AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೈಲ್ವೆ ಚಾಲಕನ ಸಮಯ ಪ್ರಜ್ಞೆ: ಗಜ ಪಡೆ ಬಚಾವು

ಕೊಲ್ಕತ್ತಾ: ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರೈಲ್ವೇ ಹಳಿಗಳನ್ನು ದಾಟಲು ಹೋಗಿ ಅದೆಷ್ಟೋ ವನ್ಯಜೀವಿಗಳು ರೈಲಿಗೆ ಸಿಲುಕಿ ಜೀವಬಿಡುವ ದಾರುಣ ಘಟನೆಗಳು ವರ್ಷಂಪ್ರತಿ ಮರುಕಳಿಸುತ್ತಲೇ ಇರುತ್ತವೆ. ಕಾಡಿನ ದೈತ್ಯ ಜೀವಿಯೆಂದೇ ಗುರುತಿಸಿಕೊಳ್ಳುವ ಆನೆಗಳು ಸಹ ಹಳಿ ದಾಟುವಾಗ ರೈಲಿಗೆ ಸಿಲುಕಿ ಜೀವಬಿಟ್ಟ ಹಲವು ಪ್ರಕರಣಗಳಿವೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ರಾಜ್ಯದ ಸಿವೋಕ್ – ಗುಲ್ಮಾ ಪ್ರದೇಶದಲ್ಲಿ ಇಂಥದ್ದೇ ಒಂದು ಪ್ರಕರಣ ದಾಖಲಾಗಬೇಕಿತ್ತು. ಮರಿಯಾನೆಯೊಂದಿಗೆ ಇನ್ನೆರೆಡು ದೊಡ್ಡ ಆನೆಗಳು ಹಳಿ ದಾಟುತ್ತಿರುವಾಗಲೇ ರೈಲು ಸ್ಥಳಕ್ಕಾಗಮಿಸಿದೆ. ಇನ್ನೇನು ರೈಲು ಆನೆಗಳಿಗೆ ಡಿಕ್ಕಿ […]

ರೈಲ್ವೆ ಚಾಲಕನ ಸಮಯ ಪ್ರಜ್ಞೆ: ಗಜ ಪಡೆ ಬಚಾವು
ಸಾಧು ಶ್ರೀನಾಥ್​
|

Updated on: Nov 13, 2020 | 5:26 PM

Share

ಕೊಲ್ಕತ್ತಾ: ಅರಣ್ಯ ಪ್ರದೇಶದಲ್ಲಿ ಹಾದುಹೋಗುವ ರೈಲ್ವೇ ಹಳಿಗಳನ್ನು ದಾಟಲು ಹೋಗಿ ಅದೆಷ್ಟೋ ವನ್ಯಜೀವಿಗಳು ರೈಲಿಗೆ ಸಿಲುಕಿ ಜೀವಬಿಡುವ ದಾರುಣ ಘಟನೆಗಳು ವರ್ಷಂಪ್ರತಿ ಮರುಕಳಿಸುತ್ತಲೇ ಇರುತ್ತವೆ. ಕಾಡಿನ ದೈತ್ಯ ಜೀವಿಯೆಂದೇ ಗುರುತಿಸಿಕೊಳ್ಳುವ ಆನೆಗಳು ಸಹ ಹಳಿ ದಾಟುವಾಗ ರೈಲಿಗೆ ಸಿಲುಕಿ ಜೀವಬಿಟ್ಟ ಹಲವು ಪ್ರಕರಣಗಳಿವೆ.

ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳ ರಾಜ್ಯದ ಸಿವೋಕ್ – ಗುಲ್ಮಾ ಪ್ರದೇಶದಲ್ಲಿ ಇಂಥದ್ದೇ ಒಂದು ಪ್ರಕರಣ ದಾಖಲಾಗಬೇಕಿತ್ತು. ಮರಿಯಾನೆಯೊಂದಿಗೆ ಇನ್ನೆರೆಡು ದೊಡ್ಡ ಆನೆಗಳು ಹಳಿ ದಾಟುತ್ತಿರುವಾಗಲೇ ರೈಲು ಸ್ಥಳಕ್ಕಾಗಮಿಸಿದೆ. ಇನ್ನೇನು ರೈಲು ಆನೆಗಳಿಗೆ ಡಿಕ್ಕಿ ಹೊಡೆಯಬೇಕು ಎನ್ನುವಷ್ಟರಲ್ಲಿ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ರೈಲಿನ ವೇಗವನ್ನು ಹತೋಟಿಗೆ ತಂದು ಆನೆಗಳಿಂದ ಸ್ವಲ್ಪ ದೂರದಲ್ಲಿಯೇ ರೈಲನ್ನು ನಿಲ್ಲಿಸಿದ್ದಾನೆ!

ಜೊತೆಗೆ ಮರಿಯಾನೆ ಹಾಗೂ ದೊಡ್ಡ ಆನೆಗಳೆರೆಡೂ ಹಳಿ ದಾಟುವ ತನಕ ಕಾದು ನಂತರವೇ ಮುಂದೆ ಹೊರಟಿದ್ದಾನೆ. ಈ ಘಟನೆಯ ವಿಡಿಯೋ ಚಾಲಕನ ಮೊಬೈಲಿನಲ್ಲಿ ಸೆರೆಯಾಗಿದ್ದು ಕೇಂದ್ರ ರೈಲ್ವೇ ಸಚಿವ ಪಿಯೂಷ್ ಗೋಯಲ್ ವಿಡಿಯೋವನ್ನು ಟ್ವೀಟ್ ಮಾಡುವ ಮೂಲಕ ಚಾಲಕನ ಸಮಯ ಪ್ರಜ್ಞೆಗೆ ಭೇಷ್ ಅಂದಿದ್ದಾರೆ. ಈ ಹಿಂದೆ 2018ರಲ್ಲಿ ಕರ್ನಾಟಕದ ಸಕಲೇಶಪುರದ ಬಳಿಯ ಕಾಕನಮನೆ ಹಾಗೂ ಎಡಕುಮೇರಿ ಬಳಿ ಏಳು ತಿಂಗಳ ಅಂತರದಲ್ಲಿ ಮೂರು ಆನೆಗಳು ರೈಲ್ವೇ ಅಪಘಾತಕ್ಕೆ ಬಲಿಯಾಗಿದ್ನನ್ನು ಸ್ಮರಿಸಬಹುದು.

ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ 3 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳ ದಾಳಿ
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಧ್ರುವಂತ್ ಮೇಲೆ ರಕ್ಷಿತಾ ಶೆಟ್ಟಿಗೆ ಮೂಡಿದೆ ಕರುಣೆ: ಕರಗಿತು ಮನಸ್ಸು
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಹುಬ್ಬಳ್ಳಿ ಕೇಸ್​: ನಾಪತ್ತೆಯಾಗಿದ್ದ ಕೈ ಸದಸ್ಯೆ ಪೊಲೀಸ್​​ ವಶಕ್ಕೆ
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಯಶ್ ರೇಂಜ್ ಸಾಮಾನ್ಯದ್ದಲ್ಲ: ವಿವರಿಸಿದ ನಿರ್ಮಾಪಕ ಕೆ ಮಂಜು
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಕಠಿಣವಾಗುತ್ತಿವೆ ಟಾಸ್ಕ್​​ಗಳು, ಗೆಲ್ಲುವರು ಯಾರು? ಬೀಳುವರು ಯಾರು?
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಗೃಹಲಕ್ಷ್ಮಿ ಹಣದ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಶಾಕಿಂಗ್ ಹೇಳಿಕೆ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಕರ್ನಾಟಕದ ಆಸ್ತಿ ಮಾಲೀಕರಿಗೆ ಗುಡ್​​ ನ್ಯೂಸ್: ಸಂಪುಟದಲ್ಲಿ ಮಹತ್ವದ ತೀರ್ಮಾನ
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಧುರಂಧರ್ 2 Vs ಟಾಕ್ಸಿಕ್: ಟೀಕೆ ಮಾಡಿದವರಿಗೆ ತಿರುಗೇಟು ಕೊಟ್ಟ ಕೆ. ಮಂಜು
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಕೋಗಿಲು ಆಯ್ತು ಈಗ ಥಣಿಸಂದ್ರದಲ್ಲಿ ಆಪರೇಷನ್ ಒತ್ತುವರಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ
ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಕೇಸ್​: ಸಿಎಂ ವಿರುದ್ಧ ಜೋಶಿ ವಾಗ್ದಾಳಿ