AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘರ್ಜಿಸಿದ ಆರ್ನಬ್​, ತಮ್ಮ ಟಿವಿ ಸ್ಟುಡಿಯೋದಲ್ಲಿ ಹೊರಡಿಸಿದ ಮಹತ್ವದ ಘೋಷಣೆ.. ಏನು ಗೊತ್ತಾ?

ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್​ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್​ ಟಿವಿ ಮುಖ್ಯ ಸಂಪಾದಕ ಆರ್ನಬ್​ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್​ ಕೋರ್ಟ್​ ಹಾಗೂ ಬಾಂಬೆ ಹೈಕೋರ್ಟ್​ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್​ಗೆ ಸದ್ಯ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್​ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್​ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್​, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ […]

ಘರ್ಜಿಸಿದ ಆರ್ನಬ್​, ತಮ್ಮ ಟಿವಿ ಸ್ಟುಡಿಯೋದಲ್ಲಿ ಹೊರಡಿಸಿದ ಮಹತ್ವದ ಘೋಷಣೆ.. ಏನು ಗೊತ್ತಾ?
KUSHAL V
|

Updated on: Nov 12, 2020 | 12:26 PM

Share

ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್​ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್​ ಟಿವಿ ಮುಖ್ಯ ಸಂಪಾದಕ ಆರ್ನಬ್​ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್​ ಕೋರ್ಟ್​ ಹಾಗೂ ಬಾಂಬೆ ಹೈಕೋರ್ಟ್​ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್​ಗೆ ಸದ್ಯ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್​ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್​ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್​, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ ಮುಂಬೈ ಪೊಲೀಸರತ್ತಲೇ ಕೆಂಗಣ್ಣು ಬೀರಿದೆ!

ಇನ್ನು, ತಮ್ಮ ನೆಚ್ಚಿನ ನಿರೂಪಕ ಜೈಲಿನಿಂದ ಬಿಡುಗಡೆ ಹೊಂದುತ್ತಿದ್ದಂತೆ ಆರ್ನಬ್​ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತು. ಕಳೆದ ರಾತ್ರಿ 8.30ಕ್ಕೆ ತಳೋಜಾ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಆರ್ನಬ್​ ಗೋಸ್ವಾಮಿಯನ್ನು ಅವರ ಅಭಿಮಾನಿಗಳು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಿ, ರಿಪಬ್ಲಿಕ್ ಟಿವಿ ಸ್ಟುಡಿಯೋಕ್ಕೆ ಕರೆದೊಯ್ದರು.

ಎಲ್ಲೆಡೆ ಮನೆ ಮಾಡಿದ್ದ ಸಂಭ್ರಮಾಚರಣೆ ಹಾಗೂ ವಿಜಯೋತ್ಸವ ಕಂಡು, ನೆರೆದಿದ್ದ ಜನರಿಗೆ T20 ವಿಶ್ವಕಪ್​ ಗೆದ್ದ ಸಂದರ್ಭದಲ್ಲಿ ಅಂದಿನ ಭಾರತ ತಂಡದ ನಾಯಕ ಧೋನಿಯವರನ್ನು ತೆರೆದ ಬೆಸ್ಟ್ ಬಸ್​ನಲ್ಲಿ ಮೆರವಣಿಗೆ ಮಾಡಿಸಿದ್ದು ನೆನಪಿಗೆ ಬಂದಿರುವ ಸಾಧ್ಯತೆಯೂ ಇತ್ತು. ಯಾವ ಮುಂಬೈ ಪೊಲೀಸರು ಕಳೆದ ವಾರ ಆರ್ನಬ್​ರನ್ನು ಬಂಧಿಸಿದ್ದರೋ.. ಅದೇ ಮುಂಬೈ ಪೊಲೀಸರು ನಿನ್ನೆ ರಾತ್ರಿ ಅವರಿಗೆ ಬಂದೋಬಸ್ತ್​ ಒದಗಿಸಿದರು.

ಜೈಲಿನಿಂದ ಹೊರಬಂದು ವಿಜಯ ಮೆರವಣಿಗೆಯಲ್ಲಿ ಹೊರಟ ಆರ್ನಬ್​ ನೇರವಾಗಿ ತಲುಪಿದ್ದು ತಮ್ಮ ನ್ಯೂಸ್ ಚ್ಯಾನಲ್ ಸ್ಟುಡಿಯೋ​ಗೆ. ಈ ವೇಳೆ, ಸಿಬ್ಬಂದಿ ಜೊತೆ ಮಾತನಾಡಿದ ಆರ್ನಬ್​ ಗೋಸ್ವಾಮಿ ಮುಂಬರುವ ದಿನಗಳಲ್ಲಿ ಭಾರತದ ಪ್ರತಿ ರಾಜ್ಯದಲ್ಲೂ ಒಂದೊಂದು ಪ್ರಾದೇಶಿಕ ಸುದ್ದಿವಾಹಿನಿಯನ್ನು ತೆರೆಯುವುದಾಗಿ ಘೋಷಣೆ ಮಾಡಿದರು.

Follow Us
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
‘ಬುಲ್ಲಿ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಪುನೀತ್ ನೆನಪು ಮಾಡಿಕೊಂಡ ಊರ್ವಶಿ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಸಂಪುಟ ವಿಸ್ತರಣೆ ಕ್ಲೈಮ್ಯಾಕ್ಸ್: ಕುತೂಹಲ ಮೂಡಿಸಿದ ರಾಹುಲ್ ಗಾಂಧಿ ನಡೆ
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಯಾದಗಿರಿಯಲ್ಲಿ ಒಂದೂವರೆ ಗಂಟೆ ಅಬ್ಬರಿಸಿದ ಮಳೆ: ನಿಟ್ಟುಸಿರುವ ಬಿಟ್ಟ ರೈತರು
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಕನ್ನಡ ಚಿತ್ರರಂಗಕ್ಕೆ ಮರಳಿದ ನಟಿ ಊರ್ವಶಿ: ಶೀರ್ಷಿಕೆ, ಫಸ್ಟ್ ಲುಕ್ ಪೋಸ್ಟರ್
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ಬೆಂಗಳೂರಿನ ಬ್ಯಾಡರಹಳ್ಳಿಯಲ್ಲಿ ಐದನೇ ಬಾರಿ ಚಿರತೆ ಪ್ರತ್ಯಕ್ಷ!
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
ತಾಯಿ ನಮ್ಮನ್ನಗಲಿದ್ದಾರೆ ಎನ್ನುವುದು ನೆನಸಿಕೊಳ್ಳಲಿಕ್ಕೂ ಸಾಧ್ಯವಿಲ್ಲ: hdk
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
37 ಟಿಎಂಸಿ ಸಾಮರ್ಥ್ಯದ ಹೇಮಾವತಿಯಲ್ಲಿ ಉಳಿದಿದ್ದು ಕೇವಲ 24 ಟಿಎಂಸಿ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಕಾವೇರಿ ಜಲ ವಿವಾದ: ಸಂಕಷ್ಟ ಸೂತ್ರ ಪಾಲಿಸುವಂತೆ CWRC ಸಲಹೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಭೋಪಾಲ್‌ನಲ್ಲಿ ಹಿಂಸಾಚಾರಕ್ಕೆ ತಿರುಗಿದ ರೈತರ ಪ್ರತಿಭಟನೆ
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು
ಕುತೂಹಲಕಾರಿ ಘಟ್ಟ ತಲುಪಿದ ಸಂಪುಟ ವಿಸ್ತರಣೆ ಕಸರತ್ತು