AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

PM Security Breach: ಪ್ರಧಾನಿ ಮೋದಿ ಸಂಚರಿಸುತ್ತಿದ್ದ ವಾಹನ 20 ನಿಮಿಷ ಸಿಕ್ಕಿಹಾಕಿಕೊಂಡ ಫಿರೋಜ್‌ಪುರ ಫ್ಲೈಓವರ್‌ನಲ್ಲಿ ಏನೇನಾಯಿತು?

ಪ್ರಧಾನಿಯವರು ಬಟಿಂಡಾದಿಂದ ರಸ್ತೆ ಮಾರ್ಗವಾಗಿ ಹೊರಟಾಗ ಮಾರ್ಗವು ತೊಡಕಿಲ್ಲದೆ ಇತ್ತು ಮತ್ತು ಭದ್ರತೆಯ ಭರವಸೆ ಇದೆ ಎಂದು ಪಂಜಾಬ್ ಪೊಲೀಸರು ಎಸ್‌ಪಿಜಿಗೆ ಭರವಸೆ ನೀಡಿದ್ದರು. ಆಮೇಲೆ ಏನಾಯಿತು?

PM Security Breach: ಪ್ರಧಾನಿ ಮೋದಿ ಸಂಚರಿಸುತ್ತಿದ್ದ ವಾಹನ 20 ನಿಮಿಷ ಸಿಕ್ಕಿಹಾಕಿಕೊಂಡ ಫಿರೋಜ್‌ಪುರ ಫ್ಲೈಓವರ್‌ನಲ್ಲಿ ಏನೇನಾಯಿತು?
ಫ್ಲೈಓವರ್ ಮೇಲೆ ಸಿಲುಕಿದ ಪ್ರಧಾನಿಯವರ ವಾಹನ
Follow us
TV9 Web
| Updated By: ರಶ್ಮಿ ಕಲ್ಲಕಟ್ಟ

Updated on:Jan 06, 2022 | 4:58 PM

ಪಿಯಾರೆನಾನ(Piarenana) ಗ್ರಾಮದ ಬಳಿ ಮೊಗಾ-ಫಿರೋಜ್‌ಪುರ ಹೆದ್ದಾರಿಯಲ್ಲಿ(Moga-Ferozepur highway) ರೈತ ಮುಖಂಡ ಸುರ್ಜೀತ್ ಸಿಂಗ್ ಫೂಲ್ ( Surjeet Singh Phool)ನೇತೃತ್ವದಲ್ಲಿ 50 ರೈತರು ಸ್ಥಳೀಯ ಗ್ರಾಮಸ್ಥರ ಸಹಾಯದಿಂದ ರಸ್ತೆ ತಡೆ ನಡೆಸಿದ್ದರು. ಬುಧವಾರ ಬೆಳಗ್ಗೆ 11 ಗಂಟೆಯವರೆಗೆ ಈ ರಸ್ತೆಯಲ್ಲಿ ಸಂಚಾರಕ್ಕೆ ಯಾವುದೇ ಸಮಸ್ಯೆ ಇರಲಿಲ್ಲ. ಪಂಜಾಬ್ ಪೊಲೀಸರು ರಸ್ತೆಯಲ್ಲಿ ಪ್ರತಿಭಟನಾನಿರತ ರೈತರನ್ನು ಅಲ್ಲಿಂದ ಬಲವಂತವಾಗಿ ತೆರವು ಮಾಡದಿರಲು ನಿರ್ಧರಿಸಿದ್ದರು. ಭಾರತ-ಪಾಕಿಸ್ತಾನ ಗಡಿಯಿಂದ ಕೇವಲ 30 ಕಿಮೀ ದೂರದಲ್ಲಿ ಮಧ್ಯಾಹ್ನ 1:30 ರ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಬೆಂಗಾವಲು ಪಡೆ ಮೇಲ್ಸೇತುವೆಯೊಂದರ ಮೇಲೆ ಸುಮಾರು 20 ನಿಮಿಷಗಳ ಕಾಲ ಸಿಲುಕಿ ಕೊಂಡಿತ್ತು. ಕೆಲವು ಪ್ರತಿಭಟನಾಕಾರರು ಪ್ರಧಾನಿಯವರ ವಾಹನದಿಂದ ಸುಮಾರು 150 ಮೀಟರ್ ಹತ್ತಿರ ಬಂದರು ಎಂದು ನ್ಯೂಸ್ 18 ಡಾಟ್ ಕಾಮ್ ವರದಿ ಮಾಡಿದೆ. ಪ್ರಧಾನಮಂತ್ರಿಯವರ ಕಾರನ್ನು ಸುತ್ತುವರಿದ ಎಸ್​​ಪಿಜಿ ತನ್ನ ವಾಹನಗಳನ್ನು ರಸ್ತೆಯ ಮೇಲೆ ರಕ್ಷಣಾತ್ಮಕ ರೀತಿಯಲ್ಲಿ ನಿಲ್ಲಿಸಿತ್ತು. ಈ ಹಿಂದೆ ಡ್ರೋನ್‌ಗಳು ಮತ್ತು ಟಿಫಿನ್ ಬಾಂಬ್‌ಗಳ ಪತ್ತೆಯಿಂದಾಗಿ ಈ ಪ್ರದೇಶವು ಯಾವಾಗಲೂ ಹೈ ಅಲರ್ಟ್‌ನಲ್ಲಿದೆ. ಪ್ರಧಾನಮಂತ್ರಿಯವರು ಬಟಿಂಡಾದಿಂದ ಫಿರೋಜ್‌ಪುರಕ್ಕೆ ಹೆಲಿಕಾಪ್ಟರ್​​ನಲ್ಲಿ ಸಂಚರಿಸಲು ಸಾಧ್ಯವಾಗದಿದ್ದಾಗ ಸುಮಾರು 100 ಕಿ.ಮೀ ಉದ್ದದ ಮೋಗಾ-ಫಿರೋಜ್‌ಪುರ ಹೆದ್ದಾರಿಯು ಅನುಮೋದಿತ “ಸಂಭವನೀಯವಾದ ಮಾರ್ಗ” ಎಂದು ಕೇಂದ್ರದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಪ್ರಧಾನಿಯವರು ಕೆಲವು ದಿನಗಳ ಹಿಂದೆ ದೆಹಲಿಯಿಂದ ಮೀರತ್‌ಗೆ ಯಾವುದೇ ಅಡೆತಡೆಯಿಲ್ಲದೆ ಇದೇ ರೀತಿಯಲ್ಲಿ ದೀರ್ಘ ರಸ್ತೆ ಪ್ರಯಾಣವನ್ನು ಕೈಗೊಂಡಿದ್ದರು.

ಪ್ರಧಾನಿಯವರು ಬಟಿಂಡಾದಿಂದ ರಸ್ತೆ ಮಾರ್ಗವಾಗಿ ಹೊರಟಾಗ ಮಾರ್ಗವು ತೊಡಕಿಲ್ಲದೆ ಇತ್ತು ಮತ್ತು ಭದ್ರತೆಯ  ಇದೆ ಎಂದು ಪಂಜಾಬ್ ಪೊಲೀಸರು ಎಸ್‌ಪಿಜಿಗೆ ಭರವಸೆ ನೀಡಿದ್ದರು. ಮಂಗಳವಾರ ಸಂಜೆ, ಭಾರತೀಯ ಕಿಸಾನ್ ಸಂಘರ್ಷ ಸಮಿತಿಯಿಂದ ಈ ಮಾರ್ಗವನ್ನು ನಿರ್ಬಂಧಿಸಲಾಯಿತು ಆದರೆ ಮಾತುಕತೆಯ ನಂತರ ಬೆಳಗ್ಗೆ ತೆರವುಗೊಳಿಸಲಾಗಿತ್ತು.

ಪಂಜಾಬ್ ಸರ್ಕಾರವೂ ಲಿಖಿತ ಭರವಸೆಯನ್ನೂ ನೀಡಿತ್ತು ಆದರೆ ಬುಧವಾರ ಬೆಳಗ್ಗೆ 11 ಗಂಟೆಗೆ ಪ್ರಧಾನಿ ಅವರ ರ್ಯಾಲಿ ನಡೆಯಲಿರುವ ಪ್ರದೇಶದಿಂದ ಸುಮಾರು 8 ಕಿ.ಮೀ.ದೂರದಲ್ಲಿ ಸುರ್ಜೀತ್ ಸಿಂಗ್ ಫೂಲ್ ನೇತೃತ್ವದ ಭಾರತೀಯ ಕಿಸಾನ್ ಯೂನಿಯನ್ (ಕ್ರಾಂತಿಕಾರಿ)ನ 50 ಹೋರಾಟಗಾರುರು ಪುಪಿಯಾರೆನಾನಾ ಗ್ರಾಮದ ಬಳಿ ಹೆದ್ದಾರಿಗೆ ಆಗಮಿಸಿ ಟ್ರಾಲಿಯೊಂದಿಗೆ ರಸ್ತೆಯನ್ನು ತಡೆದರು.

ಪಿಯಾರೆನಾನಾದಿಂದ ಸ್ಥಳೀಯ ಗ್ರಾಮಸ್ಥರನ್ನು ಒಗ್ಗೂಡಿಸಲು ಸ್ಪೀಕರ್‌ನಿಂದ ಪ್ರಕಟಣೆಗಳನ್ನು ಮಾಡಲಾಯಿತು ಮತ್ತು ಶೀಘ್ರದಲ್ಲೇ ಸುಮಾರು 150 ಪ್ರತಿಭಟನಾಕಾರರು ಹೆದ್ದಾರಿಯಲ್ಲಿ ಜಮಾಯಿಸಿದರು. ಅಷ್ಟೊತ್ತಿಗೆ ಪ್ರಧಾನಿಯವರು ಬಟಿಂಡಾದಿಂದ ಬಜಾಖಾನಾ-ಕೋಟ್ಕಾಪುರ-ಫರೀದ್‌ಕೋಟ್ ಮಾರ್ಗವಾಗಿ ಫಿರೋಜ್‌ಪುರಕ್ಕೆ ಪ್ರಯಾಣ ಬೆಳೆಸಿದ್ದರು.

ನ್ಯೂಸ್ 18 ಡಾಟ್ ಕಾಮ್ ಸುರ್ಜೀತ್ ಸಿಂಗ್ ಫೂಲ್ ಅವರೊಂದಿಗೆ ಮಾತನಾಡಿದ್ದು, ಅವರು ಪ್ರಧಾನಿಯನ್ನು ತಡೆಯುವ ಯಾವುದೇ ಉದ್ದೇಶವಿಲ್ಲ ಎಂದು ಹೇಳಿದ್ದಾರೆ. ವಾಸ್ತವವಾಗಿ, ಪಂಜಾಬ್ ಪೊಲೀಸರು ಮಾರ್ಗವನ್ನು ಖಾಲಿ ಮಾಡುವಂತೆ ಕೇಳುವವರೆಗೂ ಪ್ರಧಾನಿ ಅವರು ಈ ರಸ್ತೆಯ ಮೂಲಕ ಹಾದುಹೋಗುತ್ತಾರೆ ಎಂದು ಅವರಿಗೆ ತಿಳಿದಿರಲಿಲ್ಲ ಎಂದು ಹೇಳಿದರು.

ಪ್ರಧಾನಿಯವರು ರಸ್ತೆ ಮಾರ್ಗವಾಗಿ ಬರುತ್ತಾರೆ ಎಂಬುದು ನಮಗೆ ತಿಳಿದಿರಲಿಲ್ಲ. ಇದು ಮೇಲ್ಸೇತುವೆಯಲ್ಲಿ ಪ್ರಧಾನಿಯವರ ಬೆಂಗಾವಲು ಪಡೆ ಎಂದು ಗ್ರಾಮಸ್ಥರು ನಂತರ ನಮಗೆ ತಿಳಿಸಿದರು. ಪ್ರಧಾನಿ ಬೆಂಗಾವಲು ಪಡೆ ನಿಲ್ಲಿಸುವ ಯೋಜನೆ ಇರಲಿಲ್ಲ. ನಾವು ರಸ್ತೆಯನ್ನು ಖಾಲಿ ಮಾಡಬೇಕೆಂದು ಪೊಲೀಸರು ನಮಗೆ ಮಧ್ಯಾಹ್ನ 12:30 ರಿಂದ 1 ಗಂಟೆಯವರೆಗೆ ಹೇಳಿದರು. ನಮಗೆ ಅದನ್ನು ನಂಬಲಾಗಲಿಲ್ಲ ಮತ್ತು ಅವರು ನಮಗೆ ಸುಳ್ಳು ಹೇಳುತ್ತಿದ್ದಾರೆಂದು ನಾವು ಭಾವಿಸಿದ್ದೆವು. ಸಾಮಾನ್ಯವಾಗಿ, ಬೆಂಗಾವಲು ಪಡೆ ಹಾದುಹೋಗುವ ಕನಿಷ್ಠ 2-3 ಗಂಟೆಗಳ ಮೊದಲು ಪ್ರಧಾನಿಯ ಮಾರ್ಗವನ್ನು ತೆರವುಗೊಳಿಸಲಾಗುತ್ತದೆ ಎಂದು ಫೂಲ್ ಹೇಳಿದರು. ಭದ್ರತಾ ಲೋಪದಲ್ಲಿ ಫಿರೋಜ್‌ಪುರ ಮತ್ತು ಮೊಗಾ ಎಸ್‌ಎಸ್‌ಪಿಗಳ ಪಾತ್ರವಿದೆ ಎಂದು ಹೇಳಲಾಗುತ್ತಿದ್ದು, ಪಂಜಾಬ್ ಸರ್ಕಾರವು ಗುರುವಾರ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದೆ. ಪ್ರಧಾನಿ ಭೇಟಿಯ ಸಮಯದಲ್ಲಿನ ಲೋಪಗಳ ಬಗ್ಗೆ ಮೂರು ದಿನಗಳಲ್ಲಿ ವರದಿಯನ್ನು ನೀಡಲು ಹೇಳಲಾಗಿದೆ.

ಪ್ರಧಾನಿಯವರ ಮಾರ್ಗದ ವಿವರಗಳನ್ನು ಸೋರಿಕೆ ಮಾಡಿದ ನಂತರ ಪಂಜಾಬ್ ಪೊಲೀಸರು ಹೆದ್ದಾರಿಗೆ ಬಂದಿದ್ದರು. ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವಿನ ಕುತಂತ್ರ ಇದು ಎಂದು ಬಿಜೆಪಿ ಆರೋಪಿಸಿದೆ.

ಹೆದ್ದಾರಿಯು ಸಂಚಾರಕ್ಕೆ ಮುಕ್ತವಾಗಿದ್ದು, ಬಿಜೆಪಿ ಬೆಂಬಲಿಗರೊಂದಿಗೆ ಬಸ್‌ಗಳು ಸಹ ರ್ಯಾಲಿ ಸ್ಥಳದ ಕಡೆಗೆ ಪ್ರಯಾಣಿಸುತ್ತಿದ್ದ ಕಾರಣ, ಫ್ಲೈಓವರ್‌ನಲ್ಲಿ ಪ್ರಧಾನಿ ಬೆಂಗಾವಲು ಪಡೆ ಮುಂಭಾಗದಲ್ಲಿ ಒಂದು ತುದಿಯಲ್ಲಿ ಮತ್ತು ಇನ್ನೊಂದು ತುದಿಯಲ್ಲಿ ಬಿಜೆಪಿ ಬೆಂಬಲಿಗರ ನಡುವೆ ಹಿಂಬದಿಯಲ್ಲಿ ಸಿಲುಕಿಕೊಂಡಿತು. ಯಾವುದೇ ಪ್ರಗತಿ ಸಾಧ್ಯವಾಗದ ಕಾರಣ ಮತ್ತು ಎಸ್​​ಪಿಜಿ ಸಿಎಮ್‌ಒದಿಂದ ಯಾವುದೇ ಪ್ರತಿಕ್ರಿಯೆಯನ್ನು ಪಡೆಯದ ಕಾರಣ, ಪ್ರಧಾನಿ 20 ನಿಮಿಷಗಳ ನಂತರ ಹಿಂತಿರುಗಿದರು.

ಪಂಜಾಬ್ ಸಿಎಂ ಚರಣ್​​ಜಿತ್ ಸಿಂಗ್ ಚನ್ನಿ ಅವರು ಪ್ರತಿಭಟನಾಕಾರರನ್ನು ತೆರವು ಮಾಡಲು ಯಾವುದೇ ಬಲಪ್ರಯೋಗವನ್ನು ಅನುಮತಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಏಕೆಂದರೆ ಅದು ಹಿಂಸಾಚಾರಕ್ಕೆ ಕಾರಣವಾಗಬಹುದು. ಈ ನಿರ್ಧಾರದ ಹಿಂದೆ 2015 ರಲ್ಲಿ ಪಂಜಾಬ್ ಪೊಲೀಸರು ಫರೀದ್‌ಕೋಟ್‌ನ ಹತ್ತಿರದ ಕೊಟ್ಕಾಪುರ ಮತ್ತು ಬರ್ಗರಿ ಪ್ರದೇಶಗಳಲ್ಲಿ ಬಲಪ್ರಯೋಗ ಮಾಡಬೇಕಾಗಿ ಬಂದಾಗ ಪ್ರತಿಭಟನಾಕಾರರ ಸಾವು ಮತ್ತು ರಾಜ್ಯದಲ್ಲಿ ರಾಜಕೀಯ ಕ್ರಾಂತಿಗೆ ಕಾರಣವಾಗಿತ್ತು.

ಪ್ರಧಾನಿಯ ಸಂಪೂರ್ಣ ಮಾರ್ಗವು ರೈತರ ಆಂದೋಲನವು ಉತ್ತುಂಗದಲ್ಲಿರುವ ಮಾಲ್ವಾ ಪ್ರದೇಶವನ್ನು ದಾಟುವ ಸೂಕ್ಷ್ಮ ಪ್ರದೇಶದಲ್ಲಿ ಬಿದ್ದಿದೆ. ಆದರೆ ಮಾರ್ಗ ಸ್ಪಷ್ಟವಾಗಿದೆ ಎಂದು ಎಸ್‌ಪಿಜಿಗೆ ಭರವಸೆ ನೀಡಿದರೂ ಪಂಜಾಬ್ ಪೊಲೀಸರು ಪ್ರಧಾನಿಗೆ ಸುರಕ್ಷಿತ ಮಾರ್ಗವನ್ನು ನೀಡಲು ವಿಫಲರಾಗಿದ್ದಾರೆ. ವಿಚಾರಣೆಯು ಈಗ ಹೊಣೆಗಾರಿಕೆಯನ್ನು ಸರಿಪಡಿಸುವ ನಿರೀಕ್ಷೆಯಿದೆ ಮತ್ತು ಕೆಲವರ ಕೆಲಸ ಹೋಗುವ ಸಾಧ್ಯತೆ ಇದೆ ಎಂದು ಪಂಜಾಬ್ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರುಗೆ ತಿಳಿಸಿದ್ದಾರೆ.

ಇದನ್ನೂ ಓದಿ:  Video: ಫ್ಲೈಓವರ್​​ ಮೇಲೆ ಪ್ರಧಾನಿ ಮೋದಿ ಕಾಯುತ್ತಿದ್ದರೆ, ಇತ್ತ ಪಂಜಾಬ್ ಪೊಲೀಸರು ಪ್ರತಿಭಟನಾಕಾರರೊಂದಿಗೆ ಟೀ ಕುಡಿಯುತ್ತಿದ್ದರು !

Published On - 4:54 pm, Thu, 6 January 22

ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಅಂಜನಾದ್ರಿ ಹನುಮನ ಕೃಪೆಯಿಂದ ಶಾಸಕ ಸ್ಥಾನ ಅಭಾದಿತವಾಗಿದೆ: ಜನಾರ್ಧನ ರೆಡ್ಡಿ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ಕಿರಣ್ ರಾಜ್ ಜೀವನದ ‘ಕರ್ಣ’ ಯಾರು? ಅವರೇ ಕೊಟ್ಟಿದ್ದಾರೆ ಉತ್ತರ
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ವಿಮಾನದಲ್ಲಿ ಪ್ರಯಾಣಿಸುತ್ತಿದ್ದವರೆಲ್ಲ ಸತ್ತಿರುವ ಶಂಕೆಯಿದೆ: ಪರಮೇಶ್ವರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ದುರಂತದಲ್ಲಿ ಮಡಿದವರು ಭಾರತೀಯರು; ಕನ್ನಡ, ತೆಲುಗು ತಾರತಮ್ಯ ಬೇಡ: ಶಿವಕುಮಾರ್
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಏರ್ ಇಂಡಿಯಾ ವಿಮಾನ ಪತನವಾದ ಜಾಗದಲ್ಲಿ ಬಿದ್ದ ಪ್ರಯಾಣಿಕರ ಲಗೇಜ್ ರಾಶಿ
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಚಾಲಕನ ಹುಚ್ಚು ಸಾಹಸ: ಹಳ್ಳದಲ್ಲಿ ಸಿಲುಕಿದ ಜನರಿದ್ದ ಟ್ರ್ಯಾಕ್ಟರ್
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಲಂಡನ್​ಗೆ ಹೊರಟಿದ್ದ ವಿಮಾನಕ್ಕೆ ಅದರ ಸಾಮರ್ಥ್ಯದಷ್ಟು ಇಂಧನ ತುಂಬಲಾಗಿತ್ತು
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
ಜಾತಿಗಣತಿ ಸಮೀಕ್ಷೆಗೆ ₹200 ಕೋಟಿ ಖರ್ಚಾಗಿದೆ ಎಂದರೆ ಸಚಿವನಲ್ಲಿ ಉತ್ತರವಿಲ್ಲ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
Ahmedabad Plane Crash: ಅಹಮದಾಬಾದ್​​ನಲ್ಲಿ ಏರ್​ ಇಂಡಿಯಾ ವಿಮಾನ ಪತನ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ
ಗೃಹ ಸಚಿವ ಕೇವಲ ತಮ್ಮ ಗೃಹಕ್ಕೆ ಮಾತ್ರ ಸಚಿವರು: ಆರ್ ಅಶೋಕ