Sign In

By signing in or creating an account, you agree with Associated Broadcasting Company's Terms & Conditions and Privacy Policy.

ದೆಹಲಿ ಮದ್ಯ ಪ್ರಕರಣ ಬಗ್ಗೆ ಕುಟುಕು ಕಾರ್ಯಾಚರಣೆಯ ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ

ಕೇಜ್ರಿವಾಲ್ ಜಿ ಅಧಿಕಾರಕ್ಕೆ ಬಂದಾಗ, ಯಾವುದೇ ಭ್ರಷ್ಟಾಚಾರದ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ಜನರನ್ನು ಕೇಳಿದರು. ಇದೇ ಆಗಿದ್ದು. ಸ್ಟಿಂಗ್ ಮಾಸ್ಟರ್ ಕೇಜ್ರಿವಾಲ್ ಜಿ ವಿರುದ್ಧ ಕುಟುಕು ಕಾರ್ಯಾಚರಣೆ ನಡೆದಿದೆ

ದೆಹಲಿ ಮದ್ಯ ಪ್ರಕರಣ ಬಗ್ಗೆ ಕುಟುಕು ಕಾರ್ಯಾಚರಣೆಯ ವಿಡಿಯೊ ಬಿಡುಗಡೆ ಮಾಡಿದ ಬಿಜೆಪಿ
ಸಂಬಿತ್ ಪಾತ್ರಾ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on: Sep 05, 2022 | 3:46 PM

ಮದ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಎಪಿ (AAP) ಸರ್ಕಾರದ ವಿರುದ್ಧ ಬಿಜೆಪಿ ಸೋಮವಾರ ವಾಗ್ದಾಳಿ ನಡೆಸಿದ್ದು, ಪತ್ರಿಕಾಗೋಷ್ಠಿಯಲ್ಲಿ ‘ಸ್ಟಿಂಗ್ ವಿಡಿಯೊ’ (sting operation)ಬಿಡುಗಡೆ ಮಾಡಿದೆ. ಬಿಜೆಪಿ ನಾಯಕ ಸಂಬಿತ್ ಪಾತ್ರಾ ಅವರು ದೆಹಲಿಯ ಮದ್ಯ ವ್ಯಾಪಾರಿಗಳು ಭಯಪಡಬೇಡಿ. ಮನೀಶ್ ಸಿಸೋಡಿಯಾ ಮತ್ತು ಅರವಿಂದ ಕೇಜ್ರಿವಾಲ್‌ಗೆ ಎಷ್ಟು ಕಮಿಷನ್ ನೀಡಬೇಕೆಂದು ವಿಡಿಯೊ ಮಾಡಿ ಎಂದು ಒತ್ತಾಯಿಸಿದರು. ಈಗ  ಮನೀಶ್ ಸಿಸೋಡಿಯಾ ಜೀ, ನಿಮಗೆ ತಪ್ಪಿಸಿಕೊಳ್ಳುವುದಕ್ಕೆ  ಆಗುವುದಿಲ್ಲ ಎಂದು ಸಂಬಿತ್ ಪಾತ್ರಾ (Sambit Patra) ಹೇಳಿದರು. “ಕೇಜ್ರಿವಾಲ್ ಜಿ ಅಧಿಕಾರಕ್ಕೆ ಬಂದಾಗ, ಯಾವುದೇ ಭ್ರಷ್ಟಾಚಾರದ ವಿರುದ್ಧ ಸ್ಟಿಂಗ್ ಆಪರೇಷನ್ ಮಾಡಲು ಜನರನ್ನು ಕೇಳಿದರು. ಇದೇ ಆಗಿದ್ದು. ಸ್ಟಿಂಗ್ ಮಾಸ್ಟರ್ ಕೇಜ್ರಿವಾಲ್ ಜಿ ವಿರುದ್ಧ ಕುಟುಕು ಕಾರ್ಯಾಚರಣೆ ನಡೆದಿದೆ ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ. ವಿಡಿಯೊದಲ್ಲಿ ಬಹಿರಂಗವಾದ ವಿಧಾನವೆಂದರೆ ಲಾಭದ ಶೇ 80 ಕೇಜ್ರಿವಾಲ್ ಮತ್ತು ಮನೀಶ್ ಸಿಸೋಡಿಯಾ ಮತ್ತು ಅವರ ಸ್ನೇಹಿತರಿಗೆ ಹೋಗುತ್ತದೆ. ಮೊದಲು, ನೀವು ನಮಗೆ ನಮ್ಮ ಶೇ80 ಕಮಿಷನ್ ನೀಡಿ ಮತ್ತು ನಂತರ ಶೇ 20 ಅನ್ನು ನೀವು ಹೇಗೆ ಸಾಧ್ಯವೋ ಅದನ್ನು ಮಾರಾಟ ಮಾಡಿ, ನಾವು ಹೆದರುವುದಿಲ್ಲ. ಇದು ಕೇಜ್ರಿವಾಲ್ ಅವರ ನೀತಿಯಾಗಿದೆ, ”ಎಂದು ಆಪಾದಿತ ಸ್ಟಿಂಗ್ ವಿಡಿಯೊವನ್ನು ಪ್ಲೇ ಮಾಡಿದ ನಂತರ ಸಂಬಿತ್ ಪಾತ್ರಾ ಹೇಳಿದರು.

ಮದ್ಯದ ಬಾಟಲಿಯೊಂದಿಗೆ ಒಂದು ಬಾಟಲಿಯನ್ನು ಉಚಿತವಾಗಿ ನೀಡುತ್ತಿದ್ದರೂ ಲಾಭ ಗಳಿಸುತ್ತಿದ್ದರು. ಅವರು ಹೇಗೆ ಲೂಟಿ ಮಾಡುತ್ತಿದ್ದಾರೆ ಎಂಬುದನ್ನು ನೋಡಿದ್ದಾರೆ ಎಂದಿದ್ದಾರೆ ಪಾತ್ರಾ

ಹಗರಣದ ಆರೋಪಿ ಸಂಖ್ಯೆ 12 ನೇ ಆರೋಪಿ ಸನ್ನಿ ಮಾರ್ವಾ ಅವರ ತಂದೆ ಕುಲ್ವಿಂದರ್ ಮರ್ವಾ ಅವರ ‘ಸ್ಟಿಂಗ್ ವಿಡಿಯೋ’ ಆಗಿತ್ತು.  ಇದು ಮುಕ್ತ ಮತ್ತು ಮುಚ್ಚಿದ ಪ್ರಕರಣವಾಗಿದೆ. ಏಕೆಂದರೆ ಮಾರ್ವಾ ಜಿ ಅವರೇ ಈ ವಿಡಿಯೊದಲ್ಲಿ ಇವೆಲ್ಲವನ್ನೂ ಒಪ್ಪಿಕೊಂಡಿದ್ದಾರೆ” ಎಂದು ಸಂಬಿತ್ ಪಾತ್ರಾ ಹೇಳಿದ್ದಾರೆ.

‘ಸ್ಟಿಂಗ್ ವಿಡಿಯೋ’ ಕುರಿತು ಆಮ್ ಆದ್ಮಿ ಪಕ್ಷ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
‘ಇಂಟರ್​ವಲ್​’ ಸಿನಿಮಾ ಗೆದ್ದಿದ್ದು ಹೇಗೆ? 25 ಡೇಸ್ ಸಂಭ್ರಮದಲ್ಲಿ ಚಿತ್ರತಂಡ
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಪತಿರಾನ ಓವರ್​ನಲ್ಲಿ ಹ್ಯಾಟ್ರಿಕ್ ಸಿಕ್ಸರ್ ಸಿಡಿಸಿದ ಪ್ರಿಯಾಂಶ್
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಬಿಸಿಲ ತಾಪದಿಂದ ಅಹಮದಾಬಾದ್‌ನಲ್ಲಿ ಪ್ರಜ್ಞೆ ತಪ್ಪಿ ಬಿದ್ದ ಪಿ. ಚಿದಂಬರಂ
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಹಣದ ಕೊರತೆಯಿಂದ ಕಾರು ಮಾರಿದ ಅಜಯ್ ರಾವ್; ಕಣ್ಣೀರು ಹಾಕಿದ ಮಗಳು
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಸಿನಿಮಾ ವಾಹನಗಳ ಪ್ರವೇಶ: ಆಕ್ರೋಶ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ಯತ್ನಾಳ್ ಅಸಲಿಗೆ ಒಬ್ಬ ನಕಲಿ ಹಿಂದೂ ಹುಲಿ: ರೇಣುಕಾಚಾರ್ಯ
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ರಹಾನೆ ಸ್ಫೋಟಕ ಬ್ಯಾಟಿಂಗ್​ಗೆ ದಂಗಾದ ಲಕ್ನೋ ಬೌಲರ್ಸ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಮೃತ್ಯುಂಜಯ ಸ್ವಾಮೀಜಿ ಯತ್ನಾಳ್​ಗೆ ಬುದ್ಧಿ ಹೇಳಲಿ: ಚಂದ್ರಶೇಖರ್ ಪೂಜಾರ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಕೆಕೆಆರ್​ ಬೌಲರ್‌ಗಳ ಬೆವರಿಳಿಸಿದ ಪೂರನ್
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ
ಎಲುಬಿಲ್ಲದ ನಾಲಗೆ ಮೇಲೆ ಹತೋಟಿ ತಪ್ಪಿದರೆ ಗೌರವ ಸಿಗಲ್ಲ: ಚಲುವರಾಯಸ್ವಾಮಿ