Sign In

By signing in or creating an account, you agree with Associated Broadcasting Company's Terms & Conditions and Privacy Policy.

CBDTಯಿಂದ ವಿವಾದ್ ಸೇ ವಿಶ್ವಾಸ್ ಸೇರಿ ವಿವಿಧ ತೆರಿಗೆ ಸಂಬಂಧಿತ ಪಾವತಿಗೆ ಜೂನ್ ತನಕ ಅವಧಿ ವಿಸ್ತರಣೆ

CBDTಯಿಂದ ವಿವಾದ್​ ಸೇ ವಿಶ್ವಾಸ್ ವ್ಯಾಜ್ಯ ವಿಲೇವಾರಿ ತೆರಿಗೆ ಪಾವತಿಯೂ ಸೇರಿದಂತೆ ಇತರ ತೆರಿಗೆ ಸಂಬಂಧಿತ ಪಾವತಿಗೆ ಅವಧಿಯನ್ನು ಜೂನ್ ತಿಂಗಳ ಕೊನೆ ತನಕ ವಿಸ್ತರಿಸಲಾಗಿದೆ.

CBDTಯಿಂದ ವಿವಾದ್ ಸೇ ವಿಶ್ವಾಸ್ ಸೇರಿ ವಿವಿಧ ತೆರಿಗೆ ಸಂಬಂಧಿತ ಪಾವತಿಗೆ ಜೂನ್ ತನಕ ಅವಧಿ ವಿಸ್ತರಣೆ
ಸಾಂದರ್ಭಿಕ ಚಿತ್ರ
Follow us
Srinivas Mata
|

Updated on: Apr 24, 2021 | 4:46 PM

ನವದೆಹಲಿ: ಕೇಂದ್ರೀಯ ನೇರ ತೆರಿಗೆ ಮಂಡಳಿಯು (ಸಿಬಿಡಿಟಿ) ಶನಿವಾರ ಹೇಳಿರುವ ಪ್ರಕಾರ, ನೇರ ತೆರಿಗೆ ವ್ಯಾಜ್ಯ ವಿಲೇವಾರಿ ಯೋಜನೆಯಾದ ವಿವಾದ್ ಸೇ ವಿಶ್ವಾಸ್ ಪಾವತಿಯೂ ಸೇರಿದಂತೆ ಕೆಲವಕ್ಕೆ ಅಂತಿಮ ಗಡುವಿನ ದಿನಾಂಕಗಳನ್ನು ವಿಸ್ತರಿಸಲಾಗಿದೆ. ಇನ್ನೂ ಎರಡು ತಿಂಗಳ ಕಾಲ ಅವಧಿಯನ್ನು ವಿಸ್ತರಣೆ ಮಾಡಿರುವುದಾಗಿ ಸಿಬಿಡಿಟಿ ಹೇಳಿದೆ. ಈ ಬಗ್ಗೆ ಹೇಳಿಕೆ ನೀಡಲಾಗಿದ್ದು, ಈ ಹಿಂದೆ ಏಪ್ರಿಲ್ 30, 2021ರ ತನಕ ಗಡುವನ್ನು ವಿಸ್ತರಿಸಲಾಗಿತ್ತು. ಅದೀಗ ಜೂನ್ 30, 2021ರ ತನಕ ಮುಂದುವರಿಸಲಾಗಿದೆ ಎಂದು ತಿಳಿಸಲಾಗಿದೆ.

ಅದರ ಪ್ರಕಾರ, ಯಾವ ತೆರಿಗೆದಾರರು ವಿವಾದ್ ಸೇ ವಿಶ್ವಾಸ್ ಯೋಜನೆ ಅಡಿಯಲ್ಲಿ ನೇರ ತೆರಿಗೆ ವ್ಯಾಜ್ಯ ಪರಿಹಾರಕ್ಕೆ ಸಹಿ ಹಾಕಿರುತ್ತಾರೋ ಅಂಥವರು ಹೆಚ್ಚುವರಿಯಾಗಿ ಶೇ 10ರಷ್ಟು ನೀಡುವ ಅಗತ್ಯ ಇಲ್ಲದೆ ಜೂನ್ ಕೊನೆ ಹೊತ್ತಿಗೆ ತೆರಿಗೆ ಪಾವತಿಸಬಹುದು. ಅಸೆಸ್​ಮೆಂಟ್​ನಿಂದ ತಪ್ಪಿಸಿಕೊಂಡ ಪ್ರಕರಣಗಳಲ್ಲಿ ಆದಾಯವನ್ನು ಪುನಃ ಲೆಕ್ಕ ಹಾಕುವುದಕ್ಕೆ, ಅಸೆಸ್​ಮೆಂಟ್ ಪೂರ್ತಿಗೊಳಿಸುವುದಕ್ಕೆ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 148ರ ಅಡಿಯಲ್ಲಿ ನೋಟಿಸ್ ನೀಡುವುದಕ್ಕೆ, ಇತರ ಕಲಾಪಗಳಿಗೆ ಹೆಚ್ಚುವರಿಯಾಗಿ ಸಮಯ ನೀಡಲಾಗುತ್ತದೆ.

ದೇಶದಾದ್ಯಂತ ಕೋವಿಡ್- 19 ಪ್ರಕರಣಗಳಲ್ಲಿ ಹೆಚ್ಚಳ ಆಗಿರುವುದರಿಂದ ಸಿಬಿಡಿಟಿಯಿಂದ ದಿನಾಂಕ ವಿಸ್ತರಣೆ ಮಾಡಲಾಗಿದೆ. ಇನ್ನು ತೆರಿಗೆ ಪಾವತಿದಾರರು, ತೆರಿಗೆ ಕನ್ಸಲ್ಟೆಂಟ್​ಗಳು ಮತ್ತು ಇತರರು ದಿನಾಂಕ ವಿಸ್ತರಣೆಗಾಗಿ ಮನವಿ ಸಲ್ಲಿಸಿದ್ದರು. ವ್ಯಾಜ್ಯ ವಿಲೇವಾರಿ ಸಮಿತಿ ನೀಡುವ ನಿರ್ದೇಶನದ ಅನ್ವಯ ಆದೇಶ ಹೊರಡಿಸುವ ಸಮಯ ಕೂಡ ವಿಸ್ತರಿಸಲಾಗಿದೆ. ಇದರ ಜತೆಗೆ ತೆರಿಗೆಯ ಈಕ್ವಲೈಸೇಷನ್​ನ ಸ್ಟೇಟ್​ಮೆಂಟ್​ ಪ್ರಕ್ರಿಯೆಗೆ ತೆರಿಗೆ ಇಲಾಖೆಯಿಂದ ಉದ್ಯಮಗಳಿಗೆ ತಿಳಿಸುವ ಸಮಯದ ಮಿತಿಯನ್ನು ಕೂಡ ಜೂನ್ ಕೊನೆ ತನಕ ವಿಸ್ತರಿಸಲಾಗಿದೆ. ಈ ವಿಸ್ತರಣೆ ದಿನಾಂಕಗಳಿಗೆ ಸಂಬಂಧಿಸಿದ ಅಧಿಸೂಚನೆಯನ್ನು ಶೀಘ್ರದಲ್ಲಿ ಹೊರಡಿಸಲಾಗುವುದು ಎಂದು ಸಿಬಿಡಿಟಿ ಹೇಳಿದೆ.

ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ ಸಿಬ್ಬಂದಿ ದೊರೆಯುವುದು ಕಷ್ಟವಾಗುತ್ತಿದೆ. ಈ ಕಾರಣದಿಂದ ಉದ್ಯಮಗಳು, ವೃತ್ತಿಪರ ಸೇವಾ ಸಂಸ್ಥೆಗಳು ಮತ್ತು ತೆರಿಗೆ ಅಧಿಕಾರಿಗಳು ಎಲ್ಲರಿಗೂ ಈಗ ಸಮಸ್ಯೆ ಎದುರಾಗಿದೆ. ಜಿಎಸ್​ಟಿ ಫೈಲಿಂಗ್ ದಿನಾಂಕದ ಗಡುವನ್ನು ಸಹ ವಿಸ್ತರಣೆ ಮಾಡಬೇಕು ಎಂದು ಉದ್ಯಮಗಳು ನಿರೀಕ್ಷೆ ಮಾಡುತ್ತಿವೆ.

ಇದನ್ನೂ ಓದಿ: ಯಾವುದೇ ಠೇವಣಿ ಮೇಲೆ ಎಷ್ಟೇ ಬಡ್ಡಿ ಬರಲಿ ಮಾಹಿತಿ ನೀಡುವಂತೆ ಆದಾಯ ತೆರಿಗೆ ಇಲಾಖೆಯಿಂದ ಬ್ಯಾಂಕ್​ಗಳಿಗೆ ಸುತ್ತೋಲೆ

ಇದನ್ನೂ ಓದಿ: Income Tax Rules: ಏಪ್ರಿಲ್ 1ರಿಂದ ಬದಲಾಗಲಿದೆ ಆದಾಯ ತೆರಿಗೆಯ ಈ 5 ನಿಯಮ

(Central Board Of Direct Tax (CBDT) extends Vivad Se Vishwas and othe tax related payment deadline till June 2021, because of surge in covid numbers in India)

ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಅಪ್​ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಹಂತಕರು ನೇಪಾಳಿ ಮಂಜನಿಗೆ ಅಪರಚಿತರಾಗಿರಲಿಲ್ಲ, ಅವರೇ ಊಟಕ್ಕೆ ಕರೆಸಿದ್ದರು
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ
ಮಂಗಳೂರಿನಲ್ಲಿ ರಂಜಾನ್: ಸಾಮೂಹಿಕ ಪ್ರಾರ್ಥನೆಯಲ್ಲಿ ಸ್ಪೀಕರ್ ಖಾದರ್ ಭಾಗಿ