Sign In

By signing in or creating an account, you agree with Associated Broadcasting Company's Terms & Conditions and Privacy Policy.

ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಗರ್ಭಗುಡಿಯೊಳಗೆ ಬಂದ ಹನುಮಂತ

ರಾಮನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂಬ ಅದ್ಭುತ ಸಾಲಿನಂತೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ನಿಜವಾಗಿಯೂ ಹನುಮಂತ ಬಂದಿದ್ದ. ರಾಮಕಥೆ ನಡೆಯುವಾಗಲೆಲ್ಲಾ ಭಗವಂತ ಶ್ರೀರಾಮನ ಮಹಾನ್ ಭಕ್ತ ಎನಿಸಿಕೊಂಡಿರುವ ಹನುಮಂತ ಕೂಡ ಪ್ರತ್ಯಕ್ಷನಾಗುತ್ತಾನೆ ಎಂದು ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್​ ಹೇಳಿದೆ.

ಅಯೋಧ್ಯೆಯಲ್ಲಿ ರಾಮಲಲ್ಲಾನನ್ನು ಕಣ್ತುಂಬಿಕೊಳ್ಳಲು ಗರ್ಭಗುಡಿಯೊಳಗೆ ಬಂದ ಹನುಮಂತ
ಹನುಮಂತImage Credit source: India TV
Follow us
ನಯನಾ ರಾಜೀವ್
|

Updated on:Jan 25, 2024 | 3:15 PM

ರಾಮನಾಮ ಹಾಡಿರೋ ರಾಮ ಬರುವನು, ಅವನ ಹಿಂದೆ ಹನುಮನು ಇದ್ದೆ ಇರುವನು ಎಂಬ ಅದ್ಭುತ ಸಾಲಿನಂತೆ ರಾಮ ಮಂದಿರದಲ್ಲಿ ರಾಮಲಲ್ಲಾನ ಪ್ರತಿಷ್ಠಾಪನೆಯನ್ನು ಕಣ್ತುಂಬಿಕೊಳ್ಳಲು ನಿಜವಾಗಿಯೂ ಹನುಮಂತ ಬಂದಿದ್ದ. ರಾಮಕಥೆ ನಡೆಯುವಾಗಲೆಲ್ಲಾ ಭಗವಂತ ಶ್ರೀರಾಮನ ಮಹಾನ್ ಭಕ್ತ ಎನಿಸಿಕೊಂಡಿರುವ ಹನುಮಂತ ಕೂಡ ಪ್ರತ್ಯಕ್ಷನಾಗುತ್ತಾನೆ ಎಂದು ಅಯೋಧ್ಯೆಯ ರಾಮ ಮಂದಿರ ಟ್ರಸ್ಟ್​ ಹೇಳಿದೆ.

500 ವರ್ಷಗಳ ಸುದೀರ್ಘ ಕಾಯುವಿಕೆಯ ನಂತರ ರಾಮಮಂದಿರದಲ್ಲಿ ರಾಮಲಲ್ಲಾ ಪ್ರತಿಷ್ಠಾಪನೆಯಾದಾಗ, ಜನರ ಕಣ್ಣುಗಳು ಹನುಮಂತನನ್ನು ಹುಡುಕುತ್ತಿದ್ದವು. ಮರುದಿನ ಅಂದರೆ ಮಂಗಳವಾರ ಸಂಜೆ, ರಾಮಲಲ್ಲಾನನ್ನು ನೋಡಲು ಹನುಮಾನ್ ಜಿ ಬಂದಿದ್ದಾನೆ ಎಂದು ಜನರು ಹೇಳುವ ಅದ್ಭುತ ಘಟನೆ ನಡೆಯಿತು. ಈ ಘಟನೆಗೆ ಸಂಬಂಧಿಸಿದ ಸಂದೇಶವನ್ನು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ವತಃ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದೆ.

ಟ್ರಸ್ಟ್ ಮಾಡಿರುವ ಪೋಸ್ಟ್​ನಲ್ಲಿ ಏನಿದೆ? ಶ್ರೀ ರಾಮ ಜನ್ಮಭೂಮಿ ದೇವಸ್ಥಾನದಲ್ಲಿ ನಡೆದ ಸುಂದರ ಘಟನೆಯ ವಿವರಣೆ ನೀಡಲಾಗಿದೆ. ಇಂದು ಸಂಜೆ 5.50 ರ ಸುಮಾರಿಗೆ ಕೋತಿಯೊಂದು ದಕ್ಷಿಣ ದ್ವಾರದ ಮೂಲಕ ಗರ್ಭಗುಡಿಯನ್ನು ಪ್ರವೇಶಿಸಿ ಉತ್ಸವ ಮೂರ್ತಿಯ ಬಳಿ ತಲುಪಿತು. ಇದನ್ನು ನೋಡಿದ ಹೊರಗೆ ಹಾಕಲಾಗಿದ್ದ ಭದ್ರತಾ ಸಿಬ್ಬಂದಿ, ಕೋತಿಯು ಉತ್ಸವ ಮೂರ್ತಿಯನ್ನು ನೆಲಕ್ಕೆ ಬೀಳಿಸಬಹುದೆಂದು ಭಾವಿಸಿ ಕೋತಿಯತ್ತ ಓಡಿದರು.

ಆದರೆ ಪೊಲೀಸರು ಕೋತಿಯತ್ತ ಓಡಿದ ಕೂಡಲೇ ಕೋತಿ ಶಾಂತವಾಗಿ ಉತ್ತರ ದ್ವಾರದ ಕಡೆಗೆ ಓಡಿತು. ಗೇಟ್ ಮುಚ್ಚಿದ್ದರಿಂದ ಪೂರ್ವ ದಿಕ್ಕಿಗೆ ತೆರಳಿ ಸಂದರ್ಶಕರ ಗುಂಪನ್ನು ದಾಟಿ ಯಾರಿಗೂ ತೊಂದರೆಯಾಗದಂತೆ ಪೂರ್ವ ದ್ವಾರದ ಮೂಲಕ ಹೊರ ಬಂತು. ನಮ್ಮ ಪಾಲಿಗೆ ಹನುಮಂತನೇ ರಾಮಲಲ್ಲಾನನ್ನು ನೋಡಲು ಬಂದಂತೆ ಆಗಿದೆ ಎನ್ನುತ್ತಾರೆ ಭದ್ರತಾ ಸಿಬ್ಬಂದಿ.

ಮತ್ತಷ್ಟು ಓದಿ: ‘ನನ್ನ ಹೃದಯದಲ್ಲಿ ಅಯೋಧ್ಯೆಯನ್ನಿರಿಸಿಕೊಂಡು ಮರಳಿದೆ’: ರಾಷ್ಟ್ರಪತಿ ಮುರ್ಮು ಪತ್ರಕ್ಕೆ ಪ್ರಧಾನಿ ಮೋದಿ ಉತ್ತರ

ಭಗವಂತ ಶ್ರೀರಾಮ ಮತ್ತು ತಾಯಿ ಸೀತೆ ಹನುಮಂತನನ್ನು ತಮ್ಮ ಮಗ ಎಂದು ಕರೆಯುತ್ತಾರೆ. ಒಂದು ಕಥೆಯ ಪ್ರಕಾರ, ಶ್ರೀರಾಮನು ಶರಾವತಿ ರಾಜ್ಯವನ್ನು ಲುವಿಗೆ ಮತ್ತು ಕುಶಾವತಿಯ ರಾಜ್ಯವನ್ನು ಕುಶನಿಗೆ ಹಸ್ತಾಂತರಿಸಿದಾಗ, ಸೀತಾ ಮಾತೆ, ನೀವು ಹನುಮಂತನನ್ನು ನಿಮ್ಮ ಮಗ ಎಂದೂ ಕರೆದಿದ್ದೀರಿ. ಅದರಂತೆ, ಅವರು ಹಿರಿಯ ಮಗನಾದರು. ಅವನನ್ನು  ರಾಜನನ್ನಾಗಿ ಮಾಡಿ. ಎಂದಾಗ  ಶ್ರೀರಾಮನು ಹನುಮಂತನನ್ನು ಅಯೋಧ್ಯೆಯ ರಾಜನನ್ನಾಗಿ ಮಾಡಿದನು. ರಾಮ ಭಕ್ತ ಹನುಮಂತನನ್ನು ಈ ರೂಪದಲ್ಲಿ ಹನುಮಂಗರಹಿಯಲ್ಲಿ ಪೂಜಿಸಲಾಗುತ್ತದೆ.

ಈ ಕಥೆಯು ಹನುಮಂತ ಶ್ರೀರಾಮನ ಅಪಾರ ಭಕ್ತಿ ಮತ್ತು ಸಮರ್ಪಣೆಯ ಸಂಕೇತವಾಗಿದ್ದರೂ, ಮಂಗಳವಾರ ಸಂಜೆ ಅಯೋಧ್ಯೆಯಲ್ಲಿ ಕಂಡುಬಂದದ್ದು ಜನರ ಪಾಲಿಗೆ ಅದ್ಭುತವಾಗಿದೆ. ಹನುಮಂತನ ಸಂಕೇತವಾದ ಮಂಗಗಳು ಅಯೋಧ್ಯೆಯಲ್ಲಿ ಎಲ್ಲೆಂದರಲ್ಲಿ ನೆಲೆಸಿವೆ. ಹನುಮಂತ ಸ್ವತಃ ಅವರ ರೂಪದಲ್ಲಿ, ಅವರ ರಾಮಲಲ್ಲಾನನ್ನು ನೋಡಲು ದೇವಾಲಯಕ್ಕೆ ಬಂದಿದ್ದಾನೆ ಎಂದು ಹೇಳಲಾಗುತ್ತಿದೆ. ಜನವರಿ 22ರಂದು ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಭವ್ಯ ರಾಮ ಮಂದಿರದಲ್ಲಿರುವ ರಾಮಲಲ್ಲಾನ ಪ್ರಾಣಪ್ರತಿಷ್ಠೆಯನ್ನು ಪ್ರಧಾನಿ ನರೇಂದ್ರ ಮೋದಿ ನೆರವೇರಿಸಿದರು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 10:31 am, Wed, 24 January 24

Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
Daily Devotional: ಬಾಳೆ ಗಿಡವನ್ನ ಮನೆ ಆವರಣದಲ್ಲಿ ಬೆಳೆಸಬಹುದಾ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ರವಿ ಕುಂಭ, ಚಂದ್ರ ಮೀನ ರಾಶಿಯಲ್ಲಿ ಸಂಚಾರ ಮಾಡುವ ಈ ದಿನದ ರಾಶಿ ಭವಿಷ್ಯ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಕಾರಿಗೆ ಲಾರಿ ಡಿಕ್ಕಿ, ವಿಡಿಯೋ ನೋಡಿ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಉತ್ತರ ಕರ್ನಾಟಕದ ಹುಲಿಗೆ ಜೈ: ಹಂಪಿ ಉತ್ಸವದಲ್ಲಿ ಹನುಮಂತನಿಗೆ ಜೈಕಾರ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಶಿವಕುಮಾರ್ ಖಾಸಗಿ ಕಾರ್ಯಕ್ರಮದಲ್ಲಿ ಭಾಗಿಯಾದರೇನು ತಪ್ಪು? ಜಾರಕಿಹೊಳಿ
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಜಮೀರ್ ಅಹ್ಮದ್ ಆಡುವ ಮಾತಿಗೆ ಯಾವುದೇ ಬೆಲೆ ಇಲ್ಲ: ಜಗದೀಶ್ ಶೆಟ್ಟರ್
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಪಕ್ಷದಲ್ಲಿ ವಾತಾವರಣ ತಿಳಿಯಾಗುತ್ತಿದೆ ಎಂದು ವಿಜಯೇಂದ್ರ ಹೇಳುವುದು ನಿಜವೇ?
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಚಾಮುಂಡೇಶ್ವರಿ ದೇವಾಲಯದ ಒಳಗೂ ಸುದೀಪ್ ಜತೆ ಸೆಲ್ಫಿಗೆ ಮುಗಿಬಿದ್ದ ಫ್ಯಾನ್ಸ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಸರ್ಕಾರಕ್ಕೆ ಹಿನ್ನಡೆಯಾಗಲಿ ಅಂತ ನಾವು ಯಾವತ್ತೂ ಬಯಸಲ್ಲ: ಯದುವೀರ್
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!
ಕಡುಗೆಂಪಗಿರುವುದೆಲ್ಲ ತಿನ್ನಲು-ಯೋಗ್ಯ ಕಲ್ಲಂಗಡಿ ಹಣ್ಣಲ್ಲ!