ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದ 15ನೇ ಹಣಕಾಸು ಆಯೋಗ | 15th finance commission submits its report to President Rama Nath Kovind

15ನೇ ಹಣಕಾಸು ಆಯೋಗವು 2020-2021ರಿಂದ2025-2026ರವರೆಗಿನ ತನ್ನ ವರದಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇಂದು ಸಲ್ಲಿಸಿದೆ. ಎನ್ ಕೆ ಸಿಂಗ್ ಅಧ್ಯಕ್ಷರಾಗಿರುವ ಆಯೋಗ ಕೋವಿಡ್ ಕಾಲದ ಹಣಕಾಸು ಪರಿಸ್ಥಿತಿ ಶೀರ್ಷಿಕೆಯುಳ್ಳ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತು. ಅಜಯ್ ನಾರಾಯಣ್ ಝಾ, ಅನೂಪ್ ಸಿಂಗ್, ಅಶೋಕ್ ಲಹಿರಿ, ಅರವಿಂದ್ ಮೆಹ್ತಾ, ಶಕ್ತಿಕಾಂತದಾಸ್ ಮತ್ತು ರಮೇಶ್ ಚಾಂದ್ ಹಣಕಾಸು ಆಯೋಗದ ಇತರ ಸದಸ್ಯರಾಗಿದ್ದಾರೆ. ಮುಂದಿನ ಐದು ವರ್ಷಗಳ ಹಣಕಾಸು ಯೋಜನೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ವರದಿ ಮಹತ್ವ ಪಡೆದಿದೆ. ತೆರಿಗೆ ವಿಕೇಂದ್ರೀಕರಣ, […]

ರಾಷ್ಟ್ರಪತಿಗಳಿಗೆ ವರದಿ ಸಲ್ಲಿಸಿದ 15ನೇ ಹಣಕಾಸು ಆಯೋಗ | 15th finance commission submits its report to President Rama Nath Kovind
ಅರುಣ್​ ಕುಮಾರ್​ ಬೆಳ್ಳಿ

Updated on: Nov 09, 2020 | 10:42 PM

15ನೇ ಹಣಕಾಸು ಆಯೋಗವು 2020-2021ರಿಂದ2025-2026ರವರೆಗಿನ ತನ್ನ ವರದಿಯನ್ನು ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರಿಗೆ ಇಂದು ಸಲ್ಲಿಸಿದೆ. ಎನ್ ಕೆ ಸಿಂಗ್ ಅಧ್ಯಕ್ಷರಾಗಿರುವ ಆಯೋಗ ಕೋವಿಡ್ ಕಾಲದ ಹಣಕಾಸು ಪರಿಸ್ಥಿತಿ ಶೀರ್ಷಿಕೆಯುಳ್ಳ ವರದಿಯನ್ನು ರಾಷ್ಟ್ರಪತಿಗಳಿಗೆ ಸಲ್ಲಿಸಿತು. ಅಜಯ್ ನಾರಾಯಣ್ ಝಾ, ಅನೂಪ್ ಸಿಂಗ್, ಅಶೋಕ್ ಲಹಿರಿ, ಅರವಿಂದ್ ಮೆಹ್ತಾ, ಶಕ್ತಿಕಾಂತದಾಸ್ ಮತ್ತು ರಮೇಶ್ ಚಾಂದ್ ಹಣಕಾಸು ಆಯೋಗದ ಇತರ ಸದಸ್ಯರಾಗಿದ್ದಾರೆ.

ಮುಂದಿನ ಐದು ವರ್ಷಗಳ ಹಣಕಾಸು ಯೋಜನೆಗಳನ್ನು ಕೈಗೊಳ್ಳುವ ನಿಟ್ಟಿನಲ್ಲಿ ಈ ವರದಿ ಮಹತ್ವ ಪಡೆದಿದೆ.

ತೆರಿಗೆ ವಿಕೇಂದ್ರೀಕರಣ, ಸ್ಥಳೀಯ ಆಡಳಿತಗಳಿಗೆ ಅನುದಾನ ಬಿಡುಗಡೆ, ವಿಪತ್ತು ನಿಧಿಗಳ ಬಳಕೆ ಮುಂತಾದ ವಿಷಯಗಳ ಕುರಿತು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನಾಲ್ಕು ಆವೃತ್ತಿಗಳ ವರದಿಯಲ್ಲಿ ಐದು ವರ್ಷಗಳವರೆಗೆ ಘನ ತ್ಯಾಜ್ಯ ನಿರ್ವಹಣೆ, ವಿದ್ಯುತ್ ನಿರ್ವಹಣೆ, ಫಲಾನುಭವಿಗಳಿಗೆ ನೇರ ವರ್ಗಾವಣೆ ಮುಂತಾದವುಗಳ ಬಗ್ಗೆ ಸಹ ವಿವರಿಸಲಾಗಿದೆ.

ಸಂಸತ್ತಿನಲ್ಲಿ ಮಂಡಿಸಿದ ನಂತರವಷ್ಟೇ ಈ ವರದಿ ಸಾರ್ವಜನಿಕರಿಗೆ ಲಭ್ಯವಾಗಲಿದೆ.

 

Published On - 10:40 pm, Mon, 9 November 20

Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Follow Us