AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕೆಮಿಕಲ್ ತಲೆ ಮೇಲೆ ಸುರಿಬೇಕಾ? ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿದ ಅಧಿಕಾರಿಗಳ ವಿರುದ್ಧ ಗುಡುಗಿದ ಬಿಜೆಪಿ ಸಂಸದ

ಈ ವಿಡಿಯೊದಲ್ಲಿಪ ಶ್ಚಿಮ ದೆಹಲಿಯ ಸಂಸದರು ಜಲ ಮಂಡಳಿಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದು, ಹೋಗಿ ನದಿಯಲ್ಲಿ ಮುಳುಗಿ ಅಂದಿದ್ದಾರೆ. ನದಿಯನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದರು.

ಕೆಮಿಕಲ್ ತಲೆ ಮೇಲೆ ಸುರಿಬೇಕಾ? ಯಮುನಾ ನದಿಗೆ ರಾಸಾಯನಿಕ ಸಿಂಪಡಿಸಿದ ಅಧಿಕಾರಿಗಳ ವಿರುದ್ಧ ಗುಡುಗಿದ ಬಿಜೆಪಿ ಸಂಸದ
ಪರ್ವೇಶ್ ವರ್ಮಾ
TV9 Web
| Edited By: |

Updated on: Oct 28, 2022 | 8:15 PM

Share

ಛತ್ ಪೂಜೆಗೂ ಮುನ್ನ ಯಮುನಾ ನದಿಗೆ  (Yamuna river) ರಾಸಾಯನಿಕ ಸಿಂಪಡಿಸುತ್ತಿದ್ದ ದೆಹಲಿ ಜಲ ಮಂಡಳಿ (DJB) ಅಧಿಕಾರಿಗಳೊಂದಿಗೆ ಬಿಜೆಪಿ ಸಂಸದ ಪರ್ವೇಶ್ ವರ್ಮಾ (Parvesh Verma) ವಾಗ್ವಾದ ನಡೆಸಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿದೆ. ಈ ವಿಡಿಯೊದಲ್ಲಿಪ ಶ್ಚಿಮ ದೆಹಲಿಯ ಸಂಸದರು ಜಲ ಮಂಡಳಿಯ ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದ್ದು, ಹೋಗಿ ನದಿಯಲ್ಲಿ ಮುಳುಗಿ ಅಂದಿದ್ದಾರೆ. ನದಿಯನ್ನು ಸ್ವಚ್ಛಗೊಳಿಸಲು ಅಧಿಕಾರಿಗಳು ರಾಸಾಯನಿಕಗಳನ್ನು ಸಿಂಪಡಿಸುತ್ತಿದ್ದರು. ಯಮುನಾ ಘಾಟ್ ಬಳಿಯಿರುವ ರಾಸಾಯನಿಕಗಳ ಬ್ಯಾರೆಲ್‌ಗಳತ್ತ ಬೊಟ್ಟು ಮಾಡಿ ಬಿಜೆಪಿ ನಾಯಕ ವರ್ಮಾ,ಎಂಟು ವರ್ಷಗಳ ನಂತರ, ಅದು (ರಾಸಾಯನಿಕ) ಅನುಮೋದನೆ ಪಡೆದಿರುವುದು ನಿಮಗೆ ಈಗ ನೆನಪಿದೆಯೇ? ಯಹಾನ್ ಲೋಗೋನ್ ಕೋ ಮಾರ್ ರಹೇ ಹೋ ತುಮ್, ಆಟ್ ಸಾಲ್ ಮೇ ತುಮ್ ಇಸ್ಕೋ ಸಾಫ್ ನಹೀಂ ಕರ್ ಪಾಯೆ (ನೀವು ಇಲ್ಲಿ ಜನರನ್ನು ಕೊಲ್ಲುತ್ತಿದ್ದೀರಿ, ಎಂಟು ವರ್ಷಗಳಿಂದ ನದಿಯನ್ನು ಸ್ವಚ್ಛಗೊಳಿಸಲು ನಿಮಗೆ ಸಾಧ್ಯವಾಗಲಿಲ್ಲವೇ) ಎಂದು ಕೂಗಾಡುತ್ತಿರುವುದು ವಿಡಿಯೊದಲ್ಲಿದೆ.

ಪರ್ವೇಶ್ ವರ್ಮಾ ಅವರು ಅಧಿಕಾರಿಗಳಲ್ಲಿ “ಪೆಹ್ಲೆ ತು ಇಸ್ಮೇ ದುಬ್ಕಿ ಲಗಾ (ಮೊದಲು ನೀವು ಇದರಲ್ಲಿ ಮುಳುಗೆದ್ದು ಬನ್ನಿ )” ಎಂದು ಹೇಳುವುದನ್ನು ಕೇಳಬಹುದು.

ಜಲ ಮಂಡಳಿಯ ಅಧಿಕಾರಿಯು ರಾಸಾಯನಿಕವನ್ನು US FDA ಅನುಮೋದಿಸಿದೆ. ಗಂಗಾ ಶುದ್ಧೀಕರಣಕ್ಕಾಗಿ ರಾಷ್ಟ್ರೀಯ ಮಿಷನ್ ಸಹ ಅನುಮೋದಿಸಿದೆ ಎಂದು ಹೇಳಿದ್ದಾರೆ, ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಸಂಸದರು,ಈ ರಾಸಾಯನಿಕವನ್ನು ನಿನ್ನ ತಲೆ ಮೇಲೆ ಸುರಿಯಲಾ? ನೀನು ಇಲ್ಲಿ ಕೆಮಿಕಲ್ ಹಾಕುತ್ತಿದ್ದಿ. ಇದೇ ನೀರಲ್ಲಿ ಜನರು ಮುಳುಗೇಳುತ್ತಾರೆ. ಇದನ್ನು ನಿನ್ನ ತಲೆ ಮೇಲೆ ಸುರಿದು ಬಿಡಲಾ? ನಾಚಿಕೆ ಆಗಲ್ವಾ ನಿನಗೆ? ಇಲ್ಲಿ ಜನರು ಮುಳುಗೇಳಲು ಬರುತ್ತಾರೆ. ನೀನು ಮೊದಲು ಅದನ್ನು ಮಾಡಿ ತೋರಿಸು. ನಿನಗೆ ಎಂಟು ವರ್ಷಗಳಲ್ಲಿ ಬುದ್ಧಿ ಬಂದಿಲ್ವಾ, ನಾಳೆ ಇಲ್ಲಿ ಛತ್ ಪೂಜೆ ಮಾಡುತ್ತಾರೆ. ಆದರೆ ನೀನಿಲ್ಲಿ ಮಾಡುತ್ತಿರುವುದೇನನ್ನು, ಕೆಟ್ಟ ಮನುಷ್ಯ ಎಂದು ಪರ್ವೇಶ್ ವರ್ಮಾ ಬೈದಿದ್ದಾರೆ.

ಅಧಿಕಾರಿಗಳು ಪ್ರತಿ ವಾರಾಂತ್ಯದಲ್ಲಿ ನದಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸುತ್ತಾರೆ ಎಂಬ ವಾದ ಕೇಳಿಬರುತ್ತಿದೆ.

ಇಂಡಿಯಾ ಟುಡೇ ಜೊತೆ ಮಾತನಾಡಿದ ಬಿಜೆಪಿ ನಾಯಕ ಪರ್ವೇಶ್ ವರ್ಮಾ, ದೆಹಲಿ ಮುಖ್ಯಮಂತ್ರಿ ಮತ್ತು ಸಚಿವರು ಮಾತನಾಡಲು ಸಿದ್ಧರಿಲ್ಲದಿದ್ದರೆ ನಾವು ಅಧಿಕಾರಿಗಳೊಂದಿಗೆ ಮಾತನಾಡಬೇಕಾಗುತ್ತದೆ. ಅಧಿಕಾರಿಗಳು ಸಹ ಕೇಳದಿದ್ದರೆ, ಸಹಜವಾಗಿ ನೀವು ಕೋಪಗೊಳ್ಳುತ್ತೀರಿ. ಅವರು ದೆಹಲಿ ನಿವಾಸಿಗಳಿಗೆ ವಿಷಪೂರಿತ ನೀರನ್ನು ನೀಡುತ್ತಿದ್ದರೆ, ನಾನು ಅಧಿಕಾರಿಗಳೊಂದಿಗೆ ಅಸಭ್ಯವಾಗಿ ಮಾತನಾಡುತ್ತೇನೆ. ನಾನು ಇದನ್ನು ನನಗಾಗಿ ಮಾಡುತ್ತಿಲ್ಲ, ದೆಹಲಿ ನಿವಾಸಿಗಳಿಗಾಗಿ ಮಾಡುತ್ತಿದ್ದೇನೆ ಎಂದಿದ್ದಾರೆ.

ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ಪಂಚಾಯ್ತಿಗೆ ನುಗ್ಗಿ PDO ಚೇರ್ ಮೇಲೆಯೇ ಆಯಾಗಿ ಮಲಗಿದ ಶ್ವಾನ!
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ವಾಸನೆ ಕುಡಿದು ಸಾಕಾಗಿ ಕೊನೆಗೆ ಫಾರಂನಲ್ಲಿದ್ದ ಕೋಳಿಗಳನ್ನೇ ಕದ್ದರು
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ದರ್ಶನ್ ಪತ್ನಿಗೆ ಕೆಟ್ಟ ಕಮೆಂಟ್: ಎಚ್ಚರಿಕೆ ನೀಡಿದ ಶಿವರಾಜ್​ಕುಮಾರ್
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಮಾರ್ಮಿಕವಾಗಿ ಡಿ.ಕೆ. ಸುರೇಶ್ ಪೋಸ್ಟ್​: ಟಾರ್ಗೆಟ್​​ ಯಾರು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ಪೊಲೀಸ್ ಕಂಪ್ಲೇಂಟ್ ಕೊಡ್ತೀನಿ ಎಂದ ಅಭಿಮಾನಿ: ಅರ್ಜುನ್ ಜನ್ಯ ಉತ್ತರ ಏನು?
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
ನಿಯಮ ಮುರಿದ ಸಹೋದರ, ಬಿಗ್​​ಬಾಸ್ ಆದೇಶಕ್ಕೆ ಕಾವ್ಯಾ ಕಣ್ಣೀರು
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
‘45’ ಸಿನಿಮಾ ಅನ್ನು ತಮ್ಮದೇ ರೀತಿಯಲ್ಲಿ ವಿಶ್ಲೇಷಿಸಿದ ಶಿವಣ್ಣ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಜನ ಚಪ್ಪಲಿಯಲ್ಲಿ ಹೊಡೆಯುತ್ತಾರೆ: ತಹಶೀಲ್ದಾರ್​​ಗೆ ಕೈ ಶಾಸಕ ಎಚ್ಚರಿಕೆ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಹುಬ್ಬಳ್ಳಿ ಮರ್ಯಾದೆ ಹತ್ಯೆ:ದಲಿತರು ಪ್ರೀತಿನೇ ಮಾಡಬಾರದಾ? ಮುತಾಲಿಕ್ ಆಕ್ರೋಶ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ
ಮಲ್ಲಿಕಾರ್ಜನ ಖರ್ಗೆ ಭೇಟಿ ಬಳಿಕ ಡಿಕೆ ಶಿವಕುಮಾರ್ ಸ್ಫೋಟಕ ಹೇಳಿಕೆ