AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಹಿಂದುತ್ವ: ಶಿವ ಸೇನಾ ಮತ್ತು ಬಿಜೆಪಿ ನಡುವೆ ನಿಲ್ಲದ ಜಗಳ | BJP-Shiv Sena again lock horns over Hindutva

ಮಹಾರಾಷ್ಟ್ರದಲ್ಲಿ ಶಿವ ಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ನಿರಂತರವಾಗಿ ನಡೆಯುತ್ತಿರುವ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಎರಡು ಪಕ್ಷಗಳು ಪ್ರಚಂಡ ಹಿಂದುತ್ವವಾದಿಗಳು. ಈ ವಿಷಯಯವಾಗೇ ಅವೆರಡರ ನಡುವೆ ವಾಗ್ವಾದಗಳು ನಡೆಯುತ್ತಿರುತ್ತವೆ. ಮಂಗಳವಾರದಂದು ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿದ ಶಿವ ಸೇನಾ ಹಿರಿಯ ನಾಯಕ ಸಂಜಯ ರಾವತ್ ದೇಶಕ್ಕೆ ಅಗತ್ಯಬಿದ್ದರೆ ತಮ್ಮ ಪಕ್ಷ ಹಿಂದುತ್ವದ ಖಡ್ಗವನ್ನೇ ಝಳಪಳಿಸುತ್ತಾ ಮುಂದೆ ಬರುತ್ತದೆ ಎಂದು ಹೇಳಿದರು. ‘‘ಶಿವ ಸೇನಾ ಹಿಂದೆಯೂ ಹಿಂದುತ್ವವಾದಿಯಾಗಿತ್ತು, ಇವತ್ತೂ ಆಗಿದೆ ಮತ್ತು ಮುಂದೆಯೂ ಹಿಂದುತ್ವವಾದಿಯಾಗಿಯೇ ಉಳಿಯುತ್ತದೆ. ಆದರೆ […]

ಹಿಂದುತ್ವ: ಶಿವ ಸೇನಾ ಮತ್ತು ಬಿಜೆಪಿ ನಡುವೆ ನಿಲ್ಲದ ಜಗಳ | BJP-Shiv Sena again lock horns over Hindutva
ಅರುಣ್​ ಕುಮಾರ್​ ಬೆಳ್ಳಿ
|

Updated on: Nov 17, 2020 | 5:55 PM

Share

ಮಹಾರಾಷ್ಟ್ರದಲ್ಲಿ ಶಿವ ಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ನಿರಂತರವಾಗಿ ನಡೆಯುತ್ತಿರುವ ವಾಕ್ಸಮರ ನಿಲ್ಲುವ ಲಕ್ಷಣಗಳು ಕಾಣಿಸುತ್ತಿಲ್ಲ. ಎರಡು ಪಕ್ಷಗಳು ಪ್ರಚಂಡ ಹಿಂದುತ್ವವಾದಿಗಳು. ಈ ವಿಷಯಯವಾಗೇ ಅವೆರಡರ ನಡುವೆ ವಾಗ್ವಾದಗಳು ನಡೆಯುತ್ತಿರುತ್ತವೆ. ಮಂಗಳವಾರದಂದು ಸುದ್ದಿಸಂಸ್ಥೆಯೊಂದರ ಜೊತೆ ಮಾತಾಡಿದ ಶಿವ ಸೇನಾ ಹಿರಿಯ ನಾಯಕ ಸಂಜಯ ರಾವತ್ ದೇಶಕ್ಕೆ ಅಗತ್ಯಬಿದ್ದರೆ ತಮ್ಮ ಪಕ್ಷ ಹಿಂದುತ್ವದ ಖಡ್ಗವನ್ನೇ ಝಳಪಳಿಸುತ್ತಾ ಮುಂದೆ ಬರುತ್ತದೆ ಎಂದು ಹೇಳಿದರು.

‘‘ಶಿವ ಸೇನಾ ಹಿಂದೆಯೂ ಹಿಂದುತ್ವವಾದಿಯಾಗಿತ್ತು, ಇವತ್ತೂ ಆಗಿದೆ ಮತ್ತು ಮುಂದೆಯೂ ಹಿಂದುತ್ವವಾದಿಯಾಗಿಯೇ ಉಳಿಯುತ್ತದೆ. ಆದರೆ ಬಿಜೆಪಿಯಂತೆ ನಾವು ರಾಜಕಾರಣಕ್ಕಾಗಿ ನಾವು ಹಿಂದುತ್ವದ ಕಾರ್ಡ್ ಪ್ರದರ್ಶಿಸುವುದಿಲ್ಲ. ದೇಶಕ್ಕೆ ಅವಶ್ಯಕತೆ ಬಿದ್ದಾಗ ನಾವು ಹಿದುತ್ವದ ಖಡ್ಗವನ್ನು ಹಿರಿದೇ ಮುಂದೆ ಬರುತ್ತೇವೆ,’’ ಎಂದು ಹೇಳಿದರು.

ಈ ವಾರದಲ್ಲಿ ಎರಡನೆ ಬಾರಿ ಶಿವ ಸೇನಾ ಮತ್ತು ಬಿಜೆಪಿ ಪಕ್ಷಗಳ ನಡುವೆ ಹಿಂದುತ್ವದ ಮೇಲೆ ಮಾತಿನ ಚಕಮಕಿ ನಡೆದಿದೆ. ಕಳೆದ ವಾರ ಶಿವ ಸೇನಾ ನೇತೃತ್ವದ ಮಹಾರಾಷ್ಟ್ರ ಸರ್ಕಾರ ನವೆಂಬರ್16ರಿಂದ ರಾಜ್ಯ ದಾದ್ಯಂತ ದೇವಸ್ಥಾನ ಮತ್ತು ಆರಾಧನೆ ನಡೆಯುವ ಎಲ್ಲ ಸ್ಥಳಗಳನ್ನು ಪುನರಾರಂಭಿಸುವ ನಿರ್ಧಾರವನ್ನು ಪ್ರಕಟಿಸಿದಾಗ, ಅದು ಹಿಂದುತ್ವಕ್ಕೆ ಸಂದ ಜಯ ಅಂತ ಬಿಜೆಪಿ ಹೇಳಿತ್ತು.

ರವಿವಾರದಂದು ಬಿಜೆಪಿಯ ಕಾಮೆಂಟ್​ಗೆ ಪ್ರತಿಕ್ರಿಯಿಸಿದ್ದ ರಾವತ್, ‘‘ಪ್ರಾರ್ಥನಾ ಮಂದಿರಗಳನ್ನು ನಾವು ಪುನರಾರಂಭಿಸಲು ನಿರ್ಧರಿಸಿದ್ದು ಯಾರ ಗೆಲುವೂ ಅಲ್ಲ, ಸೋಲೂ ಅಲ್ಲ. ಬಿಜೆಪಿ ನಾಯಕರು ಪ್ರಾಯಶಃ ಮರೆತಿರುವಂತೆ ಕಾಣುತ್ತಿದೆ. ದೇವಸ್ಥಾನಗಳನ್ನು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಸೂಚನೆ ಮೇರೆಗೆ ಮುಚ್ಚಲಾಗಿತ್ತು. ಮೋದಿಯವರು ಲಾಕ್​ಡೌನ್ ಘೋಷಿಸಿದಾಗ ದೇಶದೆಲ್ಲೆಡೆ ಪ್ರಾರ್ಥನಾ ಸ್ಥಳಗಳನ್ನು ಮುಚ್ಚಲಾಯಿತು. ಇದರಲ್ಲಿ ಬಿಜೆಪಿ ಕ್ರೆಡಿಟ್ ತೆಗೆದುಕೊಳ್ಳುವಂಥದ್ದೇನೂ ಇಲ್ಲ. ಈ ಅಂಶವನ್ನು ಪ್ರಧಾನ ಮಂತ್ರಿ ಮೋದಿಯವರು ತಮ್ಮ ಪಕ್ಷದ ಕಾರ್ಯರ್ತರಿಗೆ ವಿವರಿಸಿದರೆ ಒಳ್ಳೆಯದು ಅಂತ ಭಾವಿಸುತ್ತೇನೆ,’’ ಎಂದು ಹೇಳಿದ್ದರು.

ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಆ ಭೂಮಿ ಎಲ್ಲಿ? ಹೇಗಿದೆ ನೋಡಿ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಬಿಗ್​​ಬಾಸ್ ಬಳಿಕ ಜೀವನ ಹೇಗಿದೆ? ಮಾಜಿ ಸ್ಪರ್ಧಿ ಸ್ನೇಹಿತ್ ಹೇಳಿದ್ದು ಹೀಗೆ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಸೀಕ್ರೆಟ್ ರೂಮ್​​ನಲ್ಲಿ ಮಿತಿ ಮೀರಿತು ರಕ್ಷಿತಾ ಶೆಟ್ಟಿ ಕೋಪ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?