AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೇಸ್ಟ್​ ಆಫ್​ ಇಂಡಿಯಾ ರೆಸ್ಟೋರೆಂಟ್​​ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್​ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ

ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್​ ಅಧ್ಯಕ್ಷ ದೇವಿಪ್ರಸಾದ್​ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್​​ನಲ್ಲೂ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.

ಟೇಸ್ಟ್​ ಆಫ್​ ಇಂಡಿಯಾ ರೆಸ್ಟೋರೆಂಟ್​​ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್​ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ
ಬ್ಯಾನರ್​ ಕಿತ್ತಿರುವ ದೃಶ್ಯ
TV9 Web
| Edited By: |

Updated on:Dec 14, 2021 | 8:38 AM

Share

ಪಾಕಿಸ್ತಾನಿ ಆಹಾರೋತ್ಸವ (Pakistani Food Festival) ಎಂದು ದೊಡ್ಡದಾಗಿ ಬರೆದು ಹಾಕಲಾಗಿದ್ದ ಬ್ಯಾನರ್​​ನ್ನು ಕೆಳಗಿಳಿಸಿ, ಅದಕ್ಕೆ ಬೆಂಕಿ ಹಚ್ಚಿದ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಹೀಗೆ ಪಾಕ್​ ಆಹಾರೋತ್ಸವದ ಬ್ಯಾನರ್​ಗೆ ಬೆಂಕಿ ಹಾಕಿದ್ದು ಬಜರಂಗದಳದ ಕಾರ್ಯಕರ್ತರು. ಹಾಗೇ, ರೆಸ್ಟೋರೆಂಟ್​ವೊಂದು ತಾನು ಪಾಕಿಸ್ತಾನಿ ಆಹಾರದ ಬಗ್ಗೆ ಪ್ರಚಾರ ಮಾಡುತ್ತಿರುವುದಾಗಿ ತಪ್ಪು ಒಪ್ಪಿಕೊಂಡಿದೆ ಎಂದು ಬಲಪಂಥೀಯ ನಾಯಕರೊಬ್ಬರು ತಿಳಿಸಿದ್ದಾರೆ.  

ಸೂರತ್​ನ ರಿಂಗ್​ರೋಡ್​​ ಪ್ರದೇಶದಲ್ಲಿ ಟೇಸ್ಟ್ ಆಫ್​ ಇಂಡಿಯಾ ರೆಸ್ಟೋರೆಂಟ್​ ಡಿಸೆಂಬರ್​ 12-22ರವರೆಗೆ ಆಹಾರ ಮೇಳವನ್ನು ಆಯೋಜಿಸಿತ್ತು. ಆದರೆ ಅದಕ್ಕೆ ಪಾಕಿಸ್ತಾನಿ ಆಹಾರೋತ್ಸವ ಎಂಬ ದೊಡ್ಡದಾದ ಬ್ಯಾನರ್ ಹಾಕಲಾಗಿತ್ತು. ಅದನ್ನು ನೋಡುತ್ತಿದ್ದಂತೆ ಭಜರಂಗದಳದ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳಿ ಬ್ಯಾನರ್​​ನ್ನು ಕಿತ್ತೆಸೆದಿದ್ದಾರೆ. ನಂತರ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರು ಜೈ ಶ್ರೀರಾಮ್​ ಮತ್ತು ಹರಹರ ಮಹದೇವ್​ ಎಂದು ಘೋಷಣೆ ಕೂಗುತ್ತಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್​ ಅಧ್ಯಕ್ಷ ದೇವಿಪ್ರಸಾದ್​ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್​​ನಲ್ಲೂ ನಡೆಸಲು ಬಿಡುವುದಿಲ್ಲ. ಆಹಾರ ಮೇಳ ಆಯೋಜಿಸಿದ್ದ ರೆಸ್ಟೋರೆಂಟ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.  ಹಾಗೇ ಈ ಟೇಸ್ಟ್ ಆಫ್​ ಇಂಡಿಯಾ ರೆಸ್ಟೋರೆಂಟ್​​ ನಡೆಸುತ್ತಿರುವ ಶುಗರ್​ ಎನ್​ ಸ್ಪೈಸ್​ ರೆಸ್ಟೋರೆಂಟ್​ನ ಮಾಲೀಕ ಸಂದೀಪ್​ ದಾವರ್​, ನಾವು ಮೊಘಲಾಯಿ ಪಾಕಪದ್ಧತಿಯ ಆಹಾರವನ್ನು ಕೊಡುವುದನ್ನು ಮುಂದುವರಿಸುತ್ತೇವೆ. ಆದರೆ ಪಾಕಿಸ್ತಾನ ಎಂಬ ಹೆಸರನ್ನು ತೆಗೆದುಹಾಕುತ್ತೇವೆ. ಯಾಕೆಂದರೆ ಇದು ಹಲವರ ಭಾವನೆಗಳನ್ನು ನೋಯಿಸುತ್ತದೆ ಎಂಬುದು ನಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಮ್ ಜಿ ಮೋಟಾರ್ ಭಾರತೀಯ ಮಾರ್ಕೆಟ್​​ಗೆ ಸೂಕ್ತವೆನಿಸುವ ಇಲೆಕ್ಟ್ರಿಕ್ ಕಾರನ್ನು ಇನ್ನೆರಡು ವರ್ಷಗಳಲ್ಲಿ ಲಾಂಚ್ ಮಾಡಲಿದೆ

Published On - 8:37 am, Tue, 14 December 21

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ