AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಎಎಪಿಗೆ ₹100 ಕೋಟಿ ಕಿಕ್‌ಬ್ಯಾಕ್, ಫೋನ್‌ನಿಂದ ಸಾಕ್ಷ್ಯ ಅಳಿಸಿ ಹಾಕಿದ್ದಾರೆ ಕವಿತಾ: ಇಡಿ

ಇಡಿ ಪ್ರಕಾರ, ಕವಿತಾ ಅವರು ಪಿತೂರಿ ಮತ್ತು ಇಂಡೋಸ್ಪಿರಿಟ್ಸ್ ಎಂಬ ಆರೋಪಿತ ಕಂಪನಿಯ ಮೂಲಕ ₹192.80 ಕೋಟಿ ಮೌಲ್ಯದ ಅಪರಾಧದ ಉತ್ಪಾದನೆ, ಸ್ವಾಧೀನ ಮತ್ತು ಬಳಕೆಯಲ್ಲಿ ಭಾಗಿಯಾಗಿದ್ದಾರೆ. ಕವಿತಾ ಅವರು ಕಂಪನಿಯನ್ನು 'ನಿಜವಾದ ವ್ಯಾಪಾರ ಘಟಕ' ಎಂದು ತೋರಿಸಿದ್ದಾರೆ. ₹192.80 ಕೋಟಿ ಮೌಲ್ಯದ ಅಪರಾಧದ ಆದಾಯವನ್ನು ಗಳಿಸಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.

ಎಎಪಿಗೆ ₹100 ಕೋಟಿ ಕಿಕ್‌ಬ್ಯಾಕ್, ಫೋನ್‌ನಿಂದ ಸಾಕ್ಷ್ಯ ಅಳಿಸಿ ಹಾಕಿದ್ದಾರೆ ಕವಿತಾ: ಇಡಿ
ಕೆ ಕವಿತಾ
ರಶ್ಮಿ ಕಲ್ಲಕಟ್ಟ
|

Updated on: Jun 03, 2024 | 8:52 PM

Share

ದೆಹಲಿ ಜೂನ್ 03: ಭಾರತ್ ರಾಷ್ಟ್ರ ಸಮಿತಿ (BRS) ನಾಯಕಿ ಕೆ.ಕವಿತಾ (K kavitha) ಅವರು ದೆಹಲಿ ಅಬಕಾರಿ ನೀತಿ (Delhi excise policy )ಹಗರಣದಲ್ಲಿ 1,100 ಕೋಟಿ ರೂ.ಗಳಲ್ಲಿ ಸುಮಾರು ₹ 300 ಕೋಟಿ ಮೌಲ್ಯದ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಸೋಮವಾರ ಆರೋಪಿಸಿದೆ. ದೆಹಲಿ ನ್ಯಾಯಾಲಯದಲ್ಲಿ ವಿಶೇಷ ನ್ಯಾಯಾಧೀಶರಾದ ಕಾವೇರಿ ಬವೇಜಾ ಅವರ ಮುಂದೆ ಸಲ್ಲಿಸಿದ ಪೂರಕ ಆರೋಪಪಟ್ಟಿಯಲ್ಲಿ ಈ ಆರೋಪ ಮಾಡಲಾಗಿದೆ. ಕವಿತಾ ಅವರ ನ್ಯಾಯಾಂಗ ಬಂಧನವನ್ನು ಜುಲೈ 3 ರವರೆಗೆ ವಿಸ್ತರಿಸಲಾಗಿದೆ. ಏಜೆನ್ಸಿಯ ತನಿಖೆಯ ಸಮಯದಲ್ಲಿ ಬಂಧಿಸದೆ ಆರೋಪಪಟ್ಟಿ ಸಲ್ಲಿಸಲಾಗಿದ್ದ ಪ್ರಿನ್ಸ್, ದಾಮೋದರ್ ಮತ್ತು ಅರವಿಂದ್ ಸಿಂಗ್ ಎಂಬ ಮೂವರು ಸಹ ಆರೋಪಿಗಳಿಗೆ ನ್ಯಾಯಾಲಯವು ಜಾಮೀನು ನೀಡಿದೆ ಎಂದು ಪಿಟಿಐ ವರದಿ ಮಾಡಿದೆ.

ಇಡಿ ಆರೋಪಪಟ್ಟಿಯಲ್ಲಿ ಏನಿದೆ?

ಇಡಿ ಚಾರ್ಜ್‌ಶೀಟ್ ಪ್ರಕಾರ ಒಟ್ಟು ₹ 1,100 ಕೋಟಿ ಅಕ್ರಮ ಹಣ ವರ್ಗಾವಣೆಯಾಗಿದ್ದು, ಇದರಲ್ಲಿ ₹ 292.8 ಕೋಟಿ ಮೌಲ್ಯದ ಅಪರಾಧದ ಆದಾಯವಾಗಿದೆ. ಏಜೆನ್ಸಿಯ ಪ್ರಕಾರ, ಕವಿತಾ, ಚನ್‌ಪ್ರೀತ್ ಸಿಂಗ್, ಪ್ರಿನ್ಸ್ ಕುಮಾರ್, ದಾಮೋದರ್ ಶರ್ಮಾ ಮತ್ತು ಅರವಿಂದ್ ಸಿಂಗ್ ಅವರ ಆಪಾದಿತ ಚಟುವಟಿಕೆಗಳ ಮೂಲಕ, ಅಪರಾಧದ ದೊಡ್ಡ ಆದಾಯವನ್ನು ಸೃಷ್ಟಿಸಲಾಗಿದೆ. ತೆಲಂಗಾಣ ಮಾಜಿ ಮುಖ್ಯಮಂತ್ರಿ ಕೆ ಚಂದ್ರಶೇಖರ ರಾವ್ ಅವರ ಪುತ್ರಿ ಕವಿತಾ ಅವರು ₹ 292.80 ಕೋಟಿ ಮೌಲ್ಯದ ಅಪರಾಧದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಲಾಗಿದೆ, ಈ ಪೈಕಿ ₹ 100 ಕೋಟಿಯನ್ನು ಆಮ್ ಆದ್ಮಿ ಪಕ್ಷದ ನಾಯಕರಿಗೆ ಕಿಕ್‌ಬ್ಯಾಕ್‌ ಆಗಿ ಪಾವತಿಸಲಾಗಿದೆ.

₹ 100 ಕೋಟಿ ಕಿಕ್‌ಬ್ಯಾಕ್ ಮತ್ತು ಅನಪೇಕ್ಷಿತ ಪ್ರಯೋಜನಗಳನ್ನು ಪಡೆಯಲು ಎಎಪಿಯ ಉನ್ನತ ನಾಯಕತ್ವದ ಪರವಾಗಿ ಕಾರ್ಯನಿರ್ವಹಿಸುತ್ತಿದ್ದ ಮತ್ತೊಬ್ಬ ಆರೋಪಿ ವಿಜಯ್ ನಾಯರ್ ಮೂಲಕ ಕವಿತಾ ಅವರು ಸೌತ್ ಗ್ರೂಪ್ ಸದಸ್ಯರು ಮತ್ತು ಎಎಪಿ ನಾಯಕರೊಂದಿಗೆ ಪಿತೂರಿ ನಡೆಸುತ್ತಿದ್ದಾರೆ ಎಂದು ಇಡಿ ಆರೋಪಿಸಿದೆ.

ಇಡಿ ಪ್ರಕಾರ, ಕವಿತಾ ಅವರು ಪಿತೂರಿ ಮತ್ತು ಇಂಡೋಸ್ಪಿರಿಟ್ಸ್ ಎಂಬ ಆರೋಪಿತ ಕಂಪನಿಯ ಮೂಲಕ ₹192.80 ಕೋಟಿ ಮೌಲ್ಯದ ಅಪರಾಧದ ಉತ್ಪಾದನೆ, ಸ್ವಾಧೀನ ಮತ್ತು ಬಳಕೆಯಲ್ಲಿ ಭಾಗಿಯಾಗಿದ್ದಾರೆ. ಕವಿತಾ ಅವರು ಕಂಪನಿಯನ್ನು ‘ನಿಜವಾದ ವ್ಯಾಪಾರ ಘಟಕ’ ಎಂದು ತೋರಿಸಿದ್ದಾರೆ. ₹192.80 ಕೋಟಿ ಮೌಲ್ಯದ ಅಪರಾಧದ ಆದಾಯವನ್ನು ಗಳಿಸಿದ್ದಾರೆ ಎಂದು ಸಂಸ್ಥೆ ಆರೋಪಿಸಿದೆ.

ಇಂಡೋಸ್ಪಿರಿಟ್ಸ್‌ನ ರಚನೆಯ ಸಂಚಿನಲ್ಲಿ ಭಾಗವಹಿಸುವ ಮೂಲಕ ₹ 100 ಕೋಟಿ ಮುಂಗಡ ಲಂಚವನ್ನು ಮರುಪಾವತಿಸಲು, ನವೆಂಬರ್ 2021 ರಿಂದ ಆಗಸ್ಟ್ 2022 ರ ಅವಧಿಯಲ್ಲಿ ಇಂಡೋಸ್ಪಿರಿಟ್ಸ್ ಗಳಿಸಿದ ಲಾಭದ ಸೋಗಿನಲ್ಲಿ ಕವಿತಾ ಅವರು ₹ 100 ಕೋಟಿಯ ಪಿಒಸಿ ಉತ್ಪಾದನೆ ಮತ್ತು ವರ್ಗಾವಣೆ ಮತ್ತು ₹ 192.8 ಕೋಟಿ ಪಿಒಸಿ ಉತ್ಪಾದನೆ, ಮತ್ತು ಸ್ವಾಧೀನದಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಇಡಿ ತನ್ನ ಆರೋಪಪಟ್ಟಿಯಲ್ಲಿ ಆರೋಪಿಸಿದೆ.

ಇದನ್ನೂ ಓದಿ:ರಾಹುಲ್ ಗಾಂಧಿ ಜಿಮ್ ತೆರೆಯಬೇಕು: ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್

ಮಾರ್ಚ್ 15 ರಂದು ಕವಿತಾ ಅವರನ್ನು ಹೈದರಾಬಾದ್ ನಿವಾಸದಿಂದ ಬಂಧಿಸಿದ ಕೇಂದ್ರ ಸಂಸ್ಥೆ, ಬಿಆರ್‌ಎಸ್ ಎಂಎಲ್‌ಸಿ ಅವರ ಸಹಾಯಕ ಅಭಿಷೇಕ್ ಬೋಯೈನ್‌ಪಲ್ಲಿ ಹೆಸರಿನಲ್ಲಿ ಇಂಡೋಸ್ಪಿರಿಟ್ಸ್‌ನಿಂದ ₹ 5.5 ಕೋಟಿ ಪಡೆದಿದ್ದಾರೆ ಎಂದು ಆರೋಪಿಸಿತ್ತು.

ಡಿಜಿಟಲ್ ಸಾಕ್ಷ್ಯ ನಾಶಪಡಿಸಿದ ಕವಿತಾ: ಇಡಿ

ಇಡಿ ಪ್ರಕಾರ, ಕೆ ಕವಿತಾ ಅವರು ತಮ್ಮ ಮೊಬೈಲ್ ಫೋನ್‌ನ ಸಾಕ್ಷ್ಯಗಳು ಮತ್ತು ವಿಷಯಗಳನ್ನು ಅಳಿಸಿದ್ದಾರೆ ಎಂದು ಆರೋಪಿಸಲಾಗಿದೆ. “ಅವರು ಪರೀಕ್ಷೆಗಾಗಿ ಒಂಬತ್ತು ಫೋನ್‌ಗಳನ್ನು ನೀಡಿದ್ದರು. ಅವುಗಳು ಫಾರ್ಮ್ಯಾಟ್ ಮಾಡಲ್ಪಟ್ಟವು. ಅದರಲ್ಲಿ ಯಾವುದೇ ಡೇಟಾ ಇಲ್ಲ. ಆಕೆ ಆ ಫಾರ್ಮ್ಯಾಟ್ ಮಾಡಿದ ಫೋನ್‌ಗಳಿಗೆ ಯಾವುದೇ ವಿವರಣೆಯನ್ನು ನೀಡಲು ಸಾಧ್ಯವಾಗಲಿಲ್ಲ” ಎಂದು ಇಡಿ ಆರೋಪಿಸಿದೆ. ಅದೇ ವೇಳೆ ಕವಿತಾ ಅವರು ಸಾಕ್ಷಿಗಳ ಮೇಲೆ ಪ್ರಭಾವ ಬೀರುವ ಕೃತ್ಯಗಳಲ್ಲಿ ಭಾಗಿಯಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಆರೋಪಿಸಿದೆ.

ಮತ್ತಷ್ಟು ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ಮಳೆ: ಬೆಂಗಳೂರಿನಲ್ಲಿ ಲ್ಯಾಂಡ್​ ಆಗದೇ ವಾಪಸಾದ ರಾಜ್ಯಪಾಲರಿದ್ದ ವಿಮಾನ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
ದಾವಣಗೆರೆ ಬೈ ಎಲೆಕ್ಷನ್ ರಿಸಲ್ಟ್ ಬಗ್ಗೆ ಜಾರಕಿಹೊಳಿ ಸ್ಫೋಟಕ ಹೇಳಿಕೆ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
‘ಕೋಟಿಗೊಬ್ಬ’ ಮರು ಬಿಡುಗಡೆ: ಫ್ಯಾನ್ಸ್ ಜೊತೆ ಸಿನಿಮಾ ನೋಡಿದ ಪ್ರಿಯಾಂಕಾ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಅಮೆರಿಕದ ಜೊತೆ ಆಟವಾಡಬೇಡಿ; ಇರಾನ್​ಗೆ ಜೆಡಿ ವ್ಯಾನ್ಸ್ ಎಚ್ಚರಿಕೆ
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಪ್ರಗತಿ ಪರಿಶೀಲನಾ ಸಭೆಯಲ್ಲಿ ರುದ್ರಪ್ಪ ಲಮಾಣಿ ಕಣ್ಣೀರು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ಮುಂಬರುವ ಚುನಾವಣೆಯಲ್ಲಿ ಸ್ಪರ್ಧಿಸುವ ಬಗ್ಗೆ ನಿಖಿಲ್ ಅಚ್ಚರಿ ಮಾತು
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
ರಾಜಾರೋಷವಾಗಿ ಬೈಕ್‌ನಲ್ಲಿ ಬಂದು ಯುವತಿಯ ಬೆನ್ನು ಸವರಿದ ಕಾಮಪಿಶಾಚಿ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
2000 ಅಡಿ ಪ್ರಪಾತ, ದೊಡ್ಡ ಗಿಡ-ಮರಗಳು: ಶ್ರೀನಂದಾ ಬಿದ್ದ ಸ್ಥಳ ಭಯಾನಕವಾಗಿದೆ
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಟಿವಿ9 ಶಿಕ್ಷಣ ಎಕ್ಸ್​ಪೋ 2026: ನಿರ್ದೇಶಕ ಪ್ರೇಮ್, ನಟಿ ರೀಷ್ಮಾ ಮಾತು
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK
ಮನೆಗೆ ಬಂದು ಕಣ್ಣೀರು ಹಾಕಿದ್ರಲ್ಲ: ಸಿಎಂಗೆ ಹಳೆಯ ದಿನಗಳನ್ನ ನೆನಪಿಸಿದ HDK