AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !

Tamil Nadu: ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !
ಆಧಾರ್​-ಪಾನ್​ ವಿವರ ಪಡೆದು ಪೆಟ್ರೋಲ್​ ವಿತರಣೆ
Follow us
TV9 Web
| Updated By: Lakshmi Hegde

Updated on:Sep 11, 2021 | 8:59 PM

ಪೆಟ್ರೋಲ್​ ದರ (Petrol Price) ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರ ಆಕ್ರೋಶಕ್ಕೆ ಕೂಡ ಕಾರಣ ಆಗುತ್ತಿದೆ. ಇನ್ನೂ ಅನೇಕರಿಗೆ ತಮ್ಮ ಬಳಿ ವಾಹನ ಇದ್ದರೂ ಅದಕ್ಕೆ ಪೆಟ್ರೋಲ್ (Petrol)​ ಹಾಕಲು ಸಾಧ್ಯವಾಗದ ಪರಿಸ್ಥಿತಿ. ಹೀಗಿರುವಾಗ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದು ಉಚಿತವಾಗಿ ಒಂದು ಲೀಟರ್​ ಪೆಟ್ರೋಲ್​ ಕೊಡೋದಾಗಿ ಹೇಳಿದೆ. ಆದರೆ ಒಂದು ಷರತ್ತು ಅನ್ವಯಿಸಿದೆ. ಆ ಷರತ್ತನ್ನು ಒಪ್ಪಿಕೊಂಡಿರುವ ಜನರು, ಖಾಸಗಿ ಕಂಪನಿ (Private Company)ಯ ಪೆಟ್ರೋಲ್​ ಪಂಪ್​ ಎದುರು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಈ ಸಂಸ್ಥೆಯ ನಡೆ ಸ್ವಲ್ಪ ಅನುಮಾನ ಮೂಡಿಸಿದೆ. 

ಕಾಂಚೀಪುರಂನ ಖಾಸಗಿ ಕಂಪನಿ ಕೇಳಿದ್ದು ಮತ್ತೇನಲ್ಲ. ಪೆಟ್ರೋಲ್​ ಬೇಕಾದವರು ತಮ್ಮ ಆಧಾರ್​ ಮತ್ತು ಪಾನ್​ ಕಾರ್ಡ್ ಜೆರಾಕ್ಸ್ ಕಾಪಿಗಳನ್ನು ನಮಗೆ ಕೊಡಬೇಕು ಎಂದು ಹೇಳಿದೆ. ಕಾಂಚೀಪುರಂನ ಉತಿರಾಮೇರೂರು ಎಂಬ ಹಳ್ಳಿಯ ಬಳಿ ಕಂಪನಿ ಪೆಟ್ರೋಲ್​ ಪಂಪ್ ನಿರ್ಮಿಸಿದ್ದು, ಆ ಹಳ್ಳಿಯ ಜನರು ತಮ್ಮತಮ್ಮ ಆಧಾರ್​ ಮತ್ತು ಪಾನ್​ಕಾರ್ಡ್​ ಜೆರಾಕ್ಸ್​ ಕಾಪಿಗಳನ್ನು ಹಿಡಿದುಕೊಂಡು ಬಂದಿದ್ದಾರೆ. ನಮಗೂ ಒಂದು ಲೀಟರ್​ ಪೆಟ್ರೋಲ್​ ಕೊಡಿ ಎನ್ನುತ್ತಿದ್ದಾರೆ.

ಅನುಮಾನ ಹುಟ್ಟಿಸಿದ ಕಂಪನಿ ಹೀಗೊಂದು ಆಫರ್​ ಇಟ್ಟ ಕಂಪನಿಯ ಹೆಸರು ಶ್ರೀರಾಮ್​ ಕಮರ್ಷಿಯಲ್​ ವೆಹಿಕಲ್​ ಫೈನಾನ್ಸ್​. ಹಳ್ಳಿ ಜನರು ಇದೊಂದು ತುಂಬ ಸರಳವಾದ ಷರತ್ತು ಎಂದು ಭಾವಿಸಿ ತಮ್ಮತಮ್ಮ ಆಧಾರ್​-ಪಾನ್​ ಕಾರ್ಡ್​ ವಿವರಗಳನ್ನು ಕಂಪನಿಗೆ ಕೊಡುತ್ತಿದ್ದಾರೆ. ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ. ಕಂಪನಿಗೇಕೆ ಸ್ಥಳೀಯ ಜನರ ಆಧಾರ್​ ಮತ್ತು ಪಾನ್​ ಕಾರ್ಡ್​ ವಿವರ ಬೇಕು? ಅದನ್ನು ತೆಗೆದುಕೊಂಡು ಕಂಪನಿ ಏನು ಮಾಡುತ್ತದೆ? ಯಾವ ಉದ್ದೇಶಕ್ಕಾಗಿ ಹೀಗೊಂದು ಆಫರ್​ನ್ನು ಅದು ಮುಂದಿಟ್ಟಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ವಿಚಾರವಂತರು ಎತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್​ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 801 ಜನರಿಗೆ ಕೊರೊನಾ ದೃಢ; 15 ಮಂದಿ ಸಾವು

Published On - 8:59 pm, Sat, 11 September 21

‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ಅವನ ನಟನೆ ನೋಡೋದೇ ಆನಂದ’; ರಾಕೇಶ್ ನೆನೆದು ಸೆಲೆಬ್ರಿಟಿಗಳ ಕಣ್ಣೀರು
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
‘ನಾನು ಯಶ್ ಅಭಿಮಾನಿ ಅಲ್ಲ, ಆದರೆ ಆ ಹೀರೋ ನಂಗೆ ಆದರ್ಶ’; ಯಶ್ ತಾಯಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily Devotional: ಪಂಚಮುಖಿ ಹನುಮನ ಉಪಾಸನೆಯ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
Daily horoscope: ಕುಜ ಕರ್ಕಾಟಕ ರಾಶಿ, ಚಂದ್ರ ಮೀನ ರಾಶಿಯಲ್ಲಿ ಸಂಚಾರ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಬಾಗಲಕೋಟೆ ಸೇರಿ ರಾಜ್ಯದ 5 ರೈಲು ನಿಲ್ದಾಣಗಳನ್ನು ಉದ್ಘಾಟಿಸಲಿರುವ ಮೋದಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಸೊಸೆ ರಾಧಿಕಾ ನನಗೆ ಗುಡ್ ಎನ್ನಬೇಕು: ಸಿನಿಮಾ ಕನಸು ಹೇಳಿಕೊಂಡ ಯಶ್ ತಾಯಿ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಅಧಿಕಾರ ಸ್ವೀಕರಿಸಿದ ನೂತನ ಡಿಜಿಪಿ ಡಾ. ಎಂ. ಎ ಸಲೀಂ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ಸಿಂಧ್​ನಲ್ಲಿ ನೀರಿಗಾಗಿ ಹಿಂಸಾಚಾರ; ಇಬ್ಬರು ಸಾವು, ಸಚಿವರ ಮನೆಗೆ ಬೆಂಕಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಮ್ಮ ಬ್ಯಾನರ್ 2ನೇ ಸಿನಿಮಾ ಶರಣ್ ಜತೆ: ಸಿಹಿ ಸುದ್ದಿ ನೀಡಿದ ಯಶ್ ತಾಯಿ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ
ನಾನು ರೆಡ್ ಕಾರ್ಪೆಟ್ ಮೇಲೆ ನಿಂತಿದ್ದರೆ ಪ್ರಶ್ನೆ ಉದ್ಭವಿಸುತ್ತದೆ: ಸಿಎಂ