AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬುಲ್ಲಿ ಬಾಯ್​ ಆ್ಯಪ್​ ಸೃಷ್ಟಿಸಿದ ಪ್ರಮುಖ ಆರೋಪಿ ಅರೆಸ್ಟ್​; ವಿವಾದಿತ ಆ್ಯಪ್​ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆ

Bulli Bai App: ಬಂಧಿತನಾಗಿರುವ ನೀರಜ್​ ಬಿಷ್ಣೋಯ್​ ಭೋಪಾಲ್​​ನಲ್ಲಿರುವ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್​ ವಿದ್ಯಾರ್ಥಿ. ಅಸ್ಸಾಂನ ದಿಗಂಬರ್​ ಜೊರ್ಹಾತ್​ನ ನಿವಾಸಿ.

ಬುಲ್ಲಿ ಬಾಯ್​ ಆ್ಯಪ್​ ಸೃಷ್ಟಿಸಿದ ಪ್ರಮುಖ ಆರೋಪಿ  ಅರೆಸ್ಟ್​; ವಿವಾದಿತ ಆ್ಯಪ್​ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 4ಕ್ಕೆ ಏರಿಕೆ
ಸಾಂಕೇತಿಕ ಚಿತ್ರ
TV9 Web
| Edited By: |

Updated on: Jan 06, 2022 | 3:50 PM

Share

ಬುಲ್ಲಿ ಬಾಯ್​ ವಿವಾದಿತ ಆ್ಯಪ್​ ಸೃಷ್ಟಿಸಿದ 21 ವರ್ಷದ ನೀರಜ್​ ಬಿಷ್ಣೋಯ್​ ಎಂಬುವನನ್ನು ಇಂದು ದೆಹಲಿ ಪೊಲೀಸರು ಆಸ್ಸಾಂನಲ್ಲಿ ಬಂಧಿಸಿದ್ದಾರೆ. ಅಲ್ಲಿಗೆ, ಪ್ರಸ್ತುತ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಈ ಬುಲ್ಲಿ ಆ್ಯಪ್​ ಕಳೆದ ಕೆಲವು ದಿನಗಳಿಂದ ಸದ್ದು ಮಾಡುತ್ತಿದೆ. ಇದರಲ್ಲಿ ಹಲವು ಮುಸ್ಲಿಂ ಮಹಿಳೆಯರ ಫೋಟೋವನ್ನು ಅವರಿಗೇ ಗೊತ್ತಿಲ್ಲದಂತೆ ಹಾಕಿ, ವರ್ಚ್ಯುವಲ್​ ಹರಾಜು ಕರೆಯಲಾಗಿತ್ತು. ಅಷ್ಟೇ ಅಲ್ಲ, ಮುಸ್ಲಿಂ ಸಮುದಾಯದ ಮಹಿಳೆಯರ ವಿರುದ್ಧ ಅವಹೇಳನಕಾರಿ, ಅಸಭ್ಯ ಕಾಮೆಂಟ್​ಗಳನ್ನೂ ಹಾಕಲಾಗಿತ್ತು. ಅದನ್ನೀಗ ಪೊಲೀಸರು ಬೇಧಿಸಿದ್ದು, ನಾಲ್ವರನ್ನು ಬಂಧಿಸಿದ್ದಾರೆ. ಹೀಗೆ ಬಂಧಿತರಾದವರೆಲ್ಲ ವಿದ್ಯಾರ್ಥಿಗಳೇ ಆಗಿದ್ದಾರೆ. ಸದ್ಯ ನಾಲ್ವರಲ್ಲಿ ಒಬ್ಬಳು ಯುವತಿ, ಇನ್ನು ಮೂವರು ಯುವಕರು. 

ಇದೀಗ ಬಂಧಿತನಾಗಿರುವ ನೀರಜ್​ ಬಿಷ್ಣೋಯ್​ ಭೋಪಾಲ್​​ನಲ್ಲಿರುವ ವೆಲ್ಲೂರ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಲ್ಲಿ ಎರಡನೇ ವರ್ಷದ ಬಿ.ಟೆಕ್​ ವಿದ್ಯಾರ್ಥಿ. ಅಸ್ಸಾಂನ ದಿಗಂಬರ್​ ಜೊರ್ಹಾತ್​ನ ನಿವಾಸಿ. ಅಲ್ಲಿಗೇ ಹೋಗಿ ಬಂಧಿಸಿರುವ ಪೊಲೀಸರು, ಬುಲ್ಲಿ ಬಾಯ್​ ಆ್ಯಪ್​ ತಯಾರಿಸಲು ಆತ ಬಳಸಿದ್ದ ಡಿವೈಸ್​​ನ್ನು ಕೂಡ ವಶಪಡಿಸಿಕೊಂಡಿದ್ದಾರೆ.  ಹಾಗೇ, ಅಸ್ಸಾಂನಿಂದ ಆತನನ್ನು ದೆಹಲಿಗೆ ಕರೆದುಕೊಂಡು ಹೋಗುವ ಸಿದ್ಧತೆಯೂ ನಡೆದಿದೆ. ಈ ಮೊದಲು ಬಂಧಿತರದಾವರು ಶ್ವೇತಾ ಸಿಂಗ್​ (18) , ಮಯಾಂಕ್​ ರಾವಲ್​ (21) ಮತ್ತು ವಿಶಾಲ್​ ಕುಮಾರ್ ಝಾ (21). ಇವರಲ್ಲಿ ಶ್ವೇತಾ ಮತ್ತು ಮಯಾಂಕ್​ ಉತ್ತರಾಖಂಡ್​​ನಲ್ಲಿ ಬಂಧಿಸಲ್ಪಟ್ಟಿದ್ದರೆ, ವಿಶಾಲ್​ ಕುಮಾರ್​​ನನ್ನು ಬೆಂಗಳೂರಲ್ಲಿ ಬಂಧಿಸಲಾಗಿದೆ. ಇವರನ್ನೆಲ್ಲ ಮುಂಬೈ ಪೊಲೀಸರು ಬಂಧಿಸಿದ್ದಾರೆ.

ಬುಲ್ಲಿ ಬಾಯ್​ ಆ್ಯಪ್​ ಸೃಷ್ಟಿಯಲ್ಲಿ ಶ್ವೇತಾಳೇ ಮಾಸ್ಟರ್​ಮೈಂಡ್​ ಎಂದು ಹೇಳಲಾಗಿತ್ತು. ಆದರೆ ನಿಜಕ್ಕೂ ಈ ನೀರಜ್​ ಪ್ರಮುಖ ಆರೋಪಿ ಎಂದು ಇಂಟೆಲಿಜೆನ್ಸ್ ಫ್ಯೂಷನ್ ಮತ್ತು ಸ್ಟ್ರಾಟೆಜಿಕ್ ಆಪರೇಷನ್ಸ್​​ನ ಡಿಸಿಪಿ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ. ಗಿಟ್​ಹಬ್​ ವೆಬ್​ಸೈಟ್​ ಮೂಲಕ ಈ ಆ್ಯಪ್​​ನ್ನು ಸೃಷ್ಟಿಸಿದ್ದಾನೆ. ಬುಲ್ಲಿ ಬಾಯ್​ ಆ್ಯಪ್​​ಗೆ ಸಂಬಂಧಪಟ್ಟ ಪ್ರಧಾನ ಟ್ವಿಟ್​ ಹ್ಯಾಂಡಲ್​ ಈತನ ಬಳಿಯೇ ಇದೆ ಎಂದೂ ಮಾಹಿತಿ ನೀಡಿದ್ದಾರೆ.  (ಗಿಟ್​​ಹಬ್ (GitHub) ಎನ್ನುವುದು ಡೆವಲಪರ್‌ಗಳು Git ಅನ್ನು ಬಳಸಿಕೊಂಡು ತಮ್ಮ ಸೋರ್ಸ್ ಕೋಡ್‌ಗಳನ್ನು ಸಂಗ್ರಹಿಸಬಹುದಾದ ಮತ್ತು ನಿರ್ವಹಿಸಬಹುದಾದ ವೆಬ್‌ಸೈಟ್ ಆಗಿದೆ. ಸಾಫ್ಟ್‌ವೇರ್‌ಗೆ ಮಾಡಿದ ಬದಲಾವಣೆಗಳನ್ನು Git ಟ್ರ್ಯಾಕ್ ಮಾಡುತ್ತದೆ, ಇದು ಪ್ರೋಗ್ರಾಮರ್‌ಗಳು ಒಟ್ಟಾಗಿ ಕಾರ್ಯನಿರ್ವಹಿಸಲು ಪರಿಣಾಮಕಾರಿಯಾಗಿ ಸಮನ್ವಯಗೊಳಿಸಲು ಸಹಾಯ ಮಾಡುತ್ತದೆ. ಗಿಟ್​ಹಬ್​​ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಲು ಇಲ್ಲಿ ಕ್ಲಿಕ್​ ಮಾಡಿ. ).

ಕಳೆದ ತಿಂಗಳು ಸುಲ್ಲಿ ಡೀಲ್ಸ್​ ಎಂಬ ಆ್ಯಪ್​ ವಿವಾದ ಎಬ್ಬಿಸಿತ್ತು. ಅಂದರೆ ಇದೂ ಕೂಡ ಮಸ್ಲಿಂ ಮಹಿಳೆಯರನ್ನು ಹರಾಜು ಹಾಕಿದ್ದ ಆ್ಯಪ್​. ಸುಲ್ಲಿ ಎಂಬುದು ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡುವ ಒಂದು ಶಬ್ದವಾಗಿದೆ. ಈ ಸುಲ್ಲಿ ಡೀಲ್ಸ್ ಬೆನ್ನಲ್ಲೇ ಬುಲ್ಲಿ ಬಾಯ್​ ಆ್ಯಪ್​ ಬೆಳಕಿಗೆ ಬಂದಿದೆ. ಮೊಟ್ಟಮೊದಲು ಮುಸ್ಲಿಂ ಮಹಿಳಾ ಪತ್ರಕರ್ತರೊಬ್ಬರು ತಮ್ಮ ಫೋಟೋ ಇಲ್ಲಿ ಅಪ್​ಲೋಡ್ ಆಗಿದ್ದನ್ನು ನೋಡಿ ದೆಹಲಿ ಪೊಲೀಸರಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ದೆಹಲಿ ಪೊಲೀಸರು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್​ಐಆರ್ ದಾಖಲು ಮಾಡಿದ್ದಾರೆ.

ಇದನ್ನೂ ಓದಿ: Bulli Bai App: ಬಗೆದಷ್ಟೂ ಆಳ ಬುಲ್ಲಿ ಬಾಯ್​ ಕೇಸ್​; ಅಪ್ಪ-ಅಮ್ಮ ಇಲ್ಲದ 18ವರ್ಷದ ಯುವತಿ ಇದರ ಮಾಸ್ಟರ್ ಮೈಂಡ್, ಒಟ್ಟು ಮೂವರ ಬಂಧನ​

ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಸಿಕ್ಕ ಸಿಕ್ಕ ಜಾನುವಾರುಗಳನ್ನು ತಿಂದು ತೇಗಿದ ಚಿರತೆ ಬೋನಿಗೆ ಬಿತ್ತು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ