AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !

Tamil Nadu: ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ.

ಉಚಿತವಾಗಿ ಪೆಟ್ರೋಲ್​ ನೀಡುತ್ತಿದೆ ಈ ಖಾಸಗಿ ಕಂಪನಿ; ಆದರೆ ಅನುಮಾನ ಹುಟ್ಟಿಸಿದೆ ಸಂಸ್ಥೆ ಹಾಕಿರುವ ಷರತ್ತು !
ಆಧಾರ್​-ಪಾನ್​ ವಿವರ ಪಡೆದು ಪೆಟ್ರೋಲ್​ ವಿತರಣೆ
TV9 Web
| Edited By: |

Updated on:Sep 11, 2021 | 8:59 PM

Share

ಪೆಟ್ರೋಲ್​ ದರ (Petrol Price) ಏರಿಕೆಯಾಗುತ್ತಿದೆ. ಇದು ಜನಸಾಮಾನ್ಯರ ಆಕ್ರೋಶಕ್ಕೆ ಕೂಡ ಕಾರಣ ಆಗುತ್ತಿದೆ. ಇನ್ನೂ ಅನೇಕರಿಗೆ ತಮ್ಮ ಬಳಿ ವಾಹನ ಇದ್ದರೂ ಅದಕ್ಕೆ ಪೆಟ್ರೋಲ್ (Petrol)​ ಹಾಕಲು ಸಾಧ್ಯವಾಗದ ಪರಿಸ್ಥಿತಿ. ಹೀಗಿರುವಾಗ ತಮಿಳುನಾಡಿನ ಕಾಂಚೀಪುರಂ ಜಿಲ್ಲೆಯಲ್ಲಿ ಖಾಸಗಿ ಕಂಪನಿಯೊಂದು ಉಚಿತವಾಗಿ ಒಂದು ಲೀಟರ್​ ಪೆಟ್ರೋಲ್​ ಕೊಡೋದಾಗಿ ಹೇಳಿದೆ. ಆದರೆ ಒಂದು ಷರತ್ತು ಅನ್ವಯಿಸಿದೆ. ಆ ಷರತ್ತನ್ನು ಒಪ್ಪಿಕೊಂಡಿರುವ ಜನರು, ಖಾಸಗಿ ಕಂಪನಿ (Private Company)ಯ ಪೆಟ್ರೋಲ್​ ಪಂಪ್​ ಎದುರು ಸಾಲುಗಟ್ಟಿ ನಿಂತಿದ್ದಾರೆ. ಆದರೆ ಈ ಸಂಸ್ಥೆಯ ನಡೆ ಸ್ವಲ್ಪ ಅನುಮಾನ ಮೂಡಿಸಿದೆ. 

ಕಾಂಚೀಪುರಂನ ಖಾಸಗಿ ಕಂಪನಿ ಕೇಳಿದ್ದು ಮತ್ತೇನಲ್ಲ. ಪೆಟ್ರೋಲ್​ ಬೇಕಾದವರು ತಮ್ಮ ಆಧಾರ್​ ಮತ್ತು ಪಾನ್​ ಕಾರ್ಡ್ ಜೆರಾಕ್ಸ್ ಕಾಪಿಗಳನ್ನು ನಮಗೆ ಕೊಡಬೇಕು ಎಂದು ಹೇಳಿದೆ. ಕಾಂಚೀಪುರಂನ ಉತಿರಾಮೇರೂರು ಎಂಬ ಹಳ್ಳಿಯ ಬಳಿ ಕಂಪನಿ ಪೆಟ್ರೋಲ್​ ಪಂಪ್ ನಿರ್ಮಿಸಿದ್ದು, ಆ ಹಳ್ಳಿಯ ಜನರು ತಮ್ಮತಮ್ಮ ಆಧಾರ್​ ಮತ್ತು ಪಾನ್​ಕಾರ್ಡ್​ ಜೆರಾಕ್ಸ್​ ಕಾಪಿಗಳನ್ನು ಹಿಡಿದುಕೊಂಡು ಬಂದಿದ್ದಾರೆ. ನಮಗೂ ಒಂದು ಲೀಟರ್​ ಪೆಟ್ರೋಲ್​ ಕೊಡಿ ಎನ್ನುತ್ತಿದ್ದಾರೆ.

ಅನುಮಾನ ಹುಟ್ಟಿಸಿದ ಕಂಪನಿ ಹೀಗೊಂದು ಆಫರ್​ ಇಟ್ಟ ಕಂಪನಿಯ ಹೆಸರು ಶ್ರೀರಾಮ್​ ಕಮರ್ಷಿಯಲ್​ ವೆಹಿಕಲ್​ ಫೈನಾನ್ಸ್​. ಹಳ್ಳಿ ಜನರು ಇದೊಂದು ತುಂಬ ಸರಳವಾದ ಷರತ್ತು ಎಂದು ಭಾವಿಸಿ ತಮ್ಮತಮ್ಮ ಆಧಾರ್​-ಪಾನ್​ ಕಾರ್ಡ್​ ವಿವರಗಳನ್ನು ಕಂಪನಿಗೆ ಕೊಡುತ್ತಿದ್ದಾರೆ. ಪೆಟ್ರೋಲ್​ ಬೆಲೆ ಗಗನಕ್ಕೇರಿರುವಾಗ ಹೀಗೆ ಒಂದು ಲೀಟರ್​ ಪೆಟ್ರೋಲ್​ ಪುಕ್ಕಟೆ ಸಿಕ್ಕರೆ ಯಾರಿಗೆ ಬೇಡ ಎನ್ನುತ್ತಿದ್ದಾರೆ.  ಆದರೆ ಈ ಬಗ್ಗೆ ಈಗಾಗಲೇ ಸ್ಥಳೀಯವಾಗಿ ವ್ಯಾಪಕ ಚರ್ಚೆಯೂ ಆಗುತ್ತಿದೆ. ಕಂಪನಿಗೇಕೆ ಸ್ಥಳೀಯ ಜನರ ಆಧಾರ್​ ಮತ್ತು ಪಾನ್​ ಕಾರ್ಡ್​ ವಿವರ ಬೇಕು? ಅದನ್ನು ತೆಗೆದುಕೊಂಡು ಕಂಪನಿ ಏನು ಮಾಡುತ್ತದೆ? ಯಾವ ಉದ್ದೇಶಕ್ಕಾಗಿ ಹೀಗೊಂದು ಆಫರ್​ನ್ನು ಅದು ಮುಂದಿಟ್ಟಿದೆ? ಎಂಬಿತ್ಯಾದಿ ಪ್ರಶ್ನೆಗಳನ್ನು ವಿಚಾರವಂತರು ಎತ್ತಿದ್ದಾರೆ.

ಇದನ್ನೂ ಓದಿ: ಕಲಬುರಗಿ: ಸಿದ್ದರಾಮಯ್ಯ ‘ಹೂ‘ ಅನ್ನದೇ ಕಾಂಗ್ರೆಸ್​ ಜೆಡಿಎಸ್ ಒಪ್ಪಂದ ಆಗದು: ಸಚಿವ ಆರ್ ಅಶೋಕ್

Karnataka Covid19 Update: ಕರ್ನಾಟಕದಲ್ಲಿ ಹೊಸದಾಗಿ 801 ಜನರಿಗೆ ಕೊರೊನಾ ದೃಢ; 15 ಮಂದಿ ಸಾವು

Published On - 8:59 pm, Sat, 11 September 21

Follow Us
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಮಹಿಳಾ PSI ವರ್ಗಾವಣೆ ಆಗಿದ್ದಕ್ಕೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಯುವಕರು!
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
ಬೆಟ್ಟದ ರಂಗನಾಥ ಸ್ವಾಮಿ ದೇವಾಲಯದಲ್ಲಿ ಹೆಚ್.ಡಿ. ಕುಮಾರಸ್ವಾಮಿ ವಿಶೇಷ ಪೂಜೆ
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
‘ಹಳ್ಳಿ ಪವರ್ ರಿಯಾಲಿಟಿ ಶೋ’: ವಾಡೆ ಮನೆಗೆ ಗ್ರಹಪ್ರವೇಶ ಮಾಡಿದ ಸ್ಪರ್ಧಿಗಳು
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
ಹಳೇ ಹುಬ್ಬಳ್ಳಿ ಆಸಾರ ಓಣಿ ಪುಷ್ಕರಣಿ ವಿವಾದ: ಹಿಂದೂಪರ ಸಂಘಟನೆಗಳ ಪ್ರತಿಭಟನೆ
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
28 ಕೈದಿಗಳ ಬಿಡುಗಡೆಗೆ ಸಚಿವ ಸಂಪುಟ ಅಸ್ತು
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ
ಇಂದು ಶ್ರಾವಣ ಶನಿವಾರ; ವೆಂಕಟೇಶ್ವರನ ದರ್ಶನ ಹಾಗೂ ನಾಮಸ್ಮರಣೆಗೆ ಶುಭ ದಿನ