AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ

17ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ
ರಾಮಕುಮಾರ್ ಸಾರಂಗಪಾಣಿ ಮತ್ತು ಅವರು ತಯಾರಿಸಿದ ಗ್ರೀಟಿಂಗ್ ಕಾರ್ಡ್​
Lakshmi Hegde
| Edited By: |

Updated on: Jan 03, 2021 | 3:48 PM

Share

ದುಬೈ: ಭಾರತೀಯ ಮೂಲದ ರಾಮ್​ಕುಮಾರ್ ಸಾರಂಗಪಾಣಿ ಅವರು ವಿಶ್ವದ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ (3ಡಿ ಆಯಾಮ) ತಯಾರಿಸುವ ಮೂಲಕ ಗಿನ್ನೆಸ್​ ದಾಖಲೆ ನಿರ್ಮಿಸಿದ್ದಾರೆ.

ಈ ಶುಭಾಶಯ ಪತ್ರ 8.2 ಚದರ ಮೀಟರ್​ ವಿಸ್ತಾರವಾಗಿದೆ. ಯುಎಇ ಪ್ರಧಾನಿ, ಉಪಾಧ್ಯಕ್ಷ ಹಾಗೂ ದುಬೈನ ರಾಜನಾಗಿರುವ ಶೇಖ್​ ಮೊಹಮ್ಮದ್​ ಬಿನ್​ ರಶೀದ್​ ಮಕ್ತುಮ್​ ಅವರ 15ನೇ ಪದಗ್ರಹಣ ದಿನದ ನಿಮಿತ್ತ ರಾಮ್​ಕುಮಾರ್​ ಗ್ರೀಟಿಂಗ್​ ಕಾರ್ಡ್​ ತಯಾರಿಸಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ಪಾಪ್ ಅಪ್ ಶುಭಾಶಯ ಪತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕಾರ್ಡ್ ಒಂದು ಸಹಜ ಅಳತೆಯ ಶುಭಾಶಯ ಪತ್ರಕ್ಕಿಂತ 100 ಪಟ್ಟು ದೊಡ್ಡ ಗ್ರೀಟಿಂಗ್​ ಕಾರ್ಡ್ ಆಗಿದೆ. ದುಬೈ ಮೂಲದ ಕಲಾವಿದ ಅಕ್ಬರ್​ ಸಾಹೇಬ್​ ರಚಿಸಿರುವ ಶೇಖ್​ ಮೊಹಮದ್​ ಅವರ ಪೇಂಟಿಂಗ್​ ಈ ಕಾರ್ಡ್​ನಲ್ಲಿದೆ ಎಂದು ಗಲ್ಫ್​ ನ್ಯೂಸ್ ವರದಿ ಮಾಡಿದೆ.

ಇಷ್ಟು ದೊಡ್ಡ, ವಿಶೇಷ ಗ್ರೀಟಿಂಗ್ ಕಾರ್ಡ್ ತಯಾರಿಸಲು 6 ತಿಂಗಳು ಬೇಕಾಯಿತು. ದೋಹಾದಲ್ಲಿ ಜನವರಿ 4ರಿಂದ 18ರವರೆಗೆ ಇದರ ಪ್ರದರ್ಶನ ನಡೆಯಲಿದೆ ಎಂದು ಸಾರಂಗಪಾಣಿ ತಿಳಿಸಿದ್ದಾರೆ. ಈ ಮೊದಲು ಹಾಂಗ್​ಕಾಂಗ್​ ಮೂಲದ ವ್ಯಕ್ತಿಯೋರ್ವರು 6.729 ಚದರ ಮೀಟರ್ ವಿಸ್ತೀರ್ಣದ ಗ್ರೀಟಿಂಗ್ ಕಾರ್ಡ್​ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಅದನ್ನೀಗ ಸಾರಂಗಪಾಣಿ ಮುರಿದಿದ್ದಾರೆ. ಇವರ ಪಾಪ್​ಅಪ್​ ಶುಭಾಶಯ ಪತ್ರ 8.2 ಚದರ ಮೀಟರ್​ ಇದೆ.

17 ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ

Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
Asia Cup Rising Stars: ಫೈನಲ್​ಗೇರಿದ ಟೀಮ್ ಇಂಡಿಯಾ
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಚಪ್ಪಾಳೆ ತಟ್ಟುವುದು ಯಾಕೆ? ಇದರ ಹಿಂದಿನ ರಹಸ್ಯವೇನು?
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
ಇಂದು ಈ ರಾಶಿಯವರ ಪ್ರೇಮ ವ್ಯವಹಾರಗಳಲ್ಲಿ ಮನ್ನಣೆ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
‘ಸೀತಾ ಪಯಣ’ ಸಿನಿಮಾ ನೋಡಿ ಎಳೆಎಳೆಯಾಗಿ ವಿಮರ್ಶೆ ತಿಳಿಸಿದ ಶಿವಣ್ಣ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಕನ್ನಡ ಚಿತ್ರರಂಗಕ್ಕೆ ಹೊಸ ವಿಲನ್ ಕಾರ್ತಿಕ್ ಮಹೇಶ್; ತನಿಷಾಗೆ ಖುಷಿಯೋ ಖುಷಿ
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ಮುಡಾ ಬೆನ್ನತ್ತಿದ್ದ ಸ್ನೇಹಮಯಿ ಕೃಷ್ಣ ಅರೆಸ್ಟ್: ಮನೆಯಲ್ಲಿ ಏನೇನು ಸಿಕ್ತು?
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ವಿಧವೆ ಮಹಿಳೆ ನೇಣಿಗೆ ಶರಣು, ಡೆತ್​​ನೋಟ್​​​ನಲ್ಲಿ ಪೊಲೀಸಪ್ಪನ ಕೃತ್ಯ ಬಯಲು
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಟ್ರಂಪ್ 'ಸ್ಟಾಂಡ್​ಅಪ್' ಕಾಮಿಡಿ; ಮುಜುಗರಕ್ಕೀಡಾದ ಪಾಕಿಸ್ತಾನದ ಪ್ರಧಾನಿ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಪುತ್ರಿಯ ಸಿನಿಮಾ ನೋಡಿ ಖುಷಿ ಪಟ್ಟ ಅರ್ಜುನ್ ಸರ್ಜಾ ದಂಪತಿ: ವಿಡಿಯೋ
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು
ಶಿವಾಜಿ ಜಯಂತಿಯಲ್ಲಿ ಕಲ್ಲು ತೂರಾಟ: ಶಾಂತಿ ಸಭೆಗೆ ಬಾರದ ಮುಸ್ಲಿಂ ಮುಖಂಡರು