AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಹಾರಾಷ್ಟ್ರದ ಔರಂಗಾಬಾದ್​ ಹೆಸರು ಬದಲಿಸಲು ಮುಂದಾದ ಶಿವಸೇನೆ; ಕಾಂಗ್ರೆಸ್ ಅಸಮಾಧಾನ

ನಗರದ ಹೆಸರು ಬದಲಾವಣೆ ವಿಚಾರದಲ್ಲಿ ಶಿವಸೇನೆಯ ಬದ್ಧತೆಯನ್ನು ಪ್ರಶ್ನಿಸಿರುವ ಬಿಜೆಪಿಗೂ ‘ಸಾಮ್ನಾ’ ತಿರುಗೇಟು ನೀಡಿದೆ. ಪಾಕಿಸ್ತಾನದಲ್ಲಿ ದೇವಾಲಯಗಳ ಧ್ವಂಸವಾಗುತ್ತಿದೆ. ನೀವು ಆ ಕೃತ್ಯಗಳತ್ತ ಗಮನಹರಿಸಿ. ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಅವಕಾಶ ಹುಡುಕುವುದು ಬೇಡ ಎಂದಿದೆ.

ಮಹಾರಾಷ್ಟ್ರದ ಔರಂಗಾಬಾದ್​ ಹೆಸರು ಬದಲಿಸಲು ಮುಂದಾದ ಶಿವಸೇನೆ; ಕಾಂಗ್ರೆಸ್ ಅಸಮಾಧಾನ
ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್​​ ಠಾಕ್ರೆ
TV9 Web
| Edited By: |

Updated on:Apr 06, 2022 | 11:15 PM

Share

ಮುಂಬೈ: ಮಹಾರಾಷ್ಟ್ರದ ಔರಂಗಾಬಾದ್ ನಗರದ ಹೆಸರನ್ನು ಬದಲಾಯಿಸಲು ಶಿವಸೇನೆ ಒಲವು ತೋರಿದೆ. ಔರಂಗಾಬಾದ್ ಹೆಸರನ್ನು ಮರಾಠ ರಾಜ ಛತ್ರಪತಿ ಸಾಂಭಾಜಿ ಮಹಾರಾಜ್ ಹೆಸರಿಗೆ ಬದಲಿಸಬೇಕು ಎಂದು ಶಿವಸೇನೆ ಹೇಳಿದೆ. ಈ ಬಗ್ಗೆ ಅಸಮಧಾನ ವ್ಯಕ್ತಪಡಿಸಿರುವ ಕಾಂಗ್ರೆಸ್, ಅಂಥಾ ಯಾವುದೇ ಹೆಜ್ಜೆಯನ್ನು ವಿರೋಧಿಸುವುದಾಗಿ ತಿಳಿಸಿದೆ.

ಈ ಬೆಳವಣಿಗೆಗಳು ಮಿತ್ರಪಕ್ಷಗಳಾದ ಕಾಂಗ್ರೆಸ್, ಶಿವಸೇನೆ ನಡುವೆ ಬಿರುಕು ಮೂಡಿಸುವ ಅಪಾಯ ತೋರಿದೆ. ಆದರೆ, ಕಾಂಗ್ರೆಸ್ ವಿರೋಧದಿಂದ ಶಿವಸೇನೆಯೊಂದಿಗಿನ ಕಾಂಗ್ರೆಸ್ ಮೈತ್ರಿಗೆ ಧಕ್ಕೆ ಉಂಟಾಗಲಿದೆ ಎಂಬ ಆರೋಪವನ್ನು ಶಿವಸೇನೆಯ ಮುಖವಾಣಿ ‘ಸಾಮ್ನಾ’ ಅಲ್ಲಗಳೆದಿದೆ. ಔರಂಗಾಬಾದ್ ನಗರದ ಹೆಸರು ಬದಲಾವಣೆ ಶಿವಸೇನೆಯ ಬಹುವರ್ಷಗಳ ಕನಸು. ಕಾಂಗ್ರೆಸ್ ವಿರೋಧವೂ ಈ ಹಿಂದಿನಿಂದ ಇತ್ತು. ಅದ್ದರಿಂದ, ಹಳೆಯ ವಿಚಾರಗಳು ಇಂದಿನ ಮೈತ್ರಿ ಸರ್ಕಾರಕ್ಕೆ ತೊಂದರೆಯಾಗುತ್ತದೆ ಎಂದು ಊಹಿಸುವುದು ಮೂರ್ಖ ಚಿಂತನೆಯಾಗುತ್ತದೆ ಎಂದು ಹೇಳಿದೆ.

ನಗರದ ಹೆಸರು ಬದಲಾವಣೆ ವಿಚಾರದಲ್ಲಿ ಶಿವಸೇನೆಯ ಬದ್ಧತೆಯನ್ನು ಪ್ರಶ್ನಿಸಿರುವ ಬಿಜೆಪಿಗೂ ‘ಸಾಮ್ನಾ’ ತಿರುಗೇಟು ನೀಡಿದೆ. ಪಾಕಿಸ್ತಾನದಲ್ಲಿ ದೇವಾಲಯಗಳ ಧ್ವಂಸವಾಗುತ್ತಿದೆ. ನೀವು ಆ ಕೃತ್ಯಗಳತ್ತ ಗಮನಹರಿಸಿ. ರಾಜ್ಯಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನಕ್ಕೆ ಅವಕಾಶ ಹುಡುಕುವುದು ಬೇಡ ಎಂದಿದೆ.

ಔರಂಗಾಬಾದ್ ನಗರ ಹೆಸರು ಬದಲಾವಣೆ ವಿಚಾರದ ಹಿನ್ನೆಲೆ ಮೊಘಲ್ ಚಕ್ರವರ್ತಿ ಔರಂಗಜೇಬ್ ಆ ಪ್ರದೇಶದಲ್ಲಿ ತನ್ನ ಕೊನೆಯ ದಿನಗಳನ್ನು ಕಳೆದಿದ್ದ ಎಂಬ ಕಾರಣದಿಂದ ಆ ನಗರಕ್ಕೆ ಔರಂಗಾಬಾದ್ ಎಂಬ ಹೆಸರು ಬಂದಿದೆ. ಶಿವಸೇನೆ ಹಾಗೂ ಬಿಜೆಪಿ ಒಕ್ಕೂಟವು ಔರಂಗಾಬಾದ್ ನಗರಸಭೆಯಲ್ಲಿ ಎರಡು ವರ್ಷ ಆಡಳಿತ ನಡೆಸಿತ್ತು. 1995ರಲ್ಲಿ ಬಿಜೆಪಿ-ಶಿವಸೇನೆ ಒಕ್ಕೂಟದ ಕಾರ್ಪೊರೇಷನ್, ಔರಂಗಾಬಾದ್ ಹೆಸರನ್ನು ಬದಲಿಸುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿತ್ತು.

ಶಿವಸೇನೆ ಹಾಗೂ ಬಿಜೆಪಿ ಮೈತ್ರಿಕೂಟ ರಾಜ್ಯದ ಆಡಳಿತ ನಡೆಸುತ್ತಿದ್ದಾಗಲೂ ಔರಂಗಾಬಾದ್ ಹೆಸರು ಬದಲಾವಣೆಯ ಕುರಿತು ಬೆಳವಣಿಗೆಗಳಾಗಿದ್ದವು. ಆಗಿನ ಮಹಾರಾಷ್ಟ್ರ ಮುಖ್ಯಮಂತ್ರಿ ಮನೋಹರ್ ಜೋಶಿ, ಔರಂಗಾಬಾದ್​ನ್ನು ಸಾಂಭಾಜಿನಗರ್ ಎಂದು ಬದಲಾಯಿಸುವಂತೆ ನಿರ್ಣಯ ಮಂಡಿಸಿದ್ದರು. ಸರ್ಕಾರದ ಈ ನಿರ್ಣಯವನ್ನು ಬಾಂಬೆ ಹೈಕೋರ್ಟ್​ನ ಔರಂಗಾಬಾದ್ ನ್ಯಾಯಪೀಠ ಆಕ್ಷೇಪಿಸಿ, ತಿರಸ್ಕರಿಸಿತ್ತು.

Published On - 2:52 pm, Sun, 3 January 21

ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಶಿವ ಶಿವ..ಮಠದಲ್ಲಿ ಇದೆಂತಾ ಅನಾಚಾರ: ಕುಡಿದು ತೂರಾಡಿದ ಸ್ವಾಮೀಜಿ!
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಚೈತ್ರಾ ಕುಂದಾಪುರ ಯಾರು ಅಂತ ನನಗೆ ಗೊತ್ತಿಲ್ಲ, ಅವರ ಬಗ್ಗೆ ಮಾತು ಬೇಡ: ರಜತ್
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಬೆಂಗಳೂರಲ್ಲಿ 50 ಕಿಮೀ ಎಲಿವೇಟೆಡ್‌ ಕಾರಿಡಾರ್​​​: ಡಿಕೆ ಶಿವಕುಮಾರ್​ ಘೋಷಣೆ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಪ್ರೀತಿಸಿ ಮದ್ವೆಯಾದವಳನ್ನ ಕೊಚ್ಚಿ ಕೊಂದ್ರು, ಭೀಕರತೆಯನ್ನು ಬಿಚ್ಚಿಟ್ಟ ಪತಿ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಮಾನ್ಯಾ ಚಿತೆಗೆ ಪತಿ ಅಗ್ನಿ ಸ್ಪರ್ಶ, ಕರುಳು ಚುರ್ ಅನ್ನಿಸುವ ಸನ್ನಿವೇಶ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಗಿಲ್ಲಿ ನಟ ದೊಡ್ಡ ಕುತಂತ್ರಿ: ಬಿಗ್​ ಬಾಸ್ ಮನೆಯಲ್ಲಿ ರಾಶಿಕಾ ಶೆಟ್ಟಿ ಆರೋಪ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಇಂಗ್ಲೆಂಡ್ ತಂಡವನ್ನು ಬಹಿರಂಗವಾಗಿ ಅಣಕಿಸಿದ ರೋಹಿತ್ ಶರ್ಮಾ
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಜಾತಿ ರಾಕ್ಷಸರಿಗೆ ಶಿಕ್ಷೆ ಆಗಲೇಬೇಕು
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಡಿಕೆ ಶಿವಕುಮಾರ್ ಸಿಎಂ ಆಗ್ತಾರೆ: ದಿನಾಂಕವನ್ನೂ ಹೇಳಿದ ಖ್ಯಾತ ಜ್ಯೋತಿಷಿ!
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು
ಕಾರೊಳಗೆ ಬಾಂಬ್ ಸ್ಫೋಟ, ಹಿರಿಯ ಸೇನಾಧಿಕಾರಿ ಫನಿಲ್ ಸರ್ವರೋವ್ ಸಾವು