AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟೇಸ್ಟ್​ ಆಫ್​ ಇಂಡಿಯಾ ರೆಸ್ಟೋರೆಂಟ್​​ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್​ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ

ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್​ ಅಧ್ಯಕ್ಷ ದೇವಿಪ್ರಸಾದ್​ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್​​ನಲ್ಲೂ ನಡೆಸಲು ಬಿಡುವುದಿಲ್ಲ ಎಂದಿದ್ದಾರೆ.

ಟೇಸ್ಟ್​ ಆಫ್​ ಇಂಡಿಯಾ ರೆಸ್ಟೋರೆಂಟ್​​ನಲ್ಲಿ ಪಾಕಿಸ್ತಾನಿ ಆಹಾರ ಮೇಳ; ಬ್ಯಾನರ್​ ಹಾಕುತ್ತಿದ್ದಂತೆ ಬೆಂಕಿ ಇಟ್ಟ ಭಜರಂಗದಳ
ಬ್ಯಾನರ್​ ಕಿತ್ತಿರುವ ದೃಶ್ಯ
TV9 Web
| Edited By: |

Updated on:Dec 14, 2021 | 8:38 AM

Share

ಪಾಕಿಸ್ತಾನಿ ಆಹಾರೋತ್ಸವ (Pakistani Food Festival) ಎಂದು ದೊಡ್ಡದಾಗಿ ಬರೆದು ಹಾಕಲಾಗಿದ್ದ ಬ್ಯಾನರ್​​ನ್ನು ಕೆಳಗಿಳಿಸಿ, ಅದಕ್ಕೆ ಬೆಂಕಿ ಹಚ್ಚಿದ ಘಟನೆ ಗುಜರಾತ್​ನ ಸೂರತ್​ನಲ್ಲಿ ನಡೆದಿದೆ. ಹೀಗೆ ಪಾಕ್​ ಆಹಾರೋತ್ಸವದ ಬ್ಯಾನರ್​ಗೆ ಬೆಂಕಿ ಹಾಕಿದ್ದು ಬಜರಂಗದಳದ ಕಾರ್ಯಕರ್ತರು. ಹಾಗೇ, ರೆಸ್ಟೋರೆಂಟ್​ವೊಂದು ತಾನು ಪಾಕಿಸ್ತಾನಿ ಆಹಾರದ ಬಗ್ಗೆ ಪ್ರಚಾರ ಮಾಡುತ್ತಿರುವುದಾಗಿ ತಪ್ಪು ಒಪ್ಪಿಕೊಂಡಿದೆ ಎಂದು ಬಲಪಂಥೀಯ ನಾಯಕರೊಬ್ಬರು ತಿಳಿಸಿದ್ದಾರೆ.  

ಸೂರತ್​ನ ರಿಂಗ್​ರೋಡ್​​ ಪ್ರದೇಶದಲ್ಲಿ ಟೇಸ್ಟ್ ಆಫ್​ ಇಂಡಿಯಾ ರೆಸ್ಟೋರೆಂಟ್​ ಡಿಸೆಂಬರ್​ 12-22ರವರೆಗೆ ಆಹಾರ ಮೇಳವನ್ನು ಆಯೋಜಿಸಿತ್ತು. ಆದರೆ ಅದಕ್ಕೆ ಪಾಕಿಸ್ತಾನಿ ಆಹಾರೋತ್ಸವ ಎಂಬ ದೊಡ್ಡದಾದ ಬ್ಯಾನರ್ ಹಾಕಲಾಗಿತ್ತು. ಅದನ್ನು ನೋಡುತ್ತಿದ್ದಂತೆ ಭಜರಂಗದಳದ ಕಾರ್ಯಕರ್ತರು ಕೆಂಡಾಮಂಡಲರಾಗಿದ್ದಾರೆ. ಕೂಡಲೇ ಹೆಚ್ಚಿನ ಸಂಖ್ಯೆಯಲ್ಲಿ ಅಲ್ಲಿಗೆ ತೆರಳಿ ಬ್ಯಾನರ್​​ನ್ನು ಕಿತ್ತೆಸೆದಿದ್ದಾರೆ. ನಂತರ ಅದಕ್ಕೆ ಬೆಂಕಿ ಹಚ್ಚಿದ್ದಾರೆ. ಈ ವೇಳೆ ಅವರು ಜೈ ಶ್ರೀರಾಮ್​ ಮತ್ತು ಹರಹರ ಮಹದೇವ್​ ಎಂದು ಘೋಷಣೆ ಕೂಗುತ್ತಿದ್ದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಭಜರಂಗ ದಳದ ದಕ್ಷಿಣ ಗುಜರಾತ್​ ಅಧ್ಯಕ್ಷ ದೇವಿಪ್ರಸಾದ್​ ದುಬೆ, ಇಂಥ ಉತ್ಸವಗಳನ್ನೆಲ್ಲ ಯಾವುದೇ ರೆಸ್ಟೋರೆಂಟ್​​ನಲ್ಲೂ ನಡೆಸಲು ಬಿಡುವುದಿಲ್ಲ. ಆಹಾರ ಮೇಳ ಆಯೋಜಿಸಿದ್ದ ರೆಸ್ಟೋರೆಂಟ್ ಕೂಡ ತನ್ನ ತಪ್ಪನ್ನು ಒಪ್ಪಿಕೊಂಡಿದೆ ಎಂದು ಹೇಳಿದ್ದಾರೆ.  ಹಾಗೇ ಈ ಟೇಸ್ಟ್ ಆಫ್​ ಇಂಡಿಯಾ ರೆಸ್ಟೋರೆಂಟ್​​ ನಡೆಸುತ್ತಿರುವ ಶುಗರ್​ ಎನ್​ ಸ್ಪೈಸ್​ ರೆಸ್ಟೋರೆಂಟ್​ನ ಮಾಲೀಕ ಸಂದೀಪ್​ ದಾವರ್​, ನಾವು ಮೊಘಲಾಯಿ ಪಾಕಪದ್ಧತಿಯ ಆಹಾರವನ್ನು ಕೊಡುವುದನ್ನು ಮುಂದುವರಿಸುತ್ತೇವೆ. ಆದರೆ ಪಾಕಿಸ್ತಾನ ಎಂಬ ಹೆಸರನ್ನು ತೆಗೆದುಹಾಕುತ್ತೇವೆ. ಯಾಕೆಂದರೆ ಇದು ಹಲವರ ಭಾವನೆಗಳನ್ನು ನೋಯಿಸುತ್ತದೆ ಎಂಬುದು ನಮಗೆ ಅರ್ಥವಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಎಮ್ ಜಿ ಮೋಟಾರ್ ಭಾರತೀಯ ಮಾರ್ಕೆಟ್​​ಗೆ ಸೂಕ್ತವೆನಿಸುವ ಇಲೆಕ್ಟ್ರಿಕ್ ಕಾರನ್ನು ಇನ್ನೆರಡು ವರ್ಷಗಳಲ್ಲಿ ಲಾಂಚ್ ಮಾಡಲಿದೆ

Published On - 8:37 am, Tue, 14 December 21

Follow Us
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
ಎಂಎನ್‌ಸಿ ಕಂಪನಿಗಳ ಹೆಸರಿನಲ್ಲಿ ಫೇಕ್ ಮೆಡಿಸಿನ್ ರಿ-ಪ್ಯಾಕಿಂಗ್
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
‘ಪವಿತ್ರಾಗೌಡ ಮೆಂಟಲಿ ಡಿಸ್ಟರ್ಬ್ ಆಗಿದ್ದಾರೆ’ ಎಂದ ನಾಗಲಕ್ಷ್ಮೀ ಚೌಧರಿ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ಭೇಟಿ ಬಳಿಕ ಮನಸ್ತಾಪದ ಬಗ್ಗೆ ಪ್ರತಿಕ್ರಿಯೆ ನೀಡಿದ ಧನ್ವೀರ್ ಗೌಡ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ದರ್ಶನ್ ನೋಡಲು ಒಟ್ಟಿಗೆ ಜೈಲಿಗೆ ಬಂದ ಮೀನಾ, ಧನ್ವೀರ್ ಗೌಡ, ವಿಜಯಲಕ್ಷ್ಮಿ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ಯಾವುದೇ ಕೈದಿಗೆ ಜೈಲಲ್ಲಿ ವಿಐಪಿ ಸೌಲಭ್ಯ ಕೊಡಲ್ಲ: ಗೃಹ ಸಚಿವ
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
ತುಮಕೂರು KSRTC ಬಸ್ ನಿಲ್ದಾಣದಲ್ಲಿ ರೊಚ್ಚಿಗೆದ್ದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
‘ಓಣಂ’ ಸಡಗರ: ಕೇರಳಂ ಸಂಸ್ಕೃತಿ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಹನೂರು ಪ್ರಕರಣ: ಅಜ್ಞಾತ ಸ್ಥಳದಿಂದ ವಿಡಿಯೋ ರಿಲೀಸ್​ ಮಾಡಿದ ಮಹಿಮದಾಸ್
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಕಾರ್ಕಳದ ದುರ್ಗಾ ಫಾಲ್ಸ್‌ನಲ್ಲಿ ಸ್ಥಳೀಯರ ಸಾಹಸಮಯ ಕಾರ್ಯಾಚರಣೆ
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!
ಸ್ಕ್ಯಾನ್ ಮಾಡಿ, ದೂರು ನೀಡಿ; ಕಳಪೆ ಆಹಾರ, ನಕಲಿ ಔಷಧಿಗೆ ಬ್ರೇಕ್!