AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಅಮರಣಾಂತ ಉಪವಾಸ: ಭಗತ್ ಸಿಂಗ್ ಸಂಬಂಧಿ ಅಭಯ್​ ಸಂಧು ಘೋಷಣೆ

ಸಂಧು ಅವರು ಆಯ್ಕೆ ಮಾಡಿಕೊಂಡಿರುವ ಮಾರ್ಚ್ 23 ಒಂದು ಐತಿಹಾಸಿಕ ದಿನವಾಗಿದೆ. ಆ ದಿನದಂದೇ ಭಗತ್ ಸಿಂಗ್, ರಾಜಗುರು ಮತ್ತು ಸುಖ್​ದೇವ್ ಅವರು ಹುತಾತ್ಮರಾಗಿದ್ದು. ಸದರಿ ದಿನವನ್ನು ಶಹೀದ್ ದಿವಸ್ (ಹುತಾತ್ಮರ ದಿನ) ಎಂದು ಸ್ಮರಿಸಲಾಗುತ್ತದೆ.

ನೂತನ ಕೃಷಿ ಕಾಯ್ದೆಗಳನ್ನು ಹಿಂಪಡೆಯದಿದ್ದರೆ ಅಮರಣಾಂತ ಉಪವಾಸ: ಭಗತ್ ಸಿಂಗ್ ಸಂಬಂಧಿ ಅಭಯ್​ ಸಂಧು ಘೋಷಣೆ
ಭಗತ್ ಸಿಂಗ್ ಸೋದರ ಸಂಬಂಧ ಅಭಯ್ ಸಂಧು
ಅರುಣ್​ ಕುಮಾರ್​ ಬೆಳ್ಳಿ
| Updated By: Ghanashyam D M | ಡಿ.ಎಂ.ಘನಶ್ಯಾಮ|

Updated on: Feb 24, 2021 | 9:12 PM

Share

ದೆಹಲಿ: ಕೇಂದ್ರ ಸರ್ಕಾರ ಘೋಷಿಸಿರುವ ನೂತನ ಕೃಷಿ ಕಾಯ್ದೆಗಳನ್ನು ಮಾರ್ಚ್ 23ರ ಒಳಗಾಗಿ ಹಿಂಪಡೆಯದಿದ್ದರೆ ಅಮರಣಾಂತ ಉಪವಾಸ ಮಾಡುವುದಾಗಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಅವರ ಅಣ್ಣನ ಮಗ ಅಭಯ್ ಸಂಧು ಬುಧವಾರ (ಫೆ.24) ಘೋಷಿಸಿದರು. ಹೊಸ ಕಾಯ್ದೆಗಳು ತಮಗೆ ಮಾರಕವಾಗಲಿವೆ, ಕಾರ್ಪೊರೇಟ್​ಗಳ ಕಪಿಮುಷ್ಟಿಗೆ ಸಿಕ್ಕು ನರಳಬೇಕಾಗುತ್ತದೆ ಎಂದು ಹೇಳುತ್ತಿರುವ ರೈತರು ಅವುಗಳನ್ನು ವಾಪಸ್ಸು ಪಡೆಯಲು ಆಗ್ರಹಿಸಿ ಹಲವಾರು ತಿಂಗಳುಗಳಿಂದ ದೆಹಲಿಯ ಹೊರವಲಯದಲ್ಲಿ ಮುಷ್ಕರ ನಡೆಸುತ್ತಿದ್ದಾರೆ. ಸಂಧು ತಮ್ಮ ಸಂಬಂಧಿಯೊಬ್ಬರ ಜೊತೆ ದೆಹಲಿಯ ಸಿಂಘು ಗಡಿಯಲ್ಲಿ ಮುಷ್ಕರನಿರತ ರೈತರನ್ನು ಇಂದು ಸೇರಿಕೊಂಡರು. ಮುಷ್ಕರದ ಸ್ಥಳವನ್ನು ತಲುಪಿದ ನಂತರವೇ ಸಂಧು ಅಮರಣಾಂತ ಉಪವಾಸ ನಡೆಸುವ ಬಗ್ಗೆ ಘೋಷಣೆ ಮಾಡಿದರು. ಸಂಯುಕ್ತ ಕಿಸಾನ್ ಮೊರ್ಚಾದ ರೈತರು ಹುತಾತ್ಮ ಭಗತ್​ ಸಿಂಗ್ ಅವರ ಸಂಬಂಧಿಗಳಿಗೆ ರುಮಾಲುಗಳಿಂದ (ಪಗಡಿ) ಸನ್ಮಾನಿಸಿ ನೆನಪಿನ ಕಾಣಿಕೆಗಳನ್ನು ನೀಡಿದ್ದು ನೂರು ವರ್ಷಗಳಿಗೂ ಹಿಂದೆ ನಡೆದ ಪಗಡಿ ಸಂಭಾಲ್ ಜತ್ತಾ ಚಳುವಳಿಯನ್ನು ಜ್ಞಾಪಿಸಿಕೊಳ್ಳುವಂತೆ ಮಾಡಿತು.

ಸಂಧು ಅವರು ಆಯ್ಕೆ ಮಾಡಿಕೊಂಡಿರುವ ಮಾರ್ಚ್ 23 ಒಂದು ಐತಿಹಾಸಿಕ ದಿನವಾಗಿದೆ. ಆ ದಿನದಂದೇ ಭಗತ್ ಸಿಂಗ್, ರಾಜಗುರು ಮತ್ತು ಸುಖ್​ದೇವ್ ಅವರು ಹುತಾತ್ಮರಾಗಿದ್ದು. ಸದರಿ ದಿನವನ್ನು ಶಹೀದ್ ದಿವಸ್ (ಹುತಾತ್ಮರ ದಿನ) ಎಂದು ಸ್ಮರಿಸಲಾಗುತ್ತದೆ. 1906 ರಲ್ಲೂ ಆಗಿನ ಬ್ರಿಟಿಷ್ ಸರ್ಕಾರ ಮೂರು ಕೃಷಿ ಕಾಯ್ದೆಗಳನ್ನು ಘೋಷಿಸಿದಾಗ ರೈತರು ಅವುಗಳನ್ನು ವಿರೋಧಿಸಿ ಪಗಡಿ ಸಂಭಾಲ್ ಚಳುವಳಿ ನಡೆಸಿ ಆಂಗ್ಲರು ಆ ಕಾಯ್ದೆಗಳನ್ನು ಹಿಂಪಡೆಯುವಂತೆ ಮಾಡಿದ್ದರು ಎನ್ನುವುದನ್ನು ರೈತರು ಜ್ಞಾಪಿಸಿಕೊಂಡರು.

ಆ ಚಳುವಳಿಯಂತೆಯೇ ಈಗ ರೈತರು ನಡೆಸುತ್ತಿರುವ ಚಳುವಳಿಯು ಕೇಂದ್ರ ಸರ್ಕಾರ ಜಾರಿ ಮಾಡಿರುವ ಮೂರು ನೂತನ ಕೃಷಿ ವಿಧೇಯಕಗಳನ್ನು ವಾಪಸ್ಸು ಪಡೆದುಕೊಳ್ಳುವಂತೆ ಮಾಡುವಲ್ಲಿ ಯಶಸ್ವೀಯಾಗಲಿದೆ ಎಂಭ ಭರವಸೆಯನ್ನು ರೈತರು ವ್ಯಕ್ತಪಡಿಸಿದರು.

ಇದನ್ನೂ ಓದಿ: ಪ್ರತಿಭಟನಾನಿರತ ಉತ್ತರ ಪ್ರದೇಶ ರೈತರೊಂದಿಗೆ ಮಾತುಕತೆ ನಡೆಸಿದ ಅರವಿಂದ್​ ಕೇಜ್ರಿವಾಲ್​; ಫೆ.28ಕ್ಕೆ ಮಹಾ ಕಿಸಾನ್ ಪಂಚಾಯತ್​​

ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಪ್ರಯಾಣಿಕರ ಗಮನಕ್ಕೆ: ಕರ್ನಾಟಕ-ಗೋವಾ ಸಂಪರ್ಕ ಕಲ್ಪಿಸುವ ಹೆದ್ದಾರಿ ಬಿರುಕು
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಕಾರ್ ರೇಸಿಂಗ್ ಕ್ಷೇತ್ರಕ್ಕೆ ಸುದೀಪ್ ಎಂಟ್ರಿ; ಮಾಹಿತಿ ನೀಡಿದ ಕಿಚ್ಚ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಬೇರೆ ಬೇರೆ ಪಕ್ಷಗಳ ದೊಡ್ಡ ನಾಯಕರು ಜೆಡಿಎಸ್ ಮೂಲಕ ಬೆಳೆದವರು: ಶಾಸಕ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಜಲಾಶಯದಲ್ಲಿ ಹೆಚ್ಚು ನೀರು ಸ್ಟೋರ್ ಮಾಡಲಾಗಲ್ಲ, ಹರಿಬಿಡುವುದು ಅನಿವಾರ್ಯ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಗುಜರಾತ್​ನ ಖೇಡಾದಲ್ಲಿ ಬೆಂಕಿ ಅವಘಡ; ಹೊತ್ತಿ ಉರಿದ ಅಕ್ಕಿ ಗಿರಣಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ಕೇಂದ್ರದಲ್ಲಿ ಇನ್ಯಾವತ್ತೂ ಕಾಂಗ್ರೆಸ್ ಅಧಿಕಾರಕ್ಕೆ ಬರಲಾರದು: ಜೋಶಿ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ರಂಗನಾಥ್ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಮೇಯ ಉದ್ಭವಿಸಲ್ಲ: ಸುರೇಶ್ ಗೌಡ
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ಕಾರ್ ರೇಸಿಂಗ್ ತಂಡಕ್ಕೆ ಕಿಚ್ಚ ಸುದೀಪ್ ಮಾಲೀಕ; ಸುದ್ದಿಗೋಷ್ಠಿ ಲೈವ್ ನೋಡಿ..
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ರವಿಕುಮಾರ್ ವಿಷಯವನ್ನು ಕಾನೂನು ಇಲಾಖೆ ನೋಡಿಕೊಳ್ಳುತ್ತದೆ: ಸಿದ್ದರಾಮಯ್ಯ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ
ಕೋವಿಡ್ ಲಸಿಕೆ ಹಾಕಿಸಿಕೊಳ್ಳಿ ಎಂದ ಸಿದ್ದರಾಮಯ್ಯಗೆ ಈಗ ಅದರ ಮೇಲೆಯೇ ಶಂಕೆ