ಸಿಆರ್​ಪಿಎಫ್​ನ 122 ಯೋಧರಿಗೆ ತಗುಲಿದ ಕೊರೊನಾ ಸೋಂಕು!

ದೆಹಲಿ: ಮಹಾಮಾರಿ ಕೊರೊನಾ ವೈರಸ್ ಬಿಟ್ಟೂ ಬಿಡದೆ ಎಲ್ಲರನ್ನೂ ಕಾಡುತ್ತಿದೆ. 31ನೇ ಸಿಆರ್‌ಪಿಎಫ್ ಬೆಟಾಲಿಯನ್‌ನ 480 ಯೋಧರ ಪೈಕಿ 122 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದುವರೆಗೂ 368 ಮಂದಿಯ ಸ್ಯಾಂಪಲ್ ಪರೀಕ್ಷೆ ‌ನಡೆಸಲಾಗಿದ್ದು, ಶೇಕಡಾ 33 ರಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. 31ನೇ ಬೆಟಾಲಿಯನ್‌ನಲ್ಲಿರುವ‌ ಎಲ್ಲರನ್ನೂ ದೆಹಲಿಯ ಮಾಂಡೋಲಿ ಕ್ವಾರಂಟೈನ್ ಸೆಂಟರ್​ಗೆ ರವಾನೆ ಮಾಡಲಾಗಿದೆ. 368 ಮಂದಿಯ ಪೈಕಿ 112 ಮಂದಿಯ ಕೊರೊನಾ ಸ್ಯಾಂಪಲ್ ಪರೀಕ್ಷೆಯ ವರದಿ ಬರಬೇಕಿದೆ. ಸದ್ಯ ಬೆಟಾಲಿಯನ್‌ನಲ್ಲಿರುವ ಎಲ್ಲರನ್ನೂ […]

ಸಿಆರ್​ಪಿಎಫ್​ನ 122 ಯೋಧರಿಗೆ ತಗುಲಿದ ಕೊರೊನಾ ಸೋಂಕು!
ಸಾಧು ಶ್ರೀನಾಥ್​

Updated on: May 02, 2020 | 12:15 PM

ದೆಹಲಿ: ಮಹಾಮಾರಿ ಕೊರೊನಾ ವೈರಸ್ ಬಿಟ್ಟೂ ಬಿಡದೆ ಎಲ್ಲರನ್ನೂ ಕಾಡುತ್ತಿದೆ. 31ನೇ ಸಿಆರ್‌ಪಿಎಫ್ ಬೆಟಾಲಿಯನ್‌ನ 480 ಯೋಧರ ಪೈಕಿ 122 ಯೋಧರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದುವರೆಗೂ 368 ಮಂದಿಯ ಸ್ಯಾಂಪಲ್ ಪರೀಕ್ಷೆ ‌ನಡೆಸಲಾಗಿದ್ದು, ಶೇಕಡಾ 33 ರಷ್ಟು ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ.

31ನೇ ಬೆಟಾಲಿಯನ್‌ನಲ್ಲಿರುವ‌ ಎಲ್ಲರನ್ನೂ ದೆಹಲಿಯ ಮಾಂಡೋಲಿ ಕ್ವಾರಂಟೈನ್ ಸೆಂಟರ್​ಗೆ ರವಾನೆ ಮಾಡಲಾಗಿದೆ. 368 ಮಂದಿಯ ಪೈಕಿ 112 ಮಂದಿಯ ಕೊರೊನಾ ಸ್ಯಾಂಪಲ್ ಪರೀಕ್ಷೆಯ ವರದಿ ಬರಬೇಕಿದೆ. ಸದ್ಯ ಬೆಟಾಲಿಯನ್‌ನಲ್ಲಿರುವ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ.

sadhu srinath

ಭಾರತೀಯ ವಿದ್ಯಾ ಭವನದಲ್ಲಿ 1995ರಲ್ಲಿ ಸ್ನಾತಕೋತ್ತರ ಪದವಿ ಬಳಿಕ ಪತ್ರಿಕೋದ್ಯಮದಲ್ಲಿ 29 ವರ್ಷದ ಅನುಭವ. ಡಿಜಿಟಲ್ ಮಾಧ್ಯಮದಲ್ಲಿ 14 ವರ್ಷಗಳ ಅನುಭವ. ಹಾಗಾಗಿ ಡಿಜಿಟಲ್ ಮಾಧ್ಯಮದ ನಾಡಿಮಿಡಿತ ಚೆನ್ನಾಗಿ ಬಲ್ಲೆ. ಭವಿಷ್ಯವೂ ಇದೇ ಡಿಜಿಟಲ್ ಮಾಧ್ಯಮ! ಬಯಲು ಸೀಮೆಯಿಂದ ಬಂದವನು. 3 ದಶಕಗಳಿಂದ ಬೆಂಗಳೂರು ವಾಸಿ, ಮೂಲ ಶಿಡ್ಲಘಟ್ಟ. ಪೊಲೀಸ್​ ನ್ಯೂಸ್​​ ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭ. ಆಕಾಶವಾಣಿಯಲ್ಲಿ ಸಕ್ರಿಯ ಕ್ರೀಡಾ ಪತ್ರಕರ್ತ. ಆನಂತರ ವಿಜಯ ಕರ್ನಾಟಕ ದಿನ ಪತ್ರಿಕೆಯಲ್ಲಿ 10 ವರ್ಷ ಹಿರಿಯ ಉಪಸಂಪಾದಕ. ಕಾಲೇಜು ದಿನಗಳಲ್ಲಿ ಕ್ರಿಕೆಟ್​​ ಆಲ್​​ರೌಂಡರ್. ಪ್ರವಾಸ, ಪುಸ್ತಕ ಪ್ರೀತಿ ತುಸು ಹೆಚ್ಚು.​ ನೇರ-ದಿಟ್ಟ-ನಿರಂತರ. ಉತ್ತಮ ಸಮಾಜಕ್ಕಾಗಿ ಸೇವೆ ಮುಡಿಪು

Follow Us