AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Qatar Mail: ಬೇರೆ ವಾಟ್ಸಪ್ ಗ್ರೂಪ್​ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು

Women‘s Day 2022 : "ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ.’’

Qatar Mail: ಬೇರೆ ವಾಟ್ಸಪ್ ಗ್ರೂಪ್​ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು
ಶ್ರೀದೇವಿ ಕಳಸದ
|

Updated on: Mar 04, 2022 | 1:39 PM

Share

ಕತಾರ್ ಮೇಲ್ | Qatar Mail : ಕೊರೊನಾ ಕತಾರಿಗೆ ವಕ್ಕರಿಸಿ ವರ್ಷಕ್ಕೂ ಮೇಲಾಗಿತ್ತು. ಲಾಕ್ಡೌನ್ ಮುಗಿದು ಹೊರಗೆ ಕಾಲಿಡಲು ಅವಕಾಶ ಸಿಕ್ಕಾಗಲೆಲ್ಲಾ ಫೋಟೋಗ್ರಾಫರ್​ಗಳು ಚಿತ್ರ ತೆಗೆಯಲು ಹೊರಗೆ ಹೋಗುವುದು ಮತ್ತೊಮ್ಮೆ ಪ್ರಾರಂಭವಾಗಿತ್ತು. ಅಂತಹ ಒಂದು ಸಮಯದಲ್ಲಿ ಫೋಟೋ ತೆಗೆಯಲು ಹೋದ ನನಗೆ ಹುಡುಗನೊಬ್ಬ ಹಳೆಯ ಫೋಟೋವಾಕ್ ಗುಂಪಿನ ಹಿರಿಯರೊಬ್ಬರು ನನ್ನ ಬಗ್ಗೆ ಬಹಳ ವಿಚಾರಿಸಿಕೊಂಡರೆಂದು ತಿಳಿಸಿದ. ಆ ಫೋಟೋವಾಕ್ ಗುಂಪಿನಲ್ಲಿದ್ದವರ ಮನಸ್ಥಿತಿಗೆ ಬೇಸತ್ತು ಅವರ ಗುಂಪಿನಿಂದ ದೂರವುಳಿದು ಸುಮಾರು ಎರಡು ವರ್ಷಕ್ಕೂ ಮೇಲಾಗಿತ್ತು. ಈಗ ಅಚಾನಕ್ ನನ್ನ ಬಗ್ಗೆ ವಿಚಾರಿಸಿಕೊಳ್ಳುವಂಥಾದ್ದೇನಿದೆ, ನೇರವಾಗಿ ನನಗೇ ಫೋನಾಯಿಸಬಹುದಿತ್ತಲ್ಲ ಎನ್ನಿಸಿದರೂ ಅಹಂ ನಡುವೆ ಬಂದಿರಬೇಕು ಎಂದುಕೊಂಡು ಸುಮ್ಮನಾದೆ. ಅಷ್ಟಕ್ಕೂ ಎರಡು ವರ್ಷಗಳಿಂದಲೂ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯೊಂದಕ್ಕೆ ಆ ವ್ಯಕ್ತಿಯಿಂದಲೇ ಉತ್ತರವೂ ದೊರಕಬೇಕಿತ್ತು. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

(ಪತ್ರ 5, ಭಾಗ 2)

ಸಂಬಂಧಿಕರನ್ನು, ಗೆಳೆಯರನ್ನು, ಪರಿಚಯದ ವಲಯದಲ್ಲಿ ಸಾಕಷ್ಟು ಮಂದಿಯನ್ನು ಕೊರೊನಾ ಬಲಿ ತೆಗೆದುಕೊಳ್ಳುತ್ತಿತ್ತು. ಇಂದು ಮಾತನಾಡಿದವರು, ನಾಳೆ ಇರುತ್ತಿರಲಿಲ್ಲ. ನಾಳೆ ನಾನು ಮರೆಯಾಗುತ್ತೇನೋ ಅಥವಾ ಆ ವ್ಯಕ್ತಿಯೋ ಎಂದು ಮನಸ್ಸು ಚುಚ್ಚುತ್ತಲೇ ಇತ್ತು. ಮೂರ್ನಾಲ್ಕು ದಿನಗಳವರೆಗೆ “ಟು ಡು ಆರ್ ನಾಟ್ ಟು ಡು” ಎಂದು ಹತ್ತಾರು ಬಾರಿ ಯೋಚಿಸಿ, ಆ ಹಿರಿಯ ಫೋಟೋಗ್ರಾಫರ್​ಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದ ಆ ವ್ಯಕ್ತಿ ಇಷ್ಟು ವರ್ಷಗಳಾದ ಮೇಲೆ ಕರೆ ಮಾಡುತ್ತಿರುವ ಕಾರಣ ಕೇಳಿ, ಅವರ ಫೋಟೋವಾಕ್ ಗುಂಪಿನೊಂದಿಗೆ ಮಾತನಾಡುವುದು ನಿಲ್ಲಿಸಿದ್ದು ನಾನೇ ಎನ್ನುವುದನ್ನು ನೆನಪಿಸಿದರು. ದನಿಯಲ್ಲಿ ಅದೇ ವ್ಯಂಗ್ಯ ತುಂಬಿತ್ತು. ನಾನು ಹೌದೆಂದು ಒಪ್ಪಿಕೊಂಡು, ನನ್ನನ್ನು ಬೇರೆ ಗುಂಪಿಗೆ ಹಾಕಿ ಪರಕೀಯಳ ಹಾಗೆ ನಡೆಸಿಕೊಂಡಿದ್ದರ ಕಾರಣ ಕೇಳಿದೆ. ವಿಷಯವನ್ನು ಆತ ಬೇರೆಡೆಗೆ ಹೊರಳಿಸುವ ಪ್ರಯತ್ನಪಟ್ಟರೂ, ನಾನು ಪಟ್ಟುಹಿಡಿದೆ. ಕೊರೊನಾ ಸಮಯ, ನಾಳೆ ನಾನಿರುತ್ತೇನೋ, ಆತನಿರುತ್ತಾನೋ, ಅಸಲಿ ವಿಚಾರ ತಿಳಿದರೆ ಮನಸ್ಸು ಹಗುರವಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಕಾಫ್ಕಾ ಕಥೆ ‘ಹಳೆಯ ಹಸ್ತಪ್ರತಿ’ ಅನುವಾದಿಸಿದ್ದಾರೆ ಎಚ್ಎಸ್ ರಾಘವೇಂದ್ರ ರಾವ್

ನನ್ನ ವರ್ತನೆಯನ್ನು ಮಾನಿಟರ್ ಮಾಡುವ ಸಲುವಾಗಿ ನನ್ನನ್ನು ಬೇರೆ ವಾಟ್ಸಾಪ್ ಗ್ರೂಪಿಗೆ ಹಾಕಲಾಗಿತ್ತು ಎನ್ನುವ ಸತ್ಯವನ್ನು ಆತ ಬಹಿರಂಗ ಪಡಿಸಿದಾಗ ಅಚ್ಚರಿಯೇನೂ ಆಗಲಿಲ್ಲ. “ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ. ಇಟ್ ವಾಸ್ ಮೆನ್ಸ್ ಟಾಕ್, ಆ ಥರದ ಮಾತುಕತೆ ನಮಗೆ ಅದೇ ಮೊದಲೇನಲ್ಲ. ಅದೇ ಥರದ, ಅದಕ್ಕಿಂತಲೂ ಬೇರೆ ಥರದ ಮಾತುಗಳು ನಮ್ಮ ನಡುವೆ ಆಗಾಗ ನಡೆಯುತ್ತಲೇ ಇರುತ್ತವೆ…” ಎಂದು ಆ ವ್ಯಕ್ತಿ ಸಮರ್ಥಿಸಿಕೊಳ್ಳುತ್ತಿದ್ದರೆ ನಾನು ಅರೆಕ್ಷಣ ಅವಾಕ್ಕಾದೆ.

ಪುರುಷರ ಮಾತುಕತೆ: ನಾನು ಮುಂಚೆ ಊಹಿಸಿದ್ದ ಕಾರಣ ಸರಿಯಾಗಿಯೇ ಇತ್ತು. ಅದೇ ಫೋಟೋವಾಕ್ ಗುಂಪಿನ ಹಿರಿಯ ಗೆಳೆಯನೊಬ್ಬ ಆ ಘಟನೆ ನಡೆದ ಒಂದಷ್ಟು ದಿನಗಳ ಬಳಿಕ, ‘ನೀನು ತುಂಬಾ ಸೆನ್ಸಿಟಿವ್ ಹುಡುಗಿ, ಸುಮ್ಮನೆ ಇಲ್ಲದ್ದೆಲ್ಲಾ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಿದ್ದೀಯೆ,’ ಎಂದು ಬುದ್ಧಿವಾದ ಹೇಳಿದ್ದು ನೆನಪಾಗಿ ಮನಸ್ಸು ಮತ್ತಷ್ಟು ವಿಚಲಿತವಾಯಿತು. ನಾನು ಮುಖ್ಯ ವಾಟ್ಸಾಪ್ ಗುಂಪಿನಲ್ಲಿ ಚರ್ಚೆ ಮಾಡುವುದನ್ನು ತಪ್ಪಿಸಲೆಂದೇ ನಾಲ್ಕು ಹುಡುಗರ ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ಅದರಲ್ಲಿ ನನ್ನ ಹೆಸರನ್ನೂ ಸೇರಿಸಿ, ಅದನ್ನು ನೋಡಿಕೊಳ್ಳುತ್ತಿದ್ದ ಇಬ್ಬರು ಹಿರಿಯ ಫೋಟೋಗ್ರಾಫರ್ ಗಳು, “ಬಿ ಎ ಬ್ಯಾಕ್ ಬೆಂಚರ್ ಫಾರ್ ಸಮ್ ಟೈಮ್,” ಎಂದು ಸಲಹೆ ನೀಡಿದ್ದು ನೆನಪಾಯಿತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ

Follow Us
Shridevi Kalasad
Shridevi Kalasad

ಶ್ರೀದೇವಿ ಕಳಸದ : ಮುಖ್ಯ ಉಪಸಂಪಾದಕಿ. ವಿಜಯ ಕರ್ನಾಟಕ, ಸುವರ್ಣ ನ್ಯೂಸ್, ಪ್ರಜಾವಾಣಿ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಒಟ್ಟು 16 ವರ್ಷಗಳ ಅನುಭವ. ಸಂಗೀತ, ಸಾಹಿತ್ಯ ಮತ್ತು ಲಲಿತ ಕಲೆಗಳಲ್ಲಿ ವಿಶೇಷ ಆಸಕ್ತಿ.

Read More
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಕಿಡ್ನಿ ಆರೋಗ್ಯವಾಗಿರಬೇಕು ಅಂದ್ರೆ ಈ ಸಲಹೆಗಳನ್ನು ತಪ್ಪದೆ ಪಾಲಿಸಬೇಕು
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
ಶೇ. 55 ಅಂಕ ಪಡೆದ ಮಗನಿಗೆ ಅಪ್ಪ-ಅಮ್ಮ ಮಾಡಿದ್ದೇನು?
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
‘ಪೆದ್ದಿ’ ಚಿತ್ರದಲ್ಲಿ ಶಿವರಾಜ್​ಕುಮಾರ್ ಗತ್ತು ನೋಡಿ; ಮೇಕಿಂಗ್ ವಿಡಿಯೋ
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
ಮಂಗಳೂರು: ವಿಮಾನಗಳನ್ನ ಆಕಾಶದಲ್ಲೇ ಅಲೆದಾಡಿಸುತ್ತಿರುವ ಮಳೆರಾಯ!
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
‘ಲವ್ ಮಾಕ್ಟೆಲ್’ ಸೆಟ್​ನಲ್ಲಿ ದಿಲೀಪ್: ವಿಡಿಯೋ ಹಂಚಿಕೊಂಡ ಡಾರ್ಲಿಂಗ್ ಕೃಷ್ಣ
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಮಧ್ಯಪ್ರದೇಶದ ದೇವಾಸ್ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; ಮೂವರು ಸಾವು
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಕೇಸರಿ ಶಾಲು ನಿಷೇಧಿಸುವ ಅಧಿಕಾರ ಕೊಟ್ಟಿದ್ಯಾರು? ಪ್ರಲ್ಹಾದ್​ ಜೋಶಿ ಕಿಡಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಗ್ರೇಟರ್ ಬೆಂಗಳೂರು ಪ್ರಾಧಿಕಾರ ಚುನಾವಣೆ ಮೇಲೂ SIR ನೆರಳು!
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಯುವಕರಿಂದ ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ
ವಚನಾನಂದಶ್ರೀಗಳ ವೈದ್ಯಕೀಯ ಪರೀಕ್ಷೆ ಬಗ್ಗೆ ಡಾಕ್ಟರ್ ಸ್ಫೋಟಕ ಹೇಳಿಕೆ