AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

12 ಕಂದಮ್ಮಗಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ಹನಿ ಹಾಕಿದ ಆರೋಗ್ಯ ಸಿಬ್ಬಂದಿ; ಮೂವರು ಅಮಾನತು

ನಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ ಸ್ಥಳದಲ್ಲಿ ಮೂವರು ಸಿಬ್ಬಂದಿ ಇ ದ್ದರು. ಮೊದಲು ಸ್ಯಾನಿಟೈಸರ್​ ಡ್ರಾಪ್​ ನೀಡಿದರು. ಆದರೆ ಅವರಿಗೆ ನಂತರ ಅದು ಗೊತ್ತಾದ ಕೂಡಲೇ, ವಾಪಸ್ ಕರೆದು ಮತ್ತೆ ಪೋಲಿಯೋ ಹನಿ ಹಾಕಿದ್ದಾರೆ ಎಂದು ಪಾಲಕ ಶಾಮಾರಾವ್​ ಗೇಡಂ ತಿಳಿಸಿದ್ದಾರೆ.

12 ಕಂದಮ್ಮಗಳಿಗೆ ಪೋಲಿಯೋ ಲಸಿಕೆ ಬದಲು ಸ್ಯಾನಿಟೈಸರ್ ಹನಿ ಹಾಕಿದ ಆರೋಗ್ಯ ಸಿಬ್ಬಂದಿ; ಮೂವರು ಅಮಾನತು
ಪ್ರಾತಿನಿಧಿಕ ಚಿತ್ರ
Lakshmi Hegde
| Edited By: |

Updated on: Feb 02, 2021 | 4:18 PM

Share

ಮುಂಬೈ​: ಭಾನುವಾರ ದೇಶಾದ್ಯಂತ ಮಕ್ಕಳಿಗೆ ಪೊಲೀಯೋ ಲಸಿಕೆ ನೀಡಲಾಗಿದೆ. ಈ ವೇಳೆ ಮಹಾರಾಷ್ಟ್ರದಲ್ಲಿ ಮಹಾ ದುರಂತವೊಂದು ನಡೆದುಹೋಗಿದೆ. 12 ಶಿಶುಗಳಿಗೆ ಪೋಲಿಯೋ ಹನಿಯ ಬದಲು ಸ್ಯಾನಿಟೈಸರ್​ ಹನಿಯನ್ನು ಹಾಕಲಾಗಿದ್ದು, ಸದ್ಯ ಅವರನ್ನೆಲ್ಲ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುಟ್ಟ ಮಕ್ಕಳ ಪ್ರಾಣಕ್ಕೇ ಕುತ್ತು ತಂದ ಆರೋಗ್ಯ ಸಿಬ್ಬಂದಿ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಈ ಎಡವಟ್ಟು ನಡೆದಿದ್ದು, ಯವತ್ಮಲ್​ನ ಘಟಂಜಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ. ಸ್ಯಾನಿಟೈಸರ್​ ಹನಿಯಿಂದಾಗಿ ಆಸ್ಪತ್ರೆಗೆ ಸೇರಿರುವ ಮಕ್ಕಳೆಲ್ಲ 1-5ವರ್ಷದವರೆಗಿನವರು. ಭಾನುವಾರ ಮುಂಜಾನೆಯಿಂದಲೇ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಪೋಲಿಯೋ ಲಸಿಕೆ ಅಭಿಯಾನ ಶುರುವಾಗಿತ್ತು. ಅದರಲ್ಲಿ 12 ಮಕ್ಕಳಿಗೆ ಹ್ಯಾಂಡ್​ಸ್ಯಾನಿಟೈಸರ್​ ಹನಿಯನ್ನು ಬಾಯಿಗೆ ಹಾಕಲಾಗಿದೆ. ಅವರಿಗೆಲ್ಲ ರಾತ್ರಿ ಹೊತ್ತಿಗೆ ವಾಂತಿ ಶುರುವಾಗಿ, ಅಸ್ವಸ್ಥರಾಗಿದ್ದಾರೆ.

ನಮ್ಮ ಮಕ್ಕಳಿಗೆ ಪೋಲಿಯೋ ಲಸಿಕೆ ಹಾಕಿಸಿದ ಸ್ಥಳದಲ್ಲಿ ಮೂವರು ಸಿಬ್ಬಂದಿ ಇ ದ್ದರು. ಮೊದಲು ಸ್ಯಾನಿಟೈಸರ್​ ಡ್ರಾಪ್​ ನೀಡಿದರು. ಆದರೆ ಅವರಿಗೆ ನಂತರ ಅದು ಗೊತ್ತಾದ ಕೂಡಲೇ, ವಾಪಸ್ ಕರೆದು ಮತ್ತೆ ಪೋಲಿಯೋ ಹನಿ ಹಾಕಿದ್ದಾರೆ. ನನ್ನ ಮಗ ಮತ್ತು ಮಗಳು ಇಬ್ಬರಿಗೂ ವಾಂತಿ ಶುರುವಾಗಿತ್ತು ಎಂದು ಸ್ಯಾನಿಟೈಸರ್​ ಹನಿ ಹಾಕಲಾದ ಇಬ್ಬರು ಮಕ್ಕಳ ತಂದೆ ಶಾಮಾರಾವ್​ ಗೇಡಂ ತಿಳಿಸಿದ್ದಾರೆ.

ಅಂದು ಹಾಜರಿದ್ದ ಅಂಗನವಾಡಿ ಕಾರ್ಯಕರ್ತೆ, ಆಶಾ ಕಾರ್ಯಕರ್ತೆಯರೇ, ಸಮುದಾಯ ಆರೋಗ್ಯ ಅಧಿಕಾರಿಯೇ ಈ ಅವಘಡಕ್ಕೆ ಹೊಣೆ ಎಂದು ಹೇಳಿರುವ ಯವತ್ಮಲ್​ ಜಿಲ್ಲಾ ಪಂಚಾಯಿತಿ ಸಿಇಒ ಡಾ. ಶ್ರೀಕೃಷ್ಣ ಪಾಂಚಾಲ್​, ಪ್ರಕರಣದ ಬಗ್ಗೆ ತನಿಖೆಗೆ ಆದೇಶ ನೀಡಲಾಗಿದೆ ಎಂದು ಹೇಳಿದ್ದಾರೆ.

Petrol Price ಶ್ರೀರಾಮನ ಭಾರತದಲ್ಲಿ ರೂ. 93, ಸೀತೆಯ ನೇಪಾಳದಲ್ಲಿ 53, ರಾವಣನ ಶ್ರೀಲಂಕಾದಲ್ಲಿ ಎಷ್ಟು ಗೊತ್ತಾ..!

ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
2026ರಲ್ಲಿ ಈ ರಾಶಿಗೆ ಗುರು, ಶನಿ, ರಾಹು, ಕೇತು ಸಂಚಾರದಿಂದ ಆರ್ಥಿಕ ಲಾಭ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಸೀಬರ್ಡ್ ಬಸ್ ದುರಂತ: ಪ್ರಾಣ ಉಳಿಸಿಕೊಂಡವರ ಒಂದೊಂದು ಕಥೆ ರೋಚಕ
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್
ಯಾರ ಮನೆಯನ್ನೂ ಒಡೆಯಬಾರದು: ಫ್ಯಾನ್ಸ್ ವಾರ್ ಬಗ್ಗೆ ಶಿವಣ್ಣ ಖಡಕ್ ರಿಯಾಕ್ಷನ್