AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರೆಮ್​ಡೆಸಿವರ್​ ಸಾಗಿಸುತ್ತಿದ್ದ ವಿಮಾನ ಅಪಘಾತ: 85 ಕೋಟಿ ರೂಪಾಯಿ ಬಿಲ್​ ನೀಡಿ, ಕಕ್ಕಾಬಿಕ್ಕಿಯಾದ ಮಧ್ಯ ಪ್ರದೇಶ ಸರ್ಕಾರ!

ಮಧ್ಯ ಪ್ರದೇಶದಲ್ಲಿ ಸರಕು ಸಾಗಣೆ ವಿಮಾನದ ಪೈಲಟ್​​ ಒಬ್ಬರು ಕೊರೊನಾ ವಾರಿಯರ್ ಆಗಿ ಕೊರೊನಾ ಕಾಲದಲ್ಲಿ ರೆಮ್​ಡೆಸಿವರ್​ ಔಷಧಗಳನ್ನು ವಿಮಾನ ಮೂಲಕ ಸಾಗಿಸುತ್ತಿದ್ದಾಗ ಅದು ಅಪಘಾತಕ್ಕೆ ತುತ್ತಾಗಿ ಇಡೀ ಔಷಧ ಹಾಳಾಗುವುದರ ಜೊತೆಗೆ ಆ ವಿಮಾನವು ಗುಜರಿಗೆ ಸಹ ಲಾಯಕ್​ ಇಲ್ಲದಂತಾಗಿತ್ತು. ಇದಕ್ಕೆ ಕಾರಣೀಭೂತಾಗಿದ್ದು ಮಾತ್ರ ರಾಜ್ಯ ಸರ್ಕಾರ ಮತ್ತು ವಾಯು ಸಂಚಾರ ನಿಯಂತ್ರಣ ಕೇಂದ್ರ ಎಂಬುದು ಗಮನಾರ್ಹ.

ರೆಮ್​ಡೆಸಿವರ್​ ಸಾಗಿಸುತ್ತಿದ್ದ ವಿಮಾನ ಅಪಘಾತ: 85 ಕೋಟಿ ರೂಪಾಯಿ ಬಿಲ್​ ನೀಡಿ, ಕಕ್ಕಾಬಿಕ್ಕಿಯಾದ ಮಧ್ಯ ಪ್ರದೇಶ ಸರ್ಕಾರ!
ರೆಮ್​ಡೆಸಿವರ್​ ಸಾಗಿಸುತ್ತಿದ್ದ ವಿಮಾನ ಅಪಘಾತ: 85 ಕೋಟಿ ರೂಪಾಯಿ ಬಿಲ್​ ಕಕ್ಕಿ, ಕಕ್ಕಾಬಿಕ್ಕಿಯಾದ ಮಧ್ಯ ಪ್ರದೇಶ ಸರ್ಕಾರ!
TV9 Web
| Edited By: |

Updated on:Feb 08, 2022 | 11:25 AM

Share

ಭೋಪಾಲ್​: ಗ್ವಾಲಿಯಾರ್​ ವಿಮಾನ ನಿಲ್ದಾಣದ ರನ್​ವೇ ನಲ್ಲಿ (Gwalior Runway) ಅಧಿಕಾರಿಗಳ ತಪ್ಪಿನಿಂದಾಗಿ ಕೊರೊನಾ ಸೋಂಕಿನ ಔಷಧ ಸಾಗಿಸುತ್ತಿದ್ದ ಸರಕು ಸಾಗಣೆ ವಿಮಾನ ಅಪಘಾತಕ್ಕೆ ತುತ್ತಾಗಿ, ಜೊತೆಗೆ ಸರ್ಕಾರದ ಅಚಾತುರ್ಯವೂ ಸೇರಿ ಮಧ್ಯ ಪ್ರದೇಶ ಸರ್ಕಾರ 85 ಕೋಟಿ ರೂಪಾಯಿ ಬಿಲ್​ ಕಕ್ಕಿರುವ ಪ್ರಸಂಗ ನಡೆದಿದೆ. ಆದರೆ ಮಧ್ಯ ಪ್ರದೇಶ ಸರ್ಕಾರ ಈ ಅಪಘಾತ ಸಂಭವಿಸಿದ್ದು ಪೈಲಟ್​ ಅಚಾತುರ್ಯದಿಂದಾಗಿ. ಹಾಗಾಗಿ ಆತನೇ 85 ಕೋಟಿ ರೂಪಾಯಿ ಬಿಲ್ ತೆರಬೇಕು ಎಂದು ಪಟ್ಟುಹಿಡಿದಿತ್ತು. ಇಲ್ಲಿ ಎರಡು ಎಡವಟ್ಟುಗಳು ನಡೆದಿದ್ದವು. ಒಂದು, ರನ್​ವೇ ನಲ್ಲಿ ನಿರ್ಮಿಸಲಾಗಿದ್ದ ಅಡ್ಡಗೋಡೆಯನ್ನು ವಿಮಾನದ ಪೈಲಟ್​​ ಗಮನಕ್ಕೆ ತಂದಿರಲಿಲ್ಲ. ಎರಡನೆಯದು, ರಾಜ್ಯ ಸರ್ಕಾರವು ಆ ವಿಮಾನಕ್ಕೆ ವಿಮಾ ಮಾಡಿಸಿರಲಿಲ್ಲ! ಮಧ್ಯ ಪ್ರದೇಶದಲ್ಲಿ ಸರಕು ಸಾಗಣೆ ವಿಮಾನದ ಪೈಲಟ್​​ ಕೊರೊನಾ ವಾರಿಯರ್ (Covid warrior)​ ಆಗಿ ಕೊರೊನಾ ಕಾಲದಲ್ಲಿ ರೆಮ್​ಡೆಸಿವರ್​ ಔಷಧಗಳನ್ನು ವಿಮಾನ ಮೂಲಕ ಸಾಗಿಸುತ್ತಿದ್ದಾಗ ಅದು ಅಪಘಾತಕ್ಕೆ ತುತ್ತಾಗಿ ಇಡೀ ಔಷಧ ಹಾಳಾಗುವುದರ ಜೊತೆಗೆ ಆ ವಿಮಾನವು ಗುಜರಿಗೆ ಸಹ ಲಾಯಕ್​ ಇಲ್ಲದಂತಾಗಿತ್ತು. ಇದಕ್ಕೆ ಕಾರಣೀಭೂತಾಗಿದ್ದು ಮಾತ್ರ ರಾಜ್ಯ ಸರ್ಕಾರ ಮತ್ತು ವಾಯು ಸಂಚಾರ ನಿಯಂತ್ರಣ ಕೇಂದ್ರ (Air Traffic Controller-ATC) ಎಂಬುದು ಗಮನಾರ್ಹ. ಈ ಅಪಘಾತದಲ್ಲಿ ತನ್ನ ಕಡೆಯಿಂದ ಯಾವುದೇ ತಪ್ಪು ನಡೆದಿಲ್ಲ ಎಂದು ವಿಮಾನದ ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ (Captain Majid Akhtar)​ ಮತ್ತು ಸಹ ಪೈಲಟ್​ ಸಾಬೀತುಪಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಘಟನೆ ನಡೆದಿರುವುದು ಕಳೆದ ವರ್ಷ, ಮೊದಲ ಕೋವಿಡ್​ ಅಲೆ ಸಂದರ್ಭದಲ್ಲಿ. ಕಳೆದ ವಾರ ರಾಜ್ಯ ಸರ್ಕಾರ ಈ ಸಂಬಂಧ ಪ್ರಕರಣ ದಾಖಲಿಸಿ, ಆರೋಪಪಟ್ಟಿ ಸಲ್ಲಿಸಿದಾಗ ಇಡೀ ವೃತ್ತಾಂತ ಬಯಲಿಗೆ ಬಂದಿದೆ.

COVID-19 ಲ್ಯಾಬ್​ ಮಾದರಿಗಳು ಮತ್ತು ರೆಮ್​ಡೆಸಿವರ್​ ಔಷಧಗಳನ್ನು ಸಾಗಸುತ್ತಿದ್ದ 7 ಸೀಟ್​ಗಳ ಪುಟ್ಟ ವಿಮಾನವು ಗ್ವಾಲಿಯಾರ್​ ವಿಮಾನ ನಿಲ್ದಾಣದ ರನ್​ವೇನಲ್ಲಿ ಇಳಿಯುವಾಗ ಅಚಾತುರ್ಯ ನಡೆದು ಅಪಘಾತಕ್ಕೆ ತುತ್ತಾಗಿತ್ತು. ಇಡೀ ವಿಮಾನ ಗುಜರಿಗೆ ಹಾಕುವ ಮಟ್ಟಕ್ಕೆ ನಜ್ಜುಗುಜ್ಜಾಗಿತ್ತು. Beechcraft King ಎಂಬ ಈ ಪುಟ್ಟ ವಿಮಾನವನ್ನು ಮಧ್ಯ ಪ್ರದೇಶ ಸರ್ಕಾರವು ಅಂದಾಜು 65 ಕೋಟಿ ರೂಪಾಯಿಗೆ 2019ರಲ್ಲಿ ಖರೀದಿಸಿತ್ತು.

ಸರ್ಕಾರವೇನೋ ಸದರಿ ವಿಮಾನ ಅಪಘಾತಕ್ಕೆ ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ ಕಾರಣವೆಂದು ಹೇಳಿ, 85 ಕೋಟಿ ರೂಪಾಯಿ ಆತನಿಂದ ವಸೂಲಿಗೆ ಮುಂದಾಗಿದೆ. ಆದರೆ ಆ ಕ್ಯಾಪ್ಟನ್ ಮಜೀದ್ ಅಖ್ತರ್ ನನಗೆ ವಾಯು ಸಂಚಾರ ನಿಯಂತ್ರಣ ಕೇಂದ್ರದವರು ರನ್​ವೇ ನಲ್ಲಿರುವ ಅಡ್ಡಗೋಡೆ ಬಗ್ಗೆ ಮಾಹಿತಿ ನೀಡರಲಿಲ್ಲ. ಹಾಗಾಗಿ ಅಪಘಾತ ಸಂಭವಿಸಿ, ನಷ್ಟವುಂಟಾಗಿದೆ ಎಂಬುದಕ್ಕೆ ನಾನು ಕಾರಣವಲ್ಲ. ಜೊತೆಗೆ ಆ ವಿಮಾನಕ್ಕೆ ರಾಜ್ಯ ಸರ್ಕಾರ ವಿಮಾ ಪಾಲಿಸಿ ಮಾಡಿಸಿಲ್ಲ ಎಂಬ ಅಂಶವನ್ನು ಮುಂದಿಟ್ಟಿದ್ದಾರೆ. 27 ವರ್ಷಗಳಿಂದ ಪೈಲಟ್​ ಆಗಿ ಕಾರ್ಯನಿರವಹಿಸುತ್ತಿರುವೆ. ಒಂದೂ ಅಪಘಾತ ಮಾಡಿಲ್ಲ. ಹೀಗಿರುವಾಗ (Air Traffic Controller-ATC) ತಪ್ಪಿನಿಂದ ಅಪಘಾತವಾಗಿದೆ. Gwalior ATC ಇದುವರೆಗೂ ಬ್ಲ್ಯಾಕ್​ ಬಾಕ್ಸ್​ (black box) ಸಂವಹನ ವಿವರವನ್ನು ತನಗೆ ನೀಡಿಲ್ಲ. ತಡೆಗೋಡೆ ಕುರಿತಾದ ಮುನ್ಸೂಚನೆ ಸೇರಿದಂತೆ ಅದರಲ್ಲಿ ಎಲ್ಲಾ ರೆಕಾರ್ಡ್​ ಆಗಿರುತ್ತದೆ. ಅದರ ಮೂಲಕ ಎಲ್ಲವೂ ಸಾಬೀತಾಗುತ್ತದೆ. ನನ್ನ ಕಡೆಯಿಂದ ಯಾವುದೇ ತಪ್ಪಾಗಿಲ್ಲ. ನಾನು ಯಾಕೆ ಸರ್ಕಾರ ಸೂಚಿಸಿರುವಂತೆ 85 ಕೋಟಿ ರೂಪಾಯಿ ಕಟ್ಟಲಿ? ಎಂಬ ವಾದವನ್ನು ಕ್ಯಾಪ್ಟನ್ ಮಜೀದ್ ಅಖ್ತರ್ ಮುಂದಿಟ್ಟಿದ್ದಾರೆ.

ಸಮಾಧಾನಕರ ಸಂಗತಿಯೆಂದರೆ ಪೈಲಟ್​ ಸರಿದಂತೆ ವಿಮಾನದಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಲ್ಲಿ ಪಾರಾಗಿದ್ದರು. ಸಮಾಧಾನಕರ ಸಂಗತಿಯೆಂದರೆ ಪೈಲಟ್​ ಸರಿದಂತೆ ವಿಮಾನದಲ್ಲಿದ್ದ ಮೂವರು ಸಣ್ಣಪುಟ್ಟ ಗಾಯಗಳೊಂದಿಗೆ ಅಪಘಾತದಲ್ಲಿ ಪಾರಾಗಿದ್ದರು. ಆದರೆ Directorate General of Civil Aviation (DGCA) ಕೇಂದ್ರವು ಪೈಲಟ್ ಕ್ಯಾಪ್ಟನ್ ಮಜೀದ್ ಅಖ್ತರ್ ಅವರ ವಿಮಾನ ಹಾರಾಟ ಲೈಸೆನ್ಸ್​ ಅನ್ನು ಒಂದು ವರ್ಷ ಕಾಲ ರದ್ದುಪಡಿಸಿದೆ.

Published On - 9:58 am, Tue, 8 February 22

ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಸುದೀಪ್ ಹೇಳಿಕೆಗೆ ಟಾಂಗ್ ಕೊಟ್ಟ ದರ್ಶನ್ ಪತ್ನಿ ವಿಜಯಲಕ್ಷ್ಮಿ: ಹೇಳಿದ್ದೇನು?
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಗೃಹಲಕ್ಷ್ಮೀಯರಿಗೆ ಗುಡ್​ನ್ಯೂಸ್: ಸದ್ಯದಲ್ಲೇ ನಿಮ್ ಅಕೌಂಟ್​​ ಲಕ್ಷ್ಮೀ!
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಪಿಚ್ ಮಧ್ಯದಲ್ಲೇ ಪಾಕ್ ವೇಗಿಗೆ ವಾರ್ನಿಂಗ್ ಕೊಟ್ಟ ವೈಭವ್; ವಿಡಿಯೋ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಬಾಲಿವುಡ್ ಬಿದ್ದೋಯ್ತು, ಇದು ಸ್ಯಾಂಡಲ್​​ವುಡ್ ಸಮಯ: ಡಿಕೆಶಿ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ಪುರಾತನ ಕಲ್ಯಾಣಿ ಸ್ವಚ್ಚತೆ ವೇಳೆ ಶಿವಲಿಂಗ ಪತ್ತೆ
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ರಜತ್-ಗಿಲ್ಲಿ ಕಣ್ಣಿಗೆ ಬಟ್ಟೆ: ನಕ್ಕು ಸುಸ್ತಾದ ಸುದೀಪ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಸೈರನ್ ಮೊಳಗುತ್ತಿದ್ದಂತೆಯೇ ಈ ಗ್ರಾಮದ ಎಲ್ಲರ ಮನೆಯ ಟಿವಿ, ಫೋನ್ ಆಫ್
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಏನು ಗ್ಯಾರಂಟಿ? ಬಿಜೆಪಿ MLC ಕಾರು ತಡೆದು ನಿಲ್ಲಿಸಿದ ಟೋಲ್ ಸಿಬ್ಬಂದಿ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಆತನಿಗೆ 68, ಆಕೆಗೆ 58 ವರ್ಷ: ಹಾಸನದಲ್ಲಿ ವೃದ್ದರಿಬ್ಬರ ಮದುವೆ ಸಂಘರ್ಷ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ
ಕೋಗಿಲು ಬಳಿ 150ಕ್ಕೂ ಹೆಚ್ಚು ಅಕ್ರಮ ಮನೆಗಳು ನೆಲಸಮ: ಭುಗಿಲೆದ್ದ ಆಕ್ರೋಶ