AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ಹೊರಗಿಟ್ಟ ಎಎಸ್​ಐ

ಭಾರತೀಯ ಪುರಾತತ್ವ ಇಲಾಖೆ(ಎಎಸ್​ಐ) ಕೇಂದ್ರ ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ತೆಗೆದುಹಾಕಿದೆ. ಹರ್ಯಾಣದ ಮುಜೆಸರ್ ಗ್ರಾಮದ ಕೋಸ್ ಮಿನಾರ್ ನಂ.13 ಸೇರಿದಂತೆ ಹಲವು ಸ್ಮಾರಕಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ಹೊರಗಿಟ್ಟ ಎಎಸ್​ಐ
ಎಎಸ್​ಐ
ನಯನಾ ರಾಜೀವ್
|

Updated on: Mar 26, 2024 | 8:43 AM

Share

ಭಾರತೀಯ ಪುರಾತತ್ವ ಇಲಾಖೆ(ಎಎಸ್​ಐ) ಕೇಂದ್ರ ಸಂರಕ್ಷಿತ ಸ್ಮಾರಕಗಳ ಪಟ್ಟಿಯಿಂದ 18 ಸ್ಮಾರಕಗಳನ್ನು ತೆಗೆದುಹಾಕಿದೆ. ಹರ್ಯಾಣದ ಮುಜೆಸರ್ ಗ್ರಾಮದ ಕೋಸ್ ಮಿನಾರ್ ನಂ.13 ಸೇರಿದಂತೆ ಹಲವು ಸ್ಮಾರಕಗಳನ್ನು ಪಟ್ಟಿಯಿಂದ ಹೊರಗಿಡಲಾಗಿದೆ.

ದೆಹಲಿಯ ಬಾರಾ ಖಂಬ ಸ್ಮಶಾನ, ರಂಗೂನ್​ನಲ್ಲಿರುವ ಗುನ್ನಾರ್​ ಬರ್ಕೆಲ್ ಸಮಾಧಿ, ಝಾನ್ಸಿ, ಲಕ್ನೋದ ಗೌಘಾಟ್ ಸ್ಮಶಾನ ಮತ್ತು ಉತ್ತರ ಪ್ರದೇಶದ ವಾರಾಣಸಿಯ ನಿರ್ಜನ ಗ್ರಾಮದ ಭಾಗವಾಗಿರುವ ತೆಲಿಯಾ ನಾಲಾ ಬೌದ್ಧ ಅವಶೇಷಗಳೂ ಪಟ್ಟಿಯಿಂದ ಹೊರಗುಳಿದಿವೆ.

ಪ್ರಸ್ತುತ ಎಎಸ್​ಐ ವ್ಯಾಪ್ತಿಯಲ್ಲಿ 3,693 ಸ್ಮಾರಕಗಳಿವೆ, ಪಟ್ಟಿಯಿಂದ ತೆಗೆದುಹಾಕುವಿಕೆ ಪೂರ್ಣಗೊಂಡ ನಂತರ, ಸ್ಮಾರಕಗಳ ಸಂಖ್ಯೆ 3,675ಕ್ಕೆ ಇಳಿಯುತ್ತದೆ. ಡಿಸೆಂಬರ್ 8 ರಂದು ಕೇಂದ್ರ ಸಂರಕ್ಷಿತ ಪಟ್ಟಿಯಲ್ಲಿ ಸೇರಿಸಲಾದ 3,693 ಸ್ಮಾರಕಗಳ ಪೈಕಿ 50 ನಾಪತ್ತೆಯಾಗಿವೆ ಎಂದು ಸಚಿವೆ ಸ್ಮೃತಿ ಇರಾನಿ ಸಂಸತ್ತಿಗೆ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ 11 ಹಾಗೂ ದೆಹಲಿ, ಹರ್ಯಾಣದಲ್ಲಿ ತಲಾ ಎರಡು ಸ್ಮಾರಕಗಳು ಕಾಣೆಯಾಗಿವೆ. ಅಸ್ಸಾಂ, ಪಶ್ಚಿಮ ಬಂಗಾಳ, ಅರುಣಾಚಲ ಪ್ರದೇಶ ಮತ್ತು ಉತ್ತರಾಖಂಡ ರಾಜ್ಯಗಳ ಸ್ಮಾರಕಗಳೂ ಕಾಣೆಯಾದ ಪಟ್ಟಿಯಲ್ಲಿದೆ.

ಮತ್ತಷ್ಟು ಓದಿ: ನಿಜಾಮರು ಗಿಫ್ಟ್​​ ಕೊಟ್ಟಿದ್ದ ಜಮೀನಿನಲ್ಲಿ ಕೃಷಿ ಮಾಡಿಕೊಂಡಿದ್ದರು, ಅದನ್ನೀಗ ಪುರಾತತ್ವ ಇಲಾಖೆ ತನ್ನದು ಅನ್ನುತ್ತಿದೆ! ರೈತರ ಗತಿಯೇನು?

ಈ ಸ್ಮಾರಕಗಳನ್ನು ಪಟ್ಟಿಯಿಂದ ಕೈಬಿಟ್ಟ ಬಳಿಕ , ಕೇಂದ್ರೀಯ ಏಜೆನ್ಸಿ ಈ ಸ್ಮಾರಕಗಳನ್ನು ಸಂರಕ್ಷಿಸುವ ಹೊಣೆ ಹೊಂದಿರುವುದಿಲ್ಲ. ಜತೆಗೆ ಇದಕ್ಕೆ ಸಂಬಂಧಿಸಿದ ನಿರ್ಮಾಣ ಚಟುವಟಿಕೆಗಳನ್ನು ಅಥವಾ ಈ ಪ್ರದೇಶಗಳ ನಗರೀಕರಣಕ್ಕೆ ಎಎಸ್​ಐ ಅಡ್ಡಬರುವುದಿಲ್ಲ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನೋಡ್ಕೊಂಡು ಸುಮ್ಮನಿರಬೇಕಾ? ಕನ್ನಡಿಗನ ಪರ ನಿಂತ ಕನ್ನಡಿಗ
ನೋಡ್ಕೊಂಡು ಸುಮ್ಮನಿರಬೇಕಾ? ಕನ್ನಡಿಗನ ಪರ ನಿಂತ ಕನ್ನಡಿಗ
ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಸೆಲಿಬ್ರಿಟಿಗಳ ಬಳಿ ತಮ್ಮ ಸಮಸ್ಯೆ ಹೇಳಿಕೊಂಡಿದ್ದರೆ ಪರಿಹಾರ ಸಿಗುತಿತ್ತು!
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಬಾಲಕನ ಕಿಡ್ನಾಪ್ ಮತ್ತು ಹತ್ಯೆ ಕೇಸ್: ಸಿಸಿಟಿವಿಯಲ್ಲಿ ಸೆರೆಯಾದ ಕೊನೆ ದೃಶ್ಯ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ಮನೆಯ ಮೆಟ್ಟಿಲ ಕೆಳಗೆ ಶೌಚಾಲಯವಿದಾಯಾ? ಹಾಗಾದ್ರೆ ಈ ವಿಡಿಯೋ ನೋಡಿ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ರವಿ ಕರ್ಕಾಟಕ ರಾಶಿಯಲ್ಲೂ, ಚಂದ್ರ ತುಲಾ ರಾಶಿಯಲ್ಲೂ ಸಂಚರ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ನಟಿ ಭಾವನಾ ರಾಮಣ್ಣ ಸೀಮಂತ ಶಾಸ್ತ್ರ; ಇಲ್ಲಿದೆ ವಿಡಿಯೋ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಪ್ರಜ್ವಲ್ ರೇವಣ್ಣ ಅಪರಾಧಿ: ಕೋರ್ಟ್​ ತೀರ್ಪು ಸ್ವಾಗತಿಸಿದ ಬಿಜೆಪಿ ಮುಖಂಡ
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ಸಮುದ್ರದಲ್ಲಿ ಇರುವಾಗಲೇ ಹೊತ್ತಿ ಉರಿದ ಮೀನುಗಾರಿಕೆ ಬೋಟ್
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್
ನಾಳಿನ ಕಾರ್ಯಕ್ರಮದಲ್ಲಿ ಕೊನೆಯವನಾಗಿ ಮಾತಾಡುತ್ತೇನೆ: ಶಿವಕುಮಾರ್
ರೂ, 50 ಲಕ್ಷ ನುಂಗಿದ ಪಿಡಿಓ ಸಸ್ಪೆಂಡಾಗಿ 6 ತಿಂಗಳಲ್ಲೇ ವಾಪಸ್: ಶಾಸಕ
ರೂ, 50 ಲಕ್ಷ ನುಂಗಿದ ಪಿಡಿಓ ಸಸ್ಪೆಂಡಾಗಿ 6 ತಿಂಗಳಲ್ಲೇ ವಾಪಸ್: ಶಾಸಕ