AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಘರ್ಜಿಸಿದ ಆರ್ನಬ್​, ತಮ್ಮ ಟಿವಿ ಸ್ಟುಡಿಯೋದಲ್ಲಿ ಹೊರಡಿಸಿದ ಮಹತ್ವದ ಘೋಷಣೆ.. ಏನು ಗೊತ್ತಾ?

ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್​ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್​ ಟಿವಿ ಮುಖ್ಯ ಸಂಪಾದಕ ಆರ್ನಬ್​ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್​ ಕೋರ್ಟ್​ ಹಾಗೂ ಬಾಂಬೆ ಹೈಕೋರ್ಟ್​ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್​ಗೆ ಸದ್ಯ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್​ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್​ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್​, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ […]

ಘರ್ಜಿಸಿದ ಆರ್ನಬ್​, ತಮ್ಮ ಟಿವಿ ಸ್ಟುಡಿಯೋದಲ್ಲಿ ಹೊರಡಿಸಿದ ಮಹತ್ವದ ಘೋಷಣೆ.. ಏನು ಗೊತ್ತಾ?
Follow us
KUSHAL V
|

Updated on: Nov 12, 2020 | 12:26 PM

ಮುಂಬೈ: 2018ರಲ್ಲಿ ನಡೆದ ಆತ್ಮಹತ್ಯೆ ಕೇಸ್​ ಒಂದರಲ್ಲಿ ನ್ಯಾಯಾಂಗ ಬಂಧನಕ್ಕೆ ಕಳಿಸಲಾಗಿದ್ದ ರಿಪಬ್ಲಿಕ್​ ಟಿವಿ ಮುಖ್ಯ ಸಂಪಾದಕ ಆರ್ನಬ್​ ಗೋಸ್ವಾಮಿಗೆ ಕೊನೆಗೂ ಜಾಮೀನು ಸಿಕ್ಕಿದೆ. ಸೆಷನ್ಸ್​ ಕೋರ್ಟ್​ ಹಾಗೂ ಬಾಂಬೆ ಹೈಕೋರ್ಟ್​ ಕದ ತಟ್ಟಿದ ಬಳಿಕವೂ ಯಾವುದೇ ಪರಿಹಾದ ಸಿಗದ ಆರ್ನಬ್​ಗೆ ಸದ್ಯ ಸುಪ್ರೀಂ ಕೋರ್ಟ್​ ಜಾಮೀನು ಮಂಜೂರು ಮಾಡಿ ಭರ್ಜರಿ ರಿಲೀಫ್​ ಕೊಟ್ಟಿದೆ. ಜೊತೆಗೆ, ಜಾಮೀನು ನೀಡುವಾಗ ಸಾಮಾನ್ಯವಾಗಿ ಕೋರ್ಟ್​ಗಳು ಆರೋಪಿಗೆ ಷರತ್ತು ವಿಧಿಸುತ್ತವೆ. ಆದ್ರೆ ಈ ಕೇಸಲ್ಲಿ ಸುಪ್ರೀಂ ಕೋರ್ಟ್​, ಆರ್ನಬ್ ಗೋಸ್ವಾಮಿಯನ್ನು ಬಂಧಿಸಿದ ಮುಂಬೈ ಪೊಲೀಸರತ್ತಲೇ ಕೆಂಗಣ್ಣು ಬೀರಿದೆ!

ಇನ್ನು, ತಮ್ಮ ನೆಚ್ಚಿನ ನಿರೂಪಕ ಜೈಲಿನಿಂದ ಬಿಡುಗಡೆ ಹೊಂದುತ್ತಿದ್ದಂತೆ ಆರ್ನಬ್​ ಅಭಿಮಾನಿಗಳ ಹರ್ಷೋದ್ಗಾರ ಮುಗಿಲುಮುಟ್ಟಿತು. ಕಳೆದ ರಾತ್ರಿ 8.30ಕ್ಕೆ ತಳೋಜಾ ಜೈಲಿನಿಂದ ಬಿಡುಗಡೆ ಆಗುತ್ತಿದ್ದಂತೆ ಆರ್ನಬ್​ ಗೋಸ್ವಾಮಿಯನ್ನು ಅವರ ಅಭಿಮಾನಿಗಳು ತೆರೆದ ಕಾರಿನಲ್ಲಿ ಮೆರವಣಿಗೆ ಮಾಡಿ, ರಿಪಬ್ಲಿಕ್ ಟಿವಿ ಸ್ಟುಡಿಯೋಕ್ಕೆ ಕರೆದೊಯ್ದರು.

ಎಲ್ಲೆಡೆ ಮನೆ ಮಾಡಿದ್ದ ಸಂಭ್ರಮಾಚರಣೆ ಹಾಗೂ ವಿಜಯೋತ್ಸವ ಕಂಡು, ನೆರೆದಿದ್ದ ಜನರಿಗೆ T20 ವಿಶ್ವಕಪ್​ ಗೆದ್ದ ಸಂದರ್ಭದಲ್ಲಿ ಅಂದಿನ ಭಾರತ ತಂಡದ ನಾಯಕ ಧೋನಿಯವರನ್ನು ತೆರೆದ ಬೆಸ್ಟ್ ಬಸ್​ನಲ್ಲಿ ಮೆರವಣಿಗೆ ಮಾಡಿಸಿದ್ದು ನೆನಪಿಗೆ ಬಂದಿರುವ ಸಾಧ್ಯತೆಯೂ ಇತ್ತು. ಯಾವ ಮುಂಬೈ ಪೊಲೀಸರು ಕಳೆದ ವಾರ ಆರ್ನಬ್​ರನ್ನು ಬಂಧಿಸಿದ್ದರೋ.. ಅದೇ ಮುಂಬೈ ಪೊಲೀಸರು ನಿನ್ನೆ ರಾತ್ರಿ ಅವರಿಗೆ ಬಂದೋಬಸ್ತ್​ ಒದಗಿಸಿದರು.

ಜೈಲಿನಿಂದ ಹೊರಬಂದು ವಿಜಯ ಮೆರವಣಿಗೆಯಲ್ಲಿ ಹೊರಟ ಆರ್ನಬ್​ ನೇರವಾಗಿ ತಲುಪಿದ್ದು ತಮ್ಮ ನ್ಯೂಸ್ ಚ್ಯಾನಲ್ ಸ್ಟುಡಿಯೋ​ಗೆ. ಈ ವೇಳೆ, ಸಿಬ್ಬಂದಿ ಜೊತೆ ಮಾತನಾಡಿದ ಆರ್ನಬ್​ ಗೋಸ್ವಾಮಿ ಮುಂಬರುವ ದಿನಗಳಲ್ಲಿ ಭಾರತದ ಪ್ರತಿ ರಾಜ್ಯದಲ್ಲೂ ಒಂದೊಂದು ಪ್ರಾದೇಶಿಕ ಸುದ್ದಿವಾಹಿನಿಯನ್ನು ತೆರೆಯುವುದಾಗಿ ಘೋಷಣೆ ಮಾಡಿದರು.

ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ವಿಜಯೇಂದ್ರ ಕೆಳಗಿಳಿಸಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳುತ್ತಾರೆ: ಯತ್ನಾಳ್
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ಆಪರೇಷನ್ ಸಿಂಧೂರ ಬಳಿಕ ಮೋದಿ ಮೊದಲ ಮಾತು, ಪ್ರಧಾನಿ ಭಾಷಣದ ನೇರಪ್ರಸಾರ
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಾಕೇಶ್ ಒಬ್ಬ ಒಳ್ಳೆಯ ಮಗ, ಸಹೋದರ ಮತ್ತು ವ್ಯಕ್ತಿ ಕೂಡ ಆಗಿದ್ದರು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಕ್ಷಿತಾಗೆ ರಾಕೇಶ್ ಮೇಲಿದ್ದ ವಾತ್ಸಲ್ಯ, ಪ್ರೀತಿ ಪದಗಳಲ್ಲಿ ಹೇಳಲಾಗದು
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ರಾಕೇಶ್ ಪೂಜಾರಿ ಅಂತಿಮ ದರ್ಶನ ಪಡೆದು ಕಣ್ಣೀರು ಹಾಕಿದ ನಟಿ ರಕ್ಷಿತಾ ಪ್ರೇಮ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ದೇವೇಗೌಡರ ಮಾರ್ಗದರ್ಶನದಲ್ಲಿ ಪಕ್ಷ ಸಂಘಟನೆ ಕೆಲಸ ಶುರುವಾಗಲಿದೆ: ನಿಖಿಲ್
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ರಾಕೇಶ್ ಪೂಜಾರಿ ಸಾವಿನ ಸುದ್ದಿ ಸುಳ್ಳಾಗಬಾರದೇ ಎನಿಸುತ್ತಿದೆ: ಗೋವಿಂದೇ ಗೌಡ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಇಂದು ಸಾಯಂಕಾಲ 5 ಗಂಟೆಗೆ ನಡೆಯಬಹುದು ಡಿಜಿಎಂಒಗಳ ಸಭೆ
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕೇಂದ್ರ ಸಚಿವ ಕುಮಾರಸ್ವಾಮಿ ಆರೋಗ್ಯದ ಬಗ್ಗೆ ಅಪ್ಡೇಟ್ ನೀಡಿದ ನಿಖಿಲ್​
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ
ಕುಟುಂಬದ ಜೀವಾಳವಾಗಿದ್ದ ಅಣ್ಣನನ್ನು ಕಳೆದುಕೊಂಡು ತಂಗಿ ದಿಗ್ಭ್ರಾಂತ