AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Air India: ಮೇ 3ರಿಂದ ಈ ಮಾರ್ಗದಲ್ಲಿ ಏರ್​ ಇಂಡಿಯಾ ವಿಮಾನ ಸೇವೆ ಆರಂಭ

ಏರ್​ ಇಂಡಿಯಾ(Air India) ವಿಮಾನವು ಮೇ 3 ರಿಂದ ಈ ಮಾರ್ಗದಲ್ಲಿ ಸೇವೆಯನ್ನು ಆರಂಭಿಸಲಿದೆ. ಮುಂಬೈ-ಕೊಯಮತ್ತೂರು ನಡುವೆ ಹಾರಾಟ ಶುರುವಾಗಲಿದೆ.

Air India: ಮೇ 3ರಿಂದ ಈ ಮಾರ್ಗದಲ್ಲಿ ಏರ್​ ಇಂಡಿಯಾ ವಿಮಾನ ಸೇವೆ ಆರಂಭ
ಏರ್ ಇಂಡಿಯಾ
Follow us
ನಯನಾ ರಾಜೀವ್
|

Updated on: May 02, 2023 | 11:18 AM

ಏರ್​ ಇಂಡಿಯಾ(Air India) ವಿಮಾನವು ಮೇ 3 ರಿಂದ ಈ ಮಾರ್ಗದಲ್ಲಿ ಸೇವೆಯನ್ನು ಆರಂಭಿಸಲಿದೆ. ಮುಂಬೈ-ಕೊಯಮತ್ತೂರು ನಡುವೆ ಹಾರಾಟ ಶುರುವಾಗಲಿದೆ. A320-Neo ಫ್ಲೀಟ್ ವಿಮಾನವು ಎಲ್ಲಾ ಏಳು ದಿನಗಳಲ್ಲಿ ಪ್ರತಿದಿನ ಕಾರ್ಯನಿರ್ವಹಿಸುತ್ತದೆ. ವಿಮಾನವು AI 609 ಮುಂಬೈನಿಂದ ಬೆಳಿಗ್ಗೆ 6:30 ಕ್ಕೆ ಹೊರಟು 8:20 ಕ್ಕೆ ಕೊಯಮತ್ತೂರು ತಲುಪುತ್ತದೆ. ಹಿಂದಿರುಗುವ AI 608 ವಿಮಾನವು ಕೊಯಮತ್ತೂರಿನಿಂದ 9 ಗಂಟೆಗೆ ಹೊರಟು 11 ಗಂಟೆಗೆ ಮುಂಬೈ ತಲುಪಲಿದೆ.

ಅದೇ ವಿಮಾನವು ಪ್ರಯಾಣಿಕರಿಗೆ ಮುಂಬೈನಿಂದ ಲಂಡನ್ ಮತ್ತು ಸ್ಯಾನ್ ಫ್ರಾನ್ಸಿಸ್ಕೋಗೆ ಹಾರಲು ಅನುವು ಮಾಡಿಕೊಡುತ್ತದೆ ಎಂದು ಹೇಳಲಾಗಿದೆ.

ಮತ್ತಷ್ಟು ಓದಿ: Air India: ಏರ್​ ಇಂಡಿಯಾ ಪೈಲಟ್ ಕಾಕ್​ಪಿಟ್​ ಒಳಗೆ ಗೆಳತಿಯ ಕರೆದೊಯ್ದ ಪ್ರಕರಣ: ಸಿಇಒ ವಿಲ್ಸನ್​ಗೆ ಶೋಕಾಸ್ ನೋಟಿಸ್

ಮುಂಬೈನಿಂದ ಕೊಯಮತ್ತೂರಿಗೆ ಈಗಾಗಲೇ ಇಂಡಿಗೋದಿಂದ ಎರಡು ವಿಮಾನ, ವಿಸ್ತಾರದಿಂದ ಒಂದು ವಿಮಾನ ಹಾರಾಟ ನಡೆಸುತ್ತಿದೆ.

ಪ್ರಸ್ತುತ, ಕೊಯಮತ್ತೂರು ವಿಮಾನ ನಿಲ್ದಾಣಕ್ಕೆ ಪ್ರತಿದಿನ 23 ದೇಶೀಯ ವಿಮಾನಗಳು ಮತ್ತು ಸಿಂಗಾಪುರ ಮತ್ತು ಶಾರ್ಜಾದಿಂದ ಎರಡು ಅಂತಾರಾರಾಷ್ಟ್ರೀಯ ವಿಮಾನಗಳು ಹಾರಾಟ ನಡೆಸುತ್ತದೆ. ದಿನಕ್ಕೆ ಸರಾಸರಿ 8,750 ಪ್ರಯಾಣಿಕರು ವಿಮಾನ ನಿಲ್ದಾಣವನ್ನು ಬಳಸುತ್ತಾರೆ.

ಏರ್ ಇಂಡಿಯಾ (AI/AIC) ಭಾರತದ ರಾಷ್ಟ್ರೀಯ ವಿಮಾನಯಾನ ಸಂಸ್ಥೆಯಾಗಿದೆ. ಸರ್ಕಾರಿ ಸ್ವಾಮ್ಯದ ಉದ್ಯಮವಾದ ಏರ್ ಇಂಡಿಯಾ ಲಿಮಿಟೆಡ್ ಒಡೆತನದಲ್ಲಿದೆ. ಏರ್ ಇಂಡಿಯಾ ನ್ಯಾಷನಲ್ ಏವಿಯೇಷನ್ ಕಂಪನಿ ಆಫ್ ಇಂಡಿಯಾ ಲಿಮಿಟೆಡ್ ನ ಭಾಗವಾಗಿದೆ . ನಾಲ್ಕು ಖಂಡಗಳಾದ್ಯಂತ ಏರ್ ಇಂಡಿಯಾವು ಸುಮಾರು 60 ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ಸ್ಥಳಗಳಿಗೆ ಸೇವೆ ಸಲ್ಲಿಸುತ್ತದೆ.

ಈ ವಿಮಾನಯಾನ ಸಂಸ್ಥೆಯನ್ನು 1932ರಲ್ಲಿ ಜೆ.ಆರ್.ಡಿ. ಟಾಟಾ ರವರು ಟಾಟಾ ಏರ್ಲೈನ್ಸ್ ಎ೦ದು ಸ್ಥಾಪಿಸಿದರು. 1946 ರಲ್ಲಿ ಕಂಪೆನಿಯ ಹೆಸರು ಏರ್ ಇಂಡಿಯಾ ಇಂಟರ್ನ್ಯಾಷನಲ್ ಆಗಿ ಬದಲಾಯಿತು. ಇದರ ಹೆಸರು 1953 ರಲ್ಲಿ ಪ್ರಸಕ್ತ ಹೆಸರು ಏರ್ ಇಂಡಿಯಾ ಎ೦ದು ಬದಲಾಯಿತು .

ಆ ಹೊತ್ತಿಗೆ ಏರ್ ಇಂಡಿಯಾವು ಭಾರತ ಸರಕಾರದ ಒಡೆತನದಲ್ಲಿತ್ತು. 1999 ರಿಂದ ಏರ್ ಇಂಡಿಯಾ ಮತ್ತು ಇಂಡಿಯನ್ ಏರ್ಲೈನ್ಸ್ಗಳನ್ನು ವಿಲೀನಗೊಳಿಸಲು ಬಹಳಷ್ಟು ಪ್ರಯತ್ನಗಳು ನಡೆಯಿತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ರಮ್ಯಾಗೆ ಚಿನ್ನ ಎಂದರೆ ಇಷ್ಟವೇ? ನಟಿ ಹೇಳಿದ್ದೇನು? ವಿಡಿಯೋ ನೋಡಿ...
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಕಾಂಗ್ರೆಸ್ ನಾಯಕರಿಗೆ ಮಾನವೀಯತೆ ಮತ್ತು ರಾಷ್ಟ್ರವಾದ ಬೇಕಾಗಿಲ್ಲ: ಚಲವಾದಿ
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಪಹಲ್ಗಾಮ್ ಉಗ್ರರ ದಾಳಿಯನ್ನು ಪ್ರತಿಯೊಬ್ಬ ಕಾಶ್ಮೀರಿ ಖಂಡಿಸಿದ್ದಾನೆ: ರಾಹುಲ್
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಕಾಂಗ್ರೆಸ್ ಸರ್ಕಾರದ ಯೋಗ್ಯತೆ ಏನು ಅಂತ ನಮಗೆ ಗೊತ್ತು; ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಬಿಜೆಪಿ ಶಾಸಕರ ಅಮಾನತು ಅಸಂವಿಧಾನಿಕವಾದದ್ದು: ಅಶೋಕ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿಲುವು ಅಭಿನಂದನಾರ್ಹ: ಈಶ್ವರಪ್ಪ
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಶಾಸಕ ಚನ್ನಬಸಪ್ಪ ಹೇಳಿಕೆಗೆ ನಾನು ಪ್ರತಿಕ್ರಿಯೆ ನೀಡಲಾಗದು: ಪರಮೇಶ್ವರ್
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಚಿನ್ನಸ್ವಾಮಿಯಲ್ಲಿ ಮೊದಲ ಗೆಲುವು; ಕುಣಿದು ಕುಪ್ಪಳಿಸಿದ ಕೊಹ್ಲಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಜನರಿಗೆ ಮೋಸ ಮಾಡುವ ಕೆಲಸಕ್ಕೆ ಯಾರೂ ಮುಂದಾಗಬಾರದು: ಕುಲಕರ್ಣಿ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ
ಪಹಲ್ಗಾಮ್​ನಲ್ಲಿ ದಾಳಿಯ ನಡುವೆಯೇ ಉಗ್ರನ ಫೋಟೊ ಕ್ಲಿಕ್ಕಿಸಿದ ಮಹಿಳೆ