AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೃಷಿ ಕಾಯ್ದೆಗಳ ಕುರಿತು ‘ತಪ್ಪು ಕಲ್ಪನೆ’ ದೂರ ಮಾಡಲು ಯತ್ನ: ರೈತ ಸಮುದಾಯದ ಮನವೊಲಿಸಲು ಹೊರಟ ಬಿಜೆಪಿ

ದೇಶದ ಕೃಷಿಕರು ಮತ್ತು ನಾಗರಿಕರಲ್ಲಿ ನೂತನ ಕೃಷಿ ಕಾಯ್ದೆಗಳ ಪರ ಒಲವು ಮೂಡಿಸುವ ಯತ್ನಕ್ಕೆ ಬಿಜೆಪಿ ಮುಂದಾಗುತ್ತಿರುವುದು ನಿಚ್ಚಳವಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನಲ್ಲಿ ಕೃಷಿಕರ ಜೊತೆ ಹಮ್ಮಿಕೊಂಡಿರುವ ಸಂವಾದ ಈ ಪ್ರಯತ್ನಕ್ಕೆ ಪೂರ್ವಭಾವಿಯಂತೆ ತೋರುತ್ತಿದೆ.

ಕೃಷಿ ಕಾಯ್ದೆಗಳ ಕುರಿತು ‘ತಪ್ಪು ಕಲ್ಪನೆ’ ದೂರ ಮಾಡಲು ಯತ್ನ: ರೈತ ಸಮುದಾಯದ ಮನವೊಲಿಸಲು ಹೊರಟ ಬಿಜೆಪಿ
ಪ್ರತಿಭಟನಾ ನಿರತ ರೈತರು (ಪಿಟಿಐ ಚಿತ್ರ)
guruganesh bhat
| Edited By: ಸಾಧು ಶ್ರೀನಾಥ್​|

Updated on: Dec 15, 2020 | 12:38 PM

Share

ದೆಹಲಿ: ದೇಶದ ಕೃಷಿಕರು ಮತ್ತು ನಾಗರಿಕರಲ್ಲಿ ನೂತನ ಕೃಷಿ ಕಾಯ್ದೆಗಳ ಪರ ಒಲವು ಮೂಡಿಸುವ ಯತ್ನಕ್ಕೆ ಬಿಜೆಪಿ ಮುಂದಾಗುತ್ತಿರುವುದು ನಿಚ್ಚಳವಾಗುತ್ತಿದೆ. ಇಂದು ಪ್ರಧಾನಿ ನರೇಂದ್ರ ಮೋದಿ ಗುಜರಾತ್​ನಲ್ಲಿ ಕೃಷಿಕರ ಜೊತೆ ಹಮ್ಮಿಕೊಂಡಿರುವ ಸಂವಾದ ಈ ಪ್ರಯತ್ನಕ್ಕೆ ಪೂರ್ವಭಾವಿಯಂತೆ ತೋರುತ್ತಿದೆ. ಅದರಲ್ಲೂ 5000 ಸಿಖ್ ಕುಟುಂಬಗಳು ನೆಲೆಸಿರುವ ಕಚ್​ ಪ್ರಾಂತ್ಯದಲ್ಲಿ ಮೋದಿ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇಂದಿನ ಕಾರ್ಯಕ್ರಮ ಪಂಜಾಬ್ ರೈತರ ಮನವೊಲಿಕೆಯ ಪ್ರಯತ್ನ ಎಂಬ ವಿಶ್ಲೇಷಣೆ ಕೇಳಿಬಂದಿದೆ.

ಮಧ್ಯಪ್ರದೇಶ ಬಿಜೆಪಿ ಘಟಕದಿಂದಲೂ ಕೃಷಿಕರ ಸಭೆ ದೆಹಲಿ ಚಲೋ ಹೀಗೇ ಮುಂದುವರೆದರೆ ದೇಶದ ರೈತರಲ್ಲಿ ಬಿಜೆಪಿ ವಿರೋಧ ಭಾವನೆ ಬಲಗೊಳ್ಳಬಹುದು ಎಂಬ ಸೂಕ್ಷ್ಮ ಭಯ ಬಿಜೆಪಿಯನ್ನು ಆವರಿಸಿರುವುದು ಖಚಿತ. ಇದೇ ಕಾರಣಕ್ಕೆ ನೂತನ ಕೃಷಿ ಕಾಯ್ದೆಯ ಕುರಿತು ರೈತರನ್ನು ಹಾದಿ ತಪ್ಪಿಸಲಾಗಿದೆ ಎಂದು ಬಿಜೆಪಿ ವಾದಿಸುತ್ತಲೇ ಇದೆ. ಇದೀಗ, ಮಧ್ಯ ಪ್ರದೇಶದ ಬಿಜೆಪಿ ಘಟಕ, ರಾಜ್ಯದ ರೈತ ಸಮುದಾಯದ ಜೊತೆ ಸಭೆಗಳನ್ನು ಆಯೋಜಿಸಿದೆ. ನೂತನ ಕೃಷಿ ಕಾಯ್ದೆಗಳ ಕುರಿತು ‘ತಪ್ಪು ಕಲ್ಪನೆ’ಯನ್ನು ಹೋಗಲಾಡಿಸುವ ಯತ್ನದ ಒಂದು ಭಾಗವೆಂದು ಬಿಜೆಪಿ ಈ ಸಭೆಗಳನ್ನು ವ್ಯಾಖ್ಯಾನಿಸಿದೆ. ಮತ್ತು ಮಧ್ಯ ಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹ್ವಾಣ್ ಮತ್ತು ಬಿಜೆಪಿ ಅಧ್ಯಕ್ಷ ವಿ ಡಿ ಶರ್ಮಾ ಸಭೆಯಲ್ಲಿ ರೈತರನ್ನುದ್ದೇಶಿಸಿ ಮಾತನಾಡಲಿದ್ದಾರೆ.

ಪಂಜಾಬ್​ ಬಿಜೆಪಿ ಘಟಕದ ಮೇಲೂ ಈ ಕುರಿತು ಒತ್ತಡ ಬೀಳುವ ಸಾಧ್ಯತೆಗಳಿವೆ. ಈಗಾಗಲೇ ಶಿರೋಮಣಿ ಅಕಾಲಿದಳದಿಂದದಿಂದ ದೂರವಾಗಿರುವ ಬಿಜೆಪಿ ಪಂಜಾಬ್​ನಲ್ಲಿ ಕಷ್ಟದ ದಿನಗಳನ್ನು ಎದುರಿಸಬಹುದು. ಪಂಜಾಬ್​ನಲ್ಲೂ ರೈತ ಸಮುದಾಯದ ಜೊತೆಗೆ ಸಂವಾದ ನಡೆಸುವ ಕುರಿತು ರಾಜ್ಯ ಘಟಕ ನಿರ್ಧರಿಸಲಿದೆ. ಅಲ್ಲದೇ, ಮುಂದಿನ ದಿನಗಳಲ್ಲಿ ಬಿಜೆಪಿ ಇನ್ನಿತರ ರಾಜ್ಯಗಳಲ್ಲೂ ರೈತ ಸಮುದಾಯದ ಜೊತೆ ಸಭೆಗಳನ್ನು ಆಯೋಜಿಸುವ ಸಾಧ್ಯತೆ ಸ್ಪಷ್ಟವಾಗುತ್ತಿದೆ. ಜೊತೆಗೆ, ಈಗಾಗಲೇ ನೂತನ ಕೃಷಿ ಕಾಯ್ದೆಗಳ ಪರ ಇರುವವರ ಬೆಂಬಲವನ್ನು ಬಲಪಡಿಸಿಕೊಳ್ಳುವ ಉದ್ದೇಶವನ್ನೂ ಹೊಂದಿದೆ.

Follow Us
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
ಮೈಸೂರಿನಲ್ಲಿ TV9 ರಿಯಲ್ ಎಸ್ಟೇಟ್ ಎಕ್ಸ್​​ಪೋ.. ಸ್ಪೆಷಾಲಿಟಿ ಏನ್ಗೊತ್ತಾ?
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
TV9 ರಿಯಲ್ ಎಸ್ಟೇಟ್ ಎಕ್ಸ್​ಪೋ ಬಗ್ಗೆ ಅರುಣ್ ಯೋಗಿರಾಜ್ ಹೇಳಿದ್ದಿಷ್ಟು!
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
ಕಲಬೆರಕೆ ತುಪ್ಪದ ದಂಧೆ: ಬಳ್ಳಾರಿಯಿಂದ ಚಿಕ್ಕಮಗಳೂರುವರೆಗೆ ಮಾರಾಟ ಜಾಲ ಪತ್ತೆ
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
TV9 ರಿಯಲ್ ಎಸ್ಟೇಟ್ ಎಕ್ಸ್​ಪೋಗೆ DIG ಬೋರಲಿಂಗಯ್ಯ, ಅರುಣ್ ಯೋಗಿರಾಜ್
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಹುಬ್ಬಳ್ಳಿ ಪುಷ್ಕರಣಿ ವಿವಾದ: ಪ್ರದೀಪ್ ಶೆಟ್ಟರ್ ಅನೇಕ ನಾಯಕರಿಂದ ಪ್ರತಿಭಟನೆ
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಬಾಂಗ್ಲಾ ಅಕ್ರಮ ವಲಸಿಗರ ಕಾಟ; ಅರೆಸ್ಟ್ ಆದವ್ರ ಹಿನ್ನೆಲೆ ಏನು?
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಪೋಷಕರು ಸೇರಿ ಹಲವರೊಂದಿಗೆ ಜೈಲಿನಿಂದಲೇ ಸಂಪರ್ಕ ಹೊಂದಿದ್ದ ಪ್ರಜ್ವಲ್ ರೇವಣ್ಣ
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಅಂಗಾಂಗ ದಾನ ನೋಂದಣಿಯಲ್ಲಿ ಧಾರವಾಡ ಫಸ್ಟ್!
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಹಬ್ಬದ ಸೀಸನಲ್ಲಿ ಸಕ್ಕರೆ ಮತ್ತು ಬೆಲ್ಲದ ಬೆಲೆ ಗಗನಕ್ಕೆ: ಗ್ರಾಹಕರಿಗೆ ಆಘಾತ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ
ಮೈಸೂರಿನಲ್ಲಿ ರಾಜೇಂದ್ರ ಕಲಾ ಮಂದಿರದಲ್ಲಿ TV9 ಎಕ್ಸ್ ಪೋ