Sign In

By signing in or creating an account, you agree with Associated Broadcasting Company's Terms & Conditions and Privacy Policy.

Qatar Mail: ಬೇರೆ ವಾಟ್ಸಪ್ ಗ್ರೂಪ್​ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು

Women‘s Day 2022 : "ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ.’’

Qatar Mail: ಬೇರೆ ವಾಟ್ಸಪ್ ಗ್ರೂಪ್​ಗೆ ಹಾಕಿ ನನ್ನನ್ನು ಪರಕೀಯಳಂತೆ ಕಂಡರು
Follow us
ಶ್ರೀದೇವಿ ಕಳಸದ
|

Updated on: Mar 04, 2022 | 1:39 PM

ಕತಾರ್ ಮೇಲ್ | Qatar Mail : ಕೊರೊನಾ ಕತಾರಿಗೆ ವಕ್ಕರಿಸಿ ವರ್ಷಕ್ಕೂ ಮೇಲಾಗಿತ್ತು. ಲಾಕ್ಡೌನ್ ಮುಗಿದು ಹೊರಗೆ ಕಾಲಿಡಲು ಅವಕಾಶ ಸಿಕ್ಕಾಗಲೆಲ್ಲಾ ಫೋಟೋಗ್ರಾಫರ್​ಗಳು ಚಿತ್ರ ತೆಗೆಯಲು ಹೊರಗೆ ಹೋಗುವುದು ಮತ್ತೊಮ್ಮೆ ಪ್ರಾರಂಭವಾಗಿತ್ತು. ಅಂತಹ ಒಂದು ಸಮಯದಲ್ಲಿ ಫೋಟೋ ತೆಗೆಯಲು ಹೋದ ನನಗೆ ಹುಡುಗನೊಬ್ಬ ಹಳೆಯ ಫೋಟೋವಾಕ್ ಗುಂಪಿನ ಹಿರಿಯರೊಬ್ಬರು ನನ್ನ ಬಗ್ಗೆ ಬಹಳ ವಿಚಾರಿಸಿಕೊಂಡರೆಂದು ತಿಳಿಸಿದ. ಆ ಫೋಟೋವಾಕ್ ಗುಂಪಿನಲ್ಲಿದ್ದವರ ಮನಸ್ಥಿತಿಗೆ ಬೇಸತ್ತು ಅವರ ಗುಂಪಿನಿಂದ ದೂರವುಳಿದು ಸುಮಾರು ಎರಡು ವರ್ಷಕ್ಕೂ ಮೇಲಾಗಿತ್ತು. ಈಗ ಅಚಾನಕ್ ನನ್ನ ಬಗ್ಗೆ ವಿಚಾರಿಸಿಕೊಳ್ಳುವಂಥಾದ್ದೇನಿದೆ, ನೇರವಾಗಿ ನನಗೇ ಫೋನಾಯಿಸಬಹುದಿತ್ತಲ್ಲ ಎನ್ನಿಸಿದರೂ ಅಹಂ ನಡುವೆ ಬಂದಿರಬೇಕು ಎಂದುಕೊಂಡು ಸುಮ್ಮನಾದೆ. ಅಷ್ಟಕ್ಕೂ ಎರಡು ವರ್ಷಗಳಿಂದಲೂ ಮನಸ್ಸಿನಲ್ಲಿ ಕೊರೆಯುತ್ತಿದ್ದ ಪ್ರಶ್ನೆಯೊಂದಕ್ಕೆ ಆ ವ್ಯಕ್ತಿಯಿಂದಲೇ ಉತ್ತರವೂ ದೊರಕಬೇಕಿತ್ತು. ಚೈತ್ರಾ ಅರ್ಜುನಪುರಿ, ಪತ್ರಕರ್ತೆ, ನೈಟ್ ಫೋಟೋಗ್ರಾಫರ್ (Chaitra Arjunpuri)

(ಪತ್ರ 5, ಭಾಗ 2)

ಸಂಬಂಧಿಕರನ್ನು, ಗೆಳೆಯರನ್ನು, ಪರಿಚಯದ ವಲಯದಲ್ಲಿ ಸಾಕಷ್ಟು ಮಂದಿಯನ್ನು ಕೊರೊನಾ ಬಲಿ ತೆಗೆದುಕೊಳ್ಳುತ್ತಿತ್ತು. ಇಂದು ಮಾತನಾಡಿದವರು, ನಾಳೆ ಇರುತ್ತಿರಲಿಲ್ಲ. ನಾಳೆ ನಾನು ಮರೆಯಾಗುತ್ತೇನೋ ಅಥವಾ ಆ ವ್ಯಕ್ತಿಯೋ ಎಂದು ಮನಸ್ಸು ಚುಚ್ಚುತ್ತಲೇ ಇತ್ತು. ಮೂರ್ನಾಲ್ಕು ದಿನಗಳವರೆಗೆ “ಟು ಡು ಆರ್ ನಾಟ್ ಟು ಡು” ಎಂದು ಹತ್ತಾರು ಬಾರಿ ಯೋಚಿಸಿ, ಆ ಹಿರಿಯ ಫೋಟೋಗ್ರಾಫರ್​ಗೆ ಕರೆ ಮಾಡಿದೆ. ಕರೆ ಸ್ವೀಕರಿಸಿದ ಆ ವ್ಯಕ್ತಿ ಇಷ್ಟು ವರ್ಷಗಳಾದ ಮೇಲೆ ಕರೆ ಮಾಡುತ್ತಿರುವ ಕಾರಣ ಕೇಳಿ, ಅವರ ಫೋಟೋವಾಕ್ ಗುಂಪಿನೊಂದಿಗೆ ಮಾತನಾಡುವುದು ನಿಲ್ಲಿಸಿದ್ದು ನಾನೇ ಎನ್ನುವುದನ್ನು ನೆನಪಿಸಿದರು. ದನಿಯಲ್ಲಿ ಅದೇ ವ್ಯಂಗ್ಯ ತುಂಬಿತ್ತು. ನಾನು ಹೌದೆಂದು ಒಪ್ಪಿಕೊಂಡು, ನನ್ನನ್ನು ಬೇರೆ ಗುಂಪಿಗೆ ಹಾಕಿ ಪರಕೀಯಳ ಹಾಗೆ ನಡೆಸಿಕೊಂಡಿದ್ದರ ಕಾರಣ ಕೇಳಿದೆ. ವಿಷಯವನ್ನು ಆತ ಬೇರೆಡೆಗೆ ಹೊರಳಿಸುವ ಪ್ರಯತ್ನಪಟ್ಟರೂ, ನಾನು ಪಟ್ಟುಹಿಡಿದೆ. ಕೊರೊನಾ ಸಮಯ, ನಾಳೆ ನಾನಿರುತ್ತೇನೋ, ಆತನಿರುತ್ತಾನೋ, ಅಸಲಿ ವಿಚಾರ ತಿಳಿದರೆ ಮನಸ್ಸು ಹಗುರವಾಗುತ್ತದೆ ಎಂದು ತಿಳಿಸಿದೆ.

ಇದನ್ನೂ ಓದಿ : Literature: ನೆರೆನಾಡ ನುಡಿಯೊಳಗಾಡಿ; ಕಾಫ್ಕಾ ಕಥೆ ‘ಹಳೆಯ ಹಸ್ತಪ್ರತಿ’ ಅನುವಾದಿಸಿದ್ದಾರೆ ಎಚ್ಎಸ್ ರಾಘವೇಂದ್ರ ರಾವ್

ನನ್ನ ವರ್ತನೆಯನ್ನು ಮಾನಿಟರ್ ಮಾಡುವ ಸಲುವಾಗಿ ನನ್ನನ್ನು ಬೇರೆ ವಾಟ್ಸಾಪ್ ಗ್ರೂಪಿಗೆ ಹಾಕಲಾಗಿತ್ತು ಎನ್ನುವ ಸತ್ಯವನ್ನು ಆತ ಬಹಿರಂಗ ಪಡಿಸಿದಾಗ ಅಚ್ಚರಿಯೇನೂ ಆಗಲಿಲ್ಲ. “ನಾವು ಗಂಡಸರು ಚರ್ಚೆ ಮಾಡ್ತಿದ್ವಿ, ನೀನು ಮಧ್ಯೆ ಬಂದು ದೊಡ್ಡ ಫೆಮಿನಿಸ್ಟ್ ಥರ ಮಾತಾಡಿದ್ದು ನಮಗ್ಯಾರಿಗೂ ಇಷ್ಟವಾಗ್ಲಿಲ್ಲ. ನಿನ್ನ ಮಾತನ್ನು ನಮಗೆ ಜೀರ್ಣಿಸಿಕೊಳ್ಳೋಕಾಗ್ಲಿಲ್ಲ. ಇಟ್ ವಾಸ್ ಮೆನ್ಸ್ ಟಾಕ್, ಆ ಥರದ ಮಾತುಕತೆ ನಮಗೆ ಅದೇ ಮೊದಲೇನಲ್ಲ. ಅದೇ ಥರದ, ಅದಕ್ಕಿಂತಲೂ ಬೇರೆ ಥರದ ಮಾತುಗಳು ನಮ್ಮ ನಡುವೆ ಆಗಾಗ ನಡೆಯುತ್ತಲೇ ಇರುತ್ತವೆ…” ಎಂದು ಆ ವ್ಯಕ್ತಿ ಸಮರ್ಥಿಸಿಕೊಳ್ಳುತ್ತಿದ್ದರೆ ನಾನು ಅರೆಕ್ಷಣ ಅವಾಕ್ಕಾದೆ.

ಪುರುಷರ ಮಾತುಕತೆ: ನಾನು ಮುಂಚೆ ಊಹಿಸಿದ್ದ ಕಾರಣ ಸರಿಯಾಗಿಯೇ ಇತ್ತು. ಅದೇ ಫೋಟೋವಾಕ್ ಗುಂಪಿನ ಹಿರಿಯ ಗೆಳೆಯನೊಬ್ಬ ಆ ಘಟನೆ ನಡೆದ ಒಂದಷ್ಟು ದಿನಗಳ ಬಳಿಕ, ‘ನೀನು ತುಂಬಾ ಸೆನ್ಸಿಟಿವ್ ಹುಡುಗಿ, ಸುಮ್ಮನೆ ಇಲ್ಲದ್ದೆಲ್ಲಾ ಯೋಚಿಸಿ ತಲೆ ಕೆಡಿಸಿಕೊಳ್ಳುತ್ತಿದ್ದೀಯೆ,’ ಎಂದು ಬುದ್ಧಿವಾದ ಹೇಳಿದ್ದು ನೆನಪಾಗಿ ಮನಸ್ಸು ಮತ್ತಷ್ಟು ವಿಚಲಿತವಾಯಿತು. ನಾನು ಮುಖ್ಯ ವಾಟ್ಸಾಪ್ ಗುಂಪಿನಲ್ಲಿ ಚರ್ಚೆ ಮಾಡುವುದನ್ನು ತಪ್ಪಿಸಲೆಂದೇ ನಾಲ್ಕು ಹುಡುಗರ ಒಂದು ವಾಟ್ಸಾಪ್ ಗ್ರೂಪ್ ರಚಿಸಿ, ಅದರಲ್ಲಿ ನನ್ನ ಹೆಸರನ್ನೂ ಸೇರಿಸಿ, ಅದನ್ನು ನೋಡಿಕೊಳ್ಳುತ್ತಿದ್ದ ಇಬ್ಬರು ಹಿರಿಯ ಫೋಟೋಗ್ರಾಫರ್ ಗಳು, “ಬಿ ಎ ಬ್ಯಾಕ್ ಬೆಂಚರ್ ಫಾರ್ ಸಮ್ ಟೈಮ್,” ಎಂದು ಸಲಹೆ ನೀಡಿದ್ದು ನೆನಪಾಯಿತು.

(ಮುಂದಿನ ಭಾಗಕ್ಕಾಗಿ ನಿರೀಕ್ಷಿಸಿ)

ಭಾಗ 1 : Qatar Mail: ಪುರುಷ ಜಗತ್ತಿನೊಳಗೆ ಛಾಯಾಗ್ರಾಹಕಿಯ ಮೌನಯುದ್ಧ

ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಪೊಲೀಸರನ್ನು ಸ್ವತಂತ್ರವಾಗಿ ಕೆಲಸ ಮಾಡಲು ಬಿಡಿ: ಪ್ರತಾಪ್ ಸಿಂಹ
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಗ್ಲೋಬಲ್ ಕನ್ನಡಿಗನಿಗೆ ಯೂಟ್ಯೂಬ್​ನಿಂದ ಬರ್ತಿರೋದೆಷ್ಟು?
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಹಾರ್ದಿಕ್ ಪಾಂಡ್ಯ ನಿರ್ಧಾರಕ್ಕೆ ಅಸಮಾಧಾನ ಹೊರಹಾಕಿದ ಸೂರ್ಯಕುಮಾರ್ ಯಾದವ್
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ಪೊಲೀಸರಿಗೆ ದೂರು ನೀಡುವುದು ಸಹ ಗೊತ್ತಿರದ ಮಹಿಳೆಯ ಕುಟುಂಬ
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ನಿವೇದಿತಾ ಕಥೆ ಕೇಳಿ ಗಟ್ಟಿ ಮನಸ್ಸಿನ ವ್ಯಕ್ತಿಗಳ ಕಣ್ಣಲ್ಲೂ ಬಂತು ನೀರು
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
ಶಿವನಿಗೆ ಪೂಜಾ ಸಮಯದಲ್ಲಿ ಇಡಬಾರದ ವಸ್ತು ಯಾವುದು ಗೊತ್ತಾ?
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
Daily Horoscope: ಸೂರ್ಯ ಮೀನ ರಾಶಿಗೆ, ಚಂದ್ರ ಮಿಥುನ ರಾಶಿಯಲ್ಲಿ ಸಂಚಾರ
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
ಕಾರ್ ಮಂಚದ ಮೇಲೆ ಮಲಗಿ ಯುವಕನ ಸವಾರಿ; ಇದೆಂಥಾ ಶೋಕಿ ಎಂದ ನೆಟ್ಟಿಗರು
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
IAF ಪೈಲಟ್ ಸಿದ್ಧಾರ್ಥ್ ಯಾದವ್ ಶವದೆದುರು ಬಿಕ್ಕಿ ಬಿಕ್ಕಿ ಅತ್ತ ಭಾವಿ ಪತ್ನಿ
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು
50 ಸಾವಿರ ರೂಪಾಯಿ ನೀಡಿದರು: ದರ್ಶನ್ ಸಹಾಯದ ಬಗ್ಗೆ ಶೈಲಶ್ರೀ ಮಾತು