AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Video: ರಾಮಾಯಣಕ್ಕೆ ಅವಮಾನ ಮಾಡಿದ ಏಮ್ಸ್​ ವಿದ್ಯಾರ್ಥಿಗಳಿಂದ ಕ್ಷಮೆ ಯಾಚನೆ

ಏಮ್ಸ್​ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದ ರಾಮಾಯಣಕ್ಕೆ ಸಂಬಂಧಪಟ್ಟ ಸ್ಕಿಟ್​ (ವಿಡಂಬನೆ)ನಿಂದ ತೀವ್ರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏಮ್ಸ್​ ವಿದ್ಯಾರ್ಥಿಗಳ ಸಂಘ (Students  Association of AIIMS) ಕ್ಷಮೆಯಾಚಿಸಿದೆ. ಇವರ ಸ್ಕಿಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಪ್ರಮಾದದ ಅರಿವಾಗುತ್ತಿದ್ದಂತೆ ಕ್ಷಮೆಯಾಚಿಸಿದ ವಿದ್ಯಾರ್ಥಿಗಳ ಸಂಘ, ನಮಗೆ ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶವಿರಲಿಲ್ಲ. ಮುಂದೆ ಕೂಡ ಇಂಥ ಪ್ರಮಾದ ಆಗದ ರೀತಿ ಎಚ್ಚರವಹಿಸುತ್ತೇವೆ ಎಂದು  ಹೇಳಿಕೊಂಡಿದೆ.  ರಾಮಾಯಣಕ್ಕೆ ಹಾಸ್ಯದ ಸ್ಪರ್ಶಕೊಟ್ಟು ಏಮ್ಸ್​ ವಿದ್ಯಾರ್ಥಿಗಳು […]

Video: ರಾಮಾಯಣಕ್ಕೆ ಅವಮಾನ ಮಾಡಿದ ಏಮ್ಸ್​ ವಿದ್ಯಾರ್ಥಿಗಳಿಂದ ಕ್ಷಮೆ ಯಾಚನೆ
ಏಮ್ಸ್​ ವಿದ್ಯಾರ್ಥಿಗಳ ರಾಮಾಯಣ ಸ್ಕಿಟ್​ ಪ್ರದರ್ಶನ
TV9 Web
| Updated By: Lakshmi Hegde|

Updated on: Oct 17, 2021 | 5:14 PM

Share

ಏಮ್ಸ್​ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ್ದ ರಾಮಾಯಣಕ್ಕೆ ಸಂಬಂಧಪಟ್ಟ ಸ್ಕಿಟ್​ (ವಿಡಂಬನೆ)ನಿಂದ ತೀವ್ರ ವಿವಾದ ಸೃಷ್ಟಿಯಾದ ಹಿನ್ನೆಲೆಯಲ್ಲಿ ಏಮ್ಸ್​ ವಿದ್ಯಾರ್ಥಿಗಳ ಸಂಘ (Students  Association of AIIMS) ಕ್ಷಮೆಯಾಚಿಸಿದೆ. ಇವರ ಸ್ಕಿಟ್​ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬೆನ್ನಲ್ಲೇ ಜನರಿಂದ ತೀವ್ರ ಅಸಮಾಧಾನ ವ್ಯಕ್ತವಾಗಿತ್ತು. ಪ್ರಮಾದದ ಅರಿವಾಗುತ್ತಿದ್ದಂತೆ ಕ್ಷಮೆಯಾಚಿಸಿದ ವಿದ್ಯಾರ್ಥಿಗಳ ಸಂಘ, ನಮಗೆ ಯಾರ ಭಾವನೆಗಳಿಗೂ ನೋವುಂಟುಮಾಡುವ ಉದ್ದೇಶವಿರಲಿಲ್ಲ. ಮುಂದೆ ಕೂಡ ಇಂಥ ಪ್ರಮಾದ ಆಗದ ರೀತಿ ಎಚ್ಚರವಹಿಸುತ್ತೇವೆ ಎಂದು  ಹೇಳಿಕೊಂಡಿದೆ. 

ರಾಮಾಯಣಕ್ಕೆ ಹಾಸ್ಯದ ಸ್ಪರ್ಶಕೊಟ್ಟು ಏಮ್ಸ್​ ವಿದ್ಯಾರ್ಥಿಗಳು ಪ್ರದರ್ಶನ ನೀಡಿದ್ದರು. ಅದರಲ್ಲಿ ಶೂರ್ಫನಖಿಯ ಪಾತ್ರವನ್ನು ತುಂಬ ಆಧುನಿಕವಾಗಿ ರೂಪಿಸಲಾಗಿತ್ತು. ಆಕೆ ತ್ರೀಫೋರ್ಥ್ ಪ್ಯಾಂಟ್​ ಹಾಕಿಕೊಂಡು ನಟಿಸಿದ್ದಳು. ತೂ ಚೀಜ್​ ಬಡಿ ಹೈ ಮಸ್ತ್​ ಮಸ್ತ್​ ಎಂಬ ಹಾಡನ್ನು ಲಕ್ಷ್ಮಣನನ್ನು ಉಲ್ಲೇಖಿಸಿ ಹಾಡಿದ್ದಳು. ಅದಾದ ಬಳಿಕ ಲಕ್ಷ್ಮಣ ಶೂರ್ಪನಖಿ ಮೂಗನ್ನು ಕತ್ತರಿಸಿದ್ದ. ನನ್ನ ಸಹೋದರ ಯಾರೆಂದು ನಿನಗೆ ತಿಳಿದಿಲ್ಲವೇ ಎಂದು ಆಕೆ ಪ್ರಶ್ನಿಸುವಂತೆ ಸ್ಕಿಟ್ ಸಾಗಿದೆ. ಆದರೆ ಈ ವಿಡಿಯೋ ಸೋಷಿಯಲ್​ ಮೀಡಿಯಾದಲ್ಲಿ ವೈರಲ್​ ಆದ ಬಳಿಕ ನೆಟ್ಟಿಗರು ಅದನ್ನು ಮೆಚ್ಚಿಕೊಳ್ಳಲಿಲ್ಲ. ರಾಮಲೀಲಾಕ್ಕೆ ಹಾಸ್ಯದ ಸ್ಪರ್ಶ ಕೊಡಲು ಹೋಗಿ ಹಿಂದುಗಳ ಭಾವನೆಗೆ ಧಕ್ಕೆ ಮಾಡಲಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಅಂದಹಾಗೆ ಈ ಶೋವನ್ನು ಎಂಬಿಬಿಎಸ್​ ವಿದ್ಯಾರ್ಥಿ ಸೋಯೆಬ್​ ಅಫ್ತಾಬ್​ ಹೋಸ್ಟ್​ ಮಾಡಿದ್ದ..ಶೈಕ್ಷಣಿಕ ಆ್ಯಪ್​​ವೊಂದು ಇದನ್ನು ಪ್ರಾಯೋಜಿಸಿತ್ತು ಎಂಬುದು ಗೊತ್ತಾಗಿದೆ.

ಇದನ್ನೂ ಓದಿ: ಭಾರತ-ಪಾಕ್ ಪಂದ್ಯದ ದಿನ ಸೋಶಿಯಲ್ ಮೀಡಿಯಾದಿಂದ ದೂರವಾಗಲಿದ್ದಾರೆ ಸಾನಿಯಾ ಮಿರ್ಜಾ! ಕಾರಣವೇನು ಗೊತ್ತಾ?

‘ತಾಳಿ ಕಟ್ಟುವಾಗಲೇ ಹೆಂಡತಿ ಮುಖ ನೋಡಿದ್ದು’: ಹಿರಿಯ ನಟ ದೊಡ್ಡಣ್ಣ ಮದುವೆಯ ರಿಯಲ್​ ಸ್ಟೋರಿ

ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ