AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘರ್ಜಿಸಿದ ಆರ್ನಬ್​, ತಮ್ಮ ಟಿವಿ ಸ್ಟುಡಿಯೋದಲ್ಲಿ ಹೊರಡಿಸಿದ ಮಹತ್ವದ ಘೋಷಣೆ.. ಏನು ಗೊತ್ತಾ?

ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್​ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್​ ಟಿವಿ ಮುಖ್ಯ ಸಂಪಾದಕ ಆರ್ನಬ್​ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್​ ಕೋರ್ಟ್​ ಹಾಗೂ ಬಾಂಬೆ ಹೈಕೋರ್ಟ್​ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್​ಗೆ ಸದ್ಯ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್​ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್​ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್​, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ […]

ಘರ್ಜಿಸಿದ ಆರ್ನಬ್​, ತಮ್ಮ ಟಿವಿ ಸ್ಟುಡಿಯೋದಲ್ಲಿ ಹೊರಡಿಸಿದ ಮಹತ್ವದ ಘೋಷಣೆ.. ಏನು ಗೊತ್ತಾ?
KUSHAL V
|

Updated on: Nov 12, 2020 | 12:26 PM

Share

ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್​ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್​ ಟಿವಿ ಮುಖ್ಯ ಸಂಪಾದಕ ಆರ್ನಬ್​ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್​ ಕೋರ್ಟ್​ ಹಾಗೂ ಬಾಂಬೆ ಹೈಕೋರ್ಟ್​ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್​ಗೆ ಸದ್ಯ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್​ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್​ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್​, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ ಮುಂಬೈ ಪೊಲೀಸರತ್ತಲೇ ಕೆಂಗಣ್ಣು ಬೀರಿದೆ!

ಇನ್ನು, ತಮ್ಮ ನೆಚ್ಚಿನ ನಿರೂಪಕ ಜೈಲಿನಿಂದ ಬಿಡುಗಡೆ ಹೊಂದುತ್ತಿದ್ದಂತೆ ಆರ್ನಬ್​ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತು. ಕಳೆದ ರಾತ್ರಿ 8.30ಕ್ಕೆ ತಳೋಜಾ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಆರ್ನಬ್​ ಗೋಸ್ವಾಮಿಯನ್ನು ಅವರ ಅಭಿಮಾನಿಗಳು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಿ, ರಿಪಬ್ಲಿಕ್ ಟಿವಿ ಸ್ಟುಡಿಯೋಕ್ಕೆ ಕರೆದೊಯ್ದರು.

ಎಲ್ಲೆಡೆ ಮನೆ ಮಾಡಿದ್ದ ಸಂಭ್ರಮಾಚರಣೆ ಹಾಗೂ ವಿಜಯೋತ್ಸವ ಕಂಡು, ನೆರೆದಿದ್ದ ಜನರಿಗೆ T20 ವಿಶ್ವಕಪ್​ ಗೆದ್ದ ಸಂದರ್ಭದಲ್ಲಿ ಅಂದಿನ ಭಾರತ ತಂಡದ ನಾಯಕ ಧೋನಿಯವರನ್ನು ತೆರೆದ ಬೆಸ್ಟ್ ಬಸ್​ನಲ್ಲಿ ಮೆರವಣಿಗೆ ಮಾಡಿಸಿದ್ದು ನೆನಪಿಗೆ ಬಂದಿರುವ ಸಾಧ್ಯತೆಯೂ ಇತ್ತು. ಯಾವ ಮುಂಬೈ ಪೊಲೀಸರು ಕಳೆದ ವಾರ ಆರ್ನಬ್​ರನ್ನು ಬಂಧಿಸಿದ್ದರೋ.. ಅದೇ ಮುಂಬೈ ಪೊಲೀಸರು ನಿನ್ನೆ ರಾತ್ರಿ ಅವರಿಗೆ ಬಂದೋಬಸ್ತ್​ ಒದಗಿಸಿದರು.

ಜೈಲಿನಿಂದ ಹೊರಬಂದು ವಿಜಯ ಮೆರವಣಿಗೆಯಲ್ಲಿ ಹೊರಟ ಆರ್ನಬ್​ ನೇರವಾಗಿ ತಲುಪಿದ್ದು ತಮ್ಮ ನ್ಯೂಸ್ ಚ್ಯಾನಲ್ ಸ್ಟುಡಿಯೋ​ಗೆ. ಈ ವೇಳೆ, ಸಿಬ್ಬಂದಿ ಜೊತೆ ಮಾತನಾಡಿದ ಆರ್ನಬ್​ ಗೋಸ್ವಾಮಿ ಮುಂಬರುವ ದಿನಗಳಲ್ಲಿ ಭಾರತದ ಪ್ರತಿ ರಾಜ್ಯದಲ್ಲೂ ಒಂದೊಂದು ಪ್ರಾದೇಶಿಕ ಸುದ್ದಿವಾಹಿನಿಯನ್ನು ತೆರೆಯುವುದಾಗಿ ಘೋಷಣೆ ಮಾಡಿದರು.

ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹಿಪೊಪೊಟಮಸ್​ಗಳಿಂದ ತುಂಬಿದ ಹೊಳೆಯಲ್ಲಿ ಹೆದರದೆ ನಿಂತ ಆನೆ
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಹರ್‌ಪ್ರೀತ್ ಮ್ಯಾಜಿಕಲ್ ಎಸೆತಕ್ಕೆ ರಾಹುಲ್ ಕ್ಲೀನ್ ಬೌಲ್ಡ್
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ಜೊಕೊವಿಕ್- ಅಲ್ಕರಾಜ್ ನಡುವೆ ಆಸ್ಟ್ರೇಲಿಯನ್ ಓಪನ್‌ ಫೈನಲ್​
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ನಟಿ, ಮಾಜಿ ರಾಜ್ಯಸಭಾ ಸದಸ್ಯೆ ಬಿ ಜಯಶ್ರೀಯ ಸತಾಯಿಸಿದ ಅಧಿಕಾರಿಗಳು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ಉದ್ಯಮ ಸಾಮ್ರಾಜ್ಯ ಕಟ್ಟಿದ್ದ ಸಿಜೆ ರಾಯ್ ಆತ್ಮಹತ್ಯೆ,ಕಮಿಷನರ್ ಹೇಳಿದ್ದಿಷ್ಟು
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ದಾರಿ ಬಿಡಿ, ದಾರಿ ಬಿಡಿ.. ತವರಿನಲ್ಲಿ ಸಂಜು ಸ್ಯಾಮ್ಸನ್ ಕಾಲೆಳೆದ ಸೂರ್ಯ
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ಲಂಚ ಪಡೆಯುವಾಗ ತಗ್ಲಾಕೊಂಡ ಇನ್ಸ್​​ಪೆಕ್ಟರ್​​​​​​​ ಕೂಗಾಡಿ ರಂಪಾಟ!
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ವಿರೋಧದ ನಡುವೆ ಮುಸ್ಲಿಂ ಹುಡ್ಗನ ಮದ್ವೆಯಾಗಿ ಬೀದಿಗೆ ಬಿದ್ದ ಯುವತಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಎಲ್ಲೆಂದರಲ್ಲಿ ಕಸ ಬಿಸಾಡಿದ್ರೇ ಇದೇ ಶಾಸ್ತಿ: ಆಗಿದ್ದೇನು? ವಿಡಿಯೋ ನೋಡಿ
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!
ಬ್ಯಾಂಕ್​ನಲ್ಲಿ ನಕಲಿ ಚಿನ್ನ ಅಡವಿಟ್ಟು 56 ಲಕ್ಷ ರೂ. ವಂಚನೆ!