದು ಒಡತಿ ಬಿಗಿದಪ್ಪಿ ಸಾಕು ನಾಯಿ ಮೂಕ ರೋಧನೆ
‘ಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಸಂಭ್ರಮ
‘ಮಾರ್ಟಿನ್’ ಟ್ರೈಲರ್ ಬಿಡುಗಡೆ: ಧ್ರುವ ಸರ್ಜಾ ಅಭಿಮಾನಿಗಳ ಸಂಭ್ರಮ