AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ

17ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

ಜಗತ್ತಿನಲ್ಲೇ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ ತಯಾರಿಸಿದ ಭಾರತೀಯ ಮೂಲದ ದುಬೈ ನಿವಾಸಿ; ಗಿನ್ನೆಸ್ ದಾಖಲೆ
ರಾಮಕುಮಾರ್ ಸಾರಂಗಪಾಣಿ ಮತ್ತು ಅವರು ತಯಾರಿಸಿದ ಗ್ರೀಟಿಂಗ್ ಕಾರ್ಡ್​
Lakshmi Hegde
| Edited By: |

Updated on: Jan 03, 2021 | 3:48 PM

Share

ದುಬೈ: ಭಾರತೀಯ ಮೂಲದ ರಾಮ್​ಕುಮಾರ್ ಸಾರಂಗಪಾಣಿ ಅವರು ವಿಶ್ವದ ಅತ್ಯಂತ ದೊಡ್ಡ ಪಾಪ್​-ಅಪ್​ ಗ್ರೀಟಿಂಗ್ ಕಾರ್ಡ್​ (3ಡಿ ಆಯಾಮ) ತಯಾರಿಸುವ ಮೂಲಕ ಗಿನ್ನೆಸ್​ ದಾಖಲೆ ನಿರ್ಮಿಸಿದ್ದಾರೆ.

ಈ ಶುಭಾಶಯ ಪತ್ರ 8.2 ಚದರ ಮೀಟರ್​ ವಿಸ್ತಾರವಾಗಿದೆ. ಯುಎಇ ಪ್ರಧಾನಿ, ಉಪಾಧ್ಯಕ್ಷ ಹಾಗೂ ದುಬೈನ ರಾಜನಾಗಿರುವ ಶೇಖ್​ ಮೊಹಮ್ಮದ್​ ಬಿನ್​ ರಶೀದ್​ ಮಕ್ತುಮ್​ ಅವರ 15ನೇ ಪದಗ್ರಹಣ ದಿನದ ನಿಮಿತ್ತ ರಾಮ್​ಕುಮಾರ್​ ಗ್ರೀಟಿಂಗ್​ ಕಾರ್ಡ್​ ತಯಾರಿಸಿದ್ದು, ವಿಶ್ವದಲ್ಲೇ ಅತ್ಯಂತ ದೊಡ್ಡ ಪಾಪ್ ಅಪ್ ಶುಭಾಶಯ ಪತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಈ ಕಾರ್ಡ್ ಒಂದು ಸಹಜ ಅಳತೆಯ ಶುಭಾಶಯ ಪತ್ರಕ್ಕಿಂತ 100 ಪಟ್ಟು ದೊಡ್ಡ ಗ್ರೀಟಿಂಗ್​ ಕಾರ್ಡ್ ಆಗಿದೆ. ದುಬೈ ಮೂಲದ ಕಲಾವಿದ ಅಕ್ಬರ್​ ಸಾಹೇಬ್​ ರಚಿಸಿರುವ ಶೇಖ್​ ಮೊಹಮದ್​ ಅವರ ಪೇಂಟಿಂಗ್​ ಈ ಕಾರ್ಡ್​ನಲ್ಲಿದೆ ಎಂದು ಗಲ್ಫ್​ ನ್ಯೂಸ್ ವರದಿ ಮಾಡಿದೆ.

ಇಷ್ಟು ದೊಡ್ಡ, ವಿಶೇಷ ಗ್ರೀಟಿಂಗ್ ಕಾರ್ಡ್ ತಯಾರಿಸಲು 6 ತಿಂಗಳು ಬೇಕಾಯಿತು. ದೋಹಾದಲ್ಲಿ ಜನವರಿ 4ರಿಂದ 18ರವರೆಗೆ ಇದರ ಪ್ರದರ್ಶನ ನಡೆಯಲಿದೆ ಎಂದು ಸಾರಂಗಪಾಣಿ ತಿಳಿಸಿದ್ದಾರೆ. ಈ ಮೊದಲು ಹಾಂಗ್​ಕಾಂಗ್​ ಮೂಲದ ವ್ಯಕ್ತಿಯೋರ್ವರು 6.729 ಚದರ ಮೀಟರ್ ವಿಸ್ತೀರ್ಣದ ಗ್ರೀಟಿಂಗ್ ಕಾರ್ಡ್​ ತಯಾರಿಸಿ ಗಿನ್ನೆಸ್ ದಾಖಲೆ ನಿರ್ಮಿಸಿದ್ದರು. ಅದನ್ನೀಗ ಸಾರಂಗಪಾಣಿ ಮುರಿದಿದ್ದಾರೆ. ಇವರ ಪಾಪ್​ಅಪ್​ ಶುಭಾಶಯ ಪತ್ರ 8.2 ಚದರ ಮೀಟರ್​ ಇದೆ.

17 ವರ್ಷಗಳ ಹಿಂದೆ ಚೆನ್ನೈನಿಂದ ದುಬೈಗೆ ಹೋಗಿ ನೆಲೆಸಿರುವ ಸಾರಂಗಪಾಣಿಗೆ ದಾಖಲೆಗಳು ಹೊಸದಲ್ಲ. ಭಾರತ ಮತ್ತು ದುಬೈನಲ್ಲಿ ಸೇರಿ ಇದು ಅವರ 19ನೇ ವಿಶ್ವದಾಖಲೆಯಾಗಿದೆ.

‘ಕೊರೊನಾ ನಿಯಮ ಪಾಲಿಸಲಾಗದಿದ್ದರೆ ನೀವು ಬರೋದೇ ಬೇಡ’- ಟೀಂ ಇಂಡಿಯಾಗೆ ಆಸ್ಟ್ರೇಲಿಯಾ ಎಚ್ಚರಿಕೆ

Follow Us
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಇನ್ಸ್‌ಪೆಕ್ಟರ್ ಧನಂಜಯ್‌ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಎಚ್ಚರಿಕೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಐದನೇ ವರ್ಷದ ಗಣೇಶೋತ್ಸವಕ್ಕೆ ಸಿದ್ಧತೆ
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಸದ್ಯದಲ್ಲೇ ಸಚಿವ ಸತೀಶ್ ಜಾರಕಿಹೊಳಿಗೆ ಮತ್ತೊಂದು ಶಾಕ್!
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಗಗನ್​-ತಾಂಡವ್ ರಾಮ್​​ಗೆ ಕ್ಲಾಸ್; ದೊಡ್ಡ ಸೂಚನೆ ಕೊಟ್ಟ ಸುದೀಪ್
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಕೊಪ್ಪಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ: ರೋಗಿಗಳ ಪರದಾಟ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಮುದ್ದಾದ ಮಗಳಿದ್ರೂ ಪ್ರಿಯಕರನ ಹಿಂದೆ ಬಿದ್ದು ಗಂಡನ ಕಥೆ ಮುಗಿಸಿದ ಹೆಂಡ್ತಿ!
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಏಳು ವರ್ಷಗಳ ಬಳಿಕ ಭಾರತಕ್ಕೆ ಚೀನಾ ಅಧ್ಯಕ್ಷ: ದೆಹಲಿಗೆ ಬಂದಿಳಿದ ಜಿನ್‌ಪಿಂಗ್
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಹಾಸನ: ಬೆಂಗಳೂರು-ಮಂಗಳೂರು ಹೆದ್ದಾರಿಯಲ್ಲಿ ಪೆಟ್ರೋಲ್ ಟ್ಯಾಂಕರ್ ಪಲ್ಟಿ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
ಶಾರ್ಟ್​ ಸರ್ಕ್ಯೂಟ್​ಗೆ ಸಿಲಿಂಡರ್​ ಸ್ಫೋಟ; 21 ಲಕ್ಷ ರೂ. ಕಳೆದುಕೊಂಡ ಮಾಲೀಕ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ
80ರ ಫೋಟೊ ಟ್ರೆಂಡ್: ಸೈಬರ್ ವಂಚನೆ ಸಾಧ್ಯತೆಗಳ ಬಗ್ಗೆ ಪೊಲೀಸರಿಂದ ಸಂದೇಶ