AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ

17ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ
ರಾಮಕುಮಾರ್ ಸಾರಂಗಪಾಣಿ ಮತ್ತು ಅವರು ತಯಾರಿಸಿದ ಗ್ರೀಟಿಂಗ್ ಕಾರ್ಡ್​
Follow us
Lakshmi Hegde
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: Jan 03, 2021 | 3:48 PM

ದುಬೈ: ಭಾರತೀಯ ಮೂಲದ ರಾಮ್​ಕುಮಾರ್ ಸಾರಂಗಪಾಣಿ ಅವರು ವಿಶ್ವದ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ (3ಡಿ ಆಯಾಮ) ತಯಾರಿಸುವ ಮೂಲಕ ಗಿನ್ನೆಸ್​ ದಾಖಲೆ ನಿರ್ಮಿಸಿದ್ದಾರೆ.

ಈ ಶುಭಾಶಯ ಪತ್ರ 8.2 ಚದರ ಮೀಟರ್​ ವಿಸ್ತಾರವಾಗಿದೆ. ಯುಎಇ ಪ್ರಧಾನಿ, ಉಪಾಧ್ಯಕ್ಷ ಹಾಗೂ ದುಬೈನ ರಾಜನಾಗಿರುವ ಶೇಖ್​ ಮೊಹಮ್ಮದ್​ ಬಿನ್​ ರಶೀದ್​ ಮಕ್ತುಮ್​ ಅವರ 15ನೇ ಪದಗ್ರಹಣ ದಿನದ ನಿಮಿತ್ತ ರಾಮ್​ಕುಮಾರ್​ ಗ್ರೀಟಿಂಗ್​ ಕಾರ್ಡ್​ ತಯಾರಿಸಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ಪಾಪ್ ಅಪ್ ಶುಭಾಶಯ ಪತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕಾರ್ಡ್ ಒಂದು ಸಹಜ ಅಳತೆಯ ಶುಭಾಶಯ ಪತ್ರಕ್ಕಿಂತ 100 ಪಟ್ಟು ದೊಡ್ಡ ಗ್ರೀಟಿಂಗ್​ ಕಾರ್ಡ್ ಆಗಿದೆ. ದುಬೈ ಮೂಲದ ಕಲಾವಿದ ಅಕ್ಬರ್​ ಸಾಹೇಬ್​ ರಚಿಸಿರುವ ಶೇಖ್​ ಮೊಹಮದ್​ ಅವರ ಪೇಂಟಿಂಗ್​ ಈ ಕಾರ್ಡ್​ನಲ್ಲಿದೆ ಎಂದು ಗಲ್ಫ್​ ನ್ಯೂಸ್ ವರದಿ ಮಾಡಿದೆ.

ಇಷ್ಟು ದೊಡ್ಡ, ವಿಶೇಷ ಗ್ರೀಟಿಂಗ್ ಕಾರ್ಡ್ ತಯಾರಿಸಲು 6 ತಿಂಗಳು ಬೇಕಾಯಿತು. ದೋಹಾದಲ್ಲಿ ಜನವರಿ 4ರಿಂದ 18ರವರೆಗೆ ಇದರ ಪ್ರದರ್ಶನ ನಡೆಯಲಿದೆ ಎಂದು ಸಾರಂಗಪಾಣಿ ತಿಳಿಸಿದ್ದಾರೆ. ಈ ಮೊದಲು ಹಾಂಗ್​ಕಾಂಗ್​ ಮೂಲದ ವ್ಯಕ್ತಿಯೋರ್ವರು 6.729 ಚದರ ಮೀಟರ್ ವಿಸ್ತೀರ್ಣದ ಗ್ರೀಟಿಂಗ್ ಕಾರ್ಡ್​ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಅದನ್ನೀಗ ಸಾರಂಗಪಾಣಿ ಮುರಿದಿದ್ದಾರೆ. ಇವರ ಪಾಪ್​ಅಪ್​ ಶುಭಾಶಯ ಪತ್ರ 8.2 ಚದರ ಮೀಟರ್​ ಇದೆ.

17 ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ

ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಬುಮ್ರಾ ಬೌಲಿಂಗ್​ನಲ್ಲಿ ಸಿಕ್ಸರ್ ಬಾರಿಸಿದ ರವಿ ಬಿಷ್ಣೋಯ್; ವಿಡಿಯೋ
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಆಪರೇಷನ್ ಆಗಿದೆ, ಆರೋಗ್ಯ ಸರಿಯಿಲ್ಲ: ವಿನೋದ್ ರಾಜ್​
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಭಾರತ-ಪಾಕ್​ ಗಡಿಯಿಂದ Tv9 ಗ್ರೌಂಡ್​ ರಿಪೋರ್ಟ್​: ಸನ್ನದ್ಧವಾಗಿರುವ BSF ಯೋಧ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಐಪಿಎಲ್​ನಲ್ಲಿ ವಿಶೇಷ ಮೈಲಿಗಲ್ಲು ಸ್ಥಾಪಿಸಿದ ಸೂರ್ಯ
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ಡಾ.ರಾಜ್ ಕುಟುಂಬದ ಜೊತೆ ನಾವು ಸದಾ ಇರುತ್ತೇವೆ: ಡಿಕೆ ಶಿವಕುಮಾರ್
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ನಮ್ಮ ರಕ್ತ ಕುದಿಯುತ್ತಿದೆ: ಪಹಲ್ಗಾಮ್​ ದಾಳಿಗೆ ಶ್ರೀಮುರಳಿ ಪ್ರತಿಕ್ರಿಯೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕರ್ನಾಟಕದಲ್ಲಿ ನೆಲೆಸಿರುವ ಪಾಕ್​ ಪ್ರಜೆಗಳನ್ನು ಹೊರಗೆ ಹಾಕಲು ದಿಟ್ಟ ಹೆಜ್ಜೆ
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಕೆನಡಾದ ರಸ್ತೆಯಲ್ಲಿ ಜನರ ಮೇಲೆ ನುಗ್ಗಿದ ಕಾರು, ಹಲವು ಮಂದಿ ಸಾವು
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಪಾಕಿಸ್ತಾನದ ಮೇಲೆ ಯುದ್ಧ: ವರಸೆ ಬದಲಿಸಿದ ಸಿದ್ದರಾಮಯ್ಯ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ
ಈ ತಪ್ಪು ತಿದ್ದಿಕೊಳ್ಳದಿದ್ದರೇ ದಕ್ಷಿಣ ಕನ್ನಡಕ್ಕೆ ಅನಾಹುತ: ದೈವರಾಧಕ ಎಚ್ಚರ