AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

1 ಗಡಿ, 3 ಶತ್ರುಗಳು; ಆಪರೇಷನ್ ಸಿಂಧೂರ್‌ನಲ್ಲಿ ಪಾಕ್ ಮಾತ್ರ ವೈರಿಯಾಗಿರಲಿಲ್ಲ ಎಂದ ಸೇನೆ

ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ ಅವರು ಪಾಕಿಸ್ತಾನ-ಚೀನಾ ಮಿಲಿಟರಿ ಸಮನ್ವಯ ಮತ್ತು ಟರ್ಕಿಯ ಬೆಂಬಲ ಹೆಚ್ಚಾಗುವ ಬಗ್ಗೆ ಎಚ್ಚರಿಸಿದ್ದಾರೆ. ಭಾರತವು ತನ್ನ ವಾಯು ರಕ್ಷಣೆ ಮತ್ತು ಕಾರ್ಯತಂತ್ರದ ಸಿದ್ಧತೆಯನ್ನು ತ್ವರಿತವಾಗಿ ಹೆಚ್ಚಿಸುವಂತೆ ಅವರು ಒತ್ತಾಯಿಸಿದ್ದಾರೆ. ಪಾಕಿಸ್ತಾನದ ಮಿಲಿಟರಿ ಹಾರ್ಡ್‌ವೇರ್‌ನ ಶೇ. 81ರಷ್ಟು ಚೀನಾದಿಂದ ಬಂದಿದೆ ಎಂದು ಡೆಪ್ಯೂಟಿ ಸಿಒಎಎಸ್ ಬಹಿರಂಗಪಡಿಸಿದೆ. ಇದು ಪಾಕಿಸ್ತಾನವನ್ನು ಚೀನಾದ ರಕ್ಷಣಾ ತಂತ್ರಜ್ಞಾನದ ಪರೀಕ್ಷಾ ಮೈದಾನವಾಗಿ ಪರಿಣಾಮಕಾರಿಯಾಗಿ ಪರಿವರ್ತಿಸುತ್ತದೆ.

1 ಗಡಿ, 3 ಶತ್ರುಗಳು; ಆಪರೇಷನ್ ಸಿಂಧೂರ್‌ನಲ್ಲಿ ಪಾಕ್ ಮಾತ್ರ ವೈರಿಯಾಗಿರಲಿಲ್ಲ ಎಂದ ಸೇನೆ
Rahul R Singh
ಸುಷ್ಮಾ ಚಕ್ರೆ
|

Updated on:Jul 04, 2025 | 5:26 PM

Share

ನವದೆಹಲಿ, ಜುಲೈ 4: ನವಯುಗದ ಮಿಲಿಟರಿ ತಂತ್ರಜ್ಞಾನಗಳ ಕುರಿತು FICCI ಆಯೋಜಿಸಿದ್ದ ಉನ್ನತ ಮಟ್ಟದ ರಕ್ಷಣಾ ಕಾರ್ಯಕ್ರಮದಲ್ಲಿ ಇಂದು ಮಾತನಾಡಿದ ಭಾರತದ ಸೇನಾ ಸಿಬ್ಬಂದಿಯ ಉಪ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್. ಸಿಂಗ್ (Rahul R Singh), ಪಾಕಿಸ್ತಾನ, ಚೀನಾ ಮತ್ತು ಟರ್ಕಿ ನಡುವೆ ಬೆಳೆಯುತ್ತಿರುವ ಮಿಲಿಟರಿ ಸಹಯೋಗದ ಬಗ್ಗೆ ಗಂಭೀರ ಕಳವಳ ವ್ಯಕ್ತಪಡಿಸಿದ್ದಾರೆ. ಆಪರೇಷನ್ ಸಿಂಧೂರ್ (Operation Sindoor) ಸಮಯದಲ್ಲಿ ಈ 3 ದೇಶಗಳು ಭಾರತಕ್ಕೆ ವೈರಿಗಳಾಗಿದ್ದವು ಎಂದಿದ್ದಾರೆ. ಭಾರತವು ತನ್ನ ವಾಯು ರಕ್ಷಣೆ ಮತ್ತು ತಾಂತ್ರಿಕ ಸಾಮರ್ಥ್ಯಗಳನ್ನು ಬಲಪಡಿಸುವ ತುರ್ತು ಅಗತ್ಯವನ್ನು ಅವರು ಒತ್ತಿ ಹೇಳಿದ್ದಾರೆ.

ಪಾಕಿಸ್ತಾನದ ಮಿಲಿಟರಿ ಹಾರ್ಡ್‌ವೇರ್‌ನ ಬಹುಪಾಲು ಅಂದರೆ ಶೇ. 81ರಷ್ಟು ಚೀನಾ ಮೂಲದ್ದಾಗಿದ್ದು, ಚೀನಾ ತನ್ನ ಮಿಲಿಟರಿ ತಂತ್ರಜ್ಞಾನವನ್ನು ಪರೀಕ್ಷಿಸಲು ದೇಶವನ್ನು “ಲೈವ್ ಲ್ಯಾಬ್”ನಂತೆ ಬಳಸುತ್ತಿದೆ ಎಂದು ಭಾರತೀಯ ಸೇನೆ ತಿಳಿಸಿದೆ. ಸೇನೆಯ ಉಪ ಮುಖ್ಯಸ್ಥ ಸೇನಾ ಸಿಬ್ಬಂದಿ ಲೆಫ್ಟಿನೆಂಟ್ ಜನರಲ್ ರಾಹುಲ್ ಆರ್ ಸಿಂಗ್ ಅವರು ಪಾಕಿಸ್ತಾನದೊಂದಿಗೆ ಇತ್ತೀಚೆಗೆ ನಡೆದ ಗಡಿಯಾಚೆಗಿನ ಉದ್ವಿಗ್ನತೆಯ ವಿವರಣೆಯನ್ನು ನೀಡಿದರು.

ಇದನ್ನೂ ಓದಿ: ಭಯೋತ್ಪಾದನೆ ವಿರುದ್ಧ ಭಾರತದೊಂದಿಗೆ ಐತಿಹಾಸಿಕ ಪಾಲುದಾರಿಕೆಗೆ ಪಾಕಿಸ್ತಾನ ಸಿದ್ಧ; ವರಸೆ ಬದಲಿಸಿದ ಬಿಲಾವಲ್ ಭುಟ್ಟೋ

ಏಪ್ರಿಲ್ 22ರಂದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಜೀವಗಳನ್ನು ಬಲಿ ಪಡೆದ ಭಯೋತ್ಪಾದಕ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಯಿತು. ಭಾರತವು ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಕಾಶ್ಮೀರ (ಪಿಒಕೆ)ದಲ್ಲಿ ಭಯೋತ್ಪಾದನೆಗೆ ಸಂಬಂಧಿಸಿದ 9 ಸ್ಥಳಗಳನ್ನು ಗುರಿಯಾಗಿಸಿಕೊಂಡು ಆಪರೇಷನ್ ಸಿಂಧೂರ್ ಮೂಲಕ ಪ್ರತಿಕ್ರಿಯಿಸಿತು. ಭಾರತದ ದಾಳಿಯ ಪರಿಣಾಮವಾಗಿ ಜೈಶ್-ಎ-ಮೊಹಮ್ಮದ್, ಲಷ್ಕರ್-ಎ-ತೈಬಾ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಸೇರಿದಂತೆ ಗುಂಪುಗಳೊಂದಿಗೆ ಸಂಬಂಧ ಹೊಂದಿರುವ 100ಕ್ಕೂ ಹೆಚ್ಚು ಭಯೋತ್ಪಾದಕರು ಸಾವನ್ನಪ್ಪಿದರು.

“ಆಪರೇಷನ್ ಸಿಂಧೂರ್‌ನಿಂದ ಕೆಲವು ಪಾಠಗಳನ್ನು ತಿಳಿಯಬೇಕು. ಆರಂಭದಲ್ಲಿ ಒಟ್ಟು 21 ಗುರಿಗಳನ್ನು ಗುರುತಿಸಲಾಯಿತು, ಅವುಗಳಲ್ಲಿ 9 ಗುರಿಗಳನ್ನು ತೊಡಗಿಸಿಕೊಳ್ಳುವ ನಿರ್ಧಾರವನ್ನು ತೆಗೆದುಕೊಂಡದ್ದು ಕೊನೆಯ ದಿನದ ಕೊನೆಯ ಗಂಟೆಯಲ್ಲಿ” ಎಂದು ಲೆಫ್ಟಿನೆಂಟ್ ಜನರಲ್ ಸಿಂಗ್ ಹೇಳಿದ್ದಾರೆ. ಲೆಫ್ಟಿನೆಂಟ್ ಜನರಲ್ ಸಿಂಗ್ ಪ್ರಕಾರ, ಚೀನಾ-ಪಾಕಿಸ್ತಾನ ರಕ್ಷಣಾ ಸಂಬಂಧವು ಸಾಂಪ್ರದಾಯಿಕ ಶಸ್ತ್ರಾಸ್ತ್ರಗಳ ವಿನಿಮಯವನ್ನು ಮೀರಿ ವಿಕಸನಗೊಂಡಿದೆ. ಚೀನಾ ಪಾಕಿಸ್ತಾನದೊಂದಿಗಿನ ತನ್ನ ನಿಕಟ ಸಂಬಂಧಗಳನ್ನು ಪ್ರಾಯೋಗಿಕ ಅವಕಾಶವಾಗಿ ಪರಿಗಣಿಸುತ್ತಿದೆ.

ಇದನ್ನೂ ಓದಿ: ಪ್ರತಿಕ್ರಿಯಿಸಲು 30 ಸೆಕೆಂಡ್ ಮಾತ್ರ ಇತ್ತು; ಭಾರತದ ಬ್ರಹ್ಮೋಸ್ ದಾಳಿ ಬಗ್ಗೆ ಪಾಕಿಸ್ತಾನ ಪ್ರಧಾನಿಯ ಸಹಾಯಕ ಹೇಳಿದ್ದೇನು?

“ನಮಗೆ ಒಂದು ಗಡಿ ಮತ್ತು 3 ಶತ್ರುಗಳಿದ್ದರು. ಭಾರತದ ಎದುರಾಳಿಯಾಗಿ ನಿಂತಿದ್ದ ಪಾಕಿಸ್ತಾನ ಮುಖ್ಯ ವೈರಿಯಾಗಿದ್ದರೆ ಅದಕ್ಕೆ ಚೀನಾ ಹಿಂದಿನಿಂದಲೇ ಸಾಧ್ಯವಿರುವ ಎಲ್ಲ ಬೆಂಬಲವನ್ನು ನೀಡುತ್ತಿತ್ತು. ಪಾಕಿಸ್ತಾನದೊಂದಿಗಿನ ಮಿಲಿಟರಿ ಹಾರ್ಡ್‌ವೇರ್‌ನಲ್ಲಿ ಶೇ. 81ರಷ್ಟು ಚೀನಾದ್ದೇ ಆಗಿದೆ. ಚೀನಾ ತನ್ನ ಶಸ್ತ್ರಾಸ್ತ್ರಗಳನ್ನು ಇತರ ಶಸ್ತ್ರಾಸ್ತ್ರಗಳ ವಿರುದ್ಧ ಪರೀಕ್ಷಿಸಲು ಸಮರ್ಥವಾಗಿದೆ. ಆದ್ದರಿಂದ ಅದು ಅವರಿಗೆ ಲಭ್ಯವಿರುವ ಲೈವ್ ಲ್ಯಾಬ್‌ನಂತಾಗಿದೆ. ಟರ್ಕಿ ಕೂಡ ಪಾಕಿಸ್ತಾನಕ್ಕೆ ಬೆಂಬಲವನ್ನು ಒದಗಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ನಮಗೆ ಬಲವಾದ ವಾಯು ರಕ್ಷಣಾ ವ್ಯವಸ್ಥೆಯ ಅಗತ್ಯವಿದೆ” ಎಂದು ಅವರು ಹೇಳಿದ್ದಾರೆ.

ಸ್ಟಾಕ್‌ಹೋಮ್ ಇಂಟರ್ನ್ಯಾಷನಲ್ ಪೀಸ್ ರಿಸರ್ಚ್ ಇನ್‌ಸ್ಟಿಟ್ಯೂಟ್ (SIPRI) ಪ್ರಕಾರ, ಚೀನಾ 2015ರಿಂದ ಪಾಕಿಸ್ತಾನಕ್ಕೆ 8.2 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಿದೆ. 2020 ಮತ್ತು 2024ರ ನಡುವೆ ಚೀನಾ ವಿಶ್ವದ 4ನೇ ಅತಿದೊಡ್ಡ ಶಸ್ತ್ರಾಸ್ತ್ರ ರಫ್ತುದಾರ ರಾಷ್ಟ್ರವಾಗಿದೆ. ಈ ರಫ್ತುಗಳಲ್ಲಿ ಸುಮಾರು 3ನೇ 2ರಷ್ಟು ಅಥವಾ ಶೇ. 63ರಷ್ಟು ಪಾಕಿಸ್ತಾನಕ್ಕೆ ಹೋಗಿದ್ದು, ಇಸ್ಲಾಮಾಬಾದ್ ಚೀನಾದ ಅತಿದೊಡ್ಡ ಶಸ್ತ್ರಾಸ್ತ್ರಗಳ ಕ್ಲೈಂಟ್ ಆಗಿದೆ. ಈ ಪೂರೈಕೆ ಸರಪಳಿಯು ಪಾಕಿಸ್ತಾನದ ಅರ್ಧಕ್ಕಿಂತ ಹೆಚ್ಚು ಯುದ್ಧ ವಿಮಾನಗಳನ್ನು ಒಳಗೊಂಡಿದೆ. ವರದಿಗಳ ಪ್ರಕಾರ ಪಾಕಿಸ್ತಾನವು ಈಗ ಚೀನಾದಿಂದ 40 ಶೆನ್ಯಾಂಗ್ J-35 ಐದನೇ ತಲೆಮಾರಿನ ಸ್ಟೆಲ್ತ್ ಫೈಟರ್‌ಗಳನ್ನು ಸೇರಿಸಿಕೊಳ್ಳಲು ಸಿದ್ಧವಾಗಿದೆ. ಇದು ಸ್ಟೆಲ್ತ್ ಯುದ್ಧ ಸಾಮರ್ಥ್ಯವನ್ನು ಹೊಂದಿರುವ ಸೀಮಿತ ರಾಷ್ಟ್ರಗಳ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Published On - 5:23 pm, Fri, 4 July 25

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
ಕಾಡಾನೆಗಳ ಹಿಂಡು ಡ್ರೋನ್ ಕ್ಯಾಮರಾದಲ್ಲಿ ಸೆರೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ
Video: ಹಾಸ್ಟೆಲ್​ನಲ್ಲಿ ಮಗನ ಕಾಲಿಗೆ ಸರಪಳಿ ಹಾಕಿ ಕೂರಿಸಿದ ತಂದೆ