AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: ಮೇ 3ರಿಂದ ಈ ಮಾರ್ಗದಲ್ಲಿ ಏರ್​ ಇಂಡಿಯಾ ವಿಮಾನ ಸೇವೆ ಆರಂಭ

ಏರ್​ ಇಂಡಿಯಾ(Air India) ವಿಮಾನವು ಮೇ 3 ರಿಂದ ಈ ಮಾರ್ಗದಲ್ಲಿ ಸೇವೆಯನ್ನು ಆರಂಭಿಸಲಿದೆ. ಮುಂಬೈ-ಕೊಯಮತ್ತೂರು ನಡುವೆ ಹಾರಾಟ ಶುರುವಾಗಲಿದೆ.

Air India: ಮೇ 3ರಿಂದ ಈ ಮಾರ್ಗದಲ್ಲಿ ಏರ್​ ಇಂಡಿಯಾ ವಿಮಾನ ಸೇವೆ ಆರಂಭ
ಏರ್ ಇಂಡಿಯಾ
ನಯನಾ ರಾಜೀವ್
|

Updated on: May 02, 2023 | 11:18 AM

Share

ಏರ್​ ಇಂಡಿಯಾ(Air India) ವಿಮಾನವು ಮೇ 3 ರಿಂದ ಈ ಮಾರ್ಗದಲ್ಲಿ ಸೇವೆಯನ್ನು ಆರಂಭಿಸಲಿದೆ. ಮುಂಬೈ-ಕೊಯಮತ್ತೂರು ನಡುವೆ ಹಾರಾಟ ಶುರುವಾಗಲಿದೆ. A320-Neo ಫ್ಲೀಟ್ ವಿಮಾನವು ಎಲ್ಲಾ ಏಳು ದಿನಗಳಲ್ಲಿ ಪ್ರತಿದಿನ ಕಾರ್ಯನಿರ್ವಹಿಸುತ್ತದೆ. ವಿಮಾನವು AI 609 ಮುಂಬೈನಿಂದ ಬೆಳಿಗ್ಗೆ 6:30 ಕ್ಕೆ ಹೊರಟು 8:20 ಕ್ಕೆ ಕೊಯಮತ್ತೂರು ತಲುಪುತ್ತದೆ. ಹಿಂದಿರುಗುವ AI 608 ವಿಮಾನವು ಕೊಯಮತ್ತೂರಿನಿಂದ 9 ಗಂಟೆಗೆ ಹೊರಟು 11 ಗಂಟೆಗೆ ಮುಂಬೈ ತಲುಪಲಿದೆ.

ಅದೇ ವಿಮಾನವು ಪ್ರಯಾಣಿಕರಿಗೆ ಮುಂಬೈನಿಂದ ಲಂಡನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: Air India: ಏರ್​ ಇಂಡಿಯಾ ಪೈಲಟ್ ಕಾಕ್​ಪಿಟ್​ ಒಳಗೆ ಗೆಳತಿಯ ಕರೆದೊಯ್ದ ಪ್ರಕರಣ: ಸಿಇಒ ವಿಲ್ಸನ್​ಗೆ ಶೋಕಾಸ್ ನೋಟಿಸ್

ಮುಂಬೈನಿಂದ ಕೊಯಮತ್ತೂರಿಗೆ ಈಗಾಗಲೇ ಇಂಡಿಗೋದಿಂದ ಎರಡು ವಿಮಾನ, ವಿಸ್ತಾರದಿಂದ ಒಂದು ವಿಮಾನ ಹಾರಾಟ ನಡೆಸುತ್ತಿದೆ.

ಪ್ರಸ್ತುತ, ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಪ್ರತಿದಿನ 23 ದೇಶೀಯ ವಿಮಾನಗಳು ಮತ್ತು ಸಿಂಗಾಪುರ ಮತ್ತು ಶಾರ್ಜಾದಿಂದ ಎರಡು ಅಂತಾರಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತದೆ. ದಿನಕ್ಕೆ ಸರಾಸರಿ 8,750 ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಾರೆ.

ಏರ್ ಇಂಡಿಯಾ (AI/AIC) ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ. ಸರ್ಕಾರಿ ಸ್ವಾಮ್ಯದ ಉದ್ಯಮವಾದ ಏರ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ. ಏರ್ ಇಂಡಿಯಾ ನ್ಯಾಷನಲ್ ಏವಿಯೇಷನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ ಭಾಗವಾಗಿದೆ . ನಾಲ್ಕು ಖಂಡಗಳಾದ್ಯಂತ ಏರ್ ಇಂಡಿಯಾವು ಸುಮಾರು 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆ ಸಲ್ಲಿಸುತ್ತದೆ.

ಈ ವಿಮಾನಯಾನ ಸಂಸ್ಥೆಯನ್ನು 1932ರಲ್ಲಿ ಜೆ.ಆರ್.ಡಿ. ಟಾಟಾ ರವರು ಟಾಟಾ ಏರ್ಲೈನ್ಸ್ ಎ೦ದು ಸ್ಥಾಪಿಸಿದರು. 1946 ರಲ್ಲಿ ಕಂಪೆನಿಯ ಹೆಸರು ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಯಿತು. ಇದರ ಹೆಸರು 1953 ರಲ್ಲಿ ಪ್ರಸಕ್ತ ಹೆಸರು ಏರ್ ಇಂಡಿಯಾ ಎ೦ದು ಬದಲಾಯಿತು .

ಆ ಹೊತ್ತಿಗೆ ಏರ್ ಇಂಡಿಯಾವು ಭಾರತ ಸರಕಾರದ ಒಡೆತನದಲ್ಲಿತ್ತು. 1999 ರಿಂದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ಗಳನ್ನು ವಿಲೀನಗೊಳಿಸಲು ಬಹಳಷ್ಟು ಪ್ರಯತ್ನಗಳು ನಡೆಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಬಿಬಿಎಲ್ ಚೊಚ್ಚಲ ಪಂದ್ಯದಲ್ಲಿ ಮುಗ್ಗರಿಸಿದ ಬಾಬರ್ ಆಝಂ
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಶಿವಾಜಿ ಇಲ್ಲದಿದ್ದರೆ ಎಲ್ಲರ ಸುನ್ನತಿ ಆಗುತ್ತಿತ್ತು: ಯತ್ನಾಳ್
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ಪ್ರೀತಿಸಿ ಮೋಸ: ಪ್ರಿಯಕರನ ಮದ್ವೆಗೆ ನುಗ್ಗಿ ರಣಚಂಡಿ ಅವತಾರ ತಾಳಿದ ಪ್ರೇಯಿಸಿ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ರಾತ್ರಿಯಾದ್ರೆ ಸಾಕು ಬೆಡ್ ರೂಂ ಬಳಿ ಸೈಕೋ ಪ್ರತ್ಯಕ್ಷ! ಬೇಸತ್ತ ವೈದ್ಯೆ
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಕಾಮಚೇಷ್ಟೆ ಮಾಡ್ತಿದ್ದ ಸೈಕೋಪಾತ್​​​ಗೆ ಮಹಿಳೆಯರಿಂದ ಬಿಸಿ ಬಿಸಿ ಕಜ್ಜಾಯ!
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಸಿಡ್ನಿಯ ಬೊಂಡಿ ಬೀಚ್​ನಲ್ಲಿ ಸಾಮೂಹಿಕ ಗುಂಡಿನ ದಾಳಿ, 10 ಮಂದಿ ಸಾವು
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪರಪ್ಪನ ಅಗ್ರಹಾರ ಮಹಿಳಾ ಪೊಲೀಸ್ ಸಿಬ್ಬಂದಿಗೆ ಠಾಣೆಯಲ್ಲಿ ಸೀಮಂತ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ಪ್ರೋಮೊನಲ್ಲೇ ಶಾಕ್ ಕೊಟ್ಟ ಬಿಗ್​​ಬಾಸ್: ಮನೆಯಿಂದ ಇಬ್ಬರು ಹೊರಕ್ಕೆ
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ದುರಹಂಕಾರದಿಂದ ಬಿಗ್ ಬಾಸ್ ನಿರೂಪಣೆ ಬೇಡ ಅಂತ ನಾನು ಹೇಳಲಿಲ್ಲ: ಸುದೀಪ್
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​