AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !

Tamil Nadu: ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !
ಆಧಾರ್​-ಪಾನ್​ ವಿವರ ಪಡೆದು ಪೆಟ್ರೋಲ್​ ವಿತರಣೆ
TV9 Web
| Edited By: |

Updated on:Sep 11, 2021 | 8:59 PM

Share

ಪೆಟ್ರೋಲ್​ ದರ (Petrol Price) ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರ ಆಕ್ರೋಶಕ್ಕೆ ಕೂಡ ಕಾರಣ ಆಗುತ್ತಿದೆ. ಇನ್ನೂ ಅನೇಕರಿಗೆ ತಮ್ಮ ಬಳಿ ವಾಹನ ಇದ್ದರೂ ಅದಕ್ಕೆ ಪೆಟ್ರೋಲ್ (Petrol)​ ಹಾಕಲು ಸಾಧ್ಯವಾಗದ ಪರಿಸ್ಥಿತಿ. ಹೀಗಿರುವಾಗ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದು ಉಚಿತವಾಗಿ ಒಂದು ಲೀಟರ್​ ಪೆಟ್ರೋಲ್​ ಕೊಡೋದಾಗಿ ಹೇಳಿದೆ. ಆದರೆ ಒಂದು ಷರತ್ತು ಅನ್ವಯಿಸಿದೆ. ಆ ಷರತ್ತನ್ನು ಒಪ್ಪಿಕೊಂಡಿರುವ ಜನರು, ಖಾಸಗಿ ಕಂಪನಿ (Private Company)ಯ ಪೆಟ್ರೋಲ್​ ಪಂಪ್​ ಎದುರು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಈ ಸಂಸ್ಥೆಯ ನಡೆ ಸ್ವಲ್ಪ ಅನುಮಾನ ಮೂಡಿಸಿದೆ. 

ಕಾಂಚೀಪುರಂನ ಖಾಸಗಿ ಕಂಪನಿ ಕೇಳಿದ್ದು ಮತ್ತೇನಲ್ಲ. ಪೆಟ್ರೋಲ್​ ಬೇಕಾದವರು ತಮ್ಮ ಆಧಾರ್​ ಮತ್ತು ಪಾನ್​ ಕಾರ್ಡ್ ಜೆರಾಕ್ಸ್ ಕಾಪಿಗಳನ್ನು ನಮಗೆ ಕೊಡಬೇಕು ಎಂದು ಹೇಳಿದೆ. ಕಾಂಚೀಪುರಂನ ಉತಿರಾಮೇರೂರು ಎಂಬ ಹಳ್ಳಿಯ ಬಳಿ ಕಂಪನಿ ಪೆಟ್ರೋಲ್​ ಪಂಪ್ ನಿರ್ಮಿಸಿದ್ದು, ಆ ಹಳ್ಳಿಯ ಜನರು ತಮ್ಮತಮ್ಮ ಆಧಾರ್​ ಮತ್ತು ಪಾನ್​ಕಾರ್ಡ್​ ಜೆರಾಕ್ಸ್​ ಕಾಪಿಗಳನ್ನು ಹಿಡಿದುಕೊಂಡು ಬಂದಿದ್ದಾರೆ. ನಮಗೂ ಒಂದು ಲೀಟರ್​ ಪೆಟ್ರೋಲ್​ ಕೊಡಿ ಎನ್ನುತ್ತಿದ್ದಾರೆ.

ಅನುಮಾನ ಹುಟ್ಟಿಸಿದ ಕಂಪನಿ ಹೀಗೊಂದು ಆಫರ್​ ಇಟ್ಟ ಕಂಪನಿಯ ಹೆಸರು ಶ್ರೀರಾಮ್​ ಕಮರ್ಷಿಯಲ್​ ವೆಹಿಕಲ್​ ಫೈನಾನ್ಸ್​. ಹಳ್ಳಿ ಜನರು ಇದೊಂದು ತುಂಬ ಸರಳವಾದ ಷರತ್ತು ಎಂದು ಭಾವಿಸಿ ತಮ್ಮತಮ್ಮ ಆಧಾರ್​-ಪಾನ್​ ಕಾರ್ಡ್​ ವಿವರಗಳನ್ನು ಕಂಪನಿಗೆ ಕೊಡುತ್ತಿದ್ದಾರೆ. ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ. ಕಂಪನಿಗೇಕೆ ಸ್ಥಳೀಯ ಜನರ ಆಧಾರ್​ ಮತ್ತು ಪಾನ್​ ಕಾರ್ಡ್​ ವಿವರ ಬೇಕು? ಅದನ್ನು ತೆಗೆದುಕೊಂಡು ಕಂಪನಿ ಏನು ಮಾಡುತ್ತದೆ? ಯಾವ ಉದ್ದೇಶಕ್ಕಾಗಿ ಹೀಗೊಂದು ಆಫರ್​ನ್ನು ಅದು ಮುಂದಿಟ್ಟಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ವಿಚಾರವಂತರು ಎತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್​ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 801 ಜನರಿಗೆ ಕೊರೊನಾ ದೃಢ; 15 ಮಂದಿ ಸಾವು

Published On - 8:59 pm, Sat, 11 September 21

Follow Us
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಅಡ್ಡಮತದಾನ ಮಾಡಿದವರಿಗೆ ತಕ್ಕ ಶಾಸ್ತಿ: ಹೈಕಮಾಂಡ್ ಗುಟ್ಟು ಬಿಚ್ಚಿಟ್ಟ ಅಶೋಕ್
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಪೋರ್ಟರ್, ರ‍್ಯಾಪಿಡೋ ಆ್ಯಪ್​​ಗಳ ವಿರುದ್ಧ ಬೀದಿಗಿಳಿದ ಗೂಡ್ಸ್ ವಾಹನ ಚಾಲಕರು
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಬೆಂಗಳೂರು ರಸ್ತೆ ಅಭಿವೃದ್ಧಿ ಅನುದಾನದ ಬಗ್ಗೆ ತೇಜಸ್ವಿ ಸೂರ್ಯ ವಾಗ್ದಾಳಿ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಮುಮ್ಮಡಿ ನಿರ್ವಾಣ ಸ್ವಾಮೀಜಿ ಅಂತಿಮ ದರ್ಶನದ ವೇಳೆ ಸಿಎಂ ಡಿಕೆಶಿ ಭಾವುಕ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
ಧರ್ಮಸ್ಥಳದಲ್ಲಿ ಶಾಸಕರ ಆಣೆ ಪ್ರಮಾಣ ನಿರ್ಧಾರದಿಂದ ಹಿಂದೆ ಸರಿದ ಬಿಜೆಪಿ
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
‘ಹೀರೋಗಳು ವರ್ಷಕ್ಕೆ ಒಂದಾದರೂ ಸಿನಿಮಾ ಕೊಡಬೇಕು, ಆಗ ಇಂಡಸ್ಟ್ರಿ ಉಳಿಯುತ್ತೆ’
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ರಾಕಸಕೊಪ್ಪ ಡ್ಯಾಂ ಖಾಲಿ: ಬೆಳಗಾವಿ ನಗರದ ಕುಡಿಯುವ ನೀರಿನ ಸಮಸ್ಯೆ ತೀವ್ರ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟದಲ್ಲಿ ಒಂಟಿ ಸಲಗದ ಅಟಾಟೋಪ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ಕನಕಪುರ ದೇಗುಲ ಮಠದ ಹಿರಿಯ ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಲಿಂಗೈಕ್ಯ
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್
ನಿರ್ಮಲಾನಂದನಾಥಶ್ರೀ ಭೇಟಿಯಾದ ಸಿಎಂ ಡಿಕೆ ಶಿವಕುಮಾರ್