AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Congress Files: ಯುಪಿಎ ಅವಧಿಯಲ್ಲಿನ ಹಗರಣಗಳ ಕಾಂಗ್ರೆಸ್ ಫೈಲ್ಸ್ ವಿಡಿಯೊ ಹಂಚಿಕೊಂಡ ಬಿಜೆಪಿ

ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಬಿಜೆಪಿ, ಕೊಯ್ಲೇ ಕಿ ದಲಾಲಿ ಮೇ ಹಾತ್ ಕಾಲಾ ಎಂಬುದು ಕೇವಲ ಗಾದೆಯಲ್ಲ, ಆದರೆ ವಾಸ್ತವ ಪರಿಸ್ಥಿತಿ. 2012 ರಲ್ಲಿ ಕಾಂಗ್ರೆಸ್ ತನ್ನ ಕೈ ಮಾತ್ರವಲ್ಲದೆ ಮುಖವನ್ನೂ ಕಳಂಕ ಮಾಡಿಕೊಂಡಿತು ಎಂದು ಬಿಜೆಪಿ ಕುಟುಕಿದೆ.

Congress Files: ಯುಪಿಎ ಅವಧಿಯಲ್ಲಿನ ಹಗರಣಗಳ ಕಾಂಗ್ರೆಸ್ ಫೈಲ್ಸ್ ವಿಡಿಯೊ ಹಂಚಿಕೊಂಡ ಬಿಜೆಪಿ
ಸೋನಿಯಾ ಗಾಂಧಿ- ಮನಮೋಹನ್ ಸಿಂಗ್
ರಶ್ಮಿ ಕಲ್ಲಕಟ್ಟ
ರಶ್ಮಿ ಕಲ್ಲಕಟ್ಟ|

Updated on: Apr 04, 2023 | 8:41 PM

Share

ಮುಖ್ಯಾಂಶಗಳು

  • 2019 ರಲ್ಲಿ ಯುಪಿಎ ₹1,86,000 ಮೌಲ್ಯದ ಕಲ್ಲಿದ್ದಲು ಹಗರಣಗಳನ್ನು ಮಾಡಿರುವುದಾಗಿ ಬಿಜೆಪಿ ಆರೋಪ
  • ಕಾಂಗ್ರೆಸ್​​ನ ‘ಕಲ್ಲಿದ್ದಲು ಹಗರಣ’ದಿಂದಾಗಿ ರಾಷ್ಟ್ರೀಯ ಖಜಾನೆಗೆ ₹1,86,000 ಕೋಟಿ ನಷ್ಟವಾಗಿದೆ ಎಂದು ಬಿಜೆಪಿ ಹೇಳಿದೆ. 2004-2009ರ ನಡುವೆ ಸುಮಾರು 100 ಕಂಪನಿಗಳಿಗೆ ಕಲ್ಲಿದ್ದಲು ಗಣಿಗಳನ್ನು ಸರಿಯಾಗಿ ಹರಾಜು ಮಾಡದೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ
  • ಕೋಯ್ಲೆ ಕಿ ದಲಾಲಿ ಮೇ ಕಾಲೇ ಹುವೇ ಹಾತ್ ಕೀ ಕಹಾನಿ ಎಂಬ ಶೀರ್ಷಿಕೆಯೊಂದಿಗೆ ವಿಡಿಯೊ ಪೋಸ್ಟ್ ಮಾಡಿದ ಬಿಜೆಪಿ

ಬಿಜೆಪಿ (BJP) ಮಂಗಳವಾರ ತನ್ನ ‘ಕಾಂಗ್ರೆಸ್ ಫೈಲ್ಸ್’ (Congress Files) ವಿಡಿಯೊ ಅಭಿಯಾನದ ಮೂರನೇ ಕಂತನ್ನು ಬಿಡುಗಡೆ ಮಾಡಿದೆ. ಕಾಂಗ್ರೆಸ್ (Congress) ತನ್ನ 70 ವರ್ಷಗಳ ಆಡಳಿತದಲ್ಲಿ ಸಾರ್ವಜನಿಕರಿಂದ ₹ 48,20,69,00,00,000 (4.82 ಲಕ್ಷ ಕೋಟಿ) ಲೂಟಿ ಮಾಡಿದೆ ಎಂದು ಆರೋಪಿಸಿದ ನಂತರ, ಬಿಜೆಪಿ ಎರಡು ಅವಧಿಗೆ ಅಧಿಕಾರದಲ್ಲಿದ್ದ ಕಾಂಗ್ರೆಸ್ ನೇತೃತ್ವದ ಯುನೈಟೆಡ್ ಪ್ರೊಗ್ರೆಸ್ಸಿವ್ ಅಲಯನ್ಸ್ (UPA) ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದೆ. ಈ ಇತ್ತೀಚಿನ ವಿಡಿಯೊದಲ್ಲಿ 2019 ರಲ್ಲಿ ಯುಪಿಎ ₹1,86,000 ಮೌಲ್ಯದ ಕಲ್ಲಿದ್ದಲು ಹಗರಣಗಳನ್ನು ಮಾಡಿರುವುದಾಗಿ ಬಿಜೆಪಿ ಆರೋಪಿಸಿದೆ. ‘ಕೋಯ್ಲೆ ಕಿ ದಲಾಲಿ ಮೇ ಹಾತ್ ಕಾಲಾ’ ಶೀರ್ಷಿಕೆಯ ಮೂರು ನಿಮಿಷಗಳ ವಿಡಿಯೊದಲ್ಲಿ, ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಗಣಿಗಳ ಹಂಚಿಕೆಯಲ್ಲಿನ ಹಗರಣವನ್ನು ಬಿಜೆಪಿ ಆರೋಪಿಸಿದೆ. ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಬಿಜೆಪಿ, ಕೊಯ್ಲೇ ಕಿ ದಲಾಲಿ ಮೇ ಹಾತ್ ಕಾಲಾ ಎಂಬುದು ಕೇವಲ ಗಾದೆಯಲ್ಲ, ಆದರೆ ವಾಸ್ತವ ಪರಿಸ್ಥಿತಿ. 2012 ರಲ್ಲಿ ಕಾಂಗ್ರೆಸ್ ತನ್ನ ಕೈ ಮಾತ್ರವಲ್ಲದೆ ಮುಖವನ್ನೂ ಕಳಂಕ ಮಾಡಿಕೊಂಡಿತು ಎಂದು ಬಿಜೆಪಿ ಕುಟುಕಿದೆ.

ಕಾಂಗ್ರೆಸ್ ಎಂದರೆ ಭ್ರಷ್ಟಾಚಾರ, ಸೀಸನ್ 1, ಎಪಿಸೋಡ್ 3 ಎಂಬ ವಿಡಿಯೊದಲ್ಲಿ ಯುಪಿಎ ಆಡಳಿತದಲ್ಲಿ ಕಲ್ಲಿದ್ದಲು ಆರ್ಥಿಕತೆಗೆ ತುಂಬಾ ಸಹಕಾರಿಯಾಗಿದ್ದು,ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ ಎಂದು ಬಿಜೆಪಿ ದೂರಿದೆ. ಮನಮೋಹನ್ ಸಿಂಗ್ ಅವರು ಎರಡನೇ ಬಾರಿಗೆ ಪ್ರಧಾನಿಯಾದಾಗ, ಅವರು ಅನೇಕ ಭರವಸೆಗಳನ್ನು ನೀಡಿದರು. ಆದರೆ ಅವರ ಅಧಿಕಾರಾವಧಿಯಲ್ಲಿ ಅವರ ಭರವಸೆಗಳ ಬದಲಿಗೆ ಭ್ರಷ್ಟಾಚಾರವೇ ಹೆಚ್ಚು ಸುದ್ದಿಯಾಗಿದ್ದು ಎಂದು ಬಿಜೆಪಿ ವಿಡಿಯೊದಲ್ಲಿ ಹೇಳಿದೆ.

ಕಾಂಗ್ರೆಸ್​​ನ ‘ಕಲ್ಲಿದ್ದಲು ಹಗರಣ’ದಿಂದಾಗಿ ರಾಷ್ಟ್ರೀಯ ಖಜಾನೆಗೆ ₹1,86,000 ಕೋಟಿ ನಷ್ಟವಾಗಿದೆ ಎಂದು ಬಿಜೆಪಿ ಹೇಳಿದೆ. 2004-2009ರ ನಡುವೆ ಸುಮಾರು 100 ಕಂಪನಿಗಳಿಗೆ ಕಲ್ಲಿದ್ದಲು ಗಣಿಗಳನ್ನು ಸರಿಯಾಗಿ ಹರಾಜು ಮಾಡದೆ ಅಕ್ರಮವಾಗಿ ಹಂಚಿಕೆ ಮಾಡಲಾಗಿದೆ ಎಂದು ವಿಡಿಯೊದಲ್ಲಿ ಹೇಳಲಾಗಿದೆ. ಕಲ್ಲಿದ್ದಲು ಗಣಿಗಳ ತಪ್ಪಾದ ಹಂಚಿಕೆಯನ್ನು ಸಿಎಜಿ ಕೂಡ ಎತ್ತಿ ತೋರಿಸಿದೆ ಎಂದು ಅವರು ಹೇಳಿದ್ದಾರೆ. ಕಾಂಗ್ರೆಸ್‌ನ ಆಟವು ಕಲ್ಲಿದ್ದಲು ಕಂಪನಿಗಳೊಂದಿಗೆ ಆಡಿದ್ದು ಕೇವಲ ಭಾರತೀಯ ಆರ್ಥಿಕತೆಯನ್ನು ಮಾತ್ರವಲ್ಲದೆ ಅದರ ಪ್ರತಿಷ್ಠೆಗೂ ಹಾನಿಯಾಗಿದೆ ಎಂದು ವಿಡಿಯೊದಲ್ಲಿ ಹೇಳಿದೆ.

ಇದನ್ನೂ ಓದಿ:Ghulam Nabi Azad: ಯಾವುದೇ ರಾಜ್ಯದ ಚುನಾವಣೆ ಗೆಲುವಿನ ಶ್ರೇಯ ಕಾಂಗ್ರೆಸ್​​ ಕೇಂದ್ರ ನಾಯಕತ್ವಕ್ಕೆ ಸಲ್ಲದು; ಗುಲಾಂ ನಬಿ ಆಜಾದ್

ಅಷ್ಟೇ ಅಲ್ಲದೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಗಾಂಧಿ ಕುಟುಂಬದ ‘ರಿಮೋಟ್ ಕಂಟ್ರೋಲ್’ ಎಂದು ಕರೆಯುವ ಮೂಲಕ ಬಿಜೆಪಿ ವೈಯಕ್ತಿಕವಾಗಿ ವಾಗ್ದಾಳಿ ನಡೆಸಿದೆ. ಬಿಜೆಪಿ ಆರೋಪಗಳಿಗೆ ವಿರೋಧ ಪಕ್ಷ ಇನ್ನೂ ಪ್ರತಿಕ್ರಿಯಿಸಿಲ್ಲ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ಕರ್ನಾಟಕ ಸಂಪುಟ ವಿಸ್ತರಣೆ ಬಗ್ಗೆ ಕೈ ಹೈಕಮಾಂಡ್ ನಾಯಕರು ಹೇಳಿದ್ದಿಷ್ಟು!
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ರಾಹುಲ್ ಸಭೆ ಅಂತ್ಯ, ಬೆಂಗಳುರಿನತ್ತ ಡಿಕೆಶಿ: ಸಂಪುಟ ವಿಸ್ತರಣೆ ಕಥೆ ಏನಾಯ್ತು
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ತಾಯಿ ನೆನಪಿಗಾಗಿ ಹೊಸ ವಾಚ್ ರೆಡಿ ಮಾಡಿಸಿದ ಪುತ್ರ ಕುಮಾರಸ್ವಾಮಿ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಅತ್ತೆ ಚೆನ್ನಮ್ಮರ ಜೊತೆಗಿನ ನೆನೆಪು ಹಂಚಿಕೊಂಡ ಸೊಸೆ ಭವಾನಿ ರೇವಣ್ಣ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ಕಾವೇರಿ ಹೋರಾಟ: ಚಿತ್ರರಂಗದ ಒಗ್ಗಟ್ಟು ಪ್ರಶ್ನಿಸಿದ್ದಕ್ಕೆ ರಾಕ್​ಲೈನ್ ಗರಂ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರೈತರ ಪರ ಚಿತ್ರರಂಗ ಇದ್ದೇ ಇರುತ್ತೆ: ಫಿಲಂ ಚೇಂಬರ್ ಅಧ್ಯಕ್ಷೆ ಜಯಮಾಲ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ರಾಜ್ಯದ ಮೇಲ್ಮನವಿ ತಿರಸ್ಕರಿಸಿದ CWMA, ಕರ್ನಾಟಕ ಬಂದ್ ಎಚ್ಚರಿಕೆ
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
ವಿಜಯ್ ಅವರೇ ಬಲವಂತವಾಗಿ ನೀರು ಪಡೆಯಬೇಡಿ: ಪ್ರಥಮ್
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
Cauvery Dispute: ಕಾವೇರಿ ನೀರು ವಿವಾದ; ವಾಣಿಜ್ಯ ಮಂಡಳಿಯಲ್ಲಿ ಮಹತ್ವದ ಸಭೆ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ
ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಂಡ ಮಂತ್ರಾಲಯದ ರಾಯರ ಮಠ